ರಾಜಧನ ರದ್ದತಿಗೆ ಕಾಲ ನಿಗದಿ ಮಾಡುವ ನಿರ್ಣಯ ತಿರಸ್ಕೃತ
ನವದೆಹಲಿ, ಆ. 1– ಮಾಜಿ ದೊರೆಗಳಿಗೆ ನೀಡಲಾಗುತ್ತಿರುವ ರಾಜಧನ ಹಾಗೂ ವಿಶೇಷ ಸೌಲಭ್ಯಗಳನ್ನು ಮಹಾತ್ಮ ಗಾಂಧಿ ಶತಾಬ್ದಿ ಸಮಾರಂಭ ನಡೆಯುವ ಈ ವರ್ಷದ ಅಕ್ಟೋಬರ್ 2ರ ವೇಳೆಗೆ ರದ್ದು ಮಾಡಬೇಕೆಂದು ಒತ್ತಾಯಪಡಿಸಿ ಎಸ್.ಎಸ್.ಪಿ. ಸದಸ್ಯ ಶ್ರೀ ರವಿರಾಮ್ ಅವರು ಮಂಡಿಸಿದ್ದ ಖಾಸಗಿ ನಿರ್ಣಯವನ್ನು ಲೋಕಸಭೆ ಇಂದು ತಿರಸ್ಕರಿಸಿತು.