<blockquote>ಪ್ರಧಾನಿಯವರ ಮಿತವ್ಯಯದ ಕರೆ ಆಕರ್ಷಕವಾಗಿದೆ. ಆದರೆ, ಮಿತವ್ಯಯದಿಂದ ದೇಶದ ಅಭಿವೃದ್ಧಿ ಹಿನ್ನಡೆ ಕಾಣುವ ಅಪಾಯವೂ ಇದೆ. ಮಿತವ್ಯಯದ ನೀತಿ ಅಭಿವೃದ್ಧಿಶೀಲ ದೇಶಗಳಿಗೆ ಮಾರಕವಾಗುವ ಸಾಧ್ಯತೆಯೇ ಹೆಚ್ಚು. ದೇಶದ ಆರ್ಥಿಕತೆಯ ಚೇತರಿಕೆಗೆ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದೇ ಉತ್ತಮ ಪರಿಹಾರ.</blockquote>.<p>ಪೆಟ್ರೋಲ್, ಚಿನ್ನ, ಖಾದ್ಯ ತೈಲ, ರಾಸಾಯನಿಕ ಗೊಬ್ಬರ ಇವುಗಳ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ಪ್ರಯಾಣವನ್ನು ನಿಲ್ಲಿಸಿ, ಸಾವಯವ ಕೃಷಿ ಅಳವಡಿಸಿಕೊಳ್ಳಿ, ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶಿ ವಿನಿಮಯ ಉಳಿಸಲು ನೆರವಾಗಿ ಎಂದು ಪ್ರಧಾನಿಯವರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತ್ಯಾಗ, ದೇಶಪ್ರೇಮದ ಮಾತುಗಳನ್ನಾಡಿದ್ದಾರೆ. ಸಾಮಾನ್ಯವಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿಯವರು ತ್ಯಾಗ, ದೇಶಪ್ರೇಮ ಇತ್ಯಾದಿಗಳ ಬಗ್ಗೆ ಮಾತನಾಡುವುದನ್ನು ನಗದು ಅಮಾನ್ಯೀಕರಣ ಹಾಗೂ ಕೋವಿಡ್ನಂತಹ ಸಮಯಗಳಲ್ಲಿ ನೋಡಿದ್ದೇವೆ. ಅದೇನೆ ಇರಲಿ, ಆರ್ಥಿಕತೆ ಸಂಕಷ್ಟದಲ್ಲಿದೆ ಎಂದವರು ಒಪ್ಪಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಸಮಸ್ಯೆಯಿದೆ ಎಂದು ಒಪ್ಪಿಕೊಂಡರೆ ಪರಿಹಾರದ ಬಗ್ಗೆ ಯೋಚಿಸಬಹುದು. ಆದರೆ, ಇಂದು ಕಾಡುತ್ತಿರುವ ರೂಪಾಯಿ ಮೌಲ್ಯದ ಕುಸಿತ, ವಿದೇಶಿ ವಿನಿಮಯದ ಕೊರತೆ, ಹೂಡಿಕೆಯ ಕೊರತೆ ಇತ್ಯಾದಿ ಯಾವ ಸಮಸ್ಯೆಗಳೂ ಇದ್ದಕ್ಕಿದ್ದಂತೆ ಸೃಷ್ಟಿಯಾದವುಗಳಲ್ಲ. ಇವೆಲ್ಲ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳು. ಯುದ್ಧದ ಬಿಕ್ಕಟ್ಟು ಇವನ್ನು ತೀವ್ರವಾಗಿಸಿದೆ. ದೇಶಪ್ರೇಮ, ತ್ಯಾಗ ಇವೆಲ್ಲ ಒಳ್ಳೆಯದೆ. ಆದರೆ, ಭಾವನಾತ್ಮಕವಾಗಿ ನೋಡುವಾಗ ಬಿಕ್ಕಟ್ಟಿನ ಹಿಂದಿರುವ ಆಳವಾದ ಸಮಸ್ಯೆಗಳನ್ನು ಗಮನಿಸದೇ ಹೋಗುತ್ತೇವೆ.</p>.<p>ಕಚ್ಚಾತೈಲ, ಚಿನ್ನ, ರಾಸಾಯನಿಕ ಗೊಬ್ಬರಕ್ಕೆ ಬಹುತೇಕ ಆಮದನ್ನೇ ನೆಚ್ಚಿಕೊಂಡಿದ್ದೇವೆ. ಜೊತೆಗೆ ಇವುಗಳ ಆಮದಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿ ವರ್ಷಕ್ಕೆ 200 ಶತಕೋಟಿ ಡಾಲರ್ಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ನಮ್ಮಲ್ಲೇ ರಸಗೊಬ್ಬರ ತಯಾರಿಸುವುದಕ್ಕೂ ನೈಸರ್ಗಿಕ ಅನಿಲ ಇತ್ಯಾದಿಗಳು ಶೇ 80ರಷ್ಟು ಹೊರದೇಶಗಳಿಂದಲೇ ಬರಬೇಕು. ಹಾಗೆಯೇ ಹಿಂದೆ ಸ್ವಾವಲಂಬನೆ ಪಟ್ಟಿಯಲ್ಲಿದ್ದ ಖಾದ್ಯ ತೈಲವನ್ನೂ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.</p>.<p>ಮೊದಲು ಒಂದಿಷ್ಟು ವಿದೇಶಿ ಬಂಡವಾಳಿಗರು ನಮ್ಮಲ್ಲಿ ಹೂಡಿಕೆ ಮಾಡುತ್ತಿದ್ದರು. ಈಗದು ಕಡಿಮೆಯಾಗುತ್ತಿದೆ. ವಿದೇಶಿಯರು ಬಿಡಿ, ನಮ್ಮವರೇ ಹೂಡಿಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ವಿದೇಶಗಳಲ್ಲಿ ಸ್ವತ್ತುಗಳನ್ನು, ಷೇರುಗಳನ್ನು ಕೊಳ್ಳುವುದೂ ಹೆಚ್ಚುತ್ತಿದೆ. ಹಾಗಾಗಿ ಡಾಲರಿನ ಹೊರಹರಿವು ಹೆಚ್ಚುತ್ತಿದೆ. ರೂಪಾಯಿ ಬೆಲೆಯೂ ಏನೇನೋ ಕಾರಣಕ್ಕೆ ಕುಸಿಯುತ್ತಲೇ ಇದೆ. ರೂಪಾಯಿಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಆರ್ಬಿಐ ಡಾಲರನ್ನು ಮಾರುಕಟ್ಟೆಯಲ್ಲಿ ಮಾರುತ್ತಿದೆ. ಅದು ವಿದೇಶಿ ವಿನಿಮಯವನ್ನು ಇನ್ನಷ್ಟು ಕರಗಿಸುತ್ತಿದೆ.</p>.<p>ಸಮಸ್ಯೆ ಗಂಭೀರವಾಗಿದೆ ಎನ್ನುವುದು ಸತ್ಯ. ಇಂಧನಕ್ಕಾಗಿ ಕೆಲವು ದೇಶಗಳನ್ನು ಹೆಚ್ಚು ಅವಲಂಬಿಸುತ್ತಿದ್ದೇವೆ. ಆಪತ್ತಿನ ಸಂದರ್ಭದಲ್ಲಿ ಪೂರೈಕೆ ಕಷ್ಟವಾಗುತ್ತದೆ. ಹಲವು ಮೂಲಗಳಿಂದ ಇಂಧನವನ್ನು ಪಡೆದುಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಪ್ರಯತ್ನವೂ ನಡೆದಿದೆ. ಆದರೂ ಅಮೆರಿಕದ ಒತ್ತಡವನ್ನು ಮೀರುವುದಕ್ಕೆ ಕಷ್ಟವಾಗುತ್ತಿದೆ. ಕಷ್ಟ ಬಂದಾಗಲೆಲ್ಲ ಇಂಧನವನ್ನು ಹೆಚ್ಚು ಶೇಖರಿಸಿಟ್ಟುಕೊಳ್ಳಬೇಕು ಅಂದುಕೊಳ್ಳುತ್ತೇವೆ. ಆಮೇಲೆ ಮರೆತುಬಿಡುತ್ತೇವೆ. ಸೌರ, ವಾಯು ಇತ್ಯಾದಿ ಪರ್ಯಾಯ ಇಂಧನ ಮೂಲಗಳನ್ನು ಬೆಳೆಸಬೇಕು ಅನ್ನುವುದು ಗೊತ್ತಿದ್ದರೂ ಮಾಡುತ್ತಿಲ್ಲ. ಹಲವು ಪರ್ಯಾಯಗಳಿದ್ದರೆ ವಿಪತ್ತಿನ ಸಮಯದಲ್ಲಿ ಕೊರತೆಯನ್ನು ನಿರ್ವಹಿಸುವುದಕ್ಕೆ ಸುಲಭವಾಗುತ್ತದೆ.</p>.<p>ರಾಸಾಯನಿಕ ಗೊಬ್ಬರವೂ ಬೇರೆ ದೇಶಗಳಿಂದಲೇ ಬರಬೇಕು. ಯುದ್ಧವೋ ಅಥವಾ ಇನ್ನಾವುದೋ ಕಾರಣಕ್ಕೆ ಪೂರೈಕೆಗೆ ಸಮಸ್ಯೆಯಾದರೆ ನಮ್ಮಲ್ಲಿ ಹಾಹಾಕಾರ ಉಂಟಾಗುತ್ತದೆ. ನಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಹೇಳುತ್ತಲೇ ಇದ್ದೇವೆ. ಆದರೆ, ಕಳೆದ ಎರಡು ದಶಕಗಳಲ್ಲಿ ನಮ್ಮಲ್ಲಿ ಉತ್ಪಾದನೆ ಹೆಚ್ಚಾಗಿರುವುದು ಬರೀ ಶೇ 2ರಷ್ಟು. ಈ ರಾಸಾಯನಿಕ ಗೊಬ್ಬರದ ಕಾಟವೇ ಬೇಡ, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳೋಣ, ಅದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎನ್ನುತ್ತಿದ್ದಾರೆ ಪ್ರಧಾನಿ. ಆದರೆ, ದಿಢೀರನೆ ಸಾವಯವ ಕೃಷಿಯ ಕಡೆಗೆ ಹೊರಳುವುದು ಸುಲಭವಲ್ಲ. ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಬಿಕ್ಕಟ್ಟು ತಪ್ಪಿಸಿಕೊಳ್ಳಲು ರಾಸಾಯನಿಕ ಗೊಬ್ಬರವನ್ನು ನಿಷೇಧಿಸಿ ಸಾವಯವ ಕೃಷಿಯನ್ನು ಕಡ್ಡಾಯಗೊಳಿಸಲಾಯಿತು. ಅದರಿಂದ ಭತ್ತ ಹಾಗೂ ಚಹಾ ಉತ್ಪಾದನೆ ತೀವ್ರವಾಗಿ ಕುಸಿಯಿತು. ವಿದೇಶಿ ವಿನಿಮಯದ ಬಿಕ್ಕಟ್ಟು ಪರಿಹರಿಸಲು ಹೋಗಿ ಶ್ರೀಲಂಕಾ ಆಹಾರದ ಬಿಕ್ಕಟ್ಟಿಗೆ ಸಿಲುಕಿತು. ನಾವು ನೈಸರ್ಗಿಕ ಕೃಷಿಯ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಆದರೆ, ಒಂದು ಸ್ಪಷ್ಟ ನೀತಿ ರೂಪಿಸಲು ನಮಗೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಘೋಷಣೆಯ ಮಟ್ಟದಲ್ಲೇ ಉಳಿದುಕೊಂಡಿದೆ.</p>.<p>ವಿದೇಶಿ ವಿನಿಮಯದ ಕೊರತೆಯ ಸಮಸ್ಯೆಗಿರುವುದು ಎರಡು ಪರಿಹಾರ. ಒಂದು, ಮಿತವ್ಯಯ– ಅಂದರೆ ಖರ್ಚಿನಲ್ಲಿ ಕಡಿತ. ಇನ್ನೊಂದು, ವಿನಿಮಯದ ಮೀಸಲು ಹೆಚ್ಚಿಸುವುದು. ಮನೆಯಲ್ಲಿ ವರಮಾನ ಕಡಿಮೆಯಾದರೆ ಹೊಟ್ಟೆಬಟ್ಟೆ ಕಟ್ಟಿ, ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು. ಅಥವಾ ವರಮಾನ ಹೆಚ್ಚಿಸಿಕೊಳ್ಳಬೇಕು. ನಮ್ಮ ಪ್ರಧಾನಿಯವರೂ ಸೇರಿದಂತೆ ಹಲವರು ಮಿತವ್ಯಯವನ್ನು ಸೂಚಿಸುತ್ತಿದ್ದಾರೆ. ಇದರಿಂದ ಹಣ ಉಳಿಯಬಹುದು. ಅಂತಿಮವಾಗಿ ಮನುಷ್ಯ ಅಶಕ್ತನಾಗುತ್ತಾನೆ. ಇದು ಆರ್ಥಿಕತೆಯ ವಿಷಯದಲ್ಲೂ ನಿಜ. ಮಿತವ್ಯಯದಿಂದ ಡಾಲರ್ ಉಳಿಯಬಹುದು. ಆದರೆ, ಆರ್ಥಿಕತೆ ಸೊರಗಿಹೋಗಬಹುದು.</p>.<p>ಮಿತವ್ಯಯ ಒಂದು ನೀತಿಯಾಗಿ ಯಾವುದೇ ದೇಶದಲ್ಲಿ, ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಂತೂ ಎಂದೂ ಯಶಸ್ವಿಯಾಗಿಲ್ಲ. ಗ್ರೀಸ್, ಇಟಲಿ, ಅಥವಾ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಐಎಂಎಫ್ ತಂದ ಮಿತವ್ಯಯ ಕಾರ್ಯಕ್ರಮಗಳು ವಿಫಲವಾಗಿವೆ. ಪಾವತಿ ಶಿಲ್ಕಿನ ಕೊರತೆ ನೀಗಿಸಿಕೊಳ್ಳಲು ಈ ದೇಶಗಳು ಕಠಿಣ ಮಿತವ್ಯಯದ ನೀತಿಯನ್ನು ಆಶ್ರಯಿಸಿದ್ದವು. ಆಮದಿನಲ್ಲಿ ವಿಪರೀತ ಕಡಿತ ಮಾಡಿಕೊಂಡವು. ಆದರೆ, ಚಿನ್ನ ಬರೀ ಬಳಕೆಯ ವಸ್ತುವಲ್ಲ. ಲಕ್ಷಾಂತರ ಜನ ಚಿನ್ನದ ಆಭರಣಗಳ ತಯಾರಿಕೆ, ಸಂಸ್ಕರಣೆ, ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿನ್ನದ ಮಾರಾಟ ನಿಂತರೆ, ಅವರ ಆದಾಯವೂ ಕುಸಿಯುತ್ತದೆ, ಕಾರ್ಖಾನೆಗಳು ಮುಚ್ಚುತ್ತವೆ. ಆರ್ಥಿಕತೆಯು ಸೊರಗುತ್ತದೆ. ನಮ್ಮ ಆರ್ಥಿಕತೆಯಲ್ಲಿ ನಿಜವಾದ ಸಮಸ್ಯೆಯೆಂದರೆ, ಬಳಕೆಯ ಕೊರತೆ. ಮೊದಲೇ ಜನರ ಬಳಿ ಹಣವಿಲ್ಲ. ಮಿತವ್ಯಯದಿಂದ ಕೊಳ್ಳುವುದು ಇನ್ನೂ ಕಡಿಮೆಯಾಗುತ್ತಿದೆ. ಬೇಡಿಕೆಯ ಕೊರತೆ ಹೆಚ್ಚುತ್ತದೆ. ಸಹಜವಾಗಿಯೇ ಹೂಡಿಕೆಯೂ ಕಮ್ಮಿಯಾಗುತ್ತದೆ. ಉತ್ಪಾದನೆ ಇನ್ನೂ ಕಮ್ಮಿಯಾಗುತ್ತದೆ. ರಫ್ತು ಕುಸಿಯುತ್ತಿದೆ. ಮಿತವ್ಯಯದ ನೀತಿಯಿಂದ ಸಮಸ್ಯೆ ತೀವ್ರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.</p>.<p>ಯಾವುದೇ ಬಿಕ್ಕಟ್ಟು ಎದುರಾದಾಗಲೂ ಸಮಸ್ಯೆ ತೀವ್ರವಾಗಿ ಕಾಡುವುದು ಸಾಮಾನ್ಯ ಜನರನ್ನು ಮತ್ತು ಸಣ್ಣ ಉದ್ದಿಮೆಗಳನ್ನು. ಈಗಲೂ ಹೋಟೆಲ್ ಇತ್ಯಾದಿ ಉದ್ದಿಮೆಗಳು ಸಂಕಷ್ಟದಲ್ಲಿವೆ. ಕೋವಿಡ್ನಂತಹ ಬಿಕ್ಕಟ್ಟಿನ ಸಮಯದಲ್ಲೂ ದೊಡ್ಡ ಉದ್ದಿಮೆಗಳ ಲಾಭಕ್ಕೆ ತೊಂದರೆಯಾಗಿರಲಿಲ್ಲ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರೇ ಗಮನಿಸಿರುವಂತೆ, ಕಾರ್ಪೊರೇಟ್ ಲಾಭದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ಆದರೆ, ಕೆಳವರ್ಗದವರ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹಾಗಾಗಿ ಅವರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಯೋಚಿಸಬೇಕು. ಅವರಿಂದ ತ್ಯಾಗವನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆಹಾರ ಭದ್ರತೆ ಮತ್ತು ಜೀವನೋಪಾಯಕ್ಕೆ ಆದ್ಯತೆ ನೀಡಬೇಕು. ಮನರೇಗಾದಂತಹ ಯೋಜನೆಯನ್ನು ಉಳಿಸಿಕೊಂಡು ನಗರಗಳಿಗೂ ವಿಸ್ತರಿಸಿ, ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು. ಜನರ ಖರ್ಚು ಮಾಡುವ ಸಾಮರ್ಥ್ಯವನ್ನು ಕಿತ್ತುಕೊಂಡರೆ, ಆರ್ಥಿಕತೆ ಇನ್ನಷ್ಟು ಕುಸಿಯುತ್ತದೆ. ಉತ್ಪಾದನೆ ಮತ್ತೂ ಕಮ್ಮಿಯಾಗುತ್ತದೆ. ನಮಗೆ ಬೇಕಿರುವುದು ಬೇಡಿಕೆಯನ್ನು ಸೃಷ್ಟಿಸುವ, ಸಂಪತ್ತನ್ನು ಸಮಾನವಾಗಿ ಹಂಚುವ ನೀತಿಗಳು. ಶ್ರೀಮಂತರನ್ನು ಓಲೈಸಿದರೆ ಅವರು ಬಂಡವಾಳ ಹೂಡಿಕೆ ಮಾಡುತ್ತಾರೆಂಬ ನಂಬಿಕೆ ಈಗ ಸಂಪೂರ್ಣ ಸುಳ್ಳಾಗಿದೆ.</p>.<p>ನಿಜ, ಭಾರತೀಯರೆಲ್ಲರೂ ದಿಢೀರನೆ ಚಿನ್ನ ಬಳಸುವುದನ್ನು ನಿಲ್ಲಿಸಿ, ಪಕ್ಕದ ತೋಟದಲ್ಲಿ ಬೆಳೆದ ಹೂವನ್ನು ಬಳಸುವುದಕ್ಕೆ ಪ್ರಾರಂಭಿಸಿದರೆ, ಅಥವಾ ಸ್ಕೂಟರ್, ಕಾರು ನಿಲ್ಲಿಸಿ ಸೈಕಲ್ ತುಳಿಯುವುದಕ್ಕೆ ಪ್ರಾರಂಭಿಸಿದರೆ ಆಮದು ಕಡಿಮೆಯಾಗುತ್ತದೆ. ಡಾಲರ್ ಮೇಲಿನ ಅವಲಂಬನೆಯೂ ಕಮ್ಮಿಯಾಗುತ್ತದೆ. ಚಾಲ್ತಿ ಖಾತೆ ಕೊರತೆಯೂ ಮಾಯವಾಗಬಹುದು. ಆದರೆ, ಇದರಿಂದ ಅಂತಿಮವಾಗಿ ದೇಶದ ಬೆಳವಣಿಗೆಯೂ ತಗ್ಗುತ್ತದೆ. ಕಚ್ಚಾತೈಲ, ಚಿನ್ನ ಅಥವಾ ಖಾದ್ಯ ತೈಲವನ್ನು ಅವಲಂಬಿಸಿರುವ ಎಲ್ಲ ಉದ್ಯಮಗಳ ಮಾರಾಟ ಕುಸಿಯುತ್ತದೆ. ಆರ್ಥಿಕ ಚಟುವಟಿಕೆಗಳು ಕಡಿಮೆಯಾದಂತೆ ಆರ್ಥಿಕತೆಯ ವೇಗ ಕುಂಠಿತಗೊಳ್ಳಬಹುದು. ದೀರ್ಘಕಾಲದ ಪರಿಹಾರವೆಂದರೆ ಆಮದನ್ನು ಕಡಿಮೆ ಮಾಡುವುದರ ಜೊತೆಗೆ, ನಮ್ಮ ರಫ್ತನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುವುದು. ನಮ್ಮಿಂದ ಬಂಡವಾಳ ಹರಿದುಹೋಗುವುದನ್ನು ತಪ್ಪಿಸುವುದರ ಜೊತೆಗೆ, ನಮ್ಮಲ್ಲಿಗೆ ಹಣ ಹರಿದು ಬರುವಂತೆ ನೋಡಿಕೊಳ್ಳುವುದು.</p>.<p>ವಿದೇಶಿ ಪ್ರವಾಸವನ್ನು ನಿಯಂತ್ರಿಸುವುದಕ್ಕಿಂತ ನಮ್ಮಲ್ಲಿ ಪ್ರವಾಸೋದ್ಯಮ ಬೆಳೆಯುವಂತೆ ನೋಡಿಕೊಳ್ಳುವುದು. ಅಂದರೆ, ವಿದೇಶಿ ವಿನಿಮಯದ ಪ್ರಮಾಣ ಹೆಚ್ಚುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗ. ಅಂದರೆ ಆರ್ಥಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಯೋಚಿಸಬೇಕು. ಕೊಳ್ಳುವುದನ್ನು ಕಡಿಮೆ ಮಾಡುವುದಕ್ಕಿಂತ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕತೆಯನ್ನು ಹೆಚ್ಚು ಸಕ್ರಿಯಗೊಳಿಸುವುದು ಒಳ್ಳೆಯ ದಾರಿಯಾಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಪ್ರಧಾನಿಯವರ ಮಿತವ್ಯಯದ ಕರೆ ಆಕರ್ಷಕವಾಗಿದೆ. ಆದರೆ, ಮಿತವ್ಯಯದಿಂದ ದೇಶದ ಅಭಿವೃದ್ಧಿ ಹಿನ್ನಡೆ ಕಾಣುವ ಅಪಾಯವೂ ಇದೆ. ಮಿತವ್ಯಯದ ನೀತಿ ಅಭಿವೃದ್ಧಿಶೀಲ ದೇಶಗಳಿಗೆ ಮಾರಕವಾಗುವ ಸಾಧ್ಯತೆಯೇ ಹೆಚ್ಚು. ದೇಶದ ಆರ್ಥಿಕತೆಯ ಚೇತರಿಕೆಗೆ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದೇ ಉತ್ತಮ ಪರಿಹಾರ.</blockquote>.<p>ಪೆಟ್ರೋಲ್, ಚಿನ್ನ, ಖಾದ್ಯ ತೈಲ, ರಾಸಾಯನಿಕ ಗೊಬ್ಬರ ಇವುಗಳ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ಪ್ರಯಾಣವನ್ನು ನಿಲ್ಲಿಸಿ, ಸಾವಯವ ಕೃಷಿ ಅಳವಡಿಸಿಕೊಳ್ಳಿ, ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶಿ ವಿನಿಮಯ ಉಳಿಸಲು ನೆರವಾಗಿ ಎಂದು ಪ್ರಧಾನಿಯವರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತ್ಯಾಗ, ದೇಶಪ್ರೇಮದ ಮಾತುಗಳನ್ನಾಡಿದ್ದಾರೆ. ಸಾಮಾನ್ಯವಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿಯವರು ತ್ಯಾಗ, ದೇಶಪ್ರೇಮ ಇತ್ಯಾದಿಗಳ ಬಗ್ಗೆ ಮಾತನಾಡುವುದನ್ನು ನಗದು ಅಮಾನ್ಯೀಕರಣ ಹಾಗೂ ಕೋವಿಡ್ನಂತಹ ಸಮಯಗಳಲ್ಲಿ ನೋಡಿದ್ದೇವೆ. ಅದೇನೆ ಇರಲಿ, ಆರ್ಥಿಕತೆ ಸಂಕಷ್ಟದಲ್ಲಿದೆ ಎಂದವರು ಒಪ್ಪಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಸಮಸ್ಯೆಯಿದೆ ಎಂದು ಒಪ್ಪಿಕೊಂಡರೆ ಪರಿಹಾರದ ಬಗ್ಗೆ ಯೋಚಿಸಬಹುದು. ಆದರೆ, ಇಂದು ಕಾಡುತ್ತಿರುವ ರೂಪಾಯಿ ಮೌಲ್ಯದ ಕುಸಿತ, ವಿದೇಶಿ ವಿನಿಮಯದ ಕೊರತೆ, ಹೂಡಿಕೆಯ ಕೊರತೆ ಇತ್ಯಾದಿ ಯಾವ ಸಮಸ್ಯೆಗಳೂ ಇದ್ದಕ್ಕಿದ್ದಂತೆ ಸೃಷ್ಟಿಯಾದವುಗಳಲ್ಲ. ಇವೆಲ್ಲ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳು. ಯುದ್ಧದ ಬಿಕ್ಕಟ್ಟು ಇವನ್ನು ತೀವ್ರವಾಗಿಸಿದೆ. ದೇಶಪ್ರೇಮ, ತ್ಯಾಗ ಇವೆಲ್ಲ ಒಳ್ಳೆಯದೆ. ಆದರೆ, ಭಾವನಾತ್ಮಕವಾಗಿ ನೋಡುವಾಗ ಬಿಕ್ಕಟ್ಟಿನ ಹಿಂದಿರುವ ಆಳವಾದ ಸಮಸ್ಯೆಗಳನ್ನು ಗಮನಿಸದೇ ಹೋಗುತ್ತೇವೆ.</p>.<p>ಕಚ್ಚಾತೈಲ, ಚಿನ್ನ, ರಾಸಾಯನಿಕ ಗೊಬ್ಬರಕ್ಕೆ ಬಹುತೇಕ ಆಮದನ್ನೇ ನೆಚ್ಚಿಕೊಂಡಿದ್ದೇವೆ. ಜೊತೆಗೆ ಇವುಗಳ ಆಮದಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿ ವರ್ಷಕ್ಕೆ 200 ಶತಕೋಟಿ ಡಾಲರ್ಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ನಮ್ಮಲ್ಲೇ ರಸಗೊಬ್ಬರ ತಯಾರಿಸುವುದಕ್ಕೂ ನೈಸರ್ಗಿಕ ಅನಿಲ ಇತ್ಯಾದಿಗಳು ಶೇ 80ರಷ್ಟು ಹೊರದೇಶಗಳಿಂದಲೇ ಬರಬೇಕು. ಹಾಗೆಯೇ ಹಿಂದೆ ಸ್ವಾವಲಂಬನೆ ಪಟ್ಟಿಯಲ್ಲಿದ್ದ ಖಾದ್ಯ ತೈಲವನ್ನೂ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.</p>.<p>ಮೊದಲು ಒಂದಿಷ್ಟು ವಿದೇಶಿ ಬಂಡವಾಳಿಗರು ನಮ್ಮಲ್ಲಿ ಹೂಡಿಕೆ ಮಾಡುತ್ತಿದ್ದರು. ಈಗದು ಕಡಿಮೆಯಾಗುತ್ತಿದೆ. ವಿದೇಶಿಯರು ಬಿಡಿ, ನಮ್ಮವರೇ ಹೂಡಿಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ವಿದೇಶಗಳಲ್ಲಿ ಸ್ವತ್ತುಗಳನ್ನು, ಷೇರುಗಳನ್ನು ಕೊಳ್ಳುವುದೂ ಹೆಚ್ಚುತ್ತಿದೆ. ಹಾಗಾಗಿ ಡಾಲರಿನ ಹೊರಹರಿವು ಹೆಚ್ಚುತ್ತಿದೆ. ರೂಪಾಯಿ ಬೆಲೆಯೂ ಏನೇನೋ ಕಾರಣಕ್ಕೆ ಕುಸಿಯುತ್ತಲೇ ಇದೆ. ರೂಪಾಯಿಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಆರ್ಬಿಐ ಡಾಲರನ್ನು ಮಾರುಕಟ್ಟೆಯಲ್ಲಿ ಮಾರುತ್ತಿದೆ. ಅದು ವಿದೇಶಿ ವಿನಿಮಯವನ್ನು ಇನ್ನಷ್ಟು ಕರಗಿಸುತ್ತಿದೆ.</p>.<p>ಸಮಸ್ಯೆ ಗಂಭೀರವಾಗಿದೆ ಎನ್ನುವುದು ಸತ್ಯ. ಇಂಧನಕ್ಕಾಗಿ ಕೆಲವು ದೇಶಗಳನ್ನು ಹೆಚ್ಚು ಅವಲಂಬಿಸುತ್ತಿದ್ದೇವೆ. ಆಪತ್ತಿನ ಸಂದರ್ಭದಲ್ಲಿ ಪೂರೈಕೆ ಕಷ್ಟವಾಗುತ್ತದೆ. ಹಲವು ಮೂಲಗಳಿಂದ ಇಂಧನವನ್ನು ಪಡೆದುಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಪ್ರಯತ್ನವೂ ನಡೆದಿದೆ. ಆದರೂ ಅಮೆರಿಕದ ಒತ್ತಡವನ್ನು ಮೀರುವುದಕ್ಕೆ ಕಷ್ಟವಾಗುತ್ತಿದೆ. ಕಷ್ಟ ಬಂದಾಗಲೆಲ್ಲ ಇಂಧನವನ್ನು ಹೆಚ್ಚು ಶೇಖರಿಸಿಟ್ಟುಕೊಳ್ಳಬೇಕು ಅಂದುಕೊಳ್ಳುತ್ತೇವೆ. ಆಮೇಲೆ ಮರೆತುಬಿಡುತ್ತೇವೆ. ಸೌರ, ವಾಯು ಇತ್ಯಾದಿ ಪರ್ಯಾಯ ಇಂಧನ ಮೂಲಗಳನ್ನು ಬೆಳೆಸಬೇಕು ಅನ್ನುವುದು ಗೊತ್ತಿದ್ದರೂ ಮಾಡುತ್ತಿಲ್ಲ. ಹಲವು ಪರ್ಯಾಯಗಳಿದ್ದರೆ ವಿಪತ್ತಿನ ಸಮಯದಲ್ಲಿ ಕೊರತೆಯನ್ನು ನಿರ್ವಹಿಸುವುದಕ್ಕೆ ಸುಲಭವಾಗುತ್ತದೆ.</p>.<p>ರಾಸಾಯನಿಕ ಗೊಬ್ಬರವೂ ಬೇರೆ ದೇಶಗಳಿಂದಲೇ ಬರಬೇಕು. ಯುದ್ಧವೋ ಅಥವಾ ಇನ್ನಾವುದೋ ಕಾರಣಕ್ಕೆ ಪೂರೈಕೆಗೆ ಸಮಸ್ಯೆಯಾದರೆ ನಮ್ಮಲ್ಲಿ ಹಾಹಾಕಾರ ಉಂಟಾಗುತ್ತದೆ. ನಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಹೇಳುತ್ತಲೇ ಇದ್ದೇವೆ. ಆದರೆ, ಕಳೆದ ಎರಡು ದಶಕಗಳಲ್ಲಿ ನಮ್ಮಲ್ಲಿ ಉತ್ಪಾದನೆ ಹೆಚ್ಚಾಗಿರುವುದು ಬರೀ ಶೇ 2ರಷ್ಟು. ಈ ರಾಸಾಯನಿಕ ಗೊಬ್ಬರದ ಕಾಟವೇ ಬೇಡ, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳೋಣ, ಅದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎನ್ನುತ್ತಿದ್ದಾರೆ ಪ್ರಧಾನಿ. ಆದರೆ, ದಿಢೀರನೆ ಸಾವಯವ ಕೃಷಿಯ ಕಡೆಗೆ ಹೊರಳುವುದು ಸುಲಭವಲ್ಲ. ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಬಿಕ್ಕಟ್ಟು ತಪ್ಪಿಸಿಕೊಳ್ಳಲು ರಾಸಾಯನಿಕ ಗೊಬ್ಬರವನ್ನು ನಿಷೇಧಿಸಿ ಸಾವಯವ ಕೃಷಿಯನ್ನು ಕಡ್ಡಾಯಗೊಳಿಸಲಾಯಿತು. ಅದರಿಂದ ಭತ್ತ ಹಾಗೂ ಚಹಾ ಉತ್ಪಾದನೆ ತೀವ್ರವಾಗಿ ಕುಸಿಯಿತು. ವಿದೇಶಿ ವಿನಿಮಯದ ಬಿಕ್ಕಟ್ಟು ಪರಿಹರಿಸಲು ಹೋಗಿ ಶ್ರೀಲಂಕಾ ಆಹಾರದ ಬಿಕ್ಕಟ್ಟಿಗೆ ಸಿಲುಕಿತು. ನಾವು ನೈಸರ್ಗಿಕ ಕೃಷಿಯ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಆದರೆ, ಒಂದು ಸ್ಪಷ್ಟ ನೀತಿ ರೂಪಿಸಲು ನಮಗೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಘೋಷಣೆಯ ಮಟ್ಟದಲ್ಲೇ ಉಳಿದುಕೊಂಡಿದೆ.</p>.<p>ವಿದೇಶಿ ವಿನಿಮಯದ ಕೊರತೆಯ ಸಮಸ್ಯೆಗಿರುವುದು ಎರಡು ಪರಿಹಾರ. ಒಂದು, ಮಿತವ್ಯಯ– ಅಂದರೆ ಖರ್ಚಿನಲ್ಲಿ ಕಡಿತ. ಇನ್ನೊಂದು, ವಿನಿಮಯದ ಮೀಸಲು ಹೆಚ್ಚಿಸುವುದು. ಮನೆಯಲ್ಲಿ ವರಮಾನ ಕಡಿಮೆಯಾದರೆ ಹೊಟ್ಟೆಬಟ್ಟೆ ಕಟ್ಟಿ, ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು. ಅಥವಾ ವರಮಾನ ಹೆಚ್ಚಿಸಿಕೊಳ್ಳಬೇಕು. ನಮ್ಮ ಪ್ರಧಾನಿಯವರೂ ಸೇರಿದಂತೆ ಹಲವರು ಮಿತವ್ಯಯವನ್ನು ಸೂಚಿಸುತ್ತಿದ್ದಾರೆ. ಇದರಿಂದ ಹಣ ಉಳಿಯಬಹುದು. ಅಂತಿಮವಾಗಿ ಮನುಷ್ಯ ಅಶಕ್ತನಾಗುತ್ತಾನೆ. ಇದು ಆರ್ಥಿಕತೆಯ ವಿಷಯದಲ್ಲೂ ನಿಜ. ಮಿತವ್ಯಯದಿಂದ ಡಾಲರ್ ಉಳಿಯಬಹುದು. ಆದರೆ, ಆರ್ಥಿಕತೆ ಸೊರಗಿಹೋಗಬಹುದು.</p>.<p>ಮಿತವ್ಯಯ ಒಂದು ನೀತಿಯಾಗಿ ಯಾವುದೇ ದೇಶದಲ್ಲಿ, ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಂತೂ ಎಂದೂ ಯಶಸ್ವಿಯಾಗಿಲ್ಲ. ಗ್ರೀಸ್, ಇಟಲಿ, ಅಥವಾ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಐಎಂಎಫ್ ತಂದ ಮಿತವ್ಯಯ ಕಾರ್ಯಕ್ರಮಗಳು ವಿಫಲವಾಗಿವೆ. ಪಾವತಿ ಶಿಲ್ಕಿನ ಕೊರತೆ ನೀಗಿಸಿಕೊಳ್ಳಲು ಈ ದೇಶಗಳು ಕಠಿಣ ಮಿತವ್ಯಯದ ನೀತಿಯನ್ನು ಆಶ್ರಯಿಸಿದ್ದವು. ಆಮದಿನಲ್ಲಿ ವಿಪರೀತ ಕಡಿತ ಮಾಡಿಕೊಂಡವು. ಆದರೆ, ಚಿನ್ನ ಬರೀ ಬಳಕೆಯ ವಸ್ತುವಲ್ಲ. ಲಕ್ಷಾಂತರ ಜನ ಚಿನ್ನದ ಆಭರಣಗಳ ತಯಾರಿಕೆ, ಸಂಸ್ಕರಣೆ, ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿನ್ನದ ಮಾರಾಟ ನಿಂತರೆ, ಅವರ ಆದಾಯವೂ ಕುಸಿಯುತ್ತದೆ, ಕಾರ್ಖಾನೆಗಳು ಮುಚ್ಚುತ್ತವೆ. ಆರ್ಥಿಕತೆಯು ಸೊರಗುತ್ತದೆ. ನಮ್ಮ ಆರ್ಥಿಕತೆಯಲ್ಲಿ ನಿಜವಾದ ಸಮಸ್ಯೆಯೆಂದರೆ, ಬಳಕೆಯ ಕೊರತೆ. ಮೊದಲೇ ಜನರ ಬಳಿ ಹಣವಿಲ್ಲ. ಮಿತವ್ಯಯದಿಂದ ಕೊಳ್ಳುವುದು ಇನ್ನೂ ಕಡಿಮೆಯಾಗುತ್ತಿದೆ. ಬೇಡಿಕೆಯ ಕೊರತೆ ಹೆಚ್ಚುತ್ತದೆ. ಸಹಜವಾಗಿಯೇ ಹೂಡಿಕೆಯೂ ಕಮ್ಮಿಯಾಗುತ್ತದೆ. ಉತ್ಪಾದನೆ ಇನ್ನೂ ಕಮ್ಮಿಯಾಗುತ್ತದೆ. ರಫ್ತು ಕುಸಿಯುತ್ತಿದೆ. ಮಿತವ್ಯಯದ ನೀತಿಯಿಂದ ಸಮಸ್ಯೆ ತೀವ್ರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.</p>.<p>ಯಾವುದೇ ಬಿಕ್ಕಟ್ಟು ಎದುರಾದಾಗಲೂ ಸಮಸ್ಯೆ ತೀವ್ರವಾಗಿ ಕಾಡುವುದು ಸಾಮಾನ್ಯ ಜನರನ್ನು ಮತ್ತು ಸಣ್ಣ ಉದ್ದಿಮೆಗಳನ್ನು. ಈಗಲೂ ಹೋಟೆಲ್ ಇತ್ಯಾದಿ ಉದ್ದಿಮೆಗಳು ಸಂಕಷ್ಟದಲ್ಲಿವೆ. ಕೋವಿಡ್ನಂತಹ ಬಿಕ್ಕಟ್ಟಿನ ಸಮಯದಲ್ಲೂ ದೊಡ್ಡ ಉದ್ದಿಮೆಗಳ ಲಾಭಕ್ಕೆ ತೊಂದರೆಯಾಗಿರಲಿಲ್ಲ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರೇ ಗಮನಿಸಿರುವಂತೆ, ಕಾರ್ಪೊರೇಟ್ ಲಾಭದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ಆದರೆ, ಕೆಳವರ್ಗದವರ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹಾಗಾಗಿ ಅವರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಯೋಚಿಸಬೇಕು. ಅವರಿಂದ ತ್ಯಾಗವನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆಹಾರ ಭದ್ರತೆ ಮತ್ತು ಜೀವನೋಪಾಯಕ್ಕೆ ಆದ್ಯತೆ ನೀಡಬೇಕು. ಮನರೇಗಾದಂತಹ ಯೋಜನೆಯನ್ನು ಉಳಿಸಿಕೊಂಡು ನಗರಗಳಿಗೂ ವಿಸ್ತರಿಸಿ, ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು. ಜನರ ಖರ್ಚು ಮಾಡುವ ಸಾಮರ್ಥ್ಯವನ್ನು ಕಿತ್ತುಕೊಂಡರೆ, ಆರ್ಥಿಕತೆ ಇನ್ನಷ್ಟು ಕುಸಿಯುತ್ತದೆ. ಉತ್ಪಾದನೆ ಮತ್ತೂ ಕಮ್ಮಿಯಾಗುತ್ತದೆ. ನಮಗೆ ಬೇಕಿರುವುದು ಬೇಡಿಕೆಯನ್ನು ಸೃಷ್ಟಿಸುವ, ಸಂಪತ್ತನ್ನು ಸಮಾನವಾಗಿ ಹಂಚುವ ನೀತಿಗಳು. ಶ್ರೀಮಂತರನ್ನು ಓಲೈಸಿದರೆ ಅವರು ಬಂಡವಾಳ ಹೂಡಿಕೆ ಮಾಡುತ್ತಾರೆಂಬ ನಂಬಿಕೆ ಈಗ ಸಂಪೂರ್ಣ ಸುಳ್ಳಾಗಿದೆ.</p>.<p>ನಿಜ, ಭಾರತೀಯರೆಲ್ಲರೂ ದಿಢೀರನೆ ಚಿನ್ನ ಬಳಸುವುದನ್ನು ನಿಲ್ಲಿಸಿ, ಪಕ್ಕದ ತೋಟದಲ್ಲಿ ಬೆಳೆದ ಹೂವನ್ನು ಬಳಸುವುದಕ್ಕೆ ಪ್ರಾರಂಭಿಸಿದರೆ, ಅಥವಾ ಸ್ಕೂಟರ್, ಕಾರು ನಿಲ್ಲಿಸಿ ಸೈಕಲ್ ತುಳಿಯುವುದಕ್ಕೆ ಪ್ರಾರಂಭಿಸಿದರೆ ಆಮದು ಕಡಿಮೆಯಾಗುತ್ತದೆ. ಡಾಲರ್ ಮೇಲಿನ ಅವಲಂಬನೆಯೂ ಕಮ್ಮಿಯಾಗುತ್ತದೆ. ಚಾಲ್ತಿ ಖಾತೆ ಕೊರತೆಯೂ ಮಾಯವಾಗಬಹುದು. ಆದರೆ, ಇದರಿಂದ ಅಂತಿಮವಾಗಿ ದೇಶದ ಬೆಳವಣಿಗೆಯೂ ತಗ್ಗುತ್ತದೆ. ಕಚ್ಚಾತೈಲ, ಚಿನ್ನ ಅಥವಾ ಖಾದ್ಯ ತೈಲವನ್ನು ಅವಲಂಬಿಸಿರುವ ಎಲ್ಲ ಉದ್ಯಮಗಳ ಮಾರಾಟ ಕುಸಿಯುತ್ತದೆ. ಆರ್ಥಿಕ ಚಟುವಟಿಕೆಗಳು ಕಡಿಮೆಯಾದಂತೆ ಆರ್ಥಿಕತೆಯ ವೇಗ ಕುಂಠಿತಗೊಳ್ಳಬಹುದು. ದೀರ್ಘಕಾಲದ ಪರಿಹಾರವೆಂದರೆ ಆಮದನ್ನು ಕಡಿಮೆ ಮಾಡುವುದರ ಜೊತೆಗೆ, ನಮ್ಮ ರಫ್ತನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುವುದು. ನಮ್ಮಿಂದ ಬಂಡವಾಳ ಹರಿದುಹೋಗುವುದನ್ನು ತಪ್ಪಿಸುವುದರ ಜೊತೆಗೆ, ನಮ್ಮಲ್ಲಿಗೆ ಹಣ ಹರಿದು ಬರುವಂತೆ ನೋಡಿಕೊಳ್ಳುವುದು.</p>.<p>ವಿದೇಶಿ ಪ್ರವಾಸವನ್ನು ನಿಯಂತ್ರಿಸುವುದಕ್ಕಿಂತ ನಮ್ಮಲ್ಲಿ ಪ್ರವಾಸೋದ್ಯಮ ಬೆಳೆಯುವಂತೆ ನೋಡಿಕೊಳ್ಳುವುದು. ಅಂದರೆ, ವಿದೇಶಿ ವಿನಿಮಯದ ಪ್ರಮಾಣ ಹೆಚ್ಚುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗ. ಅಂದರೆ ಆರ್ಥಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಯೋಚಿಸಬೇಕು. ಕೊಳ್ಳುವುದನ್ನು ಕಡಿಮೆ ಮಾಡುವುದಕ್ಕಿಂತ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕತೆಯನ್ನು ಹೆಚ್ಚು ಸಕ್ರಿಯಗೊಳಿಸುವುದು ಒಳ್ಳೆಯ ದಾರಿಯಾಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>