ನವದೆಹಲಿ, ಏ. 29– ಕಾವೇರಿ ಕಣಿವೆ ಪ್ರದೇಶವು ಈಗ ಜಲಸಂಪನ್ಮೂಲದ ಕೊರತೆ ಎದುರಿಸುತ್ತಿದ್ದು, ಅದಕ್ಕೆ ಬೇರೆ ನದಿಗಳ ಸಂಪರ್ಕ ಕಲ್ಪಿಸಿ ಜಲ ಸಂಪತ್ತನ್ನು ಹೆಚ್ಚಿಸದ ಹೊರತು ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ವಿದ್ಯಾಚರಣ್ ಶುಕ್ಲಾ ಇಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.