ಭೋಪಾಲ್, ನ. 30– (ಯುಎನ್ಐ)– ಹೆಸರಾಂತ ರಂಗಭೂಮಿ ನಿರ್ದೇಶಕ ಬಿ.ವಿ. ಕಾರಂತರಿಗೆ 1993–94ನೇ ಸಾಲಿನ ‘ಕಾಳಿದಾಸ ಸಮ್ಮಾನ’ ನೀಡಲಾಗಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ಇರುವ ಈ ಪ್ರಶಸ್ತಿಯನ್ನು ಕಾರಂತರು ಸೃಜನಶೀಲ ಕಲೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಲು ನೀಡಲಾಗುತ್ತಿದೆ.
ಕಾರಂತರು ಬಹುಕಾಲದಿಂದ ಸಂಪರ್ಕ ಹೊಂದಿರುವ ಭೋಪಾಲದ ಕಲಾ ಸಂಕೀರ್ಣ ‘ಭಾರತ ಭವನ’ದಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇಂದು ಅಂತಿಮ ಸುತ್ತಿನ ಮತದಾನ ಘಟಾನುಘಟಿಗಳ ಭವಿಷ್ಯ ನಿರ್ಧಾರ
ಬೆಂಗಳೂರು, ನ. 30– ರಾಜ್ಯ ವಿಧಾನಸಭೆಗೆ ನಡೆಯಲಿರುವ ಅತ್ಯಂತ ಕುತೂಹಲದ ಚುನಾವಣೆಯ ಎರಡನೇ ಹಾಗೂ ಅಂತಿಮ ಸುತ್ತಿನ ಮತದಾನ ನಾಳೆ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ನಡೆಯಲಿದೆ.