<blockquote>ಸಮಾಜದ ಮುಖ್ಯವಾಹಿನಿಯಲ್ಲಿ ಸೇರಬೇಕೆಂದು ಅರಣ್ಯವಾಸಿಗಳು ಬಯಸಿದಲ್ಲಿ, ಅವರ ಇಚ್ಛೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಸಮರ್ಪಕ ಪುನರ್ವಸತಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿದ್ದಲ್ಲಿ ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ.</blockquote>.<p>ಭಾರತದ ವಿಸ್ತೀರ್ಣದಲ್ಲಿ ಶೇ 4ರಷ್ಟಿರುವ ಸಂರಕ್ಷಿತ ಅರಣ್ಯ ಪ್ರದೇಶವು ದೇಶದ 150 ಕೋಟಿ ಜನರ ಜೀವ–ಜೀವನಕ್ಕೆ ಆಧಾರವಾಗಿದೆ. ಶುದ್ಧ ಗಾಳಿ, ನೀರು, ಆಹಾರಭದ್ರತೆ ಇತ್ಯಾದಿಗಳು ದೊರಕುತ್ತಿವೆ. ಶೇ 3ರಷ್ಟು ಸಂರಕ್ಷಿತ ಪ್ರದೇಶಗಳು ಇವತ್ತು ಅಪಾಯವನ್ನು ಎದುರಿಸುತ್ತಿವೆ. ಭವಿಷ್ಯದ ದೃಷ್ಟಿಯಿಂದ ಇವುಗಳ ಸಂರಕ್ಷಣೆ ಹಾಗೂ ನಿರ್ವಹಣೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯವಾಸಿಗಳ ಪುನರ್ವಸತಿ ಪ್ರಕ್ರಿಯೆಗೆ ವಿಶೇಷ ಮಹತ್ವವಿದೆ.</p>.<p>ಅರಣ್ಯವಾಸಿ ಕುಟುಂಬಗಳು ತಾವಾಗಿಯೇ ಮುಂದೆ ಬಂದು ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನದಿಂದ ಹೊರಹೋಗಲು ಇಚ್ಛಿಸಿದರೆ, ಆ ಕುಟುಂಬಗಳನ್ನು ಅವರ ನೆಲೆಯಿಂದ ಹೊರತರುವ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ಕ್ರಮಗಳಿವೆ: ಸ್ವಯಂಪ್ರೇರಿತ ಸ್ಥಳಾಂತರ ಮತ್ತು ಸ್ವಯಂಪ್ರೇರಿತ ಪುನರ್ವಸತಿ. ಸ್ವಯಂಪ್ರೇರಿತ ಸ್ಥಳಾಂತರ ಎಂದರೆ, ಪರಿಹಾರವನ್ನು ನಗದಿನ ರೂಪದಲ್ಲಿ ಪಡೆದು ತಾವಾಗಿಯೇ ನೆಲೆ ಕಂಡುಕೊಳ್ಳುವುದು. ಇದರಲ್ಲೂ ಎರಡು ಆಯ್ಕೆಗಳಿವೆ. ಒಂದನೆಯದು, ಪ್ರತಿ ಕುಟುಂಬಕ್ಕೆ ₹15 ಲಕ್ಷದ ಪ್ಯಾಕೇಜ್. ಈ ಪದ್ಧತಿಯಲ್ಲಿ, 18 ವರ್ಷ ಮೇಲ್ಪಟ್ಟ ಮಕ್ಕಳನ್ನು ಒಂದು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿ ಅವರಿಗೂ ಪ್ರತ್ಯೇಕ ಪ್ಯಾಕೇಜ್ ನೀಡಲಾಗುತ್ತದೆ. ಇದರಿಂದ ಅವಿಭಕ್ತ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಎರಡನೆಯ ವಿಧಾನದಲ್ಲಿ, ಸ್ಥಿರಾಸ್ತಿಗಳ ಮೌಲ್ಯಮಾಪನ ಮಾಡಿ, ಪ್ಯಾಕೇಜ್ ಮೊತ್ತ ನಿರ್ಧರಿಸಲಾಗುತ್ತದೆ. ಒಂದು ಕುಟುಂಬಕ್ಕೆ ಈಗ ಇರುವ ಜಮೀನಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದರೆ, ಆ ಕುಟುಂಬಕ್ಕೆ ನಗದು ಪರಿಹಾರ ನೀಡುವ ಬದಲು, ಆ ಜಮೀನಿಗೆ ತಕ್ಕ ಪರಿಹಾರ ನಿಗದಿ ಮಾಡಿ, ಅವರನ್ನು ಬೇರೆ ಕಡೆ ಸ್ಥಳಾಂತರಿಸುವುದು. ಜಮೀನಿಗೆ ಸರಿಯಾದ ಮೌಲ್ಯ ನಿರ್ಧರಿಸಿ ಸ್ಥಳಾಂತರ ಮಾಡುವ ಕ್ರಮ ಆ ಕುಟುಂಬದ ಸ್ವತ್ತಿಗೆ ನ್ಯಾಯ ಒದಗಿಸುತ್ತದೆ.</p>.<p>ಪುನರ್ವಸತಿಗೊಳ್ಳುವ ಕುಟುಂಬಗಳಿಗೆ ಹೊಸ ಸ್ಥಳದಲ್ಲಿ ಬದುಕು ಕಟ್ಟಿಕೊಳ್ಳಲು ಅಗತ್ಯ ಸೌಲಭ್ಯ ಮತ್ತು ಸಂಪನ್ಮೂಲ ಒದಗಿಸುವುದನ್ನು ‘ಪುನರ್ವಸತಿ ಪ್ರಕ್ರಿಯೆ’ ಎನ್ನಬಹುದು. ಇಲ್ಲಿಯೂ ಎರಡು ಆಯ್ಕೆಗಳಿವೆ. ಮೊದಲನೆಯದು, ಪುನರ್ವಸತಿ ಗೊಳ್ಳುವ ಕುಟುಂಬ ‘ಜಮೀನು ಬೇಕು’ ಎಂದು ಬೇಡಿಕೆ ಇಟ್ಟಲ್ಲಿ, ಅರಣ್ಯೇತರ ಪ್ರದೇಶದಲ್ಲಿ ಸರ್ಕಾರದ ಬಳಿ ಇರುವ ಕಂದಾಯ ಜಮೀನನ್ನು ಗುರ್ತಿಸಿ ಅವರಿಗೆ ಒದಗಿಸುವುದು. ಕುಟುಂಬ ತನ್ನ ಹಿಂದಿನ ಕೃಷಿ ಮತ್ತು ಜೀವನವಿಧಾನಕ್ಕೆ ಅನುಗುಣವಾದ ಭೂ ಒಡೆತನ ಪಡೆಯಬಹುದು. ಎರಡನೆಯ ಆಯ್ಕೆ: ಕಂದಾಯ ಜಮೀನು ಲಭ್ಯವಿಲ್ಲದ ಸಂದರ್ಭದಲ್ಲಿ, ಅಭಯಾರಣ್ಯದ ಅಂಚಿನಲ್ಲಿರುವ ಕಡಿಮೆ ಮಹತ್ವದ ಅರಣ್ಯ ಭೂಮಿಯನ್ನು ಅರಣ್ಯ ಸ್ಥಾನಮಾನದಿಂದ ರದ್ದು ಮಾಡಿ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ನೀಡುವುದು. ಈ ಕ್ರಮ ಕೈಗೊಳ್ಳುವ ಮೊದಲು, ಆ ಭೂಮಿ ವನ್ಯಜೀವಿ ಆವಾಸಕ್ಕೆ ನಿರ್ಣಾಯಕವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾಡು ಮತ್ತು ಕಾಡಿನ ನಡುವೆ ಸಮನ್ವಯ ಸಾಧಿಸುವ ಪ್ರಕ್ರಿಯೆಯು ಬಲವಂತದಿಂದ ಕೂಡಿರಬಾರದು. </p>.<p>ಭಾರತದ ಅರಣ್ಯ ಸಂರಕ್ಷಣೆಯ ಕಾನೂನು, ವನ್ಯಜೀವಿ ಸಂರಕ್ಷಣೆ ಮತ್ತು ಸ್ವಇಚ್ಛೆಯಿಂದ ಸ್ಥಳಾಂತರಗೊಳ್ಳುವ ಸಮುದಾಯಗಳ ಭೂ ಒಡೆತನ, ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ 2002ರಿಂದ 2019ರವರೆಗಿನ ಹದಿನೇಳು ವರ್ಷ ಗಳಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಸಶಕ್ತ ಸಮಿತಿ (ಸಿಇಸಿ), ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಲ್ಕು ಸ್ವತಂತ್ರ ಸಂಸ್ಥೆಗಳ ನಡುವೆ ಐತಿಹಾಸಿಕ ಎನ್ನಬಹುದಾದ ಅನೇಕ ಪ್ರಕ್ರಿಯೆಗಳು ನಡೆದಿವೆ.</p>.<p>ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅಂಧಾರಿ ವನ್ಯಜೀವಿ ಅಭಯಾರಣ್ಯದೊಳಗೆ ಮೂರು ಗ್ರಾಮಗಳ ನಿವಾಸಿಗಳನ್ನು ಸ್ವಇಚ್ಛೆಗೆ ಅನುಗುಣವಾಗಿ ಸ್ಥಳಾಂತರಿಸಲು, 550 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರ ಸರ್ಕಾರ 2002ರ ಜನವರಿಯಲ್ಲಿ ನೀಡಿದ ಷರತ್ತುಬದ್ಧ ಒಪ್ಪಿಗೆ ಭವಿಷ್ಯದ ಸಂಘರ್ಷಕ್ಕೆ ಕಾರಣವಾಯಿತು. ಅರಣ್ಯ ಭೂಮಿಯ ಕಾನೂನು ಸ್ಥಾನಮಾನ ಬದಲು ಮಾಡದೆ, ಸ್ವಇಚ್ಛೆಯ ಪುನರ್ವಸತಿ ಮಾಡುವ ಕ್ರಮವೇ ಸಂಘರ್ಷಕ್ಕೆ ಕಾರಣ. ಮುಂದಿನ ಆದೇಶ ಬರುವ ತನಕ ಯಾವ ಅರಣ್ಯ, ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ಕಡಿತಗೊಳಿಸಕೂಡದು ಎಂಬುದು ಷರತ್ತಿನ ಇನ್ನೊಂದು ಪ್ರಮುಖ ಭಾಗ. </p>.<p>ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಷರತ್ತಾಗಿದ್ದರೂ, ವಾಸ್ತವದಲ್ಲಿ ಪುನರ್ವಸತಿಗೊಳ್ಳುವ ಕುಟುಂಬಗಳ ಬದುಕು ಅನಿಶ್ಚಿತತೆಗೆ ಸಿಲುಕಲು ಕಾರಣವಾಯಿತು. ಏಕೆಂದರೆ ಅರಣ್ಯ ಭೂಮಿಯಲ್ಲಿ ನಿರ್ಮಿಸಿದ ಮನೆ, ಅಂಗಳ, ಹೊಲ ಯಾವುದೂ ವೈಯಕ್ತಿಕ ಹಕ್ಕಿನಡಿ ದಾಖಲಾಗಲಿಲ್ಲ. ಭೂ ದಾಖಲೆ, ಹಕ್ಕುಪತ್ರ, ಅಭಿವೃದ್ಧಿ ಯೋಜನೆ ಎಲ್ಲವೂ ಅವರ ಪಾಲಿಗೆ ಮರೀಚಿಕೆಯಾಯಿತು. </p>.<p>ಅರಣ್ಯಭೂಮಿ ಎಂಬ ಕಾನೂನು ಸ್ಥಾನಮಾನ ಉಳಿಸಿಕೊಂಡಲ್ಲಿ, ಪುನರ್ವಸತಿಗೊಂಡ ಅರಣ್ಯವಾಸಿ ಸಮುದಾಯಗಳು ಭೂ ಮಾಲೀಕತ್ವ ಪಡೆಯು ವಂತಿಲ್ಲ. ಮೂಲ ಸೌಕರ್ಯಗಳು ಸಿಗುವುದಿಲ್ಲ. ಸ್ವಯಂಪ್ರೇರಿತವಾಗಿ ಪುನರ್ವಸತಿಗೊಳ್ಳಲು ಬಯಸು ತ್ತಿರುವ ಸಮುದಾಯಗಳು ಹೊರಹೋಗಲು ಮನಸ್ಸು ಮಾಡುವುದಿಲ್ಲ. ಅರಣ್ಯ ಸಂರಕ್ಷಣೆಗಾಗಿ ಮಾಡಿದ ಕ್ರಮ ಸ್ವತಃ ಸಂರಕ್ಷಣೆಗೆ ಅಡ್ಡಿಯಾಗುವ ವೈರುಧ್ಯವಿದು.</p>.<p>ಸಿಇಸಿಯು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, 2006ರ ಸೆಪ್ಟೆಂಬರ್ 28ರಂದು ವರದಿ ಸಲ್ಲಿಸಿತು. ಅರಣ್ಯ ಸ್ಥಾನಮಾನ ಬದಲಾಯಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡುವುದರ ಬಗ್ಗೆ ಮರುಪರಿಶೀಲಿಸಬೇಕು ಎಂದು ವಿನಂತಿ ಮಾಡಿತು.</p>.<p>2008ರ ನವೆಂಬರ್ 21ರಂದು ಸಿಇಸಿ ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ನೀಡಿತು. ಅಂಧಾರಿ ಅಭಯಾರಣ್ಯದ ಮೂರು ಗ್ರಾಮಗಳ ಸ್ವಯಂಪ್ರೇರಿತ ಸ್ಥಳಾಂತರಕ್ಕಾಗಿ ಬಳಸಲಾದ ಅರಣ್ಯದ ಕಾನೂನು ಸ್ಥಾನಮಾನವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಲು ಆದೇಶ ನೀಡಿತು. ಅರಣ್ಯ ಪ್ರದೇಶ ವಿಸ್ತರಿಸುವ ಉದ್ದೇಶದ ಜೊತೆಗೆ ಅಭಯಾರಣ್ಯವಾಸಿಗಳ ಸ್ವಯಂಪ್ರೇರಿತ ಪುನರ್ವಸತಿ ಯನ್ನು ಸಮನ್ವಯಗೊಳಿಸುವ, ಉತ್ತೇಜಿಸುವ ಅಂಶ ಗಳು ಸದರಿ ತೀರ್ಪಿನಲ್ಲಿದ್ದವು. ಆದೇಶ ಬರೀ ಮೂರು ಗ್ರಾಮಗಳಿಗೆ ಸೀಮಿತವಾಗಿದೆ ಎಂಬ ಷರತ್ತೂ ಇತ್ತು. </p>.<p>ಈ ತೀರ್ಪನ್ನು ಮಾನದಂಡವಾಗಿಟ್ಟುಕೊಂಡು 2009ರ ಸೆಪ್ಟೆಂಬರ್ನಲ್ಲಿ ಕೇಂದ್ರ ಪರಿಸರ ಸಚಿವಾಲಯ ಸರ್ಕಾರಿ ಆದೇಶ ಹೊರಡಿಸಿತು. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಮತ್ತು ಹುಲಿ ಸಂರಕ್ಷಿತ ಅರಣ್ಯದಿಂದ ಸ್ವಇಚ್ಛೆಯಿಂದ ಸ್ಥಳಾಂತರ ಗೊಂಡ ಎಲ್ಲ ಗ್ರಾಮಗಳ ಭೂಹಕ್ಕಿಗೂ ಇದು ಅನ್ವಯವಾಗಲಿದೆ. ನ್ಯಾಯಾಲಯ ನಿಶ್ಚಿತ ಪ್ರಕರಣಕ್ಕೆ ನೀಡಿದ ತೀರ್ಪನ್ನು ಕಾರ್ಯಾಂಗ ವ್ಯಾಪಕ ಅರ್ಥದಲ್ಲಿ ಅನ್ವಯಿಸಿದ ಕ್ರಮ ತರ್ಕಬದ್ಧ ಮಾರ್ಗವೆಂದು ಪರಿಗಣಿಸಬಹುದು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಮಿತಿಯನ್ನು ಕಾರ್ಯಾಂಗ ಮೀರಿದೆಯೇ ಎನ್ನುವ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿತು.</p>.<p>2015ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಧ್ಯಂತರ ಅರ್ಜಿ ಸಲ್ಲಿಸಿ ಕೆಲವು ಆಘಾತಕಾರಿ ಅಂಶಗಳನ್ನು ಬೆಳಕಿಗೆ ತಂದಿತು. ಅಭಯಾರಣ್ಯಗಳ ಕೇಂದ್ರ ಭಾಗಗಳಲ್ಲಿ ವಾಸಿಸುತ್ತಿದ್ದ ದೇಶದ 751 ಗ್ರಾಮಗಳನ್ನು ಸ್ಥಳಾಂತರಿಸಲು ಗುರ್ತಿಸಲಾಗಿತ್ತು. ಅದರಲ್ಲಿ 177 ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿತ್ತು. 122 ಗ್ರಾಮಗಳು ಅರಣ್ಯಪ್ರದೇಶದಲ್ಲೇ ಪುನರ್ವಸತಿಗೊಂಡಿದ್ದವು. 122 ಗ್ರಾಮಗಳ ಪೈಕಿ, 42 ಗ್ರಾಮಗಳ ಭೂಮಿ ಮಾತ್ರ ಅರಣ್ಯ ಸ್ಥಾನಮಾನದಿಂದ ಮುಕ್ತವಾಗಿತ್ತು. 80 ಗ್ರಾಮಗಳ ಜನ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು, ಒಡೆತನವಿಲ್ಲದೆ ಬದುಕು ನಡೆಸುತ್ತಿದ್ದರು ಎಂಬುದು ಬಹಿರಂಗವಾಯಿತು.</p>.<p>2018ರ ಡಿಸೆಂಬರ್ನಲ್ಲಿ ಸಿಇಸಿಯು ತನ್ನ 50ನೇ ವರದಿ ಸಲ್ಲಿಸಿ, ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಸಲ್ಲಿಸಿದ 2008ರ ಆದೇಶದ ವ್ಯಾಪ್ತಿಯನ್ನು ದೇಶದ ಎಲ್ಲ ಸ್ವಇಚ್ಛೆ ಸ್ಥಳಾಂತರ ಪ್ರಕರಣ ಗಳಿಗೆ ವಿಸ್ತರಿಸಬೇಕೆಂದು ಹೇಳಿತು. ಇದರಲ್ಲಿ ಎಂಟು ನಿಬಂಧನೆಗಳನ್ನು ಅಡಕಗೊಳಿಸಿತು. ಸ್ವಯಂಪ್ರೇರಿತ ಪುನರ್ವಸತಿಯನ್ನು ಅರಣ್ಯದ ಹೊರ ಅಂಚಿನಲ್ಲಿ ಮಾಡಬೇಕು. ವನ್ಯಜೀವಿ ಆವಾಸ ಸ್ಥಾನವು ಛಿದ್ರಗೊಳ್ಳಬಾರದು, ಅರಣ್ಯದ ಒಳಗೆ ತೆರವುಗೊಳಿಸಲಾದ ಭೂಮಿಯು ಸಂರಕ್ಷಿತ ವ್ಯಾಪ್ತಿಗೆ ಸೇರಬೇಕು. ಲಭ್ಯವಿರುವ ಕಂದಾಯ ಭೂಮಿಗೆ ಆದ್ಯತೆ ನೀಡಬೇಕು ಮುಂತಾದವು. 2019ರ ಜ. 28ರಂದು ಸುಪ್ರೀಂ ಕೋರ್ಟ್ ಈ ವರದಿಯನ್ನು ಪರಿಗಣಿಸಿ ಪೂರಕ ತೀರ್ಪು ನೀಡಿತು. ಶಿವಮೊಗ್ಗದ ಶೆಟ್ಟಿಹಳ್ಳಿ ಹಾಗೂ ಮಲೆಮಹದೇಶ್ವರ ಅಭಯಾರಣ್ಯದ ಚಂಗಡಿ ಗ್ರಾಮಗಳ ಪುನರ್ವಸತಿಗಾಗಿ ಕಾಯುತ್ತಿರುವ ಅರಣ್ಯವಾಸಿಗಳಿಗೆ ಈ ಆದೇಶ ಪೂರಕವಾಗಿದೆ.</p>.<p>2000ರಲ್ಲಿನ ಆದೇಶ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಭದ್ರತೆ ನೀಡಿತು. 2006ರ ಸಿಇಸಿ ನೀಡಿದ ವರದಿ ಮಾನವೀಯ ಅಂಶಗಳನ್ನು ಎತ್ತಿ ಹಿಡಿಯಿತು. 2008ರ ತೀರ್ಪು ಎರಡನ್ನೂ ಒಳಗೊಳ್ಳುವ ಪ್ರಯತ್ನ ಮಾಡಿತು. 2018–19ರಲ್ಲಿ ನಡೆದ ಪ್ರಕ್ರಿಯೆಗಳು ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿದವು.</p>.<p>ಕೊನೆಯದಾಗಿ, ಸಮಾಜದ ಮುಖ್ಯವಾಹಿನಿ ಯಲ್ಲಿ ಸೇರಬೇಕೆಂಬ ಅರಣ್ಯವಾಸಿಗಳ ಇಚ್ಛೆಯನ್ನು ಸರ್ಕಾರ ಮತ್ತು ಅರಣ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆ ಮೇರೆಗೆ ಈ ಪ್ರಕ್ರಿಯೆಗಳನ್ನು ತುರ್ತಾಗಿ ಜಾರಿ ಮಾಡಲು ಮುಂದಾಗಬೇಕು. ಪ್ರತಿ ಕುಟುಂಬದ ಪರಿಸ್ಥಿತಿ ಅವಲೋಕಿಸಿ, ಸೂಕ್ತವಾದದ್ದನ್ನು ಆಯ್ಕೆ ಮಾಡಿ, ಕಾರ್ಯರೂಪಕ್ಕೆ ತರಬೇಕು. ಸ್ವಯಂಪ್ರೇರಿತ ಸ್ಥಳಾಂತರ ಮತ್ತು ಪುನರ್ವಸತಿ ಯಶಸ್ವಿಯಾಗಲು, ಭೂ ಒಡೆತನ, ಮೂಲಸೌಕರ್ಯ, ಜೀವನೋಪಾಯದ ಭರವಸೆ ನೀಡಲು ಸರ್ಕಾರ ಮುಂದಾದಲ್ಲಿ, ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ. ವನ್ಯಧಾಮ ಗಳಿಗೂ ಭದ್ರತೆ ಸಿಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಸಮಾಜದ ಮುಖ್ಯವಾಹಿನಿಯಲ್ಲಿ ಸೇರಬೇಕೆಂದು ಅರಣ್ಯವಾಸಿಗಳು ಬಯಸಿದಲ್ಲಿ, ಅವರ ಇಚ್ಛೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಸಮರ್ಪಕ ಪುನರ್ವಸತಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿದ್ದಲ್ಲಿ ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ.</blockquote>.<p>ಭಾರತದ ವಿಸ್ತೀರ್ಣದಲ್ಲಿ ಶೇ 4ರಷ್ಟಿರುವ ಸಂರಕ್ಷಿತ ಅರಣ್ಯ ಪ್ರದೇಶವು ದೇಶದ 150 ಕೋಟಿ ಜನರ ಜೀವ–ಜೀವನಕ್ಕೆ ಆಧಾರವಾಗಿದೆ. ಶುದ್ಧ ಗಾಳಿ, ನೀರು, ಆಹಾರಭದ್ರತೆ ಇತ್ಯಾದಿಗಳು ದೊರಕುತ್ತಿವೆ. ಶೇ 3ರಷ್ಟು ಸಂರಕ್ಷಿತ ಪ್ರದೇಶಗಳು ಇವತ್ತು ಅಪಾಯವನ್ನು ಎದುರಿಸುತ್ತಿವೆ. ಭವಿಷ್ಯದ ದೃಷ್ಟಿಯಿಂದ ಇವುಗಳ ಸಂರಕ್ಷಣೆ ಹಾಗೂ ನಿರ್ವಹಣೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯವಾಸಿಗಳ ಪುನರ್ವಸತಿ ಪ್ರಕ್ರಿಯೆಗೆ ವಿಶೇಷ ಮಹತ್ವವಿದೆ.</p>.<p>ಅರಣ್ಯವಾಸಿ ಕುಟುಂಬಗಳು ತಾವಾಗಿಯೇ ಮುಂದೆ ಬಂದು ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನದಿಂದ ಹೊರಹೋಗಲು ಇಚ್ಛಿಸಿದರೆ, ಆ ಕುಟುಂಬಗಳನ್ನು ಅವರ ನೆಲೆಯಿಂದ ಹೊರತರುವ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ಕ್ರಮಗಳಿವೆ: ಸ್ವಯಂಪ್ರೇರಿತ ಸ್ಥಳಾಂತರ ಮತ್ತು ಸ್ವಯಂಪ್ರೇರಿತ ಪುನರ್ವಸತಿ. ಸ್ವಯಂಪ್ರೇರಿತ ಸ್ಥಳಾಂತರ ಎಂದರೆ, ಪರಿಹಾರವನ್ನು ನಗದಿನ ರೂಪದಲ್ಲಿ ಪಡೆದು ತಾವಾಗಿಯೇ ನೆಲೆ ಕಂಡುಕೊಳ್ಳುವುದು. ಇದರಲ್ಲೂ ಎರಡು ಆಯ್ಕೆಗಳಿವೆ. ಒಂದನೆಯದು, ಪ್ರತಿ ಕುಟುಂಬಕ್ಕೆ ₹15 ಲಕ್ಷದ ಪ್ಯಾಕೇಜ್. ಈ ಪದ್ಧತಿಯಲ್ಲಿ, 18 ವರ್ಷ ಮೇಲ್ಪಟ್ಟ ಮಕ್ಕಳನ್ನು ಒಂದು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿ ಅವರಿಗೂ ಪ್ರತ್ಯೇಕ ಪ್ಯಾಕೇಜ್ ನೀಡಲಾಗುತ್ತದೆ. ಇದರಿಂದ ಅವಿಭಕ್ತ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಎರಡನೆಯ ವಿಧಾನದಲ್ಲಿ, ಸ್ಥಿರಾಸ್ತಿಗಳ ಮೌಲ್ಯಮಾಪನ ಮಾಡಿ, ಪ್ಯಾಕೇಜ್ ಮೊತ್ತ ನಿರ್ಧರಿಸಲಾಗುತ್ತದೆ. ಒಂದು ಕುಟುಂಬಕ್ಕೆ ಈಗ ಇರುವ ಜಮೀನಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದರೆ, ಆ ಕುಟುಂಬಕ್ಕೆ ನಗದು ಪರಿಹಾರ ನೀಡುವ ಬದಲು, ಆ ಜಮೀನಿಗೆ ತಕ್ಕ ಪರಿಹಾರ ನಿಗದಿ ಮಾಡಿ, ಅವರನ್ನು ಬೇರೆ ಕಡೆ ಸ್ಥಳಾಂತರಿಸುವುದು. ಜಮೀನಿಗೆ ಸರಿಯಾದ ಮೌಲ್ಯ ನಿರ್ಧರಿಸಿ ಸ್ಥಳಾಂತರ ಮಾಡುವ ಕ್ರಮ ಆ ಕುಟುಂಬದ ಸ್ವತ್ತಿಗೆ ನ್ಯಾಯ ಒದಗಿಸುತ್ತದೆ.</p>.<p>ಪುನರ್ವಸತಿಗೊಳ್ಳುವ ಕುಟುಂಬಗಳಿಗೆ ಹೊಸ ಸ್ಥಳದಲ್ಲಿ ಬದುಕು ಕಟ್ಟಿಕೊಳ್ಳಲು ಅಗತ್ಯ ಸೌಲಭ್ಯ ಮತ್ತು ಸಂಪನ್ಮೂಲ ಒದಗಿಸುವುದನ್ನು ‘ಪುನರ್ವಸತಿ ಪ್ರಕ್ರಿಯೆ’ ಎನ್ನಬಹುದು. ಇಲ್ಲಿಯೂ ಎರಡು ಆಯ್ಕೆಗಳಿವೆ. ಮೊದಲನೆಯದು, ಪುನರ್ವಸತಿ ಗೊಳ್ಳುವ ಕುಟುಂಬ ‘ಜಮೀನು ಬೇಕು’ ಎಂದು ಬೇಡಿಕೆ ಇಟ್ಟಲ್ಲಿ, ಅರಣ್ಯೇತರ ಪ್ರದೇಶದಲ್ಲಿ ಸರ್ಕಾರದ ಬಳಿ ಇರುವ ಕಂದಾಯ ಜಮೀನನ್ನು ಗುರ್ತಿಸಿ ಅವರಿಗೆ ಒದಗಿಸುವುದು. ಕುಟುಂಬ ತನ್ನ ಹಿಂದಿನ ಕೃಷಿ ಮತ್ತು ಜೀವನವಿಧಾನಕ್ಕೆ ಅನುಗುಣವಾದ ಭೂ ಒಡೆತನ ಪಡೆಯಬಹುದು. ಎರಡನೆಯ ಆಯ್ಕೆ: ಕಂದಾಯ ಜಮೀನು ಲಭ್ಯವಿಲ್ಲದ ಸಂದರ್ಭದಲ್ಲಿ, ಅಭಯಾರಣ್ಯದ ಅಂಚಿನಲ್ಲಿರುವ ಕಡಿಮೆ ಮಹತ್ವದ ಅರಣ್ಯ ಭೂಮಿಯನ್ನು ಅರಣ್ಯ ಸ್ಥಾನಮಾನದಿಂದ ರದ್ದು ಮಾಡಿ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ನೀಡುವುದು. ಈ ಕ್ರಮ ಕೈಗೊಳ್ಳುವ ಮೊದಲು, ಆ ಭೂಮಿ ವನ್ಯಜೀವಿ ಆವಾಸಕ್ಕೆ ನಿರ್ಣಾಯಕವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾಡು ಮತ್ತು ಕಾಡಿನ ನಡುವೆ ಸಮನ್ವಯ ಸಾಧಿಸುವ ಪ್ರಕ್ರಿಯೆಯು ಬಲವಂತದಿಂದ ಕೂಡಿರಬಾರದು. </p>.<p>ಭಾರತದ ಅರಣ್ಯ ಸಂರಕ್ಷಣೆಯ ಕಾನೂನು, ವನ್ಯಜೀವಿ ಸಂರಕ್ಷಣೆ ಮತ್ತು ಸ್ವಇಚ್ಛೆಯಿಂದ ಸ್ಥಳಾಂತರಗೊಳ್ಳುವ ಸಮುದಾಯಗಳ ಭೂ ಒಡೆತನ, ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ 2002ರಿಂದ 2019ರವರೆಗಿನ ಹದಿನೇಳು ವರ್ಷ ಗಳಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಸಶಕ್ತ ಸಮಿತಿ (ಸಿಇಸಿ), ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಲ್ಕು ಸ್ವತಂತ್ರ ಸಂಸ್ಥೆಗಳ ನಡುವೆ ಐತಿಹಾಸಿಕ ಎನ್ನಬಹುದಾದ ಅನೇಕ ಪ್ರಕ್ರಿಯೆಗಳು ನಡೆದಿವೆ.</p>.<p>ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅಂಧಾರಿ ವನ್ಯಜೀವಿ ಅಭಯಾರಣ್ಯದೊಳಗೆ ಮೂರು ಗ್ರಾಮಗಳ ನಿವಾಸಿಗಳನ್ನು ಸ್ವಇಚ್ಛೆಗೆ ಅನುಗುಣವಾಗಿ ಸ್ಥಳಾಂತರಿಸಲು, 550 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರ ಸರ್ಕಾರ 2002ರ ಜನವರಿಯಲ್ಲಿ ನೀಡಿದ ಷರತ್ತುಬದ್ಧ ಒಪ್ಪಿಗೆ ಭವಿಷ್ಯದ ಸಂಘರ್ಷಕ್ಕೆ ಕಾರಣವಾಯಿತು. ಅರಣ್ಯ ಭೂಮಿಯ ಕಾನೂನು ಸ್ಥಾನಮಾನ ಬದಲು ಮಾಡದೆ, ಸ್ವಇಚ್ಛೆಯ ಪುನರ್ವಸತಿ ಮಾಡುವ ಕ್ರಮವೇ ಸಂಘರ್ಷಕ್ಕೆ ಕಾರಣ. ಮುಂದಿನ ಆದೇಶ ಬರುವ ತನಕ ಯಾವ ಅರಣ್ಯ, ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ಕಡಿತಗೊಳಿಸಕೂಡದು ಎಂಬುದು ಷರತ್ತಿನ ಇನ್ನೊಂದು ಪ್ರಮುಖ ಭಾಗ. </p>.<p>ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಷರತ್ತಾಗಿದ್ದರೂ, ವಾಸ್ತವದಲ್ಲಿ ಪುನರ್ವಸತಿಗೊಳ್ಳುವ ಕುಟುಂಬಗಳ ಬದುಕು ಅನಿಶ್ಚಿತತೆಗೆ ಸಿಲುಕಲು ಕಾರಣವಾಯಿತು. ಏಕೆಂದರೆ ಅರಣ್ಯ ಭೂಮಿಯಲ್ಲಿ ನಿರ್ಮಿಸಿದ ಮನೆ, ಅಂಗಳ, ಹೊಲ ಯಾವುದೂ ವೈಯಕ್ತಿಕ ಹಕ್ಕಿನಡಿ ದಾಖಲಾಗಲಿಲ್ಲ. ಭೂ ದಾಖಲೆ, ಹಕ್ಕುಪತ್ರ, ಅಭಿವೃದ್ಧಿ ಯೋಜನೆ ಎಲ್ಲವೂ ಅವರ ಪಾಲಿಗೆ ಮರೀಚಿಕೆಯಾಯಿತು. </p>.<p>ಅರಣ್ಯಭೂಮಿ ಎಂಬ ಕಾನೂನು ಸ್ಥಾನಮಾನ ಉಳಿಸಿಕೊಂಡಲ್ಲಿ, ಪುನರ್ವಸತಿಗೊಂಡ ಅರಣ್ಯವಾಸಿ ಸಮುದಾಯಗಳು ಭೂ ಮಾಲೀಕತ್ವ ಪಡೆಯು ವಂತಿಲ್ಲ. ಮೂಲ ಸೌಕರ್ಯಗಳು ಸಿಗುವುದಿಲ್ಲ. ಸ್ವಯಂಪ್ರೇರಿತವಾಗಿ ಪುನರ್ವಸತಿಗೊಳ್ಳಲು ಬಯಸು ತ್ತಿರುವ ಸಮುದಾಯಗಳು ಹೊರಹೋಗಲು ಮನಸ್ಸು ಮಾಡುವುದಿಲ್ಲ. ಅರಣ್ಯ ಸಂರಕ್ಷಣೆಗಾಗಿ ಮಾಡಿದ ಕ್ರಮ ಸ್ವತಃ ಸಂರಕ್ಷಣೆಗೆ ಅಡ್ಡಿಯಾಗುವ ವೈರುಧ್ಯವಿದು.</p>.<p>ಸಿಇಸಿಯು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, 2006ರ ಸೆಪ್ಟೆಂಬರ್ 28ರಂದು ವರದಿ ಸಲ್ಲಿಸಿತು. ಅರಣ್ಯ ಸ್ಥಾನಮಾನ ಬದಲಾಯಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡುವುದರ ಬಗ್ಗೆ ಮರುಪರಿಶೀಲಿಸಬೇಕು ಎಂದು ವಿನಂತಿ ಮಾಡಿತು.</p>.<p>2008ರ ನವೆಂಬರ್ 21ರಂದು ಸಿಇಸಿ ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ನೀಡಿತು. ಅಂಧಾರಿ ಅಭಯಾರಣ್ಯದ ಮೂರು ಗ್ರಾಮಗಳ ಸ್ವಯಂಪ್ರೇರಿತ ಸ್ಥಳಾಂತರಕ್ಕಾಗಿ ಬಳಸಲಾದ ಅರಣ್ಯದ ಕಾನೂನು ಸ್ಥಾನಮಾನವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಲು ಆದೇಶ ನೀಡಿತು. ಅರಣ್ಯ ಪ್ರದೇಶ ವಿಸ್ತರಿಸುವ ಉದ್ದೇಶದ ಜೊತೆಗೆ ಅಭಯಾರಣ್ಯವಾಸಿಗಳ ಸ್ವಯಂಪ್ರೇರಿತ ಪುನರ್ವಸತಿ ಯನ್ನು ಸಮನ್ವಯಗೊಳಿಸುವ, ಉತ್ತೇಜಿಸುವ ಅಂಶ ಗಳು ಸದರಿ ತೀರ್ಪಿನಲ್ಲಿದ್ದವು. ಆದೇಶ ಬರೀ ಮೂರು ಗ್ರಾಮಗಳಿಗೆ ಸೀಮಿತವಾಗಿದೆ ಎಂಬ ಷರತ್ತೂ ಇತ್ತು. </p>.<p>ಈ ತೀರ್ಪನ್ನು ಮಾನದಂಡವಾಗಿಟ್ಟುಕೊಂಡು 2009ರ ಸೆಪ್ಟೆಂಬರ್ನಲ್ಲಿ ಕೇಂದ್ರ ಪರಿಸರ ಸಚಿವಾಲಯ ಸರ್ಕಾರಿ ಆದೇಶ ಹೊರಡಿಸಿತು. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಮತ್ತು ಹುಲಿ ಸಂರಕ್ಷಿತ ಅರಣ್ಯದಿಂದ ಸ್ವಇಚ್ಛೆಯಿಂದ ಸ್ಥಳಾಂತರ ಗೊಂಡ ಎಲ್ಲ ಗ್ರಾಮಗಳ ಭೂಹಕ್ಕಿಗೂ ಇದು ಅನ್ವಯವಾಗಲಿದೆ. ನ್ಯಾಯಾಲಯ ನಿಶ್ಚಿತ ಪ್ರಕರಣಕ್ಕೆ ನೀಡಿದ ತೀರ್ಪನ್ನು ಕಾರ್ಯಾಂಗ ವ್ಯಾಪಕ ಅರ್ಥದಲ್ಲಿ ಅನ್ವಯಿಸಿದ ಕ್ರಮ ತರ್ಕಬದ್ಧ ಮಾರ್ಗವೆಂದು ಪರಿಗಣಿಸಬಹುದು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಮಿತಿಯನ್ನು ಕಾರ್ಯಾಂಗ ಮೀರಿದೆಯೇ ಎನ್ನುವ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿತು.</p>.<p>2015ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಧ್ಯಂತರ ಅರ್ಜಿ ಸಲ್ಲಿಸಿ ಕೆಲವು ಆಘಾತಕಾರಿ ಅಂಶಗಳನ್ನು ಬೆಳಕಿಗೆ ತಂದಿತು. ಅಭಯಾರಣ್ಯಗಳ ಕೇಂದ್ರ ಭಾಗಗಳಲ್ಲಿ ವಾಸಿಸುತ್ತಿದ್ದ ದೇಶದ 751 ಗ್ರಾಮಗಳನ್ನು ಸ್ಥಳಾಂತರಿಸಲು ಗುರ್ತಿಸಲಾಗಿತ್ತು. ಅದರಲ್ಲಿ 177 ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿತ್ತು. 122 ಗ್ರಾಮಗಳು ಅರಣ್ಯಪ್ರದೇಶದಲ್ಲೇ ಪುನರ್ವಸತಿಗೊಂಡಿದ್ದವು. 122 ಗ್ರಾಮಗಳ ಪೈಕಿ, 42 ಗ್ರಾಮಗಳ ಭೂಮಿ ಮಾತ್ರ ಅರಣ್ಯ ಸ್ಥಾನಮಾನದಿಂದ ಮುಕ್ತವಾಗಿತ್ತು. 80 ಗ್ರಾಮಗಳ ಜನ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು, ಒಡೆತನವಿಲ್ಲದೆ ಬದುಕು ನಡೆಸುತ್ತಿದ್ದರು ಎಂಬುದು ಬಹಿರಂಗವಾಯಿತು.</p>.<p>2018ರ ಡಿಸೆಂಬರ್ನಲ್ಲಿ ಸಿಇಸಿಯು ತನ್ನ 50ನೇ ವರದಿ ಸಲ್ಲಿಸಿ, ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಸಲ್ಲಿಸಿದ 2008ರ ಆದೇಶದ ವ್ಯಾಪ್ತಿಯನ್ನು ದೇಶದ ಎಲ್ಲ ಸ್ವಇಚ್ಛೆ ಸ್ಥಳಾಂತರ ಪ್ರಕರಣ ಗಳಿಗೆ ವಿಸ್ತರಿಸಬೇಕೆಂದು ಹೇಳಿತು. ಇದರಲ್ಲಿ ಎಂಟು ನಿಬಂಧನೆಗಳನ್ನು ಅಡಕಗೊಳಿಸಿತು. ಸ್ವಯಂಪ್ರೇರಿತ ಪುನರ್ವಸತಿಯನ್ನು ಅರಣ್ಯದ ಹೊರ ಅಂಚಿನಲ್ಲಿ ಮಾಡಬೇಕು. ವನ್ಯಜೀವಿ ಆವಾಸ ಸ್ಥಾನವು ಛಿದ್ರಗೊಳ್ಳಬಾರದು, ಅರಣ್ಯದ ಒಳಗೆ ತೆರವುಗೊಳಿಸಲಾದ ಭೂಮಿಯು ಸಂರಕ್ಷಿತ ವ್ಯಾಪ್ತಿಗೆ ಸೇರಬೇಕು. ಲಭ್ಯವಿರುವ ಕಂದಾಯ ಭೂಮಿಗೆ ಆದ್ಯತೆ ನೀಡಬೇಕು ಮುಂತಾದವು. 2019ರ ಜ. 28ರಂದು ಸುಪ್ರೀಂ ಕೋರ್ಟ್ ಈ ವರದಿಯನ್ನು ಪರಿಗಣಿಸಿ ಪೂರಕ ತೀರ್ಪು ನೀಡಿತು. ಶಿವಮೊಗ್ಗದ ಶೆಟ್ಟಿಹಳ್ಳಿ ಹಾಗೂ ಮಲೆಮಹದೇಶ್ವರ ಅಭಯಾರಣ್ಯದ ಚಂಗಡಿ ಗ್ರಾಮಗಳ ಪುನರ್ವಸತಿಗಾಗಿ ಕಾಯುತ್ತಿರುವ ಅರಣ್ಯವಾಸಿಗಳಿಗೆ ಈ ಆದೇಶ ಪೂರಕವಾಗಿದೆ.</p>.<p>2000ರಲ್ಲಿನ ಆದೇಶ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಭದ್ರತೆ ನೀಡಿತು. 2006ರ ಸಿಇಸಿ ನೀಡಿದ ವರದಿ ಮಾನವೀಯ ಅಂಶಗಳನ್ನು ಎತ್ತಿ ಹಿಡಿಯಿತು. 2008ರ ತೀರ್ಪು ಎರಡನ್ನೂ ಒಳಗೊಳ್ಳುವ ಪ್ರಯತ್ನ ಮಾಡಿತು. 2018–19ರಲ್ಲಿ ನಡೆದ ಪ್ರಕ್ರಿಯೆಗಳು ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿದವು.</p>.<p>ಕೊನೆಯದಾಗಿ, ಸಮಾಜದ ಮುಖ್ಯವಾಹಿನಿ ಯಲ್ಲಿ ಸೇರಬೇಕೆಂಬ ಅರಣ್ಯವಾಸಿಗಳ ಇಚ್ಛೆಯನ್ನು ಸರ್ಕಾರ ಮತ್ತು ಅರಣ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆ ಮೇರೆಗೆ ಈ ಪ್ರಕ್ರಿಯೆಗಳನ್ನು ತುರ್ತಾಗಿ ಜಾರಿ ಮಾಡಲು ಮುಂದಾಗಬೇಕು. ಪ್ರತಿ ಕುಟುಂಬದ ಪರಿಸ್ಥಿತಿ ಅವಲೋಕಿಸಿ, ಸೂಕ್ತವಾದದ್ದನ್ನು ಆಯ್ಕೆ ಮಾಡಿ, ಕಾರ್ಯರೂಪಕ್ಕೆ ತರಬೇಕು. ಸ್ವಯಂಪ್ರೇರಿತ ಸ್ಥಳಾಂತರ ಮತ್ತು ಪುನರ್ವಸತಿ ಯಶಸ್ವಿಯಾಗಲು, ಭೂ ಒಡೆತನ, ಮೂಲಸೌಕರ್ಯ, ಜೀವನೋಪಾಯದ ಭರವಸೆ ನೀಡಲು ಸರ್ಕಾರ ಮುಂದಾದಲ್ಲಿ, ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ. ವನ್ಯಧಾಮ ಗಳಿಗೂ ಭದ್ರತೆ ಸಿಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>