‘ಪ್ರಜಾವಾಣಿ’ ಚದುರಂಗರನ್ನು ಅಭಿನಂದಿಸಿದಾಗ ಅವರು ತಮ್ಮ ವ್ಯಥೆಯನ್ನು ತೋಡಿಕೊಂಡರು. ಕಾರಣ ‘ನನ್ನಿಂದ ಆಗೋಲ್ಲ. ನನ್ನ ಆರೋಗ್ಯ ಅಷ್ಟೊಂದು ಸರಿ ಇಲ್ಲ. ಅಲ್ಲದೆ ನನಗಿಂತ ಹಿರಿಯರಾದ ತ.ಸು. ಶಾಮರಾಯರಿದ್ದಾರೆ, ಎಸ್.ವಿ. ಪರಮೇಶ್ವರ ಭಟ್ಟರಿದ್ದಾರೆ, ಕಥೆಗಾರ ಅಶ್ವತ್ಥ ಅವರಿದ್ದಾರೆ. ಅವರು ನನಗಿಂತ ಹಿರಿಯರಲ್ಲದೆ ಅವರ ಸಾಧನೆಯೂ ದೊಡ್ಡದು. ಹೀಗಿರುವಾಗ ನನ್ನನ್ನು ಆಯ್ಕೆ ಮಾಡುವುದು ಸರಿಯೇ?’ ಎಂದರು.