ಹೈದರಾಬಾದ್, ಆ.25(ಪಿಟಿಐ)– ಆಂಧ್ರಪ್ರದೇಶದಲ್ಲಿ ಎನ್.ಟಿ. ರಾಮರಾವ್ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಅಳಿಯ ಚಂದ್ರಬಾಬು ನಾಯ್ಡು ಅವರು ಅಧಿಕಾರದ ಗದ್ದುಗೆ ಏರಲು ಸರ್ವಸನ್ನದ್ಧರಾಗಿದ್ದಾರೆ. ತೆಲುಗುದೇಶಂನ ದಿಢೀರ್ ವಿಭಜನೆಯಿಂದ ಕಂಗೆಟ್ಟ ಮುಖ್ಯಮಂತ್ರಿ ಅವರು ವಿಧಾನಸಭೆ ವಿಸರ್ಜಿಸಲು ಇಂದು ರಾಜ್ಯಪಾಲರಿಗೆ ಶಿಫಾರಸು ಮಾಡಿದರು.