<p>ಚಂದ್ರನತ್ತ ಪ್ರಯಾಣ ಬೆಳೆಸುವುದು ಒಂದು ವಿಚಾರ. ಆದರೆ, ಚಂದ್ರನಿಂದ ಜೀವಂತವಾಗಿ ಭೂಮಿಗೆ ಮರಳಿ ಬರುವುದೇ ಸಂಪೂರ್ಣ ಭಿನ್ನವಾದ ಇನ್ನೊಂದು ವಿಚಾರ.</p><p>ನಾವೆಲ್ಲ ಕನಸು ಕಾಣುವ ಒಂದು ಕೆಲಸವನ್ನು ನಾಸಾದ ಆರ್ಟೆಮಿಸ್ 2 ಯೋಜನೆ ಯಶಸ್ವಿಯಾಗಿ ಕೈಗೊಂಡಿದೆ. ನಾಲ್ವರು ಗಗನಯಾತ್ರಿಗಳನ್ನು ನಾಸಾ ಯಶಸ್ವಿಯಾಗಿ ಚಂದ್ರನ ಸುತ್ತಲೂ ಪರಿಭ್ರಮಣೆ ನಡೆಸುವಂತೆ ಮಾಡಿದೆ. ರೀಡ್ ವೈಸ್ಮ್ಯಾನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್, ಮತ್ತು ಜೆರೆಮಿ ಹ್ಯಾನ್ಸೆನ್ ಎಂಬ ಈ ಗಗನಯಾತ್ರಿಗಳು ಚಂದ್ರನ ವೀಕ್ಷಣೆ ನಡೆಸಿ, ಈಗ ಭೂಮಿಯತ್ತ ಮರಳುತ್ತಿದ್ದಾರೆ. ಅವರ ಒಟ್ಟಾರೆ ಪ್ರಯಾಣದ ಅತ್ಯಂತ ಅಪಾಯಕಾರಿ ಭಾಗ ಎಂದರೆ, ಬಾಹ್ಯಾಕಾಶದಲ್ಲಿ ಅವರು ಕೈಗೊಂಡಿರುವ ಸಾಹಸಮಯ ಅನ್ವೇಷಣೆಯಲ್ಲ. ಬದಲಿಗೆ, ಮುಂದಿನ ಕೆಲ ಗಂಟೆಗಳಲ್ಲಿ ಅವರ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಸೀಳಿಕೊಂಡು ಒಳ ಪ್ರವೇಶಿಸುವಾಗ ಏನಾಗಲಿದೆ ಎನ್ನುವುದೇ ನೈಜ ಅಪಾಯಕಾರಿ ಕಾರ್ಯಾಚರಣೆ.</p>.ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ಆರಂಭಿಸಿದ ಗಗನಯಾನಿಗಳು.‘ಆರ್ಟೆಮಿಸ್–2’: ಚಂದ್ರನಾಚೆಗೂ ಮನುಷ್ಯನ ಹೆಜ್ಜೆ.... <p>ಇಲ್ಲಿಯತನಕ ಗಗನಯಾತ್ರಿಗಳು ವಾಸಿಸುತ್ತಾ, ಕೆಲಸ ಮಾಡುತ್ತಿದ್ದ ಸಣ್ಣದಾದ ಓರಿಯನ್ ಕ್ಯಾಪ್ಸೂಲ್ ಎನ್ನುವ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ಅದು ಪ್ರತಿ ಗಂಟೆಗೆ ಬಹುತೇಕ 38,500 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಗದಲ್ಲಿ, ಗಾಳಿಯ ಜೊತೆಗಿನ ಘರ್ಷಣೆಯ ಪರಿಣಾಮವಾಗಿ ಬಾಹ್ಯಾಕಾಶ ನೌಕೆಯ ಸುತ್ತಲೂ 2,760 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಂಕಿಯ ಗೋಡೆಯೇ ನಿರ್ಮಾಣವಾಗಲಿದೆ. ಇದು ಎಷ್ಟರಮಟ್ಟಿನ ಬಿಸಿ ಎನ್ನುವುದನ್ನು ಅರ್ಥ ಮಾಡಿಸಲು ಒಂದು ಉದಾಹರಣೆ ನೀಡುವುದಾದರೆ, 1,538 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕಬ್ಬಿಣವೇ ಕರಗುತ್ತದೆ! ಆದರೆ ಓರಿಯನ್ ಕ್ಯಾಪ್ಸೂಲ್ ಬಹುತೇಕ ಅದರ ದುಪ್ಪಟ್ಟು ತಾಪಮಾನವನ್ನು ಎದುರಿಸಲಿದೆ.</p><p>ಬಾಹ್ಯಾಕಾಶ ನೌಕೆಯ ಪುನರಾಗಮನ ಶನಿವಾರ ಬೆಳಗ್ಗೆ, ಭಾರತೀಯ ಕಾಲಮಾನದಲ್ಲಿ 5 ಗಂಟೆಗೆ ಅತ್ಯಂತ ತೀವ್ರವಾಗಿರುವ ನಿರೀಕ್ಷೆಗಳಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಓರಿಯನ್ ಕ್ಯಾಪ್ಸೂಲ್ ಅಂದಾಜು 40 ನಿಮಿಷಗಳ ಬಳಿಕ, ಸ್ಯಾನ್ ಡಿಯಾಗೋ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯಲಿದೆ. ನೌಕಾಪಡೆಯ ಮುಳುಗು ತಜ್ಞರ ತಂಡ ಮತ್ತು ರಕ್ಷಣಾ ತಂಡ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯಲು ಸಿದ್ಧರಾಗಿರುತ್ತಾರೆ.</p><p>ಪ್ರತಿಯೊಬ್ಬ ಗಗನಯಾತ್ರಿಯೂ ಈ ತೀವ್ರ ಅವಧಿಯಲ್ಲಿ ಅವರನ್ನು ರಕ್ಷಿಸಲು ಮತ್ತು ವಿಪರೀತ ತಾಪಮಾನದಲ್ಲೂ ತಣ್ಣಗಿಡಲು ವಿಶೇಷವಾಗಿ ವಿನ್ಯಾಸಗೊಂಡಿರುವ ಪ್ರೆಶರೈಸ್ಡ್ ಸೂಟ್ಗಳನ್ನು ಧರಿಸಿರುತ್ತಾರೆ. ಯೋಜನಾ ನಿಯಂತ್ರಣ ತಜ್ಞರು ಮರು ಪ್ರವೇಶದ ಸಂದರ್ಭದಲ್ಲಿ ಗಗನಯಾತ್ರಿಗಳು ಬಹುತೇಕ ಮೌನವಾಗಿರಲಿದ್ದು, ವೈಸ್ಮ್ಯಾನ್ ಮತ್ತು ಗ್ಲೋವರ್ ಬಾಹ್ಯಾಕಾಶ ನೌಕೆಯ ಉಪಕರಣಗಳನ್ನು ಗಮನಿಸಲಿದ್ದಾರೆ.</p><p>ಈ ಅವಧಿಯನ್ನು ಇನ್ನಷ್ಟು ಆತಂಕಕಾರಿಯಾಗಿಸುವ ಅಂಶವೂ ಇದೆ.</p><p>2022ರಲ್ಲಿ, ಮೊದಲ ಆರ್ಟೆಮಿಸ್ ಯೋಜನೆಯ ಸಂದರ್ಭದಲ್ಲಿ, ಅದು ಯಾವುದೇ ಗಗನಯಾತ್ರಿಗಳನ್ನು ತನ್ನೊಡನೆ ಒಯ್ದಿರಲಿಲ್ಲ. ಆದರೆ, ಓರಿಯನ್ ಬಾಹ್ಯಾಕಾಶ ನೌಕೆಯ ರಕ್ಷಣೆಗಾಗಿ, ಎಲ್ಲ ಬೆಂಕಿ ಮತ್ತು ತಾಪಮಾನವನ್ನು ಹೀರಿಕೊಳ್ಳಲು ಅಳವಡಿಸಿದ್ದ ಉಷ್ಣತಾ ಫಲಕ ನಿರೀಕ್ಷಿತ ರೀತಿಯಲ್ಲಿ ಕಾರ್ಯಾಚರಿಸಲಿಲ್ಲ. ಅದರ ತುಣುಕುಗಳು ಮೇಲೆದ್ದು, ಅದು ನೂರಕ್ಕೂ ಹೆಚ್ಚಿನ ತುಂಡುಗಳಾಗಿ ಮುರಿದು ಹೋಯಿತು. ಒಂದು ವೇಳೆ ಒಳಗೆ ಗಗನಯಾತ್ರಿಗಳು ಇರುವಾಗ ಇಂತಹ ಬೆಳವಣಿಗೆ ಉಂಟಾದರೆ, ಅದು ನಿಜಕ್ಕೂ ಅನಾಹುತಕಾರಿಯಾದೀತು. ಈ ಸಮಸ್ಯೆಯ ಅನ್ವೇಷಣೆ ಆರ್ಟೆಮಿಸ್ 2 ಯೋಜನೆ ಹಲವು ವರ್ಷಗಳ ವಿಳಂಬ ಹೊಂದುವಂತೆ ಮಾಡಿತು. ಇಂಜಿನಿಯರ್ಗಳು ಹಗಲು ಇರುಳೆನ್ನದೆ ಆ ಸಮಸ್ಯೆ ಹೇಗೆ ತಲೆದೋರಿತು ಎಂದು ತಿಳಿಯಲು ಕಾರ್ಯಾಚರಿಸಿದರು.</p><p><strong>ನಾಸಾ ಈ ಬಾರಿ ಹೇಗೆ ಭಿನ್ನವಾಗಿ ಕಾರ್ಯಾಚರಿಸಿದೆ?</strong></p><p>ನಾಸಾ ಈ ಬಾರಿ ಓರಿಯನ್ ಭೂಮಿಗೆ ಮರಳುವ ಕೋನದಲ್ಲಿ ಬದಲಾವಣೆ ತಂದಿದೆ. ಒಂದು ಕಾಗದದ ವಿಮಾನದ ರೀತಿಯಲ್ಲಿ ತೇಲುವಂತೆ ಬರುವ ಬದಲು, ಬಾಹ್ಯಾಕಾಶ ನೌಕೆ ಈ ಬಾರಿ ಇನ್ನಷ್ಟು ಆಳವಾದ ಕೋನದಲ್ಲಿ ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಲಿದೆ. ಬಳಿಕ ಅದು ತಕ್ಷಣವೇ ಕೊಂಚ ಹಿಂದಕ್ಕೆ ಸಾಗಲಿದೆ. ಇದನ್ನು ಒಂದು ರೀತಿ ನೀರಿನ ಮೇಲೆ ಚಪ್ಪಟೆಯಾದ ಕಲ್ಲು ಜಿಗಿಯುತ್ತಾ ಸಾಗುವುದಕ್ಕೆ ಹೋಲಿಸಬಹುದು. ಬಳಿಕ ಬಾಹ್ಯಾಕಾಶ ನೌಕೆ ತನ್ನ ಅಂತಿಮ ಹಂತದ ಇಳಿಯುವಿಕೆಯನ್ನು ಆರಂಭಿಸಲಿದೆ. ನೀವು ಒಂದು ಕೆರೆಯ ನೀರಿಗೆ ಚಪ್ಪಟೆಯಾದ ಕಲ್ಲನ್ನು ಎಸೆದಾಗ, ಅದು ಕೆಲಬಾರಿ ನೀರಿನ ಮೇಲ್ಮೈಯಲ್ಲೇ ಜಿಗಿಯುತ್ತಾ ಸಾಗಿ ಕೊನೆಗೆ ನೀರಿನೊಳಗೆ ಇಳಿಯುತ್ತದಲ್ಲ? ಇದನ್ನೂ ಅದಕ್ಕೆ ಹೋಲಿಸಬಹುದು. ಈ ಜಿಗಿಯುವ ಮತ್ತು ಮರು ಪ್ರವೇಶಿಸುವ ವಿಧಾನ ಒಳಗೆ ಸೆರೆಯಾಗಿರುವ ತಾಪ ಮತ್ತು ಅನಿಲಗಳನ್ನು ಏಕಕಾಲದ ಬದಲು, ನಿಧಾನವಾಗಿ, ಆದರೆ ಸ್ಥಿರವಾಗಿ ಬಿಡುಗಡೆಗೊಳಿಸುತ್ತದೆ. ಇದು ಉಷ್ಣತಾ ಫಲಕದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ಅದು ಅತಿಯಾಗಿ ಬಿಸಿಯಾಗದಂತೆ ತಡೆಯುತ್ತದೆ.</p><p>ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯೋಜನಾ ಕಮಾಂಡರ್ ಆಗಿರುವ ವೈಸ್ಮ್ಯಾನ್ ಅವರು ಓರ್ವ ನಿವೃತ್ತ ನೌಕಾಪಡೆಯ ವೈಮಾನಿಕರಾಗಿದ್ದು, ಅವರು ಈ ನೂತನ ಯೋಜನೆಯನ್ನು ಪ್ರಸ್ತಾಪಿಸಿದಾಗ ತನ್ನ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅವರು ಆರಂಭದಲ್ಲಿ ನಾಸಾ ಹಾನಿಗೊಳಗಾಗಿದ್ದ ಉಷ್ಣತಾ ಫಲಕದ ಬದಲು ಬೇರೆ ಉತ್ತಮ ಫಲಕ ಅಳವಡಿಸುವುದನ್ನು ನಿರೀಕ್ಷಿಸಿದ್ದರು. ಆದರೆ, ವಿಸ್ತೃತವಾದ ತಾಂತ್ರಿಕ ವಿವರಣೆ ನೀಡಿದ ಬಳಿಕ, ಅವರ ಅನುಮಾನಗಳು ನಿವಾರಣೆಗೊಂಡವು.</p><p>"ನಾನು ಮೊದಲಿಗೆ ಅವರು ಉಷ್ಣತಾ ಫಲಕವನ್ನು ಬದಲಿಸುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ, ವಿವರಣೆಯ ಕೊನೆಯ ವೇಳೆಗೆ ನಾವು ಹೊಸದಾದ ಹಾರಾಟ ಪಥವನ್ನು ಬಳಸಬಹುದು ಎನ್ನುವುದು ನನಗೂ ಅರ್ಥವಾಯಿತು. ಇದು ಸರಿಯಾಗಿ ಕಾರ್ಯಾಚರಿಸುವಂತೆ ಮಾಡಬಹುದು ಎನ್ನುವ ವಿಶ್ವಾಸ ನನಗೂ ಮೂಡಿತು" ಎಂದು ವೈಸ್ಮ್ಯಾನ್ ಹೇಳಿದ್ದಾರೆ.</p><p>ಆದರೆ ಈ ಯೋಜನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿಲ್ಲ. ಕಳೆದ ವರ್ಷ ನಿವೃತ್ತಿ ಹೊಂದುವ ಮುನ್ನ ಮರು ಪ್ರವೇಶ ವ್ಯವಸ್ಥೆಗಳ ಕುರಿತು ಕಾರ್ಯಾಚರಿಸುತ್ತಿದ್ದ ನಾಸಾದ ಮಾಜಿ ಇಂಜಿನಿಯರ್ ಡ್ಯಾನ್ ರಾಸ್ಕಿ ನಾಸಾ ಮೊದಲಿಗೆ ಗಗನಯಾತ್ರಿಗಳು ಇಲ್ಲದೆ ಈ ಸ್ಕಿಪ್ ರಿ ಎಂಟ್ರಿ ವಿಧಾನವನ್ನು ಪರೀಕ್ಷಿಸಬೇಕಿತ್ತು, ಆ ಮೂಲಕ ಯಾವುದೇ ಸಮಸ್ಯೆಯೂ ಎದುರಾಗುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಸ್ಪೇಸ್ ಎಕ್ಸ್ ಸಂಸ್ಥೆ ತನ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಳಸುವಂತಹ ವಿಭಿನ್ನ ಉಷ್ಣತಾ ಫಲಕವನ್ನು ಬಳಸುವಂತೆಯೂ ಸಲಹೆ ನೀಡಿದ್ದರು. ಅವರ ಕಾಳಜಿಯನ್ನು ಕೇಳಿಸಿಕೊಂಡರೂ, ನಾಸಾ ತೀವ್ರ ಭೂ ಪರೀಕ್ಷೆಗಳು ಮತ್ತು ಪರಿಶೀಲನೆಗಳ ಬಳಿಕ ತನ್ನ ಯೋಜನೆಯಂತೆಯೇ ಮುಂದುವರಿಯಿತು.</p><p>ನಾಸಾದ ನಿರ್ವಾಹಕ ಜಾರೆದ್ ಇಸಾಕ್ಮ್ಯಾನ್ ಈ ಯೋಜನೆಯನ್ನು ಅನುಮೋದಿಸಿದ್ದಾರೆ. ನಾಸಾದ ಸಹಾಯಕ ನಿರ್ವಾಹಕ ಅಮಿತ್ ಕ್ಷತ್ರಿಯ ಅವರು ಗುರುವಾರ "ನಾವು ಈ ಕುರಿತು ಎಲ್ಲ ಅವಶ್ಯಕ ಕಾರ್ಯಗಳನ್ನೂ ನಡೆಸಿದ್ದು, ನನಗೆ ನಮ್ಮ ತಂಡದ ಮೇಲೆ ಸಂಪೂರ್ಣ ವಿಶ್ವಾಸವಿದೆ" ಎಂದಿದ್ದಾರೆ.</p><p>ಅವರ ನಂಬಿಕೆಗೆ ಇತಿಹಾಸದ ಆಧಾರವೂ ಇದೆ. ನಾಸಾ ಹಿಂದಿನ 1986ರ ಚಾಲೆಂಜರ್ ದುರಂತವನ್ನಾಗಲಿ, ಅಥವಾ 2003ರ ಕೊಲಂಬಿಯಾ ದುರ್ಘಟನೆಯನ್ನಾಗಲಿ ಮರೆತಿಲ್ಲ. ಎರಡೂ ಬಾಹ್ಯಾಕಾಶ ನೌಕೆಗಳೂ ಇಲ್ಲವಾಗಿದ್ದವು. ಇವೆರಡೂ ದುರಂತಗಳಲ್ಲಿ 14 ಗಗನಯಾತ್ರಿಗಳು ಮತ್ತೆಂದೂ ಮನೆಗೆ ಮರಳದಂತಾದರು. ಈ ದುರ್ಘಟನೆಗಳು ನಾಸಾ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಅಪಾಯ, ಮತ್ತು ಪ್ರತಿಯೊಂದು ಲೆಕ್ಕಾಚಾರವನ್ನು ಹೇಗೆ ಕೈಗೊಳ್ಳುತ್ತದೆ ಎನ್ನುವುದನ್ನು ರೂಪಿಸಿವೆ.</p><p>"ನಾನು ಎಪ್ರಿಲ್ 3, 2023ರಿಂದ, ನಮ್ಮನ್ನು ಈ ಯೋಜನೆಗೆ ನೇಮಿಸಿದ ದಿನದಿಂದಲೂ ಭೂಮಿಗೆ ಪುನರಾಗಮನದ ಕುರಿತೇ ಆಲೋಚಿಸುತ್ತಾ ಬಂದಿದ್ದೇನೆ. ನಮ್ಮ ಮುಖ್ಯ ಗುರಿಯೇ ಸುರಕ್ಷಿತವಾಗಿ ಭೂಮಿಗೆ ಮರಳುವುದು" ಎಂದು ವಿಕ್ಟರ್ ಗ್ಲೋವರ್ ಒಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p><p>ಇದುವೇ ಆರ್ಟೆಮಿಸ್ 2 ಯೋಜನೆಯ ಬಹುಮುಖ್ಯ ಘಟ್ಟವಾಗಿದೆ. ರಾಕೆಟ್ ಅಲ್ಲ, ಚಂದ್ರನೂ ಅಲ್ಲ, ವಿಜ್ಞಾನವೂ ಅಲ್ಲ. ಬೆಂಕಿಯ ಚೆಂಡಿನ ನಡುವೆ ಸಾಗಿ ಬರುವ ನಾಲ್ವರು ಮಾನವರು, ಗಣಿತ, ಇಂಜಿನಿಯರಿಂಗ್ ಮತ್ತು ಪರಸ್ಪರರ ಮೇಲೆ ನಂಬಿಕೆ ಇಟ್ಟು, ಮರಳಿ ಮನೆಗೆ ಬರಲು ಪ್ರಯತ್ನಿಸುವುದೇ ಈಗಿನ ಮಹತ್ವದ ಘಟ್ಟವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಂದ್ರನತ್ತ ಪ್ರಯಾಣ ಬೆಳೆಸುವುದು ಒಂದು ವಿಚಾರ. ಆದರೆ, ಚಂದ್ರನಿಂದ ಜೀವಂತವಾಗಿ ಭೂಮಿಗೆ ಮರಳಿ ಬರುವುದೇ ಸಂಪೂರ್ಣ ಭಿನ್ನವಾದ ಇನ್ನೊಂದು ವಿಚಾರ.</p><p>ನಾವೆಲ್ಲ ಕನಸು ಕಾಣುವ ಒಂದು ಕೆಲಸವನ್ನು ನಾಸಾದ ಆರ್ಟೆಮಿಸ್ 2 ಯೋಜನೆ ಯಶಸ್ವಿಯಾಗಿ ಕೈಗೊಂಡಿದೆ. ನಾಲ್ವರು ಗಗನಯಾತ್ರಿಗಳನ್ನು ನಾಸಾ ಯಶಸ್ವಿಯಾಗಿ ಚಂದ್ರನ ಸುತ್ತಲೂ ಪರಿಭ್ರಮಣೆ ನಡೆಸುವಂತೆ ಮಾಡಿದೆ. ರೀಡ್ ವೈಸ್ಮ್ಯಾನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್, ಮತ್ತು ಜೆರೆಮಿ ಹ್ಯಾನ್ಸೆನ್ ಎಂಬ ಈ ಗಗನಯಾತ್ರಿಗಳು ಚಂದ್ರನ ವೀಕ್ಷಣೆ ನಡೆಸಿ, ಈಗ ಭೂಮಿಯತ್ತ ಮರಳುತ್ತಿದ್ದಾರೆ. ಅವರ ಒಟ್ಟಾರೆ ಪ್ರಯಾಣದ ಅತ್ಯಂತ ಅಪಾಯಕಾರಿ ಭಾಗ ಎಂದರೆ, ಬಾಹ್ಯಾಕಾಶದಲ್ಲಿ ಅವರು ಕೈಗೊಂಡಿರುವ ಸಾಹಸಮಯ ಅನ್ವೇಷಣೆಯಲ್ಲ. ಬದಲಿಗೆ, ಮುಂದಿನ ಕೆಲ ಗಂಟೆಗಳಲ್ಲಿ ಅವರ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಸೀಳಿಕೊಂಡು ಒಳ ಪ್ರವೇಶಿಸುವಾಗ ಏನಾಗಲಿದೆ ಎನ್ನುವುದೇ ನೈಜ ಅಪಾಯಕಾರಿ ಕಾರ್ಯಾಚರಣೆ.</p>.ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ಆರಂಭಿಸಿದ ಗಗನಯಾನಿಗಳು.‘ಆರ್ಟೆಮಿಸ್–2’: ಚಂದ್ರನಾಚೆಗೂ ಮನುಷ್ಯನ ಹೆಜ್ಜೆ.... <p>ಇಲ್ಲಿಯತನಕ ಗಗನಯಾತ್ರಿಗಳು ವಾಸಿಸುತ್ತಾ, ಕೆಲಸ ಮಾಡುತ್ತಿದ್ದ ಸಣ್ಣದಾದ ಓರಿಯನ್ ಕ್ಯಾಪ್ಸೂಲ್ ಎನ್ನುವ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ಅದು ಪ್ರತಿ ಗಂಟೆಗೆ ಬಹುತೇಕ 38,500 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಗದಲ್ಲಿ, ಗಾಳಿಯ ಜೊತೆಗಿನ ಘರ್ಷಣೆಯ ಪರಿಣಾಮವಾಗಿ ಬಾಹ್ಯಾಕಾಶ ನೌಕೆಯ ಸುತ್ತಲೂ 2,760 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಂಕಿಯ ಗೋಡೆಯೇ ನಿರ್ಮಾಣವಾಗಲಿದೆ. ಇದು ಎಷ್ಟರಮಟ್ಟಿನ ಬಿಸಿ ಎನ್ನುವುದನ್ನು ಅರ್ಥ ಮಾಡಿಸಲು ಒಂದು ಉದಾಹರಣೆ ನೀಡುವುದಾದರೆ, 1,538 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕಬ್ಬಿಣವೇ ಕರಗುತ್ತದೆ! ಆದರೆ ಓರಿಯನ್ ಕ್ಯಾಪ್ಸೂಲ್ ಬಹುತೇಕ ಅದರ ದುಪ್ಪಟ್ಟು ತಾಪಮಾನವನ್ನು ಎದುರಿಸಲಿದೆ.</p><p>ಬಾಹ್ಯಾಕಾಶ ನೌಕೆಯ ಪುನರಾಗಮನ ಶನಿವಾರ ಬೆಳಗ್ಗೆ, ಭಾರತೀಯ ಕಾಲಮಾನದಲ್ಲಿ 5 ಗಂಟೆಗೆ ಅತ್ಯಂತ ತೀವ್ರವಾಗಿರುವ ನಿರೀಕ್ಷೆಗಳಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಓರಿಯನ್ ಕ್ಯಾಪ್ಸೂಲ್ ಅಂದಾಜು 40 ನಿಮಿಷಗಳ ಬಳಿಕ, ಸ್ಯಾನ್ ಡಿಯಾಗೋ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯಲಿದೆ. ನೌಕಾಪಡೆಯ ಮುಳುಗು ತಜ್ಞರ ತಂಡ ಮತ್ತು ರಕ್ಷಣಾ ತಂಡ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯಲು ಸಿದ್ಧರಾಗಿರುತ್ತಾರೆ.</p><p>ಪ್ರತಿಯೊಬ್ಬ ಗಗನಯಾತ್ರಿಯೂ ಈ ತೀವ್ರ ಅವಧಿಯಲ್ಲಿ ಅವರನ್ನು ರಕ್ಷಿಸಲು ಮತ್ತು ವಿಪರೀತ ತಾಪಮಾನದಲ್ಲೂ ತಣ್ಣಗಿಡಲು ವಿಶೇಷವಾಗಿ ವಿನ್ಯಾಸಗೊಂಡಿರುವ ಪ್ರೆಶರೈಸ್ಡ್ ಸೂಟ್ಗಳನ್ನು ಧರಿಸಿರುತ್ತಾರೆ. ಯೋಜನಾ ನಿಯಂತ್ರಣ ತಜ್ಞರು ಮರು ಪ್ರವೇಶದ ಸಂದರ್ಭದಲ್ಲಿ ಗಗನಯಾತ್ರಿಗಳು ಬಹುತೇಕ ಮೌನವಾಗಿರಲಿದ್ದು, ವೈಸ್ಮ್ಯಾನ್ ಮತ್ತು ಗ್ಲೋವರ್ ಬಾಹ್ಯಾಕಾಶ ನೌಕೆಯ ಉಪಕರಣಗಳನ್ನು ಗಮನಿಸಲಿದ್ದಾರೆ.</p><p>ಈ ಅವಧಿಯನ್ನು ಇನ್ನಷ್ಟು ಆತಂಕಕಾರಿಯಾಗಿಸುವ ಅಂಶವೂ ಇದೆ.</p><p>2022ರಲ್ಲಿ, ಮೊದಲ ಆರ್ಟೆಮಿಸ್ ಯೋಜನೆಯ ಸಂದರ್ಭದಲ್ಲಿ, ಅದು ಯಾವುದೇ ಗಗನಯಾತ್ರಿಗಳನ್ನು ತನ್ನೊಡನೆ ಒಯ್ದಿರಲಿಲ್ಲ. ಆದರೆ, ಓರಿಯನ್ ಬಾಹ್ಯಾಕಾಶ ನೌಕೆಯ ರಕ್ಷಣೆಗಾಗಿ, ಎಲ್ಲ ಬೆಂಕಿ ಮತ್ತು ತಾಪಮಾನವನ್ನು ಹೀರಿಕೊಳ್ಳಲು ಅಳವಡಿಸಿದ್ದ ಉಷ್ಣತಾ ಫಲಕ ನಿರೀಕ್ಷಿತ ರೀತಿಯಲ್ಲಿ ಕಾರ್ಯಾಚರಿಸಲಿಲ್ಲ. ಅದರ ತುಣುಕುಗಳು ಮೇಲೆದ್ದು, ಅದು ನೂರಕ್ಕೂ ಹೆಚ್ಚಿನ ತುಂಡುಗಳಾಗಿ ಮುರಿದು ಹೋಯಿತು. ಒಂದು ವೇಳೆ ಒಳಗೆ ಗಗನಯಾತ್ರಿಗಳು ಇರುವಾಗ ಇಂತಹ ಬೆಳವಣಿಗೆ ಉಂಟಾದರೆ, ಅದು ನಿಜಕ್ಕೂ ಅನಾಹುತಕಾರಿಯಾದೀತು. ಈ ಸಮಸ್ಯೆಯ ಅನ್ವೇಷಣೆ ಆರ್ಟೆಮಿಸ್ 2 ಯೋಜನೆ ಹಲವು ವರ್ಷಗಳ ವಿಳಂಬ ಹೊಂದುವಂತೆ ಮಾಡಿತು. ಇಂಜಿನಿಯರ್ಗಳು ಹಗಲು ಇರುಳೆನ್ನದೆ ಆ ಸಮಸ್ಯೆ ಹೇಗೆ ತಲೆದೋರಿತು ಎಂದು ತಿಳಿಯಲು ಕಾರ್ಯಾಚರಿಸಿದರು.</p><p><strong>ನಾಸಾ ಈ ಬಾರಿ ಹೇಗೆ ಭಿನ್ನವಾಗಿ ಕಾರ್ಯಾಚರಿಸಿದೆ?</strong></p><p>ನಾಸಾ ಈ ಬಾರಿ ಓರಿಯನ್ ಭೂಮಿಗೆ ಮರಳುವ ಕೋನದಲ್ಲಿ ಬದಲಾವಣೆ ತಂದಿದೆ. ಒಂದು ಕಾಗದದ ವಿಮಾನದ ರೀತಿಯಲ್ಲಿ ತೇಲುವಂತೆ ಬರುವ ಬದಲು, ಬಾಹ್ಯಾಕಾಶ ನೌಕೆ ಈ ಬಾರಿ ಇನ್ನಷ್ಟು ಆಳವಾದ ಕೋನದಲ್ಲಿ ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಲಿದೆ. ಬಳಿಕ ಅದು ತಕ್ಷಣವೇ ಕೊಂಚ ಹಿಂದಕ್ಕೆ ಸಾಗಲಿದೆ. ಇದನ್ನು ಒಂದು ರೀತಿ ನೀರಿನ ಮೇಲೆ ಚಪ್ಪಟೆಯಾದ ಕಲ್ಲು ಜಿಗಿಯುತ್ತಾ ಸಾಗುವುದಕ್ಕೆ ಹೋಲಿಸಬಹುದು. ಬಳಿಕ ಬಾಹ್ಯಾಕಾಶ ನೌಕೆ ತನ್ನ ಅಂತಿಮ ಹಂತದ ಇಳಿಯುವಿಕೆಯನ್ನು ಆರಂಭಿಸಲಿದೆ. ನೀವು ಒಂದು ಕೆರೆಯ ನೀರಿಗೆ ಚಪ್ಪಟೆಯಾದ ಕಲ್ಲನ್ನು ಎಸೆದಾಗ, ಅದು ಕೆಲಬಾರಿ ನೀರಿನ ಮೇಲ್ಮೈಯಲ್ಲೇ ಜಿಗಿಯುತ್ತಾ ಸಾಗಿ ಕೊನೆಗೆ ನೀರಿನೊಳಗೆ ಇಳಿಯುತ್ತದಲ್ಲ? ಇದನ್ನೂ ಅದಕ್ಕೆ ಹೋಲಿಸಬಹುದು. ಈ ಜಿಗಿಯುವ ಮತ್ತು ಮರು ಪ್ರವೇಶಿಸುವ ವಿಧಾನ ಒಳಗೆ ಸೆರೆಯಾಗಿರುವ ತಾಪ ಮತ್ತು ಅನಿಲಗಳನ್ನು ಏಕಕಾಲದ ಬದಲು, ನಿಧಾನವಾಗಿ, ಆದರೆ ಸ್ಥಿರವಾಗಿ ಬಿಡುಗಡೆಗೊಳಿಸುತ್ತದೆ. ಇದು ಉಷ್ಣತಾ ಫಲಕದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ಅದು ಅತಿಯಾಗಿ ಬಿಸಿಯಾಗದಂತೆ ತಡೆಯುತ್ತದೆ.</p><p>ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯೋಜನಾ ಕಮಾಂಡರ್ ಆಗಿರುವ ವೈಸ್ಮ್ಯಾನ್ ಅವರು ಓರ್ವ ನಿವೃತ್ತ ನೌಕಾಪಡೆಯ ವೈಮಾನಿಕರಾಗಿದ್ದು, ಅವರು ಈ ನೂತನ ಯೋಜನೆಯನ್ನು ಪ್ರಸ್ತಾಪಿಸಿದಾಗ ತನ್ನ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅವರು ಆರಂಭದಲ್ಲಿ ನಾಸಾ ಹಾನಿಗೊಳಗಾಗಿದ್ದ ಉಷ್ಣತಾ ಫಲಕದ ಬದಲು ಬೇರೆ ಉತ್ತಮ ಫಲಕ ಅಳವಡಿಸುವುದನ್ನು ನಿರೀಕ್ಷಿಸಿದ್ದರು. ಆದರೆ, ವಿಸ್ತೃತವಾದ ತಾಂತ್ರಿಕ ವಿವರಣೆ ನೀಡಿದ ಬಳಿಕ, ಅವರ ಅನುಮಾನಗಳು ನಿವಾರಣೆಗೊಂಡವು.</p><p>"ನಾನು ಮೊದಲಿಗೆ ಅವರು ಉಷ್ಣತಾ ಫಲಕವನ್ನು ಬದಲಿಸುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ, ವಿವರಣೆಯ ಕೊನೆಯ ವೇಳೆಗೆ ನಾವು ಹೊಸದಾದ ಹಾರಾಟ ಪಥವನ್ನು ಬಳಸಬಹುದು ಎನ್ನುವುದು ನನಗೂ ಅರ್ಥವಾಯಿತು. ಇದು ಸರಿಯಾಗಿ ಕಾರ್ಯಾಚರಿಸುವಂತೆ ಮಾಡಬಹುದು ಎನ್ನುವ ವಿಶ್ವಾಸ ನನಗೂ ಮೂಡಿತು" ಎಂದು ವೈಸ್ಮ್ಯಾನ್ ಹೇಳಿದ್ದಾರೆ.</p><p>ಆದರೆ ಈ ಯೋಜನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿಲ್ಲ. ಕಳೆದ ವರ್ಷ ನಿವೃತ್ತಿ ಹೊಂದುವ ಮುನ್ನ ಮರು ಪ್ರವೇಶ ವ್ಯವಸ್ಥೆಗಳ ಕುರಿತು ಕಾರ್ಯಾಚರಿಸುತ್ತಿದ್ದ ನಾಸಾದ ಮಾಜಿ ಇಂಜಿನಿಯರ್ ಡ್ಯಾನ್ ರಾಸ್ಕಿ ನಾಸಾ ಮೊದಲಿಗೆ ಗಗನಯಾತ್ರಿಗಳು ಇಲ್ಲದೆ ಈ ಸ್ಕಿಪ್ ರಿ ಎಂಟ್ರಿ ವಿಧಾನವನ್ನು ಪರೀಕ್ಷಿಸಬೇಕಿತ್ತು, ಆ ಮೂಲಕ ಯಾವುದೇ ಸಮಸ್ಯೆಯೂ ಎದುರಾಗುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಸ್ಪೇಸ್ ಎಕ್ಸ್ ಸಂಸ್ಥೆ ತನ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಳಸುವಂತಹ ವಿಭಿನ್ನ ಉಷ್ಣತಾ ಫಲಕವನ್ನು ಬಳಸುವಂತೆಯೂ ಸಲಹೆ ನೀಡಿದ್ದರು. ಅವರ ಕಾಳಜಿಯನ್ನು ಕೇಳಿಸಿಕೊಂಡರೂ, ನಾಸಾ ತೀವ್ರ ಭೂ ಪರೀಕ್ಷೆಗಳು ಮತ್ತು ಪರಿಶೀಲನೆಗಳ ಬಳಿಕ ತನ್ನ ಯೋಜನೆಯಂತೆಯೇ ಮುಂದುವರಿಯಿತು.</p><p>ನಾಸಾದ ನಿರ್ವಾಹಕ ಜಾರೆದ್ ಇಸಾಕ್ಮ್ಯಾನ್ ಈ ಯೋಜನೆಯನ್ನು ಅನುಮೋದಿಸಿದ್ದಾರೆ. ನಾಸಾದ ಸಹಾಯಕ ನಿರ್ವಾಹಕ ಅಮಿತ್ ಕ್ಷತ್ರಿಯ ಅವರು ಗುರುವಾರ "ನಾವು ಈ ಕುರಿತು ಎಲ್ಲ ಅವಶ್ಯಕ ಕಾರ್ಯಗಳನ್ನೂ ನಡೆಸಿದ್ದು, ನನಗೆ ನಮ್ಮ ತಂಡದ ಮೇಲೆ ಸಂಪೂರ್ಣ ವಿಶ್ವಾಸವಿದೆ" ಎಂದಿದ್ದಾರೆ.</p><p>ಅವರ ನಂಬಿಕೆಗೆ ಇತಿಹಾಸದ ಆಧಾರವೂ ಇದೆ. ನಾಸಾ ಹಿಂದಿನ 1986ರ ಚಾಲೆಂಜರ್ ದುರಂತವನ್ನಾಗಲಿ, ಅಥವಾ 2003ರ ಕೊಲಂಬಿಯಾ ದುರ್ಘಟನೆಯನ್ನಾಗಲಿ ಮರೆತಿಲ್ಲ. ಎರಡೂ ಬಾಹ್ಯಾಕಾಶ ನೌಕೆಗಳೂ ಇಲ್ಲವಾಗಿದ್ದವು. ಇವೆರಡೂ ದುರಂತಗಳಲ್ಲಿ 14 ಗಗನಯಾತ್ರಿಗಳು ಮತ್ತೆಂದೂ ಮನೆಗೆ ಮರಳದಂತಾದರು. ಈ ದುರ್ಘಟನೆಗಳು ನಾಸಾ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಅಪಾಯ, ಮತ್ತು ಪ್ರತಿಯೊಂದು ಲೆಕ್ಕಾಚಾರವನ್ನು ಹೇಗೆ ಕೈಗೊಳ್ಳುತ್ತದೆ ಎನ್ನುವುದನ್ನು ರೂಪಿಸಿವೆ.</p><p>"ನಾನು ಎಪ್ರಿಲ್ 3, 2023ರಿಂದ, ನಮ್ಮನ್ನು ಈ ಯೋಜನೆಗೆ ನೇಮಿಸಿದ ದಿನದಿಂದಲೂ ಭೂಮಿಗೆ ಪುನರಾಗಮನದ ಕುರಿತೇ ಆಲೋಚಿಸುತ್ತಾ ಬಂದಿದ್ದೇನೆ. ನಮ್ಮ ಮುಖ್ಯ ಗುರಿಯೇ ಸುರಕ್ಷಿತವಾಗಿ ಭೂಮಿಗೆ ಮರಳುವುದು" ಎಂದು ವಿಕ್ಟರ್ ಗ್ಲೋವರ್ ಒಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p><p>ಇದುವೇ ಆರ್ಟೆಮಿಸ್ 2 ಯೋಜನೆಯ ಬಹುಮುಖ್ಯ ಘಟ್ಟವಾಗಿದೆ. ರಾಕೆಟ್ ಅಲ್ಲ, ಚಂದ್ರನೂ ಅಲ್ಲ, ವಿಜ್ಞಾನವೂ ಅಲ್ಲ. ಬೆಂಕಿಯ ಚೆಂಡಿನ ನಡುವೆ ಸಾಗಿ ಬರುವ ನಾಲ್ವರು ಮಾನವರು, ಗಣಿತ, ಇಂಜಿನಿಯರಿಂಗ್ ಮತ್ತು ಪರಸ್ಪರರ ಮೇಲೆ ನಂಬಿಕೆ ಇಟ್ಟು, ಮರಳಿ ಮನೆಗೆ ಬರಲು ಪ್ರಯತ್ನಿಸುವುದೇ ಈಗಿನ ಮಹತ್ವದ ಘಟ್ಟವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>