ಎಲ್ಲ ಸರಕುಗಳ ಚಿಲ್ಲರೆ ಅಂಗಡಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಅವರು, 24ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದವರು ಪುನಃ ಆಫ್ರಿಕಕ್ಕೆ ವಾಪಸಾಗದೆ, ತಂದೆಯ ಇಚ್ಛೆಯಂತೆ ಇಲ್ಲಿಯ ರಾಜಕೀಯ ರಂಗ ಪ್ರವೇಶಿಸಿದರು. ಚಂಪಾರಣ್ಯ ಸತ್ಯಾಗ್ರಹ
ದಲ್ಲಿ ಅವರನ್ನು ಬಂಧಿಸಿದಾಗ ‘ಎ’ ದರ್ಜೆಯ ಬಂದಿಯ ಸ್ಥಾನಮಾನ ನೀಡಿದರೂ, ಅದನ್ನು ತ್ಯಜಿಸಿ ಇತರ ಸ್ವಯಂ ಸೇವಕರ ಜತೆ ‘ಸಿ’ ದರ್ಜೆಗೆ ಸೇರಿಕೊಂಡರು.