ಹೈದರಾಬಾದ್, ಆ. 30 (ಪಿಟಿಐ)– ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರು ವಿಶ್ವಾಸಮತ ಕೇಳಲಿರುವ ಮುನ್ನಾದಿನವಾದ ಇಂದು ತೆಲುಗುದೇಶಂ ಪಕ್ಷದ ಸರ್ವಸದಸ್ಯರ ಸಭೆ ಜರುಗಿ, ಎನ್.ಟಿ.ರಾಮರಾವ್ ಅವರನ್ನು ಅಧ್ಯಕ್ಷಸ್ಥಾನದಿಂದ ಕಿತ್ತುಹಾಕಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿತು.