ಚಳವಳಿಕಾರರ ಈ ಬೇಡಿಕೆಗಳನ್ನು ‘ಒಪ್ಪಿಕೊಳ್ಳಲು ನಮಗೆ ಕಷ್ಟವಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜ
ಲಿಂಗಪ್ಪನವರು ಇಂದು ಇಲ್ಲಿ ಸ್ಪಷ್ಟವಾಗಿ ಘೋಷಿಸಿದರು. ಕಾರ್ಯಕಾರಿ ಸಮಿತಿ ಪರವಾಗಿ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ದೆಹಲಿಯಲ್ಲಿ ತೆಲಂಗಾಣ ನಾಯಕರೊಡನೆ ನಡೆಸಿದ ಮಾತುಕತೆ ಮುರಿದು ಬಿದ್ದುದಕ್ಕೆ ಕಾಂಗ್ರೆಸ್ ಅಧ್ಯಕ್ಷರು ವಿಷಾದವನ್ನು ವ್ಯಕ್ತಪಡಿಸಿ, ‘ಚಳವಳಿಕಾರರ ಮೂಲಬೇಡಿಕೆಗಳು ಈಡೇರುವ ಕಾರಣ, ಅವರು ಚಳವಳಿಯನ್ನು ಮುಂದುವರಿಸಬಾರದೆಂದು ಮನವಿ ಮಾಡಿದರು.