ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಬೆಂಬಲಿಗರ ಮತಗಳು ಸೇರಿದಂತೆ ಕನ್ನಡ ಚಳವಳಿ, ಮುಸ್ಲಿಂ ಲೀಗ್ ಹಾಗೂ ದಳದಿಂದಲೇ ಕೆಲವು ಮತಗಳನ್ನು ಪಡೆಯುವುದರೊಂದಿಗೆ ಸುದರ್ಶನ್ ನಿರೀಕ್ಷೆಗೂ ಮೀರಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ದಳದ ಅಧಿಕೃತ ಅಭ್ಯರ್ಥಿ ಎನ್. ತಿಪ್ಪಣ್ಣ ಅವರು 16 ಮತ ಪಡೆದು ಚುನಾವಣೆಯಲ್ಲಿ ಜಯ ಗಳಿಸಿದ್ದರೂ ಅವರಿಗೆ ಪಕ್ಷದಿಂದ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಮತಗಳು ಬಿದ್ದು ಮುಖಂಡರಲ್ಲಿನ ಎರಡೂ ಗುಂಪುಗಳು ಅವರಿಗೆ ದ್ರೋಹ ಬಗೆದಿರುವುದು ಎದ್ದು ಕಾಣುವಂತಾಗಿದೆ.