<blockquote>ಜನ ಚಳವಳಿಗಳ ಕಾರ್ಯಕರ್ತರ ಭಾವನೆಗಳಿಗೆ ಹಾಗೂ ದುರ್ಬಲ ಸಮುದಾಯಗಳ ಸಂಕಟಗಳಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ‘ಇವ ನಮ್ಮವ’ ಎನ್ನುವ ವರ್ಚಸ್ಸು ಗಳಿಸಿಕೊಂಡಿರುವ ರಾಜಕಾರಣಿ. ಕರ್ನಾಟಕದ ಯಾವ ಮುಖ್ಯಮಂತ್ರಿಗೂ ದೊರೆಯದಿದ್ದ ಪ್ರಜ್ಞಾವಂತರ ವಲಯದ ಮೆಚ್ಚುಗೆ–ಬೆಂಬಲ ಅವರಿಗೆ ದೊರಕಿದೆ.</blockquote>.<p>ರಾಜಕಾರಣವೆನ್ನುವುದು ಸಾಧ್ಯತೆಗಳ ಕಲೆ ಎಂಬುದನ್ನು ಹಲವು ಸ್ತರಗಳಲ್ಲಿ ಸಾಧಿಸಿ ತೋರಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಅಧಿಕಾರ ಹಸ್ತಾಂತರಕ್ಕೆ ಸುಗಮವಾಗಿ ಅನುವು ಮಾಡಿಕೊಟ್ಟಿದ್ದಾರೆ. ರಾಜೀನಾಮೆ ಮುಖ್ಯಮಂತ್ರಿ ಪದವಿಗೇ ಹೊರತು ರಾಜಕಾರಣಕ್ಕಲ್ಲ ಎಂದು ಖಚಿತವಾಗಿ ಹೇಳಿರುವ ಅವರ ರಾಜಕಾರಣದ ಮುಂದಿನ ಹಾದಿಗಳ ಬಗ್ಗೆ ನಿರೀಕ್ಷೆ, ಕುತೂಹಲಗಳು ಎಲ್ಲರಲ್ಲಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿಯ ನಿರ್ಗಮನದ ಕಾಲದಲ್ಲಿ ಕಾಣದಷ್ಟು ವ್ಯಾಪಕ ವಿಷಾದ, ದುಗುಡ ವ್ಯಕ್ತವಾದುದು ಕರ್ನಾಟಕದಲ್ಲಿ ಅವರ ರಾಜಕಾರಣ ಸ್ವೀಕಾರವಾಗಿದ್ದ ರೀತಿಗೆ ಸಾಕ್ಷಿಯಂತಿದೆ.</p>.<p>ಕಳೆದ ನಲವತ್ತು ವರ್ಷಗಳ ರಾಜಕಾರಣದಲ್ಲಿ ಸೋಲು, ಗೆಲುವು, ಹಿನ್ನಡೆ, ಸ್ಥಗಿತತೆ ಎಲ್ಲವನ್ನೂ ನಿಧಾನವಾಗಿ ತಮ್ಮ ಖಚಿತ ರಾಜಕೀಯ ಮುನ್ನಡೆಯ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡ ಕರ್ನಾಟಕದ ದೊಡ್ಡ ರಾಜಕಾರಣಿ ಸಿದ್ದರಾಮಯ್ಯನವರೇ ಇರಬೇಕು. ಅವರ ಈವರೆಗಿನ ರಾಜಕಾರಣ ಕುರಿತು ಕ್ಷಿಪ್ರ ನೋಟ ಹರಿಸಿದರೂ ಅವರ ‘ಓನ್ ಸ್ಟೈಲ್’ ರಾಜಕಾರಣದ ಮಹತ್ವದ ಅರಿವಾಗುತ್ತದೆ.</p>.<p>ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಂದ ವಿದ್ಯಾರ್ಥಿ ದೆಸೆಯಲ್ಲಿ ಸಮಾಜವಾದದ ಸ್ಪರ್ಶ ಪಡೆದ ಸಿದ್ದರಾಮಯ್ಯ ತಮ್ಮ ರಾಜಕಾರಣದುದ್ದಕ್ಕೂ ಒಂದು ಮಟ್ಟದ ಸಮಾನತೆಯ ಸರಳ ಪರಿಭಾಷೆಯನ್ನೇ ಬಳಸುತ್ತಾ ಬಂದಿದ್ದಾರೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಘಟ್ಟದಲ್ಲಿ ಅವರ ರಾಜಕೀಯ–ಸಾಮಾಜಿಕ ವ್ಯಕ್ತಿತ್ವದ ವ್ಯಾಪ್ತಿ ವಿಸ್ತಾರಗೊಂಡಿತು. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಕಾಲದಿಂದ ಮುಖ್ಯಮಂತ್ರಿಯ ಹುದ್ದೆಗೆ ರಾಜೀನಾಮೆ ಕೊಡುವ ತನಕವೂ ಅವರು ಸಾಮಾಜಿಕ ನ್ಯಾಯದ ಆಧುನಿಕ ಪರಿಭಾಷೆಯನ್ನು ಬಳಸುತ್ತಲೇ ಬಂದವರು. ಪರಿಭಾಷೆಗೆ ತಕ್ಕ ಯೋಜನೆಗಳನ್ನು ಆಗಾಗ ಜಾರಿಗೊಳಿಸಿದವರು.</p>.<p>ಸಿದ್ದರಾಮಯ್ಯನವರ ಈ ತಾತ್ತ್ವಿಕ ಪರಿಭಾಷೆ ಯಿಂದಾಗಿ ನಾಡಿನ ವಿವಿಧ ಚಳವಳಿಗಳ ನಾಯಕ ರಿಗೆ, ಕಾರ್ಯಕರ್ತರಿಗೆ ಅವರು ತಮ್ಮ ದನಿಗೆ ಕಿವಿ ಗೊಡುವ ನಾಯಕನಂತೆ ಕಂಡಿರುವುದು ಸಹಜ. ದೇವರಾಜ ಅರಸರ ಸಾಮಾಜಿಕ ನ್ಯಾಯದ ಮಾರ್ಗದ ಮಹತ್ವವನ್ನು ಕರ್ನಾಟಕ ತಡವಾಗಿ ಕಂಡು<br>ಕೊಂಡಿತು. ಸಿದ್ದರಾಮಯ್ಯನವರ ಅದೃಷ್ಟ: ಅವರ ಅಧಿಕಾರಾವಧಿಯಲ್ಲೇ ನಾಡಿನ ಪ್ರಜ್ಞಾವಂತ ವಲಯ ಅವರ ಪರಿಭಾಷೆ–ಕಾರ್ಯಕ್ರಮಗಳ ಆಶಯಗಳನ್ನು ಗುರ್ತಿಸಿ, ಗೌರವಿಸಿತು. ವಾಂಛಲ್ಯಗಳಿಗಾಗಿ ಅವರ ಅಭಿಮಾನಿಗಳಾದ ಲೇಖಕರಿಗಿಂತ, ಅವರನ್ನು ಎಂದೂ ಭೇಟಿ ಮಾಡದ ಸಾವಿರಾರು ಪ್ರಜ್ಞಾವಂತ ಚಿಂತಕ, ಚಿಂತಕಿಯರು ಅವರನ್ನು ಮೆಚ್ಚುತ್ತಾ ಒಪ್ಪುತ್ತಾ ಬಂದಿರುವುದು ಅಪೂರ್ವವಾದುದು. ಇದು<br>ಕರ್ನಾಟಕದ ಹಿಂದಿನ ಯಾವ ಮುಖ್ಯಮಂತ್ರಿಗೂ ದಕ್ಕದಿದ್ದ ಅಯಾಚಿತ ಭಾಗ್ಯ.</p>.<p>ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿ ಗಳ ಹಾದಿಗಳನ್ನು ಬಲ್ಲ ಸಿದ್ದರಾಮಯ್ಯ ಚಳವಳಿಗಳ ಬೇಡಿಕೆಗಳಿಗೆ ಸ್ಪಂದಿಸಿದ ರೀತಿಯೂ ಅವರ ವ್ಯಾಪಕ ಸ್ವೀಕಾರಕ್ಕೆ ಕಾರಣ. ದಲಿತ–ರೈತ ಚಳವಳಿಗಳ ನಾಯಕರು ದೇವನಹಳ್ಳಿಯಲ್ಲಿ ಕೃಷಿ ಭೂಮಿಯ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ಚಳವಳಿಯ ಒತ್ತಾಯಕ್ಕೆ ಸರ್ಕಾರ ಮಣಿದ ರೀತಿ ಇಂಥದೊಂದು ಉದಾಹರಣೆ. ಚಳವಳಿಗಳನ್ನು ಒಡೆಯುವ, ಬಗ್ಗು ಬಡಿವ ಕುತಂತ್ರಗಳು ಅವರ ರಾಜಕೀಯದಲ್ಲಿರಲಿಲ್ಲ ಎಂಬುದೂ ಅಷ್ಟೇ ಮುಖ್ಯವಾದುದು.</p>.<p>ರಾಜ್ಯದ ಮುಖ್ಯಮಂತ್ರಿಗಳಲ್ಲಿ ಗುಂಡೂರಾಯರ ನಂತರ ನಾಡಿನ ಮುಸ್ಲಿಮರು ‘ತಮ್ಮವ’ನಂತೆ ಕಂಡಿರುವುದು ಸಿದ್ದರಾಮಯ್ಯನವರನ್ನು ಮಾತ್ರ. ದಲಿತ, ಹಿಂದುಳಿದ ವರ್ಗಗಳ ಜನಸ್ತೋಮವೂ ಅವರನ್ನು ನಮ್ಮವನಂತೆ ಕಂಡಿದೆ. ಕಾರಣ, ಸಿದ್ದರಾಮಯ್ಯ ಜಾತಿ, ಧರ್ಮ, ವರ್ಗಗಳ ಒಡಕಿನ ಭಾಷೆಯನ್ನು ಬಳಸಿದವರಲ್ಲ. ಈ ಗುಣ ವೃತ್ತಿ ರಾಜಕಾರಣಿಯ ಲೆಕ್ಕಾಚಾರದಿಂದ ಹುಟ್ಟದೆ, ಅವರ ಸಹಜ ವ್ಯಕ್ತಿತ್ವದಲ್ಲೇ ಇರುವಂತಿದೆ. ಸಿದ್ದರಾಮನ ಹುಂಡಿ ಗ್ರಾಮದಲ್ಲಿ ಅವರಿಗೆ ದಕ್ಕಿದ ಜವಾರಿ ಶೈಲಿಯ, ಗತ್ತಿನ ಸಂಬೋಧನೆಯನ್ನು ವಿಧಾನಸಭೆ ಯಲ್ಲಿ ವಿರೋಧ ಪಕ್ಷದವರೂ ನಗುತ್ತಾ ಸ್ವೀಕರಿಸುತ್ತಿದ್ದರು! ನಡುನಡುವೆ ವ್ಯಾಕರಣ ಪಾಠ ಕೂಡ ಮಾಡಬಲ್ಲ ಅವರ ವೈಖರಿಗೆ, ‘ಈ ಅಂಕಿಅಂಶ ಗೊತ್ತೇನ್ರಿ?’ ಎಂಬ ಅವರ ಲಾಯರ್ ಆತ್ಮವಿಶ್ವಾಸಕ್ಕೆ ಸದನ ದಂಗಾಗುತ್ತಿತ್ತು. ಗೊಂದಲ ಗಳಿಲ್ಲದ ಸ್ಪಷ್ಟ ವೈಚಾರಿಕ ಭಾಷೆ, ಏರುದನಿಯಲ್ಲಿ ಕೂಗಿದರೂ, ಗಳಿಗೆ ಬಿಟ್ಟು ಆರಾಮಾಗಿ ವಿಷಯಕ್ಕೆ ಹಿಂದಿರುಗುತ್ತಿದ್ದ ಅವರ ಶೈಲಿ ಆಕರ್ಷಕವಾಗಿತ್ತು. ಅಂತರ್ಜಾತೀಯ ವಿವಾಹಿತರ ರಕ್ಷಣೆಯ ‘ಇವ ನಮ್ಮವ’ ಮಸೂದೆ, ಭೂವರ್ಗಾವಣೆ ನಿಷೇಧ ಕಾಯ್ದೆ, ದಲಿತ ಜನಸಂಖ್ಯಾಧಾರಿತ ಬಜೆಟ್ ನಿಗದಿ, ಒಳಮೀಸಲಾತಿಯಂಥ ಸಂಕೀರ್ಣ ಪ್ರಶ್ನೆಗಳನ್ನು ಕೂಡ ಅವರು ನಿಭಾಯಿಸಿ ತೋರಿಸಿ ದರು. ಅಹಿಂದ ವರ್ಗಗಳ ಪರವಾದ ಗಟ್ಟಿ ತಾತ್ತ್ವಿಕತೆ ಇದ್ದರೂ, ಎಲ್ಲ ಜಾತಿಗಳ ಬಡವರ ಕಷ್ಟಗಳನ್ನು ಅರಿತಿದ್ದ ರೀತಿಯಿಂದಾಗಿ ಅವರಿಗೆ ಎಲ್ಲ ಜಾತಿಗಳಲ್ಲೂ ಅನುಯಾಯಿಗಳು ಸೃಷ್ಟಿಯಾದರು.</p>.<p>ಸಿದ್ದರಾಮಯ್ಯನವರಿಗಿಂತ ಹೆಚ್ಚು ಓದಿಕೊಂಡಿದ್ದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, <br>ಎಸ್.ಎಂ. ಕೃಷ್ಣ ಥರದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಂದು ಹೋಗಿದ್ದರೂ, ಅವರಿಗಿಂತ ಭಿನ್ನವಾಗಿ ಸಾಮಾನ್ಯರ ಹಾಗೂ ವಿದ್ವಜ್ಜನರ ಸಭೆಗಳಲ್ಲಿ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ತಲಪಿಸಬಲ್ಲ ಶಕ್ತಿ ಸಿದ್ದರಾಮಯ್ಯನವರದು. ವಿಶಿಷ್ಟ ನೆನಪಿನ ಬಲದಿಂದ ಗ್ರಾಮಗಳ ವಿವರಗಳು, ಜಾತಿಗಳು, ಹಣಕಾಸು ಸೇರಿ<br>ದಂತೆ ಹಲ ಬಗೆಯ ಅಂಕಿಅಂಶಗಳನ್ನು ಅವರು ಸಲೀಸಾಗಿ ಹೇಳಬಲ್ಲರು. ಬಸವಣ್ಣ, ಕನಕದಾಸ, ಅಂಬೇಡ್ಕರ್, ಗಾಂಧಿ, ಶಾಂತವೇರಿ ಗೋಪಾಲಗೌಡ–ಯಾರನ್ನು ಕುರಿತ ಸಭೆಯಾದರೂ ಸಿದ್ದರಾಮಯ್ಯ ನವರ ಒಳಗಿನಿಂದ ಉಕ್ಕುವ ಮಾತುಗಳಿರಬಲ್ಲವು. ಅಂಬೇಡ್ಕರ್, ಬಸವಣ್ಣನವರ ಮಾತನ್ನು ಮತ್ತೆ ಮತ್ತೆ ಹೇಳಿ ಸಮಾಜದಲ್ಲಿ ಸಾಮರಸ್ಯ ಹಾಗೂ ಒಳಿತಿನ ಭಾವ ಹಬ್ಬುವಂತೆ ಅವರು ಮಾಡಬಲ್ಲರು. ಇದರಿಂದಾಗಿ, ಅವರ ಸಂಪುಟದ ಸಹೋದ್ಯೋಗಿಗಳು ಕೂಡ ಸಾಮರಸ್ಯದ ಪರಿಭಾಷೆಯನ್ನು ಬಳಸಲೇಬೇಕಾಗಿದ್ದ ನೈತಿಕ ಒತ್ತಾಯ ಸೃಷ್ಟಿಯಾಗುತ್ತಿತ್ತು.</p>.<p>ಎರಡು ದಶಕಗಳ ಕೆಳಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಕಾಲಕ್ಕೆ ಕಾಲದ ಒತ್ತಡ ಹಾಗೂ<br>ಸೋಲಿನ ಹೊಡೆತಗಳಿಂದ ಕಾಂಗ್ರೆಸ್ ಬದಲಾಗ ತೊಡಗಿತ್ತು. ಆ ಘಟ್ಟದಲ್ಲಿ ಕರ್ನಾಟಕ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಖಚಿತ ಸಾಮಾಜಿಕ–ಸಾಂಸ್ಕೃತಿಕ ಪರಿಭಾಷೆ ಕೊಟ್ಟರು. ಎಲ್ಲರನ್ನೂ ಒಳಗೊಳ್ಳುವ ಸಿದ್ದರಾಮಯ್ಯನವರ ಈ ಪರಿಭಾಷೆ–ರಾಜಕಾರಣದಿಂದ ಮುಂಬರುವ ಕಾಲದಲ್ಲಿ ಕಾಂಗ್ರೆಸ್ ಹಿಂದಕ್ಕೆ ಸರಿದರೆ, ಆಧುನಿಕ ಮನಸ್ಸಿನ ಪ್ರಜ್ಞಾವಂತರ ಸಹಾನುಭೂತಿಯನ್ನು, ಈ ವಲಯಗಳ ನೈತಿಕ ಬೆಂಬಲವನ್ನು ಕಳೆದುಕೊಳ್ಳುತ್ತದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಪ್ರವೇಶದ ನಂತರ ಮೊದಲ ಬಾರಿಗೆ ಕಾಂಗ್ರೆಸ್ಸಿಗೆ ಸ್ವಯಂಸ್ಫೂರ್ತಿಯಿಂದ, ತಮ್ಮ ಕರ್ತವ್ಯವೆಂಬಂತೆ ವೋಟು ಹಾಕಿದ–ಹಾಕಿಸಿದ ಈ ಪುಟ್ಟ ವಲಯ ಜಾತಿ, ಕೋಮು, ಹಣದ ಆಮಿಷಗಳಿಗೆ ಬಗ್ಗದ ದಿಟ್ಟ ವಲಯ.</p>.<p>ಇಂಥ ಪುಟ್ಟ ವಲಯಗಳು ಕಾಂಗ್ರೆಸ್ಸಿಗೆ ಸೃಷ್ಟಿಸಿರುವ ‘ಗುಡ್ ವಿಲ್’ಗೆ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ<br>ಅವರ ನಡೆ–ನುಡಿ ಕೂಡ ಕಾರಣವಾದಂತೆ, ರಾಜ್ಯಮಟ್ಟದಲ್ಲಿ ಸಿದ್ದರಾಮಯ್ಯನವರ ಸಾಮಾಜಿಕ ನಾಯಕತ್ವವೂ ಕಾರಣ ಎಂಬುದನ್ನು ಕಾಂಗ್ರೆಸ್ಸಿಗರು ಅರಿಯಬೇಕು. ಸಿದ್ದರಾಮಯ್ಯನವರ ಖಚಿತವಾದ ಕೋಮುವಾದ ವಿರೋಧ, ಆಹಾರ ಪದ್ಧತಿಗಳ ಬಗ್ಗೆ ಮುಕ್ತ ನಿಲುವು; ಜಾತಿ ಮತ ಮೀರಿ ಜನರನ್ನು ನೋಡುತ್ತಿದ್ದ ರೀತಿ; ಆದರೆ ಅಧಿಕಾರ ಹಂಚಿಕೆಯಲ್ಲಿ, ಆದ್ಯತಾವಕಾಶಗಳ ಹಂಚಿಕೆಯಲ್ಲಿ ಜಾತಿ, ವರ್ಗ ಗಳನ್ನು ಸ್ಪಷ್ಟವಾಗಿ ನೋಡಿ ಹಂಚುವುದರ ಪರ ವಾಗಿದ್ದ ರೀತಿ; ‘ಜನರ ಪಾಲು ಜನರಿಗೆ’ ಎಂದು ಭಾಗ್ಯ<br>ಗಳ ಯೋಜನೆಗಳನ್ನು ನಿಭಾಯಿಸುತ್ತಲೇ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸದಂತೆ ಕಾಯ್ದು ಕೊಂಡ ರೀತಿ– ಈ ಎಲ್ಲದರಿಂದ ಕಾಂಗ್ರೆಸ್, ತನ್ನ ಉಳಿವಿಗಾಗಿ ಯಾದರೂ, ಸ್ಪಷ್ಟ ಪಾಠಗಳನ್ನು ಕಲಿಯಬೇಕಾಗಿದೆ.</p>.<p>ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸಾರ್ವಜನಿಕ ವಲಯದಲ್ಲಿ ಬಳಸಿದ ಭಾಷೆ ಗಮನಾರ್ಹವಾಗಿದೆ. ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ಕೂಡ ಜನರ ಮನಸ್ಸನ್ನು ಬಗ್ಗಡವಾಗಿಸುವ ಭಾಷೆಯನ್ನು ಅವರು ಬಳಸಲಿಲ್ಲ; ‘ಅಚ್ಛೇ ದಿನ್ ಆಯೇಗಾ’ದ ಠೊಳ್ಳಿನ ಗೇಲಿ, ಅಂಕಿಅಂಶಗಳ ಸಮೇತ ಪಕ್ಷದ ಕಾರ್ಯಕ್ರಮಗಳ ಪರಿಣಾಮಕಾರಿ ಮಂಡನೆ ಈ ಥರದ ಹಾದಿಯನ್ನು ಪರಿಣಾಮ ಕಾರಿಯಾಗಿ ಬಳಸುತ್ತಾ ಬಂದವರು. ‘ಯಾಕೆ ಹೀಗೆ ಬರೀತೀಯ, ಹೀಗೆ ಬರೀಬೇಡ’ ಎಂದು ಯಾರನ್ನೂ ಕೇಳದಿದ್ದ ಅವರು, ಸಾಕಷ್ಟು ಡೆಮಾಕ್ರಟಿಕ್ ಆಗಿದ್ದವರು.</p>.<p>ಸಿದ್ದರಾಮಯ್ಯನವರ ಅಧಿಕಾರ ಹಸ್ತಾಂತರದ ಹಿನ್ನೆಲೆಯಲ್ಲಿ ಮೊನ್ನೆ ಕೇರಳದಲ್ಲಿ ಅಧಿಕಾರ ಹಿಡಿದು, ತಮಿಳುನಾಡಿನಲ್ಲಿ ಅಧಿಕಾರಕ್ಕೆ ನುಸುಳಿದ, ಕಾಂಗ್ರೆಸ್ಸಿನ ಅತಿವಿಶ್ವಾಸವಿತ್ತೋ, ಅಥವಾ ಇದು ಹಳೆಯ ಒಪ್ಪಂದದ ಫಲವೋ ಇವೆಲ್ಲ ಊಹೆಯ ವಿಷಯಗಳು. ಆದರೂ ಗ್ರೇಟರ್ ಬೆಂಗಳೂರು ಮಹಾನಗರಪಾಲಿಕೆಗಳ ಚುನಾವಣೆ ಹಾಗೂ ಬರಲಿರುವ ಸ್ಥಳೀಯ ಚುನಾವಣೆಗಳ ಎದುರಿನಲ್ಲಿ ಈ ಹಸ್ತಾಂತರ ಕೊಂಚ ‘ಅಸೂಕ್ತ ಕಾಲ’ ಎನ್ನಿಸುತ್ತದೆ. ಈ ಘಟ್ಟದಲ್ಲಿ ಯಾರೇ ಮುಖ್ಯಮಂತ್ರಿಯಾಗಲಿ, ಕಾಂಗ್ರೆಸ್ ಅಧ್ಯಕ್ಷ ಪಟ್ಟ ಯಾರ ಕೈಗಾದರೂ ಹೋಗಲಿ, ಸಿದ್ದರಾಮಯ್ಯನವರ ಪೂರ್ಣ ತೊಡಗುವಿಕೆಯಿಲ್ಲದೆ ಮುಂದಿನ ಚುನಾವಣೆಗಳ ಮುಖಾಮುಖಿ ಕಾಂಗ್ರೆಸ್ಸಿಗೆ ಅತ್ಯಂತ ಕಠಿಣವಾಗಬಲ್ಲದು. ಅದಕ್ಕಿಂತ ಮುಖ್ಯವಾಗಿ, ‘ಮತದಾರರ ಪಟ್ಟಿ ಪರಿಷ್ಕರಣೆ’ಯ ಹುನ್ನಾರದ ಬಗ್ಗೆ ಮಮತಾ ಬ್ಯಾನರ್ಜಿಯವರಂಥ ಜನನಾಯಕಿಯ ಬೀದಿಹೋರಾಟ, ನ್ಯಾಯಾಂಗ ಹೋರಾಟಗಳ ಹಿನ್ನಡೆಯ ನಂತರ, ಸಿದ್ದರಾಮಯ್ಯ ನವರಂಥ ಜನನಾಯಕರು ತಮ್ಮ ಪ್ರಭಾವಳಿಯ ಮೂಲಕ ಕರ್ನಾಟಕದಾದ್ಯಂತ ಯಾವ ಎಚ್ಚರ ಮೂಡಿಸುತ್ತಾರೆ ಎಂಬ ನಿರೀಕ್ಷೆಯೂ ನಮ್ಮಂಥವ ರಲ್ಲಿದೆ. ಸಿದ್ದರಾಮಯ್ಯನವರ ಅಖಂಡ ಶಕ್ತಿಯನ್ನು ಬಳಸಿಕೊಂಡು ಗಟ್ಟಿಯಾಗಲು ಕಾಂಗ್ರೆಸ್ ಪಾರ್ಟಿ ಅವರನ್ನು ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯಲ್ಲಿ ತೊಡಗಿಸಲು ಕೋರಬಲ್ಲದೋ, ಕಾದು ನೋಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಜನ ಚಳವಳಿಗಳ ಕಾರ್ಯಕರ್ತರ ಭಾವನೆಗಳಿಗೆ ಹಾಗೂ ದುರ್ಬಲ ಸಮುದಾಯಗಳ ಸಂಕಟಗಳಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ‘ಇವ ನಮ್ಮವ’ ಎನ್ನುವ ವರ್ಚಸ್ಸು ಗಳಿಸಿಕೊಂಡಿರುವ ರಾಜಕಾರಣಿ. ಕರ್ನಾಟಕದ ಯಾವ ಮುಖ್ಯಮಂತ್ರಿಗೂ ದೊರೆಯದಿದ್ದ ಪ್ರಜ್ಞಾವಂತರ ವಲಯದ ಮೆಚ್ಚುಗೆ–ಬೆಂಬಲ ಅವರಿಗೆ ದೊರಕಿದೆ.</blockquote>.<p>ರಾಜಕಾರಣವೆನ್ನುವುದು ಸಾಧ್ಯತೆಗಳ ಕಲೆ ಎಂಬುದನ್ನು ಹಲವು ಸ್ತರಗಳಲ್ಲಿ ಸಾಧಿಸಿ ತೋರಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಅಧಿಕಾರ ಹಸ್ತಾಂತರಕ್ಕೆ ಸುಗಮವಾಗಿ ಅನುವು ಮಾಡಿಕೊಟ್ಟಿದ್ದಾರೆ. ರಾಜೀನಾಮೆ ಮುಖ್ಯಮಂತ್ರಿ ಪದವಿಗೇ ಹೊರತು ರಾಜಕಾರಣಕ್ಕಲ್ಲ ಎಂದು ಖಚಿತವಾಗಿ ಹೇಳಿರುವ ಅವರ ರಾಜಕಾರಣದ ಮುಂದಿನ ಹಾದಿಗಳ ಬಗ್ಗೆ ನಿರೀಕ್ಷೆ, ಕುತೂಹಲಗಳು ಎಲ್ಲರಲ್ಲಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿಯ ನಿರ್ಗಮನದ ಕಾಲದಲ್ಲಿ ಕಾಣದಷ್ಟು ವ್ಯಾಪಕ ವಿಷಾದ, ದುಗುಡ ವ್ಯಕ್ತವಾದುದು ಕರ್ನಾಟಕದಲ್ಲಿ ಅವರ ರಾಜಕಾರಣ ಸ್ವೀಕಾರವಾಗಿದ್ದ ರೀತಿಗೆ ಸಾಕ್ಷಿಯಂತಿದೆ.</p>.<p>ಕಳೆದ ನಲವತ್ತು ವರ್ಷಗಳ ರಾಜಕಾರಣದಲ್ಲಿ ಸೋಲು, ಗೆಲುವು, ಹಿನ್ನಡೆ, ಸ್ಥಗಿತತೆ ಎಲ್ಲವನ್ನೂ ನಿಧಾನವಾಗಿ ತಮ್ಮ ಖಚಿತ ರಾಜಕೀಯ ಮುನ್ನಡೆಯ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡ ಕರ್ನಾಟಕದ ದೊಡ್ಡ ರಾಜಕಾರಣಿ ಸಿದ್ದರಾಮಯ್ಯನವರೇ ಇರಬೇಕು. ಅವರ ಈವರೆಗಿನ ರಾಜಕಾರಣ ಕುರಿತು ಕ್ಷಿಪ್ರ ನೋಟ ಹರಿಸಿದರೂ ಅವರ ‘ಓನ್ ಸ್ಟೈಲ್’ ರಾಜಕಾರಣದ ಮಹತ್ವದ ಅರಿವಾಗುತ್ತದೆ.</p>.<p>ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಂದ ವಿದ್ಯಾರ್ಥಿ ದೆಸೆಯಲ್ಲಿ ಸಮಾಜವಾದದ ಸ್ಪರ್ಶ ಪಡೆದ ಸಿದ್ದರಾಮಯ್ಯ ತಮ್ಮ ರಾಜಕಾರಣದುದ್ದಕ್ಕೂ ಒಂದು ಮಟ್ಟದ ಸಮಾನತೆಯ ಸರಳ ಪರಿಭಾಷೆಯನ್ನೇ ಬಳಸುತ್ತಾ ಬಂದಿದ್ದಾರೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಘಟ್ಟದಲ್ಲಿ ಅವರ ರಾಜಕೀಯ–ಸಾಮಾಜಿಕ ವ್ಯಕ್ತಿತ್ವದ ವ್ಯಾಪ್ತಿ ವಿಸ್ತಾರಗೊಂಡಿತು. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಕಾಲದಿಂದ ಮುಖ್ಯಮಂತ್ರಿಯ ಹುದ್ದೆಗೆ ರಾಜೀನಾಮೆ ಕೊಡುವ ತನಕವೂ ಅವರು ಸಾಮಾಜಿಕ ನ್ಯಾಯದ ಆಧುನಿಕ ಪರಿಭಾಷೆಯನ್ನು ಬಳಸುತ್ತಲೇ ಬಂದವರು. ಪರಿಭಾಷೆಗೆ ತಕ್ಕ ಯೋಜನೆಗಳನ್ನು ಆಗಾಗ ಜಾರಿಗೊಳಿಸಿದವರು.</p>.<p>ಸಿದ್ದರಾಮಯ್ಯನವರ ಈ ತಾತ್ತ್ವಿಕ ಪರಿಭಾಷೆ ಯಿಂದಾಗಿ ನಾಡಿನ ವಿವಿಧ ಚಳವಳಿಗಳ ನಾಯಕ ರಿಗೆ, ಕಾರ್ಯಕರ್ತರಿಗೆ ಅವರು ತಮ್ಮ ದನಿಗೆ ಕಿವಿ ಗೊಡುವ ನಾಯಕನಂತೆ ಕಂಡಿರುವುದು ಸಹಜ. ದೇವರಾಜ ಅರಸರ ಸಾಮಾಜಿಕ ನ್ಯಾಯದ ಮಾರ್ಗದ ಮಹತ್ವವನ್ನು ಕರ್ನಾಟಕ ತಡವಾಗಿ ಕಂಡು<br>ಕೊಂಡಿತು. ಸಿದ್ದರಾಮಯ್ಯನವರ ಅದೃಷ್ಟ: ಅವರ ಅಧಿಕಾರಾವಧಿಯಲ್ಲೇ ನಾಡಿನ ಪ್ರಜ್ಞಾವಂತ ವಲಯ ಅವರ ಪರಿಭಾಷೆ–ಕಾರ್ಯಕ್ರಮಗಳ ಆಶಯಗಳನ್ನು ಗುರ್ತಿಸಿ, ಗೌರವಿಸಿತು. ವಾಂಛಲ್ಯಗಳಿಗಾಗಿ ಅವರ ಅಭಿಮಾನಿಗಳಾದ ಲೇಖಕರಿಗಿಂತ, ಅವರನ್ನು ಎಂದೂ ಭೇಟಿ ಮಾಡದ ಸಾವಿರಾರು ಪ್ರಜ್ಞಾವಂತ ಚಿಂತಕ, ಚಿಂತಕಿಯರು ಅವರನ್ನು ಮೆಚ್ಚುತ್ತಾ ಒಪ್ಪುತ್ತಾ ಬಂದಿರುವುದು ಅಪೂರ್ವವಾದುದು. ಇದು<br>ಕರ್ನಾಟಕದ ಹಿಂದಿನ ಯಾವ ಮುಖ್ಯಮಂತ್ರಿಗೂ ದಕ್ಕದಿದ್ದ ಅಯಾಚಿತ ಭಾಗ್ಯ.</p>.<p>ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿ ಗಳ ಹಾದಿಗಳನ್ನು ಬಲ್ಲ ಸಿದ್ದರಾಮಯ್ಯ ಚಳವಳಿಗಳ ಬೇಡಿಕೆಗಳಿಗೆ ಸ್ಪಂದಿಸಿದ ರೀತಿಯೂ ಅವರ ವ್ಯಾಪಕ ಸ್ವೀಕಾರಕ್ಕೆ ಕಾರಣ. ದಲಿತ–ರೈತ ಚಳವಳಿಗಳ ನಾಯಕರು ದೇವನಹಳ್ಳಿಯಲ್ಲಿ ಕೃಷಿ ಭೂಮಿಯ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ಚಳವಳಿಯ ಒತ್ತಾಯಕ್ಕೆ ಸರ್ಕಾರ ಮಣಿದ ರೀತಿ ಇಂಥದೊಂದು ಉದಾಹರಣೆ. ಚಳವಳಿಗಳನ್ನು ಒಡೆಯುವ, ಬಗ್ಗು ಬಡಿವ ಕುತಂತ್ರಗಳು ಅವರ ರಾಜಕೀಯದಲ್ಲಿರಲಿಲ್ಲ ಎಂಬುದೂ ಅಷ್ಟೇ ಮುಖ್ಯವಾದುದು.</p>.<p>ರಾಜ್ಯದ ಮುಖ್ಯಮಂತ್ರಿಗಳಲ್ಲಿ ಗುಂಡೂರಾಯರ ನಂತರ ನಾಡಿನ ಮುಸ್ಲಿಮರು ‘ತಮ್ಮವ’ನಂತೆ ಕಂಡಿರುವುದು ಸಿದ್ದರಾಮಯ್ಯನವರನ್ನು ಮಾತ್ರ. ದಲಿತ, ಹಿಂದುಳಿದ ವರ್ಗಗಳ ಜನಸ್ತೋಮವೂ ಅವರನ್ನು ನಮ್ಮವನಂತೆ ಕಂಡಿದೆ. ಕಾರಣ, ಸಿದ್ದರಾಮಯ್ಯ ಜಾತಿ, ಧರ್ಮ, ವರ್ಗಗಳ ಒಡಕಿನ ಭಾಷೆಯನ್ನು ಬಳಸಿದವರಲ್ಲ. ಈ ಗುಣ ವೃತ್ತಿ ರಾಜಕಾರಣಿಯ ಲೆಕ್ಕಾಚಾರದಿಂದ ಹುಟ್ಟದೆ, ಅವರ ಸಹಜ ವ್ಯಕ್ತಿತ್ವದಲ್ಲೇ ಇರುವಂತಿದೆ. ಸಿದ್ದರಾಮನ ಹುಂಡಿ ಗ್ರಾಮದಲ್ಲಿ ಅವರಿಗೆ ದಕ್ಕಿದ ಜವಾರಿ ಶೈಲಿಯ, ಗತ್ತಿನ ಸಂಬೋಧನೆಯನ್ನು ವಿಧಾನಸಭೆ ಯಲ್ಲಿ ವಿರೋಧ ಪಕ್ಷದವರೂ ನಗುತ್ತಾ ಸ್ವೀಕರಿಸುತ್ತಿದ್ದರು! ನಡುನಡುವೆ ವ್ಯಾಕರಣ ಪಾಠ ಕೂಡ ಮಾಡಬಲ್ಲ ಅವರ ವೈಖರಿಗೆ, ‘ಈ ಅಂಕಿಅಂಶ ಗೊತ್ತೇನ್ರಿ?’ ಎಂಬ ಅವರ ಲಾಯರ್ ಆತ್ಮವಿಶ್ವಾಸಕ್ಕೆ ಸದನ ದಂಗಾಗುತ್ತಿತ್ತು. ಗೊಂದಲ ಗಳಿಲ್ಲದ ಸ್ಪಷ್ಟ ವೈಚಾರಿಕ ಭಾಷೆ, ಏರುದನಿಯಲ್ಲಿ ಕೂಗಿದರೂ, ಗಳಿಗೆ ಬಿಟ್ಟು ಆರಾಮಾಗಿ ವಿಷಯಕ್ಕೆ ಹಿಂದಿರುಗುತ್ತಿದ್ದ ಅವರ ಶೈಲಿ ಆಕರ್ಷಕವಾಗಿತ್ತು. ಅಂತರ್ಜಾತೀಯ ವಿವಾಹಿತರ ರಕ್ಷಣೆಯ ‘ಇವ ನಮ್ಮವ’ ಮಸೂದೆ, ಭೂವರ್ಗಾವಣೆ ನಿಷೇಧ ಕಾಯ್ದೆ, ದಲಿತ ಜನಸಂಖ್ಯಾಧಾರಿತ ಬಜೆಟ್ ನಿಗದಿ, ಒಳಮೀಸಲಾತಿಯಂಥ ಸಂಕೀರ್ಣ ಪ್ರಶ್ನೆಗಳನ್ನು ಕೂಡ ಅವರು ನಿಭಾಯಿಸಿ ತೋರಿಸಿ ದರು. ಅಹಿಂದ ವರ್ಗಗಳ ಪರವಾದ ಗಟ್ಟಿ ತಾತ್ತ್ವಿಕತೆ ಇದ್ದರೂ, ಎಲ್ಲ ಜಾತಿಗಳ ಬಡವರ ಕಷ್ಟಗಳನ್ನು ಅರಿತಿದ್ದ ರೀತಿಯಿಂದಾಗಿ ಅವರಿಗೆ ಎಲ್ಲ ಜಾತಿಗಳಲ್ಲೂ ಅನುಯಾಯಿಗಳು ಸೃಷ್ಟಿಯಾದರು.</p>.<p>ಸಿದ್ದರಾಮಯ್ಯನವರಿಗಿಂತ ಹೆಚ್ಚು ಓದಿಕೊಂಡಿದ್ದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, <br>ಎಸ್.ಎಂ. ಕೃಷ್ಣ ಥರದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಂದು ಹೋಗಿದ್ದರೂ, ಅವರಿಗಿಂತ ಭಿನ್ನವಾಗಿ ಸಾಮಾನ್ಯರ ಹಾಗೂ ವಿದ್ವಜ್ಜನರ ಸಭೆಗಳಲ್ಲಿ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ತಲಪಿಸಬಲ್ಲ ಶಕ್ತಿ ಸಿದ್ದರಾಮಯ್ಯನವರದು. ವಿಶಿಷ್ಟ ನೆನಪಿನ ಬಲದಿಂದ ಗ್ರಾಮಗಳ ವಿವರಗಳು, ಜಾತಿಗಳು, ಹಣಕಾಸು ಸೇರಿ<br>ದಂತೆ ಹಲ ಬಗೆಯ ಅಂಕಿಅಂಶಗಳನ್ನು ಅವರು ಸಲೀಸಾಗಿ ಹೇಳಬಲ್ಲರು. ಬಸವಣ್ಣ, ಕನಕದಾಸ, ಅಂಬೇಡ್ಕರ್, ಗಾಂಧಿ, ಶಾಂತವೇರಿ ಗೋಪಾಲಗೌಡ–ಯಾರನ್ನು ಕುರಿತ ಸಭೆಯಾದರೂ ಸಿದ್ದರಾಮಯ್ಯ ನವರ ಒಳಗಿನಿಂದ ಉಕ್ಕುವ ಮಾತುಗಳಿರಬಲ್ಲವು. ಅಂಬೇಡ್ಕರ್, ಬಸವಣ್ಣನವರ ಮಾತನ್ನು ಮತ್ತೆ ಮತ್ತೆ ಹೇಳಿ ಸಮಾಜದಲ್ಲಿ ಸಾಮರಸ್ಯ ಹಾಗೂ ಒಳಿತಿನ ಭಾವ ಹಬ್ಬುವಂತೆ ಅವರು ಮಾಡಬಲ್ಲರು. ಇದರಿಂದಾಗಿ, ಅವರ ಸಂಪುಟದ ಸಹೋದ್ಯೋಗಿಗಳು ಕೂಡ ಸಾಮರಸ್ಯದ ಪರಿಭಾಷೆಯನ್ನು ಬಳಸಲೇಬೇಕಾಗಿದ್ದ ನೈತಿಕ ಒತ್ತಾಯ ಸೃಷ್ಟಿಯಾಗುತ್ತಿತ್ತು.</p>.<p>ಎರಡು ದಶಕಗಳ ಕೆಳಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಕಾಲಕ್ಕೆ ಕಾಲದ ಒತ್ತಡ ಹಾಗೂ<br>ಸೋಲಿನ ಹೊಡೆತಗಳಿಂದ ಕಾಂಗ್ರೆಸ್ ಬದಲಾಗ ತೊಡಗಿತ್ತು. ಆ ಘಟ್ಟದಲ್ಲಿ ಕರ್ನಾಟಕ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಖಚಿತ ಸಾಮಾಜಿಕ–ಸಾಂಸ್ಕೃತಿಕ ಪರಿಭಾಷೆ ಕೊಟ್ಟರು. ಎಲ್ಲರನ್ನೂ ಒಳಗೊಳ್ಳುವ ಸಿದ್ದರಾಮಯ್ಯನವರ ಈ ಪರಿಭಾಷೆ–ರಾಜಕಾರಣದಿಂದ ಮುಂಬರುವ ಕಾಲದಲ್ಲಿ ಕಾಂಗ್ರೆಸ್ ಹಿಂದಕ್ಕೆ ಸರಿದರೆ, ಆಧುನಿಕ ಮನಸ್ಸಿನ ಪ್ರಜ್ಞಾವಂತರ ಸಹಾನುಭೂತಿಯನ್ನು, ಈ ವಲಯಗಳ ನೈತಿಕ ಬೆಂಬಲವನ್ನು ಕಳೆದುಕೊಳ್ಳುತ್ತದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಪ್ರವೇಶದ ನಂತರ ಮೊದಲ ಬಾರಿಗೆ ಕಾಂಗ್ರೆಸ್ಸಿಗೆ ಸ್ವಯಂಸ್ಫೂರ್ತಿಯಿಂದ, ತಮ್ಮ ಕರ್ತವ್ಯವೆಂಬಂತೆ ವೋಟು ಹಾಕಿದ–ಹಾಕಿಸಿದ ಈ ಪುಟ್ಟ ವಲಯ ಜಾತಿ, ಕೋಮು, ಹಣದ ಆಮಿಷಗಳಿಗೆ ಬಗ್ಗದ ದಿಟ್ಟ ವಲಯ.</p>.<p>ಇಂಥ ಪುಟ್ಟ ವಲಯಗಳು ಕಾಂಗ್ರೆಸ್ಸಿಗೆ ಸೃಷ್ಟಿಸಿರುವ ‘ಗುಡ್ ವಿಲ್’ಗೆ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ<br>ಅವರ ನಡೆ–ನುಡಿ ಕೂಡ ಕಾರಣವಾದಂತೆ, ರಾಜ್ಯಮಟ್ಟದಲ್ಲಿ ಸಿದ್ದರಾಮಯ್ಯನವರ ಸಾಮಾಜಿಕ ನಾಯಕತ್ವವೂ ಕಾರಣ ಎಂಬುದನ್ನು ಕಾಂಗ್ರೆಸ್ಸಿಗರು ಅರಿಯಬೇಕು. ಸಿದ್ದರಾಮಯ್ಯನವರ ಖಚಿತವಾದ ಕೋಮುವಾದ ವಿರೋಧ, ಆಹಾರ ಪದ್ಧತಿಗಳ ಬಗ್ಗೆ ಮುಕ್ತ ನಿಲುವು; ಜಾತಿ ಮತ ಮೀರಿ ಜನರನ್ನು ನೋಡುತ್ತಿದ್ದ ರೀತಿ; ಆದರೆ ಅಧಿಕಾರ ಹಂಚಿಕೆಯಲ್ಲಿ, ಆದ್ಯತಾವಕಾಶಗಳ ಹಂಚಿಕೆಯಲ್ಲಿ ಜಾತಿ, ವರ್ಗ ಗಳನ್ನು ಸ್ಪಷ್ಟವಾಗಿ ನೋಡಿ ಹಂಚುವುದರ ಪರ ವಾಗಿದ್ದ ರೀತಿ; ‘ಜನರ ಪಾಲು ಜನರಿಗೆ’ ಎಂದು ಭಾಗ್ಯ<br>ಗಳ ಯೋಜನೆಗಳನ್ನು ನಿಭಾಯಿಸುತ್ತಲೇ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸದಂತೆ ಕಾಯ್ದು ಕೊಂಡ ರೀತಿ– ಈ ಎಲ್ಲದರಿಂದ ಕಾಂಗ್ರೆಸ್, ತನ್ನ ಉಳಿವಿಗಾಗಿ ಯಾದರೂ, ಸ್ಪಷ್ಟ ಪಾಠಗಳನ್ನು ಕಲಿಯಬೇಕಾಗಿದೆ.</p>.<p>ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸಾರ್ವಜನಿಕ ವಲಯದಲ್ಲಿ ಬಳಸಿದ ಭಾಷೆ ಗಮನಾರ್ಹವಾಗಿದೆ. ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ಕೂಡ ಜನರ ಮನಸ್ಸನ್ನು ಬಗ್ಗಡವಾಗಿಸುವ ಭಾಷೆಯನ್ನು ಅವರು ಬಳಸಲಿಲ್ಲ; ‘ಅಚ್ಛೇ ದಿನ್ ಆಯೇಗಾ’ದ ಠೊಳ್ಳಿನ ಗೇಲಿ, ಅಂಕಿಅಂಶಗಳ ಸಮೇತ ಪಕ್ಷದ ಕಾರ್ಯಕ್ರಮಗಳ ಪರಿಣಾಮಕಾರಿ ಮಂಡನೆ ಈ ಥರದ ಹಾದಿಯನ್ನು ಪರಿಣಾಮ ಕಾರಿಯಾಗಿ ಬಳಸುತ್ತಾ ಬಂದವರು. ‘ಯಾಕೆ ಹೀಗೆ ಬರೀತೀಯ, ಹೀಗೆ ಬರೀಬೇಡ’ ಎಂದು ಯಾರನ್ನೂ ಕೇಳದಿದ್ದ ಅವರು, ಸಾಕಷ್ಟು ಡೆಮಾಕ್ರಟಿಕ್ ಆಗಿದ್ದವರು.</p>.<p>ಸಿದ್ದರಾಮಯ್ಯನವರ ಅಧಿಕಾರ ಹಸ್ತಾಂತರದ ಹಿನ್ನೆಲೆಯಲ್ಲಿ ಮೊನ್ನೆ ಕೇರಳದಲ್ಲಿ ಅಧಿಕಾರ ಹಿಡಿದು, ತಮಿಳುನಾಡಿನಲ್ಲಿ ಅಧಿಕಾರಕ್ಕೆ ನುಸುಳಿದ, ಕಾಂಗ್ರೆಸ್ಸಿನ ಅತಿವಿಶ್ವಾಸವಿತ್ತೋ, ಅಥವಾ ಇದು ಹಳೆಯ ಒಪ್ಪಂದದ ಫಲವೋ ಇವೆಲ್ಲ ಊಹೆಯ ವಿಷಯಗಳು. ಆದರೂ ಗ್ರೇಟರ್ ಬೆಂಗಳೂರು ಮಹಾನಗರಪಾಲಿಕೆಗಳ ಚುನಾವಣೆ ಹಾಗೂ ಬರಲಿರುವ ಸ್ಥಳೀಯ ಚುನಾವಣೆಗಳ ಎದುರಿನಲ್ಲಿ ಈ ಹಸ್ತಾಂತರ ಕೊಂಚ ‘ಅಸೂಕ್ತ ಕಾಲ’ ಎನ್ನಿಸುತ್ತದೆ. ಈ ಘಟ್ಟದಲ್ಲಿ ಯಾರೇ ಮುಖ್ಯಮಂತ್ರಿಯಾಗಲಿ, ಕಾಂಗ್ರೆಸ್ ಅಧ್ಯಕ್ಷ ಪಟ್ಟ ಯಾರ ಕೈಗಾದರೂ ಹೋಗಲಿ, ಸಿದ್ದರಾಮಯ್ಯನವರ ಪೂರ್ಣ ತೊಡಗುವಿಕೆಯಿಲ್ಲದೆ ಮುಂದಿನ ಚುನಾವಣೆಗಳ ಮುಖಾಮುಖಿ ಕಾಂಗ್ರೆಸ್ಸಿಗೆ ಅತ್ಯಂತ ಕಠಿಣವಾಗಬಲ್ಲದು. ಅದಕ್ಕಿಂತ ಮುಖ್ಯವಾಗಿ, ‘ಮತದಾರರ ಪಟ್ಟಿ ಪರಿಷ್ಕರಣೆ’ಯ ಹುನ್ನಾರದ ಬಗ್ಗೆ ಮಮತಾ ಬ್ಯಾನರ್ಜಿಯವರಂಥ ಜನನಾಯಕಿಯ ಬೀದಿಹೋರಾಟ, ನ್ಯಾಯಾಂಗ ಹೋರಾಟಗಳ ಹಿನ್ನಡೆಯ ನಂತರ, ಸಿದ್ದರಾಮಯ್ಯ ನವರಂಥ ಜನನಾಯಕರು ತಮ್ಮ ಪ್ರಭಾವಳಿಯ ಮೂಲಕ ಕರ್ನಾಟಕದಾದ್ಯಂತ ಯಾವ ಎಚ್ಚರ ಮೂಡಿಸುತ್ತಾರೆ ಎಂಬ ನಿರೀಕ್ಷೆಯೂ ನಮ್ಮಂಥವ ರಲ್ಲಿದೆ. ಸಿದ್ದರಾಮಯ್ಯನವರ ಅಖಂಡ ಶಕ್ತಿಯನ್ನು ಬಳಸಿಕೊಂಡು ಗಟ್ಟಿಯಾಗಲು ಕಾಂಗ್ರೆಸ್ ಪಾರ್ಟಿ ಅವರನ್ನು ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯಲ್ಲಿ ತೊಡಗಿಸಲು ಕೋರಬಲ್ಲದೋ, ಕಾದು ನೋಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>