<p>ಮೇ 8ರಂದು, ಭಾರತ ಮೌನವಾಗಿಯೇ ಬಂಗಾಳ ಕೊಲ್ಲಿಯಲ್ಲಿ ಒಂದು ಶಕ್ತಿಶಾಲಿ ದೀರ್ಘ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ಇರುವ ರಕ್ಷಣಾ ತಜ್ಞರು ಕ್ಷಿಪಣಿಯ ಕುರಿತು ಚರ್ಚಿಸಲಾರಂಭಿಸಿದರು. ಈ ಉಡಾವಣೆಯನ್ನು ಚಂಡೀಪುರದ ಬಳಿಯ ಇಂಟಗ್ರೇಟೆಡ್ ಟೆಸ್ಟ್ ರೇಂಜ್ ಮತ್ತು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯನ್ನು ವಿಶೇಷವಾಗಿಸಿದ್ದು ಕೇವಲ ಕ್ಷಿಪಣಿ ಮಾತ್ರವಲ್ಲ, ಬದಲಿಗೆ ಅದರ ಸುತ್ತಲೂ ಹಬ್ಬಿರುವ ರಹಸ್ಯ ಮತ್ತು ಸಮುದ್ರ ಪ್ರದೇಶದಲ್ಲಿ ಅಸಹಜವಾಗಿ ಘೋಷಿಸಲಾಗಿದ್ದ 3,500 ಕಿಲೋಮೀಟರ್ ನಿಷೇಧಿತ ಪ್ರದೇಶ! ಈ ಬೆಳವಣಿಗೆಗಳು ಇದು ಕೇವಲ ಸಾಮಾನ್ಯವಾದ ಸಣ್ಣ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯಲ್ಲ, ಬದಲಿಗೆ ಕಾರ್ಯತಂತ್ರದ ಮಹತ್ವದ ಪರೀಕ್ಷೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿತ್ತು.</p><p>ಕುತೂಹಲಕರ ವಿಚಾರವೆಂದರೆ, ಭಾರತದ ಡಿಆರ್ಡಿಒ ಆಗಲಿ, ರಕ್ಷಣಾ ಸಚಿವಾಲಯವಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಜಾಗತಿಕ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತು. ಈ ಪರೀಕ್ಷೆ ನಡೆದ ಸಮಯವೂ ಅತ್ಯಂತ ಅರ್ಥಪೂರ್ಣವಾಗಿತ್ತು. ಮೇ 7, 2025ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರಗಾಮಿ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರದ ಮೊದಲ ವರ್ಷಾಚರಣೆಯ ಸಂದರ್ಭದಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆದಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇಂತಹ ಸಂದರ್ಭದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸುವ ಮೂಲಕ ಭಾರತ ತನ್ನ ನೆರೆಯ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳಿಗೆ ಬಲವಾದ ಸಂದೇಶವನ್ನು ರವಾನಿಸಿದ್ದು, ತನ್ನ ನಿಖರ ದಾಳಿ ಸಾಮರ್ಥ್ಯಕ್ಕೆ ದೀರ್ಘ ವ್ಯಾಪ್ತಿಯ ಕಾರ್ಯತಂತ್ರದ ಶಕ್ತಿಯೂ ಜೊತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.</p><p>ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋಗಳಲ್ಲಿ ಪೂರ್ವ ಭಾರತ ಮತ್ತು ಬಾಂಗ್ಲಾದೇಶದ ಒಂದಷ್ಟು ಭಾಗಗಳ ಮೇಲಿನ ಸಂಜೆಯ ಆಗಸದಲ್ಲಿ ಒಂದು ಹೊಳೆಯುವ ಬೆಳಕಿನ ರೇಖೆ ಸಾಗುವುದು ಕಂಡುಬಂದಿದೆ. ಒಡಿಶಾ, ಪಶ್ಚಿಮ ಬಂಗಾಳ, ಸೀತಾಕುಂಡ, ಮತ್ತು ಕಾಕ್ಸ್ ಬಜಾ಼ರಿನ ಜನರು ಅತ್ಯಂತ ಎತ್ತರದಲ್ಲಿ ದೀರ್ಘವಾದ ಬಿಳಿಯ ಹೊಗೆಯ ಗೆರೆಗಳನ್ನು (ಇವುಗಳನ್ನು ಕಾನ್ಟ್ರೇಲ್ಸ್ ಎಂದು ಕರೆಯಲಾಗುತ್ತದೆ) ನೋಡಿರುವುದಾಗಿ ಹೇಳಿದ್ದಾರೆ. ಇಂತಹ ಹೊಗೆ ಮತ್ತು ಬೆಳಕು ಸಾಮಾನ್ಯವಾಗಿ ಅತ್ಯಂತ ದೀರ್ಘ ವ್ಯಾಪ್ತಿಯ, ಪ್ರಬಲ ಕ್ಷಿಪಣಿಗಳ ಪರೀಕ್ಷೆಯ ಸಂದರ್ಭದಲ್ಲಿ ಕಾಣಿಸುತ್ತವೆ. ಕೆಲವು ವೀಡಿಯೋಗಳು ಅತ್ಯಂತ ವೇಗವಾಗಿ ಹಾರಾಡುವ ಕ್ಷಿಪಣಿ ಮಾರ್ಗ ಮಧ್ಯದಲ್ಲಿ ಸಣ್ಣ ಮಟ್ಟಿಗೆ ತನ್ನ ಪಥ ಬದಲಾಯಿಸಿರುವುದನ್ನು ಪ್ರದರ್ಶಿಸಿವೆ. ಇಂತಹ ಪರಿಣಾಮಗಳು ಸಾಮಾನ್ಯವಾಗಿ ಹೈಪರ್ಸಾನಿಕ್ ಅಥವಾ ಆಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮ್ಯಾಕ್ 5ಕ್ಕೂ ಹೆಚ್ಚಿನ ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುವಾಗ ಕಂಡುಬರುತ್ತವೆ.</p><p>ಸರಳವಾಗಿ ಹೇಳುವುದಾದರೆ, ಹೈಪರ್ಸಾನಿಕ್ ಕ್ಷಿಪಣಿಗಳು ಎಷ್ಟು ವೇಗವಾಗಿ ಸಾಗುತ್ತವೆ ಎಂದರೆ, ಶತ್ರುಗಳ ರೇಡಾರ್ ವ್ಯವಸ್ಥೆಗಳು ಮತ್ತು ರಕ್ಷಣಾ ಪದರಗಳಿಗೆ ಅವುಗಳನ್ನು ಗುರುತಿಸುವುದಾಗಲಿ, ಸರಿಯಾದ ಸಮಯದಲ್ಲಿ ಅವುಗಳನ್ನು ತಡೆಯುವುದಾಗಲಿ ಸಾಧ್ಯವಿಲ್ಲ. ಬಹಳಷ್ಟು ರಕ್ಷಣಾ ತಜ್ಞರು ಭಾರತ ಬಹುಶಃ ತನ್ನ ಭವಿಷ್ಯದ, ಹಾರಾಟದ ಸಂದರ್ಭದಲ್ಲಿ ಪಥ ಬದಲಿಸಬಲ್ಲ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ ಯೋಜನೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪರೀಕ್ಷಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪಥ ಬದಲಿಸಬಲ್ಲ ಸಿಡಿತಲೆಗಳನ್ನು ಗುರುತಿಸುವುದು ಮತ್ತು ನಾಶಪಡಿಸುವುದು ಅತ್ಯಂತ ಕಷ್ಟಕರವಾಗಿದ್ದು, ಇವು ಆಧುನಿಕ ಯುದ್ಧ ತಂತ್ರದಲ್ಲಿ ಅತ್ಯಂತ ಪರಿಣಾಮಕಾರಿ ಆಯುಧಗಳಾಗಲಿವೆ.</p><p>ರಕ್ಷಣಾ ವಿಶ್ಲೇಷಕರು ಈ ಕ್ಷಿಪಣಿ ಒಂದೋ ಅಗ್ನಿ-5 ಕ್ಷಿಪಣಿಯ ಇನ್ನಷ್ಟು ಪ್ರಬಲ ಆವೃತ್ತಿಯಾಗಿರಬಹುದು ಅಥವಾ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಅಗ್ನಿ-6 ಕ್ಷಿಪಣಿ ಯೋಜನೆಗೆ ಸಂಬಂಧಿಸಿದ ತಂತ್ರಜ್ಞಾನ ಪರೀಕ್ಷೆಯೂ ಆಗಿರಬಹುದು ಎಂದು ಭಾವಿಸಿದ್ದಾರೆ. ಅಗ್ನಿ-5 ಕ್ಷಿಪಣಿಯನ್ನು ಭಾರತದ ಒಳಗಿನ ಸುರಕ್ಷಿತ ಉಡಾವಣಾ ಬಿಂದುಗಳಿಂದಲೇ ಸುರಕ್ಷಿತವಾಗಿ ಯಶಸ್ವಿಯಾಗಿ ಪ್ರಯೋಗಿಸಿ, ಚೀನಾದ ಒಳಗೂ ಆಳವಾದ ದಾಳಿ ನಡೆಸಬಹುದಾಗಿದೆ. ಭವಿಷ್ಯದ ಅಗ್ನಿ-6 ಕ್ಷಿಪಣಿ ಇನ್ನಷ್ಟು ಶಕ್ತಿಶಾಲಿಯಾಗಿದ್ದು, 8,000ದಿಂದ 10,000 ಕಿಲೋಮೀಟರ್ ವ್ಯಾಪ್ತಿ ಮತ್ತು ಎಂಐಆರ್ವಿ ತಂತ್ರಜ್ಞಾನ ಹೊಂದಿರುವ ಸಾಧ್ಯತೆಗಳಿವೆ. ಇದು ಏಕಕಾಲದಲ್ಲಿ ಹಲವಾರು ಪರಮಾಣು ಸಿಡಿತಲೆಗಳನ್ನು ಒಯ್ದು, ಹಲವು ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಇಂತಹ ಸಾಮರ್ಥ್ಯ ಭಾರತಕ್ಕೆ ಒಂದು ನಂಬಿಕಾರ್ಹ ದ್ವಿತೀಯ ದಾಳಿ ಶಕ್ತಿ ಒದಗಿಸಲಿದೆ. ಅಂದರೆ, ಒಂದು ವೇಳೆ ಭಾರತದ ಮೇಲೆ ಮೊದಲು ದಾಳಿ ನಡೆದರೂ, ಭಾರತ ತನ್ನ ಪೂರ್ಣ ಸಾಮರ್ಥ್ಯದೊಡನೆ ಪ್ರತಿದಾಳಿ ನಡೆಸಬಲ್ಲದು.</p><p>ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ಅತ್ಯಂತ ದೊಡ್ಡ ಗಾತ್ರದ ಜಾಗದ ಮೇಲೆ ನೋಟಾಮ್ (ನೋಟಿಸ್ ಟು ಏರ್ಮೆನ್) ಘೋಷಿಸಿದ್ದು, ತಜ್ಞರು ಇದು ಕಾರ್ಯತಂತ್ರದ ಪರಮಾಣು ಸಾಮರ್ಥ್ಯ ಪರೀಕ್ಷೆಯಾಗಿದ್ದು, ಯುದ್ಧರಂಗದ ಆಯುಧ ಪರೀಕ್ಷಾ ಪ್ರಯೋಗವಲ್ಲ ಎಂದು ವಿವರಿಸಿದ್ದಾರೆ. ಈ ನೋಟಾಮ್ ಘೋಷಿತ ಪ್ರದೇಶ ಭಾರತದ ಇತ್ತೀಚಿನ ಲಾಂಗ್ ರೇಂಜ್ ಆ್ಯಂಟಿ ಶಿಪ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಗಳಿಗಿಂತ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆ ಕ್ಷಿಪಣಿ 1,500ರಿಂದ 1,680 ಕಿಲೋಮೀಟರ್ ವ್ಯಾಪ್ತಿ ಹೊಂದಿತ್ತು. ಮೇ 8ರಂದು ಪರೀಕ್ಷಿಸಿದ ಕ್ಷಿಪಣಿ ಸಾಕಷ್ಟು ಹೆಚ್ಚು ದೂರಕ್ಕೆ ಸಾಗಿ, ಇನ್ನೂ ಉನ್ನತ ಕಾರ್ಯತಂತ್ರದ ವರ್ಗಕ್ಕೆ ಸೇರಿದೆ ಎಂದು ತಜ್ಞರು ಭಾವಿಸಿದ್ದಾರೆ.</p><p>ಈ ಕ್ಷಿಪಣಿಯ ನಿಖರ ವ್ಯಾಪ್ತಿ, ಪೇಲೋಡ್ ಸಾಮರ್ಥ್ಯ, ಮತ್ತು ಇತರ ವೈಶಿಷ್ಟ್ಯಗಳನ್ನು ರಹಸ್ಯವಾಗಿ ಇಡುವ ಮೂಲಕ ಭಾರತ ಬುದ್ಧಿವಂತಿಕೆಯಿಂದಲೇ ಒಂದು ಕಾರ್ಯತಂತ್ರದ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಚೀನಾ ಮತ್ತು ಪಾಕಿಸ್ತಾನಗಳಂತಹ ಶತ್ರು ದೇಶಗಳು ಈ ಕ್ಷಿಪಣಿಯಿಂದ ತಮ್ಮ ಪಾಡಿಗೆ ಅತ್ಯಂತ ಕೆಟ್ಟ ಫಲಿತಾಂಶವನ್ನು ನಿರೀಕ್ಷಿಸಿ, ತಮ್ಮದೇ ಆದ ರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಆಧುನಿಕ ಯುದ್ಧ ತಂತ್ರದಲ್ಲಿ ಇಂತಹ ಅನಿಶ್ಚಿತತೆಯೇ ಅತ್ಯಂತ ಶಕ್ತಿಯುತ ಆಯುಧವಾಗುತ್ತದೆ.</p><p>ಇಲ್ಲಿನ ಇನ್ನೊಂದು ದೊಡ್ಡ ಚಿತ್ರಣವೆಂದರೆ, ಬದಲಾಗುತ್ತಿರು ಇಂಡೋ - ಪೆಸಿಫಿಕ್ ಅಧಿಕಾರದ ಆಟ. ಚೀನಾ ನಿರಂತರವಾಗಿ ತನ್ನ ಪರಮಾಣು ಬತ್ತಳಿಕೆಯನ್ನು ವಿಸ್ತರಿಸುತ್ತಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನೌಕಾಪಡೆಯ ಉಪಸ್ಥಿತಿಯನ್ನೂ ಹೆಚ್ಚಿಸುತ್ತಿದೆ. ಭಾರತದ ರಕ್ಷಣಾ ನಾಯಕತ್ವವೂ ನಿರಂತರವಾಗಿ ಭಾರತಕ್ಕೆ ಎರಡು ಯುದ್ಧರಂಗಗಳ ಅಪಾಯದ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಇಂತಹ ಸನ್ನಿವೇಶದಲ್ಲಿ, ದೀರ್ಘ ವ್ಯಾಪ್ತಿಯ, ಕುಶಲ ಚಲನೆಯ, ಮತ್ತು ಪ್ರತಿರೋಧವನ್ನು ಎದುರಿಸಿ ಉಳಿಯಬಲ್ಲ ಕ್ಷಿಪಣಿಗಳು ಭಾರತದ ಪಾಲಿಗೆ ಪ್ರಬಲ ರಕ್ಷಣಾ ಗುರಾಣಿ ಮತ್ತು ಖಡ್ಗಗಳಾಗಿರಲಿವೆ.</p><p>ಜಾಗತಿಕವಾಗಿ, ಅಮೆರಿಕ, ರಷ್ಯಾ, ಮತ್ತು ಚೀನಾದಂತಹ ದೇಶಗಳು ಹೈಪರ್ಸಾನಿಕ್ ಕ್ಷಿಪಣಿಗಳನ್ನು ನಿರ್ಮಿಸುವ ಸ್ಪರ್ಧೆಗೆ ಇಳಿದಿವೆ. ಏಕೆಂದರೆ, ಇಂತಹ ಆಯುಧ ವ್ಯವಸ್ಥೆಗಳು ನಿರ್ಧಾರ ಕೈಗೊಳ್ಳುವ ಸಮಯವನ್ನು ಕಡಿಮೆಗೊಳಿಸಿ, ಶತ್ರುಗಳ ಸಾಂಪ್ರದಾಯಿಕ ಕ್ಷಿಪಣಿ ರಕ್ಷಣೆಯನ್ನು ದುರ್ಬಲಗೊಳಿಸುತ್ತವೆ. ಭಾರತ ಈಗ ನಿಜಕ್ಕೂ ಇಂತಹ ಮಹತ್ವದ ಸಾಲಿಗೆ ಸೇರುವತ್ತ ಹೆಜ್ಜೆ ಇಡುತ್ತಿದೆ. ಮೇ 8ರಂದು ನಡೆದ ಉಡಾವಣೆ ಕೇವಲ ಇನ್ನೊಂದು ಪರೀಕ್ಷೆಯಲ್ಲ. ಬದಲಿಗೆ, ದೊಡ್ಡದಾದ, ಲೆಕ್ಕಾಚಾರ ಹಾಕಿದ, ಮತ್ತು ಆತ್ಮವಿಶ್ವಾಸದ ಸಂದೇಶವಾಗಿದ್ದು, ಭಾರತ ತನ್ನ ಆಗಸಗಳನ್ನು ರಕ್ಷಿಸಲು, ಗಡಿಗಳನ್ನು ಕಾಪಾಡಿಕೊಳ್ಳಲು, ಮತ್ತು ವೇಗವಾಗಿ ಬದಲಾಗುತ್ತಿರುವ ಇಂಡೋ ಪೆಸಿಫಿಕ್ ಯುದ್ಧ ರಂಗದಲ್ಲಿ ಬಲವಾಗಿ ನಿಲ್ಲಲು ಸಜ್ಜಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.</p><p><strong>(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೇ 8ರಂದು, ಭಾರತ ಮೌನವಾಗಿಯೇ ಬಂಗಾಳ ಕೊಲ್ಲಿಯಲ್ಲಿ ಒಂದು ಶಕ್ತಿಶಾಲಿ ದೀರ್ಘ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ಇರುವ ರಕ್ಷಣಾ ತಜ್ಞರು ಕ್ಷಿಪಣಿಯ ಕುರಿತು ಚರ್ಚಿಸಲಾರಂಭಿಸಿದರು. ಈ ಉಡಾವಣೆಯನ್ನು ಚಂಡೀಪುರದ ಬಳಿಯ ಇಂಟಗ್ರೇಟೆಡ್ ಟೆಸ್ಟ್ ರೇಂಜ್ ಮತ್ತು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯನ್ನು ವಿಶೇಷವಾಗಿಸಿದ್ದು ಕೇವಲ ಕ್ಷಿಪಣಿ ಮಾತ್ರವಲ್ಲ, ಬದಲಿಗೆ ಅದರ ಸುತ್ತಲೂ ಹಬ್ಬಿರುವ ರಹಸ್ಯ ಮತ್ತು ಸಮುದ್ರ ಪ್ರದೇಶದಲ್ಲಿ ಅಸಹಜವಾಗಿ ಘೋಷಿಸಲಾಗಿದ್ದ 3,500 ಕಿಲೋಮೀಟರ್ ನಿಷೇಧಿತ ಪ್ರದೇಶ! ಈ ಬೆಳವಣಿಗೆಗಳು ಇದು ಕೇವಲ ಸಾಮಾನ್ಯವಾದ ಸಣ್ಣ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯಲ್ಲ, ಬದಲಿಗೆ ಕಾರ್ಯತಂತ್ರದ ಮಹತ್ವದ ಪರೀಕ್ಷೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿತ್ತು.</p><p>ಕುತೂಹಲಕರ ವಿಚಾರವೆಂದರೆ, ಭಾರತದ ಡಿಆರ್ಡಿಒ ಆಗಲಿ, ರಕ್ಷಣಾ ಸಚಿವಾಲಯವಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಜಾಗತಿಕ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತು. ಈ ಪರೀಕ್ಷೆ ನಡೆದ ಸಮಯವೂ ಅತ್ಯಂತ ಅರ್ಥಪೂರ್ಣವಾಗಿತ್ತು. ಮೇ 7, 2025ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರಗಾಮಿ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರದ ಮೊದಲ ವರ್ಷಾಚರಣೆಯ ಸಂದರ್ಭದಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆದಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇಂತಹ ಸಂದರ್ಭದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸುವ ಮೂಲಕ ಭಾರತ ತನ್ನ ನೆರೆಯ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳಿಗೆ ಬಲವಾದ ಸಂದೇಶವನ್ನು ರವಾನಿಸಿದ್ದು, ತನ್ನ ನಿಖರ ದಾಳಿ ಸಾಮರ್ಥ್ಯಕ್ಕೆ ದೀರ್ಘ ವ್ಯಾಪ್ತಿಯ ಕಾರ್ಯತಂತ್ರದ ಶಕ್ತಿಯೂ ಜೊತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.</p><p>ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋಗಳಲ್ಲಿ ಪೂರ್ವ ಭಾರತ ಮತ್ತು ಬಾಂಗ್ಲಾದೇಶದ ಒಂದಷ್ಟು ಭಾಗಗಳ ಮೇಲಿನ ಸಂಜೆಯ ಆಗಸದಲ್ಲಿ ಒಂದು ಹೊಳೆಯುವ ಬೆಳಕಿನ ರೇಖೆ ಸಾಗುವುದು ಕಂಡುಬಂದಿದೆ. ಒಡಿಶಾ, ಪಶ್ಚಿಮ ಬಂಗಾಳ, ಸೀತಾಕುಂಡ, ಮತ್ತು ಕಾಕ್ಸ್ ಬಜಾ಼ರಿನ ಜನರು ಅತ್ಯಂತ ಎತ್ತರದಲ್ಲಿ ದೀರ್ಘವಾದ ಬಿಳಿಯ ಹೊಗೆಯ ಗೆರೆಗಳನ್ನು (ಇವುಗಳನ್ನು ಕಾನ್ಟ್ರೇಲ್ಸ್ ಎಂದು ಕರೆಯಲಾಗುತ್ತದೆ) ನೋಡಿರುವುದಾಗಿ ಹೇಳಿದ್ದಾರೆ. ಇಂತಹ ಹೊಗೆ ಮತ್ತು ಬೆಳಕು ಸಾಮಾನ್ಯವಾಗಿ ಅತ್ಯಂತ ದೀರ್ಘ ವ್ಯಾಪ್ತಿಯ, ಪ್ರಬಲ ಕ್ಷಿಪಣಿಗಳ ಪರೀಕ್ಷೆಯ ಸಂದರ್ಭದಲ್ಲಿ ಕಾಣಿಸುತ್ತವೆ. ಕೆಲವು ವೀಡಿಯೋಗಳು ಅತ್ಯಂತ ವೇಗವಾಗಿ ಹಾರಾಡುವ ಕ್ಷಿಪಣಿ ಮಾರ್ಗ ಮಧ್ಯದಲ್ಲಿ ಸಣ್ಣ ಮಟ್ಟಿಗೆ ತನ್ನ ಪಥ ಬದಲಾಯಿಸಿರುವುದನ್ನು ಪ್ರದರ್ಶಿಸಿವೆ. ಇಂತಹ ಪರಿಣಾಮಗಳು ಸಾಮಾನ್ಯವಾಗಿ ಹೈಪರ್ಸಾನಿಕ್ ಅಥವಾ ಆಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮ್ಯಾಕ್ 5ಕ್ಕೂ ಹೆಚ್ಚಿನ ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುವಾಗ ಕಂಡುಬರುತ್ತವೆ.</p><p>ಸರಳವಾಗಿ ಹೇಳುವುದಾದರೆ, ಹೈಪರ್ಸಾನಿಕ್ ಕ್ಷಿಪಣಿಗಳು ಎಷ್ಟು ವೇಗವಾಗಿ ಸಾಗುತ್ತವೆ ಎಂದರೆ, ಶತ್ರುಗಳ ರೇಡಾರ್ ವ್ಯವಸ್ಥೆಗಳು ಮತ್ತು ರಕ್ಷಣಾ ಪದರಗಳಿಗೆ ಅವುಗಳನ್ನು ಗುರುತಿಸುವುದಾಗಲಿ, ಸರಿಯಾದ ಸಮಯದಲ್ಲಿ ಅವುಗಳನ್ನು ತಡೆಯುವುದಾಗಲಿ ಸಾಧ್ಯವಿಲ್ಲ. ಬಹಳಷ್ಟು ರಕ್ಷಣಾ ತಜ್ಞರು ಭಾರತ ಬಹುಶಃ ತನ್ನ ಭವಿಷ್ಯದ, ಹಾರಾಟದ ಸಂದರ್ಭದಲ್ಲಿ ಪಥ ಬದಲಿಸಬಲ್ಲ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ ಯೋಜನೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪರೀಕ್ಷಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪಥ ಬದಲಿಸಬಲ್ಲ ಸಿಡಿತಲೆಗಳನ್ನು ಗುರುತಿಸುವುದು ಮತ್ತು ನಾಶಪಡಿಸುವುದು ಅತ್ಯಂತ ಕಷ್ಟಕರವಾಗಿದ್ದು, ಇವು ಆಧುನಿಕ ಯುದ್ಧ ತಂತ್ರದಲ್ಲಿ ಅತ್ಯಂತ ಪರಿಣಾಮಕಾರಿ ಆಯುಧಗಳಾಗಲಿವೆ.</p><p>ರಕ್ಷಣಾ ವಿಶ್ಲೇಷಕರು ಈ ಕ್ಷಿಪಣಿ ಒಂದೋ ಅಗ್ನಿ-5 ಕ್ಷಿಪಣಿಯ ಇನ್ನಷ್ಟು ಪ್ರಬಲ ಆವೃತ್ತಿಯಾಗಿರಬಹುದು ಅಥವಾ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಅಗ್ನಿ-6 ಕ್ಷಿಪಣಿ ಯೋಜನೆಗೆ ಸಂಬಂಧಿಸಿದ ತಂತ್ರಜ್ಞಾನ ಪರೀಕ್ಷೆಯೂ ಆಗಿರಬಹುದು ಎಂದು ಭಾವಿಸಿದ್ದಾರೆ. ಅಗ್ನಿ-5 ಕ್ಷಿಪಣಿಯನ್ನು ಭಾರತದ ಒಳಗಿನ ಸುರಕ್ಷಿತ ಉಡಾವಣಾ ಬಿಂದುಗಳಿಂದಲೇ ಸುರಕ್ಷಿತವಾಗಿ ಯಶಸ್ವಿಯಾಗಿ ಪ್ರಯೋಗಿಸಿ, ಚೀನಾದ ಒಳಗೂ ಆಳವಾದ ದಾಳಿ ನಡೆಸಬಹುದಾಗಿದೆ. ಭವಿಷ್ಯದ ಅಗ್ನಿ-6 ಕ್ಷಿಪಣಿ ಇನ್ನಷ್ಟು ಶಕ್ತಿಶಾಲಿಯಾಗಿದ್ದು, 8,000ದಿಂದ 10,000 ಕಿಲೋಮೀಟರ್ ವ್ಯಾಪ್ತಿ ಮತ್ತು ಎಂಐಆರ್ವಿ ತಂತ್ರಜ್ಞಾನ ಹೊಂದಿರುವ ಸಾಧ್ಯತೆಗಳಿವೆ. ಇದು ಏಕಕಾಲದಲ್ಲಿ ಹಲವಾರು ಪರಮಾಣು ಸಿಡಿತಲೆಗಳನ್ನು ಒಯ್ದು, ಹಲವು ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಇಂತಹ ಸಾಮರ್ಥ್ಯ ಭಾರತಕ್ಕೆ ಒಂದು ನಂಬಿಕಾರ್ಹ ದ್ವಿತೀಯ ದಾಳಿ ಶಕ್ತಿ ಒದಗಿಸಲಿದೆ. ಅಂದರೆ, ಒಂದು ವೇಳೆ ಭಾರತದ ಮೇಲೆ ಮೊದಲು ದಾಳಿ ನಡೆದರೂ, ಭಾರತ ತನ್ನ ಪೂರ್ಣ ಸಾಮರ್ಥ್ಯದೊಡನೆ ಪ್ರತಿದಾಳಿ ನಡೆಸಬಲ್ಲದು.</p><p>ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ಅತ್ಯಂತ ದೊಡ್ಡ ಗಾತ್ರದ ಜಾಗದ ಮೇಲೆ ನೋಟಾಮ್ (ನೋಟಿಸ್ ಟು ಏರ್ಮೆನ್) ಘೋಷಿಸಿದ್ದು, ತಜ್ಞರು ಇದು ಕಾರ್ಯತಂತ್ರದ ಪರಮಾಣು ಸಾಮರ್ಥ್ಯ ಪರೀಕ್ಷೆಯಾಗಿದ್ದು, ಯುದ್ಧರಂಗದ ಆಯುಧ ಪರೀಕ್ಷಾ ಪ್ರಯೋಗವಲ್ಲ ಎಂದು ವಿವರಿಸಿದ್ದಾರೆ. ಈ ನೋಟಾಮ್ ಘೋಷಿತ ಪ್ರದೇಶ ಭಾರತದ ಇತ್ತೀಚಿನ ಲಾಂಗ್ ರೇಂಜ್ ಆ್ಯಂಟಿ ಶಿಪ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಗಳಿಗಿಂತ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆ ಕ್ಷಿಪಣಿ 1,500ರಿಂದ 1,680 ಕಿಲೋಮೀಟರ್ ವ್ಯಾಪ್ತಿ ಹೊಂದಿತ್ತು. ಮೇ 8ರಂದು ಪರೀಕ್ಷಿಸಿದ ಕ್ಷಿಪಣಿ ಸಾಕಷ್ಟು ಹೆಚ್ಚು ದೂರಕ್ಕೆ ಸಾಗಿ, ಇನ್ನೂ ಉನ್ನತ ಕಾರ್ಯತಂತ್ರದ ವರ್ಗಕ್ಕೆ ಸೇರಿದೆ ಎಂದು ತಜ್ಞರು ಭಾವಿಸಿದ್ದಾರೆ.</p><p>ಈ ಕ್ಷಿಪಣಿಯ ನಿಖರ ವ್ಯಾಪ್ತಿ, ಪೇಲೋಡ್ ಸಾಮರ್ಥ್ಯ, ಮತ್ತು ಇತರ ವೈಶಿಷ್ಟ್ಯಗಳನ್ನು ರಹಸ್ಯವಾಗಿ ಇಡುವ ಮೂಲಕ ಭಾರತ ಬುದ್ಧಿವಂತಿಕೆಯಿಂದಲೇ ಒಂದು ಕಾರ್ಯತಂತ್ರದ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಚೀನಾ ಮತ್ತು ಪಾಕಿಸ್ತಾನಗಳಂತಹ ಶತ್ರು ದೇಶಗಳು ಈ ಕ್ಷಿಪಣಿಯಿಂದ ತಮ್ಮ ಪಾಡಿಗೆ ಅತ್ಯಂತ ಕೆಟ್ಟ ಫಲಿತಾಂಶವನ್ನು ನಿರೀಕ್ಷಿಸಿ, ತಮ್ಮದೇ ಆದ ರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಆಧುನಿಕ ಯುದ್ಧ ತಂತ್ರದಲ್ಲಿ ಇಂತಹ ಅನಿಶ್ಚಿತತೆಯೇ ಅತ್ಯಂತ ಶಕ್ತಿಯುತ ಆಯುಧವಾಗುತ್ತದೆ.</p><p>ಇಲ್ಲಿನ ಇನ್ನೊಂದು ದೊಡ್ಡ ಚಿತ್ರಣವೆಂದರೆ, ಬದಲಾಗುತ್ತಿರು ಇಂಡೋ - ಪೆಸಿಫಿಕ್ ಅಧಿಕಾರದ ಆಟ. ಚೀನಾ ನಿರಂತರವಾಗಿ ತನ್ನ ಪರಮಾಣು ಬತ್ತಳಿಕೆಯನ್ನು ವಿಸ್ತರಿಸುತ್ತಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನೌಕಾಪಡೆಯ ಉಪಸ್ಥಿತಿಯನ್ನೂ ಹೆಚ್ಚಿಸುತ್ತಿದೆ. ಭಾರತದ ರಕ್ಷಣಾ ನಾಯಕತ್ವವೂ ನಿರಂತರವಾಗಿ ಭಾರತಕ್ಕೆ ಎರಡು ಯುದ್ಧರಂಗಗಳ ಅಪಾಯದ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಇಂತಹ ಸನ್ನಿವೇಶದಲ್ಲಿ, ದೀರ್ಘ ವ್ಯಾಪ್ತಿಯ, ಕುಶಲ ಚಲನೆಯ, ಮತ್ತು ಪ್ರತಿರೋಧವನ್ನು ಎದುರಿಸಿ ಉಳಿಯಬಲ್ಲ ಕ್ಷಿಪಣಿಗಳು ಭಾರತದ ಪಾಲಿಗೆ ಪ್ರಬಲ ರಕ್ಷಣಾ ಗುರಾಣಿ ಮತ್ತು ಖಡ್ಗಗಳಾಗಿರಲಿವೆ.</p><p>ಜಾಗತಿಕವಾಗಿ, ಅಮೆರಿಕ, ರಷ್ಯಾ, ಮತ್ತು ಚೀನಾದಂತಹ ದೇಶಗಳು ಹೈಪರ್ಸಾನಿಕ್ ಕ್ಷಿಪಣಿಗಳನ್ನು ನಿರ್ಮಿಸುವ ಸ್ಪರ್ಧೆಗೆ ಇಳಿದಿವೆ. ಏಕೆಂದರೆ, ಇಂತಹ ಆಯುಧ ವ್ಯವಸ್ಥೆಗಳು ನಿರ್ಧಾರ ಕೈಗೊಳ್ಳುವ ಸಮಯವನ್ನು ಕಡಿಮೆಗೊಳಿಸಿ, ಶತ್ರುಗಳ ಸಾಂಪ್ರದಾಯಿಕ ಕ್ಷಿಪಣಿ ರಕ್ಷಣೆಯನ್ನು ದುರ್ಬಲಗೊಳಿಸುತ್ತವೆ. ಭಾರತ ಈಗ ನಿಜಕ್ಕೂ ಇಂತಹ ಮಹತ್ವದ ಸಾಲಿಗೆ ಸೇರುವತ್ತ ಹೆಜ್ಜೆ ಇಡುತ್ತಿದೆ. ಮೇ 8ರಂದು ನಡೆದ ಉಡಾವಣೆ ಕೇವಲ ಇನ್ನೊಂದು ಪರೀಕ್ಷೆಯಲ್ಲ. ಬದಲಿಗೆ, ದೊಡ್ಡದಾದ, ಲೆಕ್ಕಾಚಾರ ಹಾಕಿದ, ಮತ್ತು ಆತ್ಮವಿಶ್ವಾಸದ ಸಂದೇಶವಾಗಿದ್ದು, ಭಾರತ ತನ್ನ ಆಗಸಗಳನ್ನು ರಕ್ಷಿಸಲು, ಗಡಿಗಳನ್ನು ಕಾಪಾಡಿಕೊಳ್ಳಲು, ಮತ್ತು ವೇಗವಾಗಿ ಬದಲಾಗುತ್ತಿರುವ ಇಂಡೋ ಪೆಸಿಫಿಕ್ ಯುದ್ಧ ರಂಗದಲ್ಲಿ ಬಲವಾಗಿ ನಿಲ್ಲಲು ಸಜ್ಜಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.</p><p><strong>(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>