<p>ಬಚ್ಚಿಟ್ಟ ಕೆಂಡ ಮತ್ತೆ ಉರಿವುದಲ್ಲದೆ ಬೂದಿಯಲ್ಲಿ ಕೆಂಡವುಂಟೇ ?</p><p>ಭವಕ್ಕೆ ಬಂದುದು ತನ್ನಿಚ್ಛೆಯಿಂದಲ್ಲದೆ</p><p>ಪರರ(ನ) ದೂರಲದೇಕೆ ?</p><p>ಭವದ ಬೇರ ಕಿತ್ತಿ, ಸ್ವರೂಪ ಚಿದಗ್ನಿಯನಿಕ್ಕಿ ಅಂತಃಕರಣಕ್ಕೆ ಶಿವಮಂತ್ರವಿರಿಸಿ, ದಿವ್ಯ ಘಟದಲ್ಲಿ ಶಿವದಾಸೋಹವ ಶಿವಭಕ್ತರನುಭಾವದಲ್ಲಿ ಉಂಡು ಲಿಂಗೈಕ್ಯನಾಗಿ ಭವವ ಭೇದಿಸೆಂದ! ಗುರು ಬಸವಪ್ರಭುವಿನ ಅರಿವಲ್ಲಿ ಲಿಂಗ ಸ್ವಯವು ಮುರುಘೇಶ.</p><p>ಮೇಲ್ಕಂಡ ವಚನದಂತೆ ಕೇವಲ ಭವದ ವಿಚಾರವನ್ನೇ ಹೊತ್ತರೆ ಭಾವವನ್ನು ಭೇದಿಸಲು ಮುಖ್ಯವಾದ ಸಾಧನಾ ಮಾರ್ಗವನ್ನು ಬಸವ ತತ್ವದಲ್ಲಿ ಕಾಣಬಹುದು.</p><p>ಅಷ್ಟಾವರಣ ಸಂಪನ್ನರಾಗಿ ಷಟ್ಸ್ಥಲಗಳೊಂದಿಗೆ ಐಕ್ಯ ಪದವಿಯನ್ನು ಸಾಧಿಸೋಣ</p><p><strong>ಅಷ್ಟಾವರಣಗಳು:-</strong></p><p>1) ಗುರು: ಕಾಯಕ್ಕೆ ಅರಿವನ್ನು ಪ್ರಾಪ್ತಿ ಮಾಡುವ ಚೈತನ್ಯವೇ ಗುರು. ಪಿಂಡಾಂಡದಿ ತೋರುವ ಕಾಯವೇ ಗುರು, ಅರಿವಿನಿಂದ ಕೂಡಿದ ಸತ್ಕ್ರಿಯಾ ಸದಾಚಾರಗಳ ಸಂಗಮ, ಇದು ಸ್ಥೂಲ ತನುವನ್ನು ಶುದ್ಧೀಕರಿಸುವುದು, ಭಕ್ತನ ಶ್ರದ್ಧೆಯೇ ಗುರು, ಮದವಳಿಯುವುದು. ಶ್ರದ್ಧಾಭಕ್ತಿ ಗುರುಕೃಪೆಯಿಲ್ಲದವನ ಕರ್ಮ ಹರಿಯದು.</p><p>2) ಲಿಂಗ: ಅಂಗದ ಮೇಲೆ ಸಾಹಿತ್ಯವಾದ ಇಷ್ಟಲಿಂಗ, ಪ್ರಾಣವೇ ಲಿಂಗ, ಪ್ರಾಣದ ಮರೆಯಲ್ಲಿ ಸೂಕ್ಷ್ಮತನುವಿನಲ್ಲಿ ವ್ಯವಹರಿಸುವ ಮನಸ್ಸು. ಸಕಲ ವಿಚಾರಗಳನ್ನು ಶುದ್ಧರೂಪದಲ್ಲಿ ಅರಿತು ಅಂಗವಿಸಿಕೊಳ್ಳುವ ಪ್ರಕ್ರಿಯೆಯೇ ಲಿಂಗ, ಭಕ್ತನ ಶ್ರದ್ಧೆಯೇ ಲಿಂಗ, ಕಾಮವಳಿಯುವುದು, ನಿಷ್ಠಾಭಕ್ತ, ಲಿಂಗ ಸೋಂಕದವನ ಅಂಗ ಭಂಗ.</p><p>3) ಜಂಗಮ: ಜ್ಞಾನವೆ ಜಂಗಮ, ಕಾರಣತನುವಿನ ಭಾವದ ನೆಲೆಯಲ್ಲಿ ಅನುಭಾವಿಸುವ, ಸ್ಫುರಿಸುವ ಚೈತನ್ಯವೇ ಜಂಗಮ, ಭಕ್ತನ ಶ್ರದ್ಧೆಯೇ</p><p>ಜಂಗಮ, ಲಿಂಗನ ಪೂಜಿಸುವ ಸದಾಚಾರವೇ ಜಂಗಮ, ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮ, ಮತ್ಸರವಳಿಯುವುದು, ಸಾವಧಾನಭಕ್ತ, ಜಂಗಮ ದರುಶನವಿಲ್ಲದವಂಗೆ ಮೋಕ್ಷಾರ್ಥ ಬಟ್ಟೆ ದೊರೆಯದು.</p><p>4) ವಿಭೂತಿ: ಹಣೆಯ ಮೇಲೆ ಧಾರಣ ಮಾಡುವ ಭಸ್ಮ, ಸೋಂಕಿನ ಸುಖವ ಮರೆದು ಭಕ್ತನ ಸಮರಸ ಮತ್ತು ಕಾಯದೊಳು ಕಾಂಬ ಅರುವಿನ ಬೆಳಗೇ ವಿಭೂತಿ, ಕ್ರೋಧವನಳಿಯುವುದು, ಆನಂದಭಕ್ತ, ವಿಭೂತಿಯ ಧರಿಸದವಂಗೆ ದುರಿತಲಿಖಿತಂಗಳು ತೊಡೆಯವು.</p><p>5) ರುದ್ರಾಕ್ಷಿ: ಅರಿವಿನ ಕೃಪೆಯೇ ರುದ್ರಾಕ್ಷಿ, ಶಿವಾಚಾರವನ್ನು ಅಳವಡಿಸಿಕೊಳ್ಳುವುದು, ಅನುಭಾವವೇ ರುದ್ರಾಕ್ಷಿ, ಕ್ರೋಧವನಳಿಯುವುದು, ಆನಂದಭಕ್ತ, ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು.</p><p>6) ಮಂತ್ರ: ಅರಿವು ತಾನೇ ಆಗಿ ಮೆರೆದುದೇ ಮಂತ್ರ, ಭಕ್ತನ ನಿಷ್ಠೆಯೇ ಮಂತ್ರ, ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು, ಲೋಭವನಳಿಯುವುದು, ಸಮರಸಭಕ್ತ.</p><p>7) ಪಾದೋದಕ: ಅರಿವಿನ ಕರಣವೇ ಪಾದೋದಕ, ಆನಂದವೇ ಪಾದೋದಕ, ಮೋಹವನಳಿಯುವುದು, ಅನುಭಾವ ಭಕ್ತ, ಪಾದೋದಕವ ಕೊಳದವನ ಪರಿಭವಂಗಳು ಅಳಿಯವು.</p><p>8) ಪ್ರಸಾದ: ಅರಿವಿನ ಆನಂದವೇ ಪ್ರಸಾದ, ಸಾವಧಾನವೇ ಪ್ರಸಾದ, ಮೋಹವನಳಿಯುವುದು, ಅನುಭಾವಭಕ್ತ, ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು.</p><p>ಬರಿಯ ಬಾಹ್ಯದ ಆಡಂಬರದ ಅಷ್ಟಾವರಣ ಧಾರಣೆಯಿಂದ ಸಾಧಕನಲ್ಲಿ ಯಾವ ಬದಲಾವಣೆಗಳು ಗೋಚರಿಸದಿದ್ದರೆ ಅಂಥಾ ಆವರಣಗಳು ಶುಷ್ಕವೆನಿಸಿಕೊಳ್ಳುತ್ತವೆ. ಅವುಗಳಿಂದ ಯಾವ ಪ್ರಯೋಜನವೂ ಇಲ್ಲ. ಬಾಹ್ಯ ಅಷ್ಟಾವರಣಗಳಿಗೆ ತತ್-ಸಂಬಂಧವಾದ ಅಂತರ್ ಅಷ್ಟಾವರಣಗಳನ್ನು ಅರಿವಿನ ಮುಖದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಧಕನು ತನ್ನ ಇಂದ್ರಿಯ ಸ್ವಭಾವ ಗುಣಗಳಿಂದ ಮುಕ್ತನಾಗಿ ಬಯಲ ಸಾಧನೆಯಲ್ಲಿ ತೊಡಗಿ ಬಯಲ ರೂಪವೇ ತಾನಾಗುವನು.</p><p><strong>ಪಂಚಾಚಾರಗಳು:</strong></p><p>1) ಲಿಂಗಾಚಾರ : ಅಂಗದ ಮೇಲೆ ಲಿಂಗವನ್ನು ಧರಿಸಿದ್ದ ಪ್ರತಿಯೊಬ್ಬರೂ ಮಾಡುವ ಕೆಲಸ , ನೋಡುವ ನೋಟ , ಕೊಂಬುವ ಪ್ರಸಾದಗಲೆಲ್ಲವನ್ನು ಲಿಂಗಮುಖವಾಗಿ ತೆಗೆದುಕೊಳ್ಳಬೇಕು. ಗುರುಲಿಂಗ ಜಂಗಮರಿಗೆ ಅನ್ಯವ ಬಗೆಯದೆ ಸುವಿಚಾರ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು . ಭವಿಗಳೊಂದಿಗೆ ನಿಲ್ಲಬಾರದು ,</p><p>ಲಿಂಗಾಚಾರ : ದೇವನೊಬ್ಬನೇ ಎಂದು ನಂಬಿ ಒಂದೇ ಆಕಾರದಲ್ಲಿ ಪೂಜಿಸುವುದು ಲಿಂಗಾಚಾರ .</p><p> 2) ಸದಾಚಾರ : 'ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗ ಘಟಸರ್ಪ' ಅಂದರೆ ಸತ್ಯ ಶುದ್ದ ಕಾಯಕದಿಂದ ಗುರುಲಿಂಗ ಜಂಗಮರ ಸೇವೆಯನ್ನು ಮಾಡುವಲ್ಲಿ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ದಗೊಂಡು ಲಿಂಗವು ಮೆಚ್ಚು ವನ್ಥಾಗುವುದೇ ಸದಾಚಾರವು ,ಸದಾಚಾರ : ಸತ್ಯಶುದ್ಧ ಕಾಯಕದಿಂದ ಬಂದದ್ದರಲ್ಲಿ ಮಿಕ್ಕದ್ದನ್ನು ಸಮಾಜಕ್ಕೆ ನೀಡಿ ರಾಷ್ಟ್ರದ ಪ್ರಗತಿಗೆ ದುಡಿಯುವುದೇ ಸದಾಚಾರ</p><p> 3) ಶಿವಾಚಾರ : ಜಗದ ಜನರೆಲ್ಲರೂ ಒಂದೇ ಎಂಬ ಸಮತಾ ಭಾವನೆಯೇ ಶಿವಾಚಾರ . ಇಲ್ಲಿ ಪ್ರತಿಯೊಬ್ಬನ ಸಮತ್ವದ ಜೊತೆಗೆ ಸಮಾಜದ ಆಗು-ಹೋಗುಗಳ ಸಮತೋಲನವನ್ನು ಕಂಡುಕೊಳ್ಳಬಹುದು. ವರ್ಣ, ಜಾತಿ, ಆಶ್ರಮಗಳಲ್ಲಿಯ ಭೇದಭಾವವನ್ನು ಕಾಣಲಾಗುವುದಿಲ್ಲ ,ಶಿವಾಚಾರ : ಶಿವಭಕ್ತರಲ್ಲಿ ಜಾತೀಯತೆಯನ್ನು ಮಾಡದಿರುವುದೇ ಶಿವಾಚಾರ</p><p> 4) ಗಣಚಾರ : ಶಿವಾಚಾರಿಯದವನು ಶಿವನಿಂದೆಯ ಮಾಡಲಾಗದು. ಶಿವನಿಂದೆಯ ಕೇಳಲಾಗದು. ಪರಧರ್ಮವನ್ನು ಹೀಯಾಲಿಸದೆ, ಪರರನ್ನು ನಿಂದಿಸದೆ ಪರಶಿವನ ಮೆಚ್ಚುಗೆಯನ್ನು ಪಡೆಯಬೇಕು. ಇಂಥಪ್ಪ ವೀರಶೈವನು ಶಿವನಿಂದೆಯಂ ಕೇಳಿ ದೊಡೆ ಆ ಊರು, ದೇಶ, ಕೋಶಗಳನ್ನೆಲ್ಲ ತ್ಯಾಗ ಮಾಡಬಲ್ಲ ಮಹಾತ್ಯಾಗಿ ಅವನಗಿರಬೇಕು ,ಗಣಾಚಾರ : ಅನ್ಯಾಯ, ಅನೀತಿ, ಜಾತೀಯತೆಯ ವಿರುದ್ಧ ಹೋರಾಡುವದೇ ಗಣಾಚಾರ</p><p> 5) ಭ್ರುತ್ಯಾಚಾರ : 'ಎನಗಿಂತ ಕಿರಿಯರಿಲ್ಲ; ಶಿವಭಕ್ಥರಿಗಿಂಥ ಹಿರಿಯರಿಲ್ಲ ' ಎಂಬುದೇ ಭ್ರುತ್ಯಾಚಾರವು . ಭಕ್ತನು ಶರಣರಿದ್ದಲ್ಲಿಗೆ ಹೋಗಿ ಕಿಂಕರನಾಗಿ ತನ್ನ ತನು , ಮನ , ಧನಗಳನ್ನು ಅರ್ಪಿಸಬೇಕು . ಶಿವಭಕ್ತರ ವಿಚಾರದಲ್ಲಿ ವಿನಯಶೀಲನಾಗಿರಬೇಕು, ಭ್ರುತ್ಯಾಚಾರ : ಸಮಾಜದ ಹಿತಕ್ಕಾಗಿ, ಕಿಂಕರನಾಗಿ ಸೇವೆ ಮಾಡುವುದೇ ಭ್ರುತ್ಯಾಚಾರ</p>.<p> <strong>ಷಟ್ಸ್ಥಲಗಳೊಂದಿಗೆ ಮಹಾ ಮುಕ್ತಿಯನೈದುವ ಸಾಧನೆ:</strong></p><p>1) ಭಕ್ತಸ್ಥಲ- ಯಮ ಮತ್ತು ನಿಯಮ : (ಈ ಹಂತದಲ್ಲಿ ಸಾಧಕನು ಭಕ್ತಿ ಮತ್ತು ಶ್ರದ್ಧೆಗಳನ್ನು ಅಳವಡಿಸಿಕೊಳ್ಳುತ್ತಾನೆ.)</p><p>2) ಮಹೇಶ್ವರಸ್ಥಲ- ನಿಯಮ ಮತ್ತು ಆಸನ : (ಈ ಹಂತದಲ್ಲಿ ಸಾಧಕನಲ್ಲಿ ತತ್ವ ನಿಷ್ಠೆ ಅಳವಟ್ಟು ಗಟ್ಟಿಗೊಳ್ಳುವುದು.)</p><p>3) ಪ್ರಸಾದಿಸ್ಥಲ- ಪ್ರತ್ಯಾಹಾರ : (ಈ ಹಂತದಲ್ಲಿ ಸಾಧಕನು ಜೀವನವನ್ನು ದೇವರಿತ್ತ ಪ್ರಸಾದ, ಜಗತ್ತೆಲ್ಲವೂ ಪ್ರಸಾದವೆಂದು ಭಾವಿಸಿ ಅನುಭವಿಸುತ್ತಾನೆ.)</p><p>4) ಪ್ರಾಣಲಿಂಗಿಸ್ಥಲ- ಪ್ರಾಣಾಯಾಮ ಮತ್ತು ಧ್ಯಾನ : (ಈ ಹಂತದಲ್ಲಿ ಸಾಧಕನು ಪ್ರಾಣದಲ್ಲಿ ದೇವರನ್ನು ಕಾಣುವನು, ಅಂತಃಕರಣಗಳು ಪರಿಶುದ್ಧಗೊಂಡು ದೈವೀಮಯವಾಗುವ ಸ್ಥಿತಿ.)</p><p>5) ಶರಣಸ್ಥಲ- ಧಾರಣ : (ದೇವರು ತನ್ನೊಳಗೇ ಇದ್ದಾನೆ, ಅಖಂಡ ಸೃಷ್ಟಿಯಲ್ಲೂ ಇದ್ದಾನೆ ಹಾಗಾಗಿ ಜಗತ್ತು ಬೇರೆಯಲ್ಲ ನಾನು ಬೇರೆಯಲ್ಲ ಎಂಬ ಭಾವ ಬಲಿಯುವುದು.)</p><p>6) ಐಕ್ಯಸ್ಥಲ- ಸಮಾಧಿ : (ನಿಶ್ಚಿಂತ ನಿಜವನ್ನು ಒಡಗೂಡುವ ಸ್ಥಿತಿಯೇ ಐಕ್ಯ)</p><p>ಮೇಲ್ಕಂಡ ಅಷ್ಟಾವರಣಗಳು ಅಂಗವಾಗಿ, ಪಂಚಾಚಾರಗಳು ಪ್ರಾಣವಾಗಿ, ಷಟ್ಸ್ಥಲಗಳು ಅತ್ಮವಾಗಿಸಿ ಸಾಧನೆಗೈದ ಮಹಾ ಲಿಂಗೈಕ್ಯನಪ್ಪನು ಸ್ವಯ ತಾನಪ್ಪನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಚ್ಚಿಟ್ಟ ಕೆಂಡ ಮತ್ತೆ ಉರಿವುದಲ್ಲದೆ ಬೂದಿಯಲ್ಲಿ ಕೆಂಡವುಂಟೇ ?</p><p>ಭವಕ್ಕೆ ಬಂದುದು ತನ್ನಿಚ್ಛೆಯಿಂದಲ್ಲದೆ</p><p>ಪರರ(ನ) ದೂರಲದೇಕೆ ?</p><p>ಭವದ ಬೇರ ಕಿತ್ತಿ, ಸ್ವರೂಪ ಚಿದಗ್ನಿಯನಿಕ್ಕಿ ಅಂತಃಕರಣಕ್ಕೆ ಶಿವಮಂತ್ರವಿರಿಸಿ, ದಿವ್ಯ ಘಟದಲ್ಲಿ ಶಿವದಾಸೋಹವ ಶಿವಭಕ್ತರನುಭಾವದಲ್ಲಿ ಉಂಡು ಲಿಂಗೈಕ್ಯನಾಗಿ ಭವವ ಭೇದಿಸೆಂದ! ಗುರು ಬಸವಪ್ರಭುವಿನ ಅರಿವಲ್ಲಿ ಲಿಂಗ ಸ್ವಯವು ಮುರುಘೇಶ.</p><p>ಮೇಲ್ಕಂಡ ವಚನದಂತೆ ಕೇವಲ ಭವದ ವಿಚಾರವನ್ನೇ ಹೊತ್ತರೆ ಭಾವವನ್ನು ಭೇದಿಸಲು ಮುಖ್ಯವಾದ ಸಾಧನಾ ಮಾರ್ಗವನ್ನು ಬಸವ ತತ್ವದಲ್ಲಿ ಕಾಣಬಹುದು.</p><p>ಅಷ್ಟಾವರಣ ಸಂಪನ್ನರಾಗಿ ಷಟ್ಸ್ಥಲಗಳೊಂದಿಗೆ ಐಕ್ಯ ಪದವಿಯನ್ನು ಸಾಧಿಸೋಣ</p><p><strong>ಅಷ್ಟಾವರಣಗಳು:-</strong></p><p>1) ಗುರು: ಕಾಯಕ್ಕೆ ಅರಿವನ್ನು ಪ್ರಾಪ್ತಿ ಮಾಡುವ ಚೈತನ್ಯವೇ ಗುರು. ಪಿಂಡಾಂಡದಿ ತೋರುವ ಕಾಯವೇ ಗುರು, ಅರಿವಿನಿಂದ ಕೂಡಿದ ಸತ್ಕ್ರಿಯಾ ಸದಾಚಾರಗಳ ಸಂಗಮ, ಇದು ಸ್ಥೂಲ ತನುವನ್ನು ಶುದ್ಧೀಕರಿಸುವುದು, ಭಕ್ತನ ಶ್ರದ್ಧೆಯೇ ಗುರು, ಮದವಳಿಯುವುದು. ಶ್ರದ್ಧಾಭಕ್ತಿ ಗುರುಕೃಪೆಯಿಲ್ಲದವನ ಕರ್ಮ ಹರಿಯದು.</p><p>2) ಲಿಂಗ: ಅಂಗದ ಮೇಲೆ ಸಾಹಿತ್ಯವಾದ ಇಷ್ಟಲಿಂಗ, ಪ್ರಾಣವೇ ಲಿಂಗ, ಪ್ರಾಣದ ಮರೆಯಲ್ಲಿ ಸೂಕ್ಷ್ಮತನುವಿನಲ್ಲಿ ವ್ಯವಹರಿಸುವ ಮನಸ್ಸು. ಸಕಲ ವಿಚಾರಗಳನ್ನು ಶುದ್ಧರೂಪದಲ್ಲಿ ಅರಿತು ಅಂಗವಿಸಿಕೊಳ್ಳುವ ಪ್ರಕ್ರಿಯೆಯೇ ಲಿಂಗ, ಭಕ್ತನ ಶ್ರದ್ಧೆಯೇ ಲಿಂಗ, ಕಾಮವಳಿಯುವುದು, ನಿಷ್ಠಾಭಕ್ತ, ಲಿಂಗ ಸೋಂಕದವನ ಅಂಗ ಭಂಗ.</p><p>3) ಜಂಗಮ: ಜ್ಞಾನವೆ ಜಂಗಮ, ಕಾರಣತನುವಿನ ಭಾವದ ನೆಲೆಯಲ್ಲಿ ಅನುಭಾವಿಸುವ, ಸ್ಫುರಿಸುವ ಚೈತನ್ಯವೇ ಜಂಗಮ, ಭಕ್ತನ ಶ್ರದ್ಧೆಯೇ</p><p>ಜಂಗಮ, ಲಿಂಗನ ಪೂಜಿಸುವ ಸದಾಚಾರವೇ ಜಂಗಮ, ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮ, ಮತ್ಸರವಳಿಯುವುದು, ಸಾವಧಾನಭಕ್ತ, ಜಂಗಮ ದರುಶನವಿಲ್ಲದವಂಗೆ ಮೋಕ್ಷಾರ್ಥ ಬಟ್ಟೆ ದೊರೆಯದು.</p><p>4) ವಿಭೂತಿ: ಹಣೆಯ ಮೇಲೆ ಧಾರಣ ಮಾಡುವ ಭಸ್ಮ, ಸೋಂಕಿನ ಸುಖವ ಮರೆದು ಭಕ್ತನ ಸಮರಸ ಮತ್ತು ಕಾಯದೊಳು ಕಾಂಬ ಅರುವಿನ ಬೆಳಗೇ ವಿಭೂತಿ, ಕ್ರೋಧವನಳಿಯುವುದು, ಆನಂದಭಕ್ತ, ವಿಭೂತಿಯ ಧರಿಸದವಂಗೆ ದುರಿತಲಿಖಿತಂಗಳು ತೊಡೆಯವು.</p><p>5) ರುದ್ರಾಕ್ಷಿ: ಅರಿವಿನ ಕೃಪೆಯೇ ರುದ್ರಾಕ್ಷಿ, ಶಿವಾಚಾರವನ್ನು ಅಳವಡಿಸಿಕೊಳ್ಳುವುದು, ಅನುಭಾವವೇ ರುದ್ರಾಕ್ಷಿ, ಕ್ರೋಧವನಳಿಯುವುದು, ಆನಂದಭಕ್ತ, ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು.</p><p>6) ಮಂತ್ರ: ಅರಿವು ತಾನೇ ಆಗಿ ಮೆರೆದುದೇ ಮಂತ್ರ, ಭಕ್ತನ ನಿಷ್ಠೆಯೇ ಮಂತ್ರ, ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು, ಲೋಭವನಳಿಯುವುದು, ಸಮರಸಭಕ್ತ.</p><p>7) ಪಾದೋದಕ: ಅರಿವಿನ ಕರಣವೇ ಪಾದೋದಕ, ಆನಂದವೇ ಪಾದೋದಕ, ಮೋಹವನಳಿಯುವುದು, ಅನುಭಾವ ಭಕ್ತ, ಪಾದೋದಕವ ಕೊಳದವನ ಪರಿಭವಂಗಳು ಅಳಿಯವು.</p><p>8) ಪ್ರಸಾದ: ಅರಿವಿನ ಆನಂದವೇ ಪ್ರಸಾದ, ಸಾವಧಾನವೇ ಪ್ರಸಾದ, ಮೋಹವನಳಿಯುವುದು, ಅನುಭಾವಭಕ್ತ, ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು.</p><p>ಬರಿಯ ಬಾಹ್ಯದ ಆಡಂಬರದ ಅಷ್ಟಾವರಣ ಧಾರಣೆಯಿಂದ ಸಾಧಕನಲ್ಲಿ ಯಾವ ಬದಲಾವಣೆಗಳು ಗೋಚರಿಸದಿದ್ದರೆ ಅಂಥಾ ಆವರಣಗಳು ಶುಷ್ಕವೆನಿಸಿಕೊಳ್ಳುತ್ತವೆ. ಅವುಗಳಿಂದ ಯಾವ ಪ್ರಯೋಜನವೂ ಇಲ್ಲ. ಬಾಹ್ಯ ಅಷ್ಟಾವರಣಗಳಿಗೆ ತತ್-ಸಂಬಂಧವಾದ ಅಂತರ್ ಅಷ್ಟಾವರಣಗಳನ್ನು ಅರಿವಿನ ಮುಖದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಧಕನು ತನ್ನ ಇಂದ್ರಿಯ ಸ್ವಭಾವ ಗುಣಗಳಿಂದ ಮುಕ್ತನಾಗಿ ಬಯಲ ಸಾಧನೆಯಲ್ಲಿ ತೊಡಗಿ ಬಯಲ ರೂಪವೇ ತಾನಾಗುವನು.</p><p><strong>ಪಂಚಾಚಾರಗಳು:</strong></p><p>1) ಲಿಂಗಾಚಾರ : ಅಂಗದ ಮೇಲೆ ಲಿಂಗವನ್ನು ಧರಿಸಿದ್ದ ಪ್ರತಿಯೊಬ್ಬರೂ ಮಾಡುವ ಕೆಲಸ , ನೋಡುವ ನೋಟ , ಕೊಂಬುವ ಪ್ರಸಾದಗಲೆಲ್ಲವನ್ನು ಲಿಂಗಮುಖವಾಗಿ ತೆಗೆದುಕೊಳ್ಳಬೇಕು. ಗುರುಲಿಂಗ ಜಂಗಮರಿಗೆ ಅನ್ಯವ ಬಗೆಯದೆ ಸುವಿಚಾರ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು . ಭವಿಗಳೊಂದಿಗೆ ನಿಲ್ಲಬಾರದು ,</p><p>ಲಿಂಗಾಚಾರ : ದೇವನೊಬ್ಬನೇ ಎಂದು ನಂಬಿ ಒಂದೇ ಆಕಾರದಲ್ಲಿ ಪೂಜಿಸುವುದು ಲಿಂಗಾಚಾರ .</p><p> 2) ಸದಾಚಾರ : 'ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗ ಘಟಸರ್ಪ' ಅಂದರೆ ಸತ್ಯ ಶುದ್ದ ಕಾಯಕದಿಂದ ಗುರುಲಿಂಗ ಜಂಗಮರ ಸೇವೆಯನ್ನು ಮಾಡುವಲ್ಲಿ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ದಗೊಂಡು ಲಿಂಗವು ಮೆಚ್ಚು ವನ್ಥಾಗುವುದೇ ಸದಾಚಾರವು ,ಸದಾಚಾರ : ಸತ್ಯಶುದ್ಧ ಕಾಯಕದಿಂದ ಬಂದದ್ದರಲ್ಲಿ ಮಿಕ್ಕದ್ದನ್ನು ಸಮಾಜಕ್ಕೆ ನೀಡಿ ರಾಷ್ಟ್ರದ ಪ್ರಗತಿಗೆ ದುಡಿಯುವುದೇ ಸದಾಚಾರ</p><p> 3) ಶಿವಾಚಾರ : ಜಗದ ಜನರೆಲ್ಲರೂ ಒಂದೇ ಎಂಬ ಸಮತಾ ಭಾವನೆಯೇ ಶಿವಾಚಾರ . ಇಲ್ಲಿ ಪ್ರತಿಯೊಬ್ಬನ ಸಮತ್ವದ ಜೊತೆಗೆ ಸಮಾಜದ ಆಗು-ಹೋಗುಗಳ ಸಮತೋಲನವನ್ನು ಕಂಡುಕೊಳ್ಳಬಹುದು. ವರ್ಣ, ಜಾತಿ, ಆಶ್ರಮಗಳಲ್ಲಿಯ ಭೇದಭಾವವನ್ನು ಕಾಣಲಾಗುವುದಿಲ್ಲ ,ಶಿವಾಚಾರ : ಶಿವಭಕ್ತರಲ್ಲಿ ಜಾತೀಯತೆಯನ್ನು ಮಾಡದಿರುವುದೇ ಶಿವಾಚಾರ</p><p> 4) ಗಣಚಾರ : ಶಿವಾಚಾರಿಯದವನು ಶಿವನಿಂದೆಯ ಮಾಡಲಾಗದು. ಶಿವನಿಂದೆಯ ಕೇಳಲಾಗದು. ಪರಧರ್ಮವನ್ನು ಹೀಯಾಲಿಸದೆ, ಪರರನ್ನು ನಿಂದಿಸದೆ ಪರಶಿವನ ಮೆಚ್ಚುಗೆಯನ್ನು ಪಡೆಯಬೇಕು. ಇಂಥಪ್ಪ ವೀರಶೈವನು ಶಿವನಿಂದೆಯಂ ಕೇಳಿ ದೊಡೆ ಆ ಊರು, ದೇಶ, ಕೋಶಗಳನ್ನೆಲ್ಲ ತ್ಯಾಗ ಮಾಡಬಲ್ಲ ಮಹಾತ್ಯಾಗಿ ಅವನಗಿರಬೇಕು ,ಗಣಾಚಾರ : ಅನ್ಯಾಯ, ಅನೀತಿ, ಜಾತೀಯತೆಯ ವಿರುದ್ಧ ಹೋರಾಡುವದೇ ಗಣಾಚಾರ</p><p> 5) ಭ್ರುತ್ಯಾಚಾರ : 'ಎನಗಿಂತ ಕಿರಿಯರಿಲ್ಲ; ಶಿವಭಕ್ಥರಿಗಿಂಥ ಹಿರಿಯರಿಲ್ಲ ' ಎಂಬುದೇ ಭ್ರುತ್ಯಾಚಾರವು . ಭಕ್ತನು ಶರಣರಿದ್ದಲ್ಲಿಗೆ ಹೋಗಿ ಕಿಂಕರನಾಗಿ ತನ್ನ ತನು , ಮನ , ಧನಗಳನ್ನು ಅರ್ಪಿಸಬೇಕು . ಶಿವಭಕ್ತರ ವಿಚಾರದಲ್ಲಿ ವಿನಯಶೀಲನಾಗಿರಬೇಕು, ಭ್ರುತ್ಯಾಚಾರ : ಸಮಾಜದ ಹಿತಕ್ಕಾಗಿ, ಕಿಂಕರನಾಗಿ ಸೇವೆ ಮಾಡುವುದೇ ಭ್ರುತ್ಯಾಚಾರ</p>.<p> <strong>ಷಟ್ಸ್ಥಲಗಳೊಂದಿಗೆ ಮಹಾ ಮುಕ್ತಿಯನೈದುವ ಸಾಧನೆ:</strong></p><p>1) ಭಕ್ತಸ್ಥಲ- ಯಮ ಮತ್ತು ನಿಯಮ : (ಈ ಹಂತದಲ್ಲಿ ಸಾಧಕನು ಭಕ್ತಿ ಮತ್ತು ಶ್ರದ್ಧೆಗಳನ್ನು ಅಳವಡಿಸಿಕೊಳ್ಳುತ್ತಾನೆ.)</p><p>2) ಮಹೇಶ್ವರಸ್ಥಲ- ನಿಯಮ ಮತ್ತು ಆಸನ : (ಈ ಹಂತದಲ್ಲಿ ಸಾಧಕನಲ್ಲಿ ತತ್ವ ನಿಷ್ಠೆ ಅಳವಟ್ಟು ಗಟ್ಟಿಗೊಳ್ಳುವುದು.)</p><p>3) ಪ್ರಸಾದಿಸ್ಥಲ- ಪ್ರತ್ಯಾಹಾರ : (ಈ ಹಂತದಲ್ಲಿ ಸಾಧಕನು ಜೀವನವನ್ನು ದೇವರಿತ್ತ ಪ್ರಸಾದ, ಜಗತ್ತೆಲ್ಲವೂ ಪ್ರಸಾದವೆಂದು ಭಾವಿಸಿ ಅನುಭವಿಸುತ್ತಾನೆ.)</p><p>4) ಪ್ರಾಣಲಿಂಗಿಸ್ಥಲ- ಪ್ರಾಣಾಯಾಮ ಮತ್ತು ಧ್ಯಾನ : (ಈ ಹಂತದಲ್ಲಿ ಸಾಧಕನು ಪ್ರಾಣದಲ್ಲಿ ದೇವರನ್ನು ಕಾಣುವನು, ಅಂತಃಕರಣಗಳು ಪರಿಶುದ್ಧಗೊಂಡು ದೈವೀಮಯವಾಗುವ ಸ್ಥಿತಿ.)</p><p>5) ಶರಣಸ್ಥಲ- ಧಾರಣ : (ದೇವರು ತನ್ನೊಳಗೇ ಇದ್ದಾನೆ, ಅಖಂಡ ಸೃಷ್ಟಿಯಲ್ಲೂ ಇದ್ದಾನೆ ಹಾಗಾಗಿ ಜಗತ್ತು ಬೇರೆಯಲ್ಲ ನಾನು ಬೇರೆಯಲ್ಲ ಎಂಬ ಭಾವ ಬಲಿಯುವುದು.)</p><p>6) ಐಕ್ಯಸ್ಥಲ- ಸಮಾಧಿ : (ನಿಶ್ಚಿಂತ ನಿಜವನ್ನು ಒಡಗೂಡುವ ಸ್ಥಿತಿಯೇ ಐಕ್ಯ)</p><p>ಮೇಲ್ಕಂಡ ಅಷ್ಟಾವರಣಗಳು ಅಂಗವಾಗಿ, ಪಂಚಾಚಾರಗಳು ಪ್ರಾಣವಾಗಿ, ಷಟ್ಸ್ಥಲಗಳು ಅತ್ಮವಾಗಿಸಿ ಸಾಧನೆಗೈದ ಮಹಾ ಲಿಂಗೈಕ್ಯನಪ್ಪನು ಸ್ವಯ ತಾನಪ್ಪನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>