ಬೆಂಗಳೂರು, ನ. 22– ಭಾರತದ ಶೇಕಡಾ ನಾಲ್ಕರಷ್ಟು ಜನಸಂಖ್ಯೆಯನ್ನು ನಿತ್ಯ ದುಃಖಿಗಳಾಗಿಟ್ಟಿರುವ ಗುಹ್ಯರೋಗಿಗಳ ತೀವ್ರ ಪ್ರಮಾಣವನ್ನು, ರಾಷ್ಟ್ರದ ಪ್ರಮುಖ ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ತಂದ ಕೇಂದ್ರ ಆರೋಗ್ಯ ಸಚಿವ ಎಸ್. ಚಂದ್ರಶೇಖರ್ ಅವರು ‘ಇದನ್ನು ರಾಷ್ಟ್ರೀಯ ಆರೋಗ್ಯ ಅಪಾಯವೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.