ಮೂರು ಸಾವಿರ ಮಠದ ಸ್ವಾಮಿಗಳಿಗೆ ಬೆದರಿಕೆ ಪತ್ರ
ಹುಬ್ಬಳ್ಳಿ, ಮಾ. 14– ಇಲ್ಲಿಯ ಮೂರು ಸಾವಿರ ಮಠದ ಜಗದ್ಗುರುಗಳಿಗೆ ಮಾ. 10ರಂದು ಬೆದರಿಕೆ ಪತ್ರ ಒಂದು ಬಂದಿದ್ದು, ಸ್ವಾಮಿಗಳು ನಗರದಲ್ಲಿ ಹಿಂದೂಗಳಿಗೆ ಪ್ರೋತ್ಸಾಹ ಕೊಟ್ಟು ಒಂದು ಜನವರ್ಗದ ಮೇಲೆ ಹಲ್ಲೆ ಮಾಡಲು ನೆರವು ನೀಡಿರುವುದಾಗಿ ಆರೋಪಿಸಿದ್ದು ಸ್ವಾಮಿಗಳು ಹಾಗೂ ಅವರ ಮಠದ ಮೇಲೆ ಹಲ್ಲೆ ಮಾಡುವುದಾಗಿ ಎಚ್ಚರಿಕೆ ಕೊಡಲಾಗಿದೆಯೆಂದು ತಿಳಿದು ಬಂದಿದೆ.