ನವದೆಹಲಿ, ಜೂನ್ 25 (ಪಿಟಿಐ, ಯುಎನ್ಐ)– ಬಿಹಾರ ಮುಖ್ಯಮಂತ್ರಿ ಲಲ್ಲೂ ಪ್ರಸಾದ್ ಯಾದವ್ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ಅವರನ್ನು ಪದಚ್ಯುತಗೊಳಿಸಲಾಗುವುದು ಎಂದು ವಿಭಜಿತ ಜನತಾ ದಳ ಗುಂಪು ಇಂದು ಎಚ್ಚರಿಕೆ ನೀಡಿದೆ. ಆದರೆ ಇಂತಹ ಯಾವುದೇ ಪ್ರಯತ್ನಕ್ಕಿಳಿಯದಂತೆ ದಳ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. ಎರಡೂ ಬಣಗಳ ನಾಯಕರನ್ನು ಸೋಮವಾರ ದೆಹಲಿಗೆ ಕರೆದಿರುವ ಬೊಮ್ಮಾಯಿ ಅವರು ಬಿಕ್ಕಟ್ಟುಪರಿಹಾರಕ್ಕೆ ಸರ್ವಯತ್ನ ನಡೆಸುತ್ತಿದ್ದಾರೆ.