ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 9–1–1969

ಗುರುವಾರ
Last Updated 8 ಜನವರಿ 2019, 20:21 IST
ಅಕ್ಷರ ಗಾತ್ರ

ಕನ್ನಡದ ಋಣ ತೀರಿಸಲುರಾಷ್ಟ್ರಕವಿ ಕುವೆಂಪು ಕರೆ

ಬೆಂಗಳೂರು, ಜ. 8– ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಲ್ಲ ತರಗತಿಗಳಲ್ಲೂ ವ್ಯಾಪಕವಾಗಿ ಕನ್ನಡ ಮಾಧ್ಯಮ ಜಾರಿಗೆ ಬರಬೇಕೆಂದು ರಾಷ್ಟ್ರಕವಿ ಡಾ. ಕೆ.ವಿ. ಪುಟ್ಟಪ್ಪ ಅವರು ಇಂದು ಆಗ್ರಹಪಡಿಸಿದರು.

ಈ ವಿಶ್ವವಿದ್ಯಾನಿಲಯವು ಮೊದಲು ಈ ಪ್ರದೇಶದ ಅವಶ್ಯಕತೆಗಳನ್ನು ಗುರುತಿಸಿ ಈಡೇರಿಸಬೇಕು. ಈ ಭಾಗದ ಜನತೆಯ ಋಣತೀರಿಸಬೇಕು. ಅದು ಕನ್ನಡದಿಂದ ಮಾತ್ರ ಸಾಧ್ಯ, ಇನ್ನಾವ ಭಾಷೆಯಿಂದಲೂ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೇವಾಲಯವೀ ಹೂವಿನ ತೋಟಂ’ ಗಾಜಿನ ಮನೆಯಲ್ಲಿ ನಡೆದ ನಾಲ್ಕನೆ ವಾರ್ಷಿಕ ಪದವೀ ಪ್ರಧಾನ ಸಮಾರಂ
ಭದಲ್ಲಿ ಗೌರವ ಡಿ.ಲಿಟ್, ಪ್ರಶಸ್ತಿಯನ್ನು ಸ್ವೀಕರಿಸಿ ಭಾಷಣ ಮಾಡಿದ ಅವರು ಹಿಂದೀ ಮಾಧ್ಯಮದ ಪ್ರಸ್ತಾಪವೆತ್ತಿ
‘ಇದು ಈ ಘಟ್ಟದಲ್ಲಿ ತುಂಬ ಅಪಾಯಕಾರಿ ಹೆಜ್ಜೆ’ ಎಂದು ಸ್ಪಷ್ಟಪಡಿಸಿದರು.

‘ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವ ಯೋಜನೆಯ ಅಂಗವಾಗಿ ಅಲ್ಲಿ ಸಂಪರ್ಕ ಭಾಷೆಯಾದ ಹಿಂದೀ ಮಾಧ್ಯಮದ ಪ್ರಸ್ತಾಪವೆತ್ತಿರುವುದೇನಾದರೂ ನಿಜವಾಗಿದ್ದ ಪಕ್ಷದಲ್ಲಿ ಆಚಾತುರ್ಯದ ನೀತಿಯೆಂದೇ ಭಾವಿಸಬೇಕಾಗುತ್ತದೆ’ ಎಂದರು.

**

ಪ್ರಧಾನಿಗೆ ಬಂಗಾರಪ್ಪ ಗೇಲಿ

ಬೆಂಗಳೂರು, ಜ. 8– ರಾಜ್ಯ ಕಾಂಗೈ ಶಾಸಕಾಂಗ ಪಕ್ಷದ ನಾಯಕತ್ವ ಬದಲಾವಣೆ ಹಾಗೂ ಭಿನ್ನಮತದಿಂದ ಪ್ರಸಕ್ತ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ನಿಲುವು ‘ಬೇಜವಾಬ್ದಾರಿ ಹಾಗೂ ನಾಚಿಕೆಗೇಡಿನದು’‍ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಇಂದು ಇಲ್ಲಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT