ಪಲಿಮಾರು ಮಠದ ಹಿಂದಿನ ಸ್ವಾಮಿಗಳ ಲಗ್ನ; ಮೈಸೂರಿನಲ್ಲಿ ವಾಸ
ಉಡುಪಿ, ಮೇ 8– ಉಡುಪಿಯ ಪಲಿಮಾರು ಮಠಾಧಿಪತ್ಯ ತ್ಯಜಿಸಿದ ಶ್ರೀ ರಘುವಲ್ಲಭ ತೀರ್ಥ ಶ್ರೀಪಾದಂಗಳವರು ನಿನ್ನೆ ಸಂಸಾರಿಯಾದರು. ತಮ್ಮ ಸನ್ಯಾಸ ಪೂರ್ವದ ಹೆಸರಾದ ಲಕ್ಷ್ಮೀಶ ಎಂಬ ಹೆಸರನ್ನಿಟ್ಟುಕೊಂಡು ಜಯಂತಿ ಎಂಬ ಕನ್ಯೆಯನ್ನು ಮೇ 3ರಂದು ತಿರುಮಲೆ ತಿರುಪತಿಯಲ್ಲಿ ಅವರು ಮದುವೆಯಾದರೆಂದು ಇಲ್ಲಿಗೆ ಸುದ್ದಿ ಬಂದಿದೆ. ಶ್ರೀ ಲಕ್ಷ್ಮೀಶರು ಗೃಹಸ್ಥ ಜೀವನಕ್ಕೆ ಮೈಸೂರು ನಗರವನ್ನು ಆರಿಸಿರುವರೆಂದು ಹೇಳಲಾಗಿದೆ.