ಲೋಕಸಭೆಯಲ್ಲಿ ಗೋಲ್ವಾಲ್ಕರ್ ಬಗ್ಗೆ ಸದಸ್ಯರ ಬಣ್ಣನೆ: ಜನಸಂಘ ಮತ್ತು ಕಾಂಗ್ರೆಸ್ ನಡುವೆ ಚಕಮಕಿ
ನವದೆಹಲಿ, ಏ. 14– ಪುರಿ ಜಗದ್ಗುರು ಶಂಕರಾಚಾರ್ಯ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಗೋಲ್ವಾಲ್ಕರ್ ಅವರು ವರ್ಣಾಶ್ರಮ ಪದ್ಧತಿಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಇಂದು ಲೋಕಸಭೆಯಲ್ಲಿ ಜನಸಂಘ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಯಿತು.