<p>ಗ್ರಾಮೀಣ ಭಾರತದ ಪ್ರತಿ ಮನೆಗೂ ನೀರು ಒದಗಿಸುವ ‘ಜಲ ಜೀವನ್ ಮಿಷನ್’ ಯೋಜನೆ ಆಕರ್ಷಕವಾಗಿದೆ. ಆದರೆ, ಈ ಯೋಜನೆಯಿಂದಾಗಿ ಹಳ್ಳಿಗಳಿಗೆ ನೀರಿನ ಪೈಪುಗಳು ಬಂದಿವೆಯೇ ಹೊರತು, ನೀರಲ್ಲ! ಸ್ಥಳೀಯ ಜಲಮೂಲಗಳನ್ನು ನಿರ್ಲಕ್ಷಿಸುವ ಯೋಜನೆಗಳಿಂದ ಹಣ ಪೋಲಾಗುವುದರ ಹೊರತು ಹೆಚ್ಚಿನ ಉಪಯೋಗವಿಲ್ಲ.</p>.<p>ಸಾವಿರ ಜನಸಂಖ್ಯೆಯಿರುವ ಮಲೆನಾಡಿನ ಹಳ್ಳಿಯೊಂದರಲ್ಲಿ ಐದು ಪುರಾತನ ಕೆರೆಗಳಿವೆ. ಅಭಿವೃದ್ಧಿಪಡಿಸಿದಲ್ಲಿ ಊರಿನ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಇದನ್ನು ಮಾಡುವ ಬದಲಾಗಿ, ಗ್ರಾಮ ಪಂಚಾಯಿತಿ ಆಡಳಿತ ಕೊಳವೆಬಾವಿಗಳನ್ನು ಕೊರೆಸಿತು. ನೀರಿನ ತೊಟ್ಟಿಗಳನ್ನು ನಿರ್ಮಿಸಿತು. ಕೆಲವರಿಗೆ ನೀರು ಸಿಕ್ಕಿತು. ಹಲವರಿಗೆ ಸಿಗಲಿಲ್ಲ.</p><p>2019ರ ಆಗಸ್ಟ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ರಾಷ್ಟ್ರೀಯ ಜಲ ಜೀವನ್ ಮಿಷನ್’ ಯೋಜನೆಗೆ ಚಾಲನೆ ನೀಡಿದರು. ಪ್ರತಿ ಮನೆಗೂ ಕೊಳಾಯಿ ನೀರು ನೀಡುವುದು ಯೋಜನೆಯ ಉದ್ದೇಶ. 2024ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಅದಾಗಿತ್ತು. ಆ ಯೋಜನೆಯ ಮೂಲ ಅಂದಾಜು ವೆಚ್ಚ ₹3.6 ಲಕ್ಷ ಕೋಟಿ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮವನ್ನು ಪುನರ್ ರಚಿಸಿ ಆರಂಭಿಸಿದ ಈ ಯೋಜನೆ, ಜಗತ್ತಿನ ಅತಿದೊಡ್ಡ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, 2024ರಲ್ಲಿ ಶೇ 100ರಷ್ಟು ಗುರಿ ಸಾಧನೆ ಆಗದ ಕಾರಣ 2028ರವರೆಗೆ ಯೋಜನೆ ಮುಂದುವರಿಯಲಿದೆ. ಅಂದಾಜು ವೆಚ್ಚ ₹8.29 ಲಕ್ಷ ಕೋಟಿಗೇರಿದೆ.</p><p>2019ರಲ್ಲಿ ದೇಶದ 3.23 ಕೋಟಿ (ಶೇ 17) ಗ್ರಾಮೀಣ ಕುಟುಂಬಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು. 2025ರ ಫೆಬ್ರುವರಿ ವೇಳೆಗೆ 15.44 ಕೋಟಿ (ಶೇ 79.74) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆಯೆಂದು ಹೇಳಲಾಗುತ್ತಿದೆ. ವಾಸ್ತವ ಭಿನ್ನವಾಗಿದೆ. ನೆಲದಾಳದಲ್ಲಿ ಪೈಪಿದೆ, ಮನೆಯ ಮುಂದೆ ಮೀಟರ್ ಅಳವಡಿಸಿದ ನಲ್ಲಿಯೂ ಇದೆ. ಆದರೆ, ನೀರಿಲ್ಲ.</p><p>ಕರ್ನಾಟಕದಲ್ಲಿ ‘ಜಲ ಜೀವನ್ ಮಿಷನ್’ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷದ ವಿಷಯವಾಗಿ ಮಾರ್ಪಟ್ಟಿದೆ. ಕೇಂದ್ರದ ಪಾಲಿನ ಅನುದಾನ ಬಿಡುಗಡೆ, ಯೋಜನೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಖರ್ಚು ಮಾಡಿದ ಹಣಕಾಸಿನ ಅಂಕಿ ಅಂಶಗಳು ಏನೇ ಇರಲಿ, ಯೋಜನೆಯು ವೈಫಲ್ಯದತ್ತ ಸಾಗುತ್ತಿರುವುದು ನಿಚ್ಚಳವಾಗುತ್ತಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ಇತ್ತೀಚಿನ ವರದಿಯು, ರಾಜ್ಯದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿನ ಲೋಪಗಳನ್ನು ಎತ್ತಿ ಹಿಡಿದಿದೆ. ತನ್ನ ಪಾಲಿನ ₹24,819 ಕೋಟಿ ಅನುದಾನದಲ್ಲಿ ರಾಜ್ಯ ಬಳಸಿರುವುದು ಶೇ 45ರಷ್ಟು. ಅನುದಾನದ ಅಸಮರ್ಪಕ ಬಳಕೆ, ಪ್ರಮಾಣ ಪತ್ರ ನೀಡುವಲ್ಲಿನ ವಿಳಂಬ ಮತ್ತು ಆಮೆಗತಿಯ ಅನುಷ್ಠಾನದಿಂದ ಸಂಪೂರ್ಣ ಅನುದಾನ ಬಿಡುಗಡೆ ಆಗಿಲ್ಲ. ರಾಜ್ಯದ ಶೇ 34ರಷ್ಟು ಕುಟುಂಬಗಳು ನಲ್ಲಿ ಸಂಪರ್ಕದಿಂದ ವಂಚಿತವಾಗಿವೆ.</p><p>ಸಿಎಜಿ ವರದಿಯ ಪ್ರಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವಿನಿಂದ ಸಂಗ್ರಹಿಸಿದ ನೀರಿನ ಮಾದರಿ ಪರೀಕ್ಷೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಮಗಳು ಮಾತ್ರ ನಿಗದಿತ ಗುಣಮಟ್ಟದ ನೀರಿನ ಸಂಪರ್ಕ ಹೊಂದಿವೆ. ಆರ್ಸೆನಿಕ್ ಮತ್ತು ಇತರ ಭಾರಲೋಹಗಳ ಮಾಲಿನ್ಯ ಪರೀಕ್ಷೆ ನಡೆಸಲು ಪ್ರಯೋಗಾಲಯದಂತಹ ಮೂಲಸೌಕರ್ಯವೇ ಇಲ್ಲದಿರುವುದು ಕಳವಳಕಾರಿ. ಅಂತರ್ಜಲ ಮೂಲಗಳ ಅತಿಯಾದ ಅವಲಂಬನೆಯು ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.</p><p>ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ರಾಜ್ಯ ಸರ್ಕಾರ ಆರೋಪಿಸುತ್ತಿದ್ದರೆ, ಸಿಎಜಿ ವರದಿ ರಾಜ್ಯ ಸರ್ಕಾರದ ದೋಷಗಳತ್ತ ಬೊಟ್ಟು ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲೂ 2024–25ನೇ ಸಾಲಿನಲ್ಲಿ ₹70 ಸಾವಿರ ಕೋಟಿ ಅನುದಾನದಲ್ಲಿ ಬರೀ ಶೇ 30.79ರಷ್ಟು ಮಾತ್ರ ಬಳಕೆಯಾಗಿದೆ. 2019–20ರ ಮೂಲ ಯೋಜನೆಯ ಪ್ರಕಾರ, 19.3 ಕೋಟಿ ಗ್ರಾಮೀಣ ಮನೆಗಳು ಯೋಜನೆಯ ಫಲಾನುಭವಿಗಳು ಎಂದು ಗುರ್ತಿಸಲಾಗಿತ್ತು. ಪರಿಷ್ಕರಣೆಯ ನಂತರದಲ್ಲಿ ಮತ್ತೆ 4 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕದ ಅಗತ್ಯವಿದೆ ಎಂದು ಹೇಳಲಾಯಿತು. ಯೋಜನೆಯ ಅಧಿಕೃತ ದತ್ತಾಂಶ ಕಾಲಕಾಲಕ್ಕೆ ಪರಿಷ್ಕರಣೆಯಾಗದ ಕಾರಣಕ್ಕೆ ನಿಖರ ಮಾಹಿತಿ ಸರ್ಕಾರದಲ್ಲೂ ಲಭ್ಯವಿಲ್ಲ. </p><p>ಯೋಜನೆಯಲ್ಲಿ ಕಂಡುಬರುತ್ತಿರುವುದು ಬರೀ ಹಣ ಬಿಡುಗಡೆಯ ವಿವಾದ ಅಲ್ಲ. ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಟೆಂಡರ್ ದರ ಮತ್ತು ಅನುಮೋದಿತ ದರದ ನಡುವೆ ಶೇ 20ರಿಂದ 30ರಷ್ಟು ವ್ಯತ್ಯಾಸ ಕಂಡುಬಂದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಗುತ್ತಿಗೆದಾರರ ಕಾಮಗಾರಿ ಪರಿಶೀಲನೆ ಕಷ್ಟಕರವಾಗಿದೆ.</p><p>ಸ್ವಾತಂತ್ರ್ಯೋತ್ತರ ಭಾರತವು ಜಗತ್ತಿನ ಇತರ ದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿತು. ಅಣೆಕಟ್ಟುಗಳು, ಕೈಗಾರಿಕೆಗಳು ಮತ್ತವಕ್ಕೆ ಬೇಕಾಗುವ ಮೂಲಸೌಕರ್ಯಗಳ ಕಾರಣಕ್ಕೆ ನಗರೀಕರಣಕ್ಕೆ ಹೆಚ್ಚು ಒತ್ತು ನೀಡುವುದು ನಿರಂತರವಾಗಿ ನಡೆಯಿತು. ಗ್ರಾಮೀಣ ಭಾರತಕ್ಕೂ ಮತ್ತು ನಗರಪ್ರಣೀತ ಇಂಡಿಯಾಕ್ಕೂ ಅಂತರ ಹೆಚ್ಚುತ್ತಲೇ ಹೋಯಿತು.</p><p>ಮಲೆನಾಡಿನ ಜಲತಜ್ಞರ ಪ್ರಕಾರ, ಕೇಂದ್ರೀಕೃತ ವ್ಯವಸ್ಥೆಯಿಂದ ಮನೆ ಮನೆಗೆ ನಲ್ಲಿ ಸಂಪರ್ಕ ನೀಡುವುದು ಯಾವ ರೀತಿಯಿಂದಲೂ ಸಾಧುವಲ್ಲ. ರಾಜರ ಕಾಲದಲ್ಲಿ ನಿರ್ಮಿಸಿದ ಕೆರೆಗಳನ್ನು ಪುನಶ್ಚೇತನಗೊಳಿಸಿದರೆ, ಅಂತರ್ಜಲ ತಾನಾಗಿಯೇ ಹೆಚ್ಚುತ್ತದೆ. ಕೊಳವೆಬಾವಿಗಳಿಗಿಂತ ತೆರೆದ ಬಾವಿಗಳಿಂದ ನೀರು ಪಡೆಯುವುದು ಹೆಚ್ಚು ಸೂಕ್ತ. ಸರ್ಕಾರದ ನೀರು ಸರಬರಾಜು ಯೋಜನೆ ಜಾರಿಯಿಂದಾಗಿ ಮಲೆನಾಡಿನ ಸಾಕಷ್ಟು ಕೆರೆಗಳು ನಶಿಸಿವೆ. ಸಾರ್ವಜನಿಕ ಬಾವಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಕೆರೆ ಒತ್ತುವರಿ ನಿರಂತರವಾಗಿದೆ.</p><p>ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಎತ್ತಿನಹೊಳೆ ಯೋಜನೆಯ ಮೂಲ ಯೋಜನಾ ವೆಚ್ಚ ₹12,912 ಕೋಟಿ. ಮರು ಪರಿಷ್ಕರಣೆ ಮಾಡಿದ ಯೋಜನಾ ವೆಚ್ಚ ₹23,251 ಕೋಟಿ. ನೇತ್ರಾವತಿ ಉಪನದಿಗಳಿಂದ ಹೆಚ್ಚುವರಿಯಾಗಿ 24 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ ಎಂದು ಮೊದಲು ಅಂದಾಜಿಸಲಾಗಿತ್ತು. ಹಾಲಿ ಈ ಪ್ರಮಾಣ ಬರೀ 4 ಟಿಎಂಸಿ ಅಡಿ ಎಂದು ಹೇಳಲಾಗಿದೆ. ಲಭ್ಯವಾಗುವ ನೀರಿನ ಪ್ರಮಾಣ ಆರು ಪಟ್ಟು ಕಡಿಮೆ ಮತ್ತು ಯೋಜನಾ ವೆಚ್ಚ ದ್ವಿಗುಣವಾಗಿ, ಒಟ್ಟಾರೆ ಇಡೀ ಯೋಜನೆಯೇ ಸಂಪೂರ್ಣ ವ್ಯರ್ಥವಾಗಲಿದೆ ಎಂದು ಆ ಭಾಗದ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳುತ್ತಾರೆ. ವ್ಯರ್ಥ ಯೋಜನೆಗೆ ಇದುವರೆಗೂ ಖರ್ಚು ಮಾಡಲಾದ ಮೊತ್ತ ₹17,147 ಕೋಟಿ. ಇದಕ್ಕೂ ಕಡಿಮೆ ಖರ್ಚಿನಲ್ಲಿ ನಾಲ್ಕು ಜಿಲ್ಲೆಗಳ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದರೆ, ಅದು ಶಾಶ್ವತ ಪರಿಹಾರವಾಗುತ್ತಿತ್ತು ಎಂದೂ ಅವರು ಹೇಳುತ್ತಾರೆ.</p><p>‘ನಲ್ಲಿ ನೀರು ಬ್ರಹ್ಮರಾಕ್ಷಸ ಇದ್ದ ಹಾಗೆ. ನೀರಿನ ಎಲ್ಲ ನೈಸರ್ಗಿಕ ಮೂಲಗಳನ್ನೂ ನಾಶ ಮಾಡುವ ಪ್ರಕ್ರಿಯೆ ಯಿದು’ ಎಂದು ಕಾದಂಬರಿಕಾರ ನಾ. ಡಿಸೋಜ ಹೇಳುತ್ತಿದ್ದರು. ತೆರೆದ ಬಾವಿಗಳು, ಕೆರೆ–ಕುಂಟೆಗಳು, ಸದಾ ಹರಿಯುವ ನದಿಗಳು ನಮಗೆ ನೀರಿನ ಮೂಲಗಳಾಗಬೇಕು. ನದಿಗೆ ನಿರಂತರವಾಗಿ ನೀರು ಲಭ್ಯವಾಗುವ ಹಾಗೆ ಮಾಡುವ ಅರಣ್ಯ ಸಂಪತ್ತನ್ನು, ಜೀವಿವೈವಿಧ್ಯ ನೆಲೆಗಳನ್ನು ರಕ್ಷಿಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳುತ್ತಿದ್ದರು.</p><p>ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ನೀರಿನ ಯೋಜನೆಗಳ ಪೈಪುಗಳು ಮತ್ತು ಜಲ ಜೀವನ್ ಮಿಷನ್ ಯೋಜನೆಯ ನೀರೇ ಹರಿಯದ ಪೈಪುಗಳು ಸೇರಿದಂತೆ ಅಗೆದಲ್ಲೆಲ್ಲಾ ಪ್ಲಾಸ್ಟಿಕ್ ಪೈಪುಗಳೇ ಸಿಗುತ್ತವೆ ಎನ್ನುತ್ತಾರೆ ಶಿವಾನಂದ ಕಳವೆ. ಸರ್ಕಾರದ ಸಹಾಯವಿಲ್ಲದೆ ಕೆರೆಗಳ ಪುನಶ್ಚೇತನ ಆಂದೋಲನದಲ್ಲಿ ತೊಡಗಿಕೊಂಡಿರುವ ಅವರು, ‘ಸ್ಥಳೀಯ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಅದರಿಂದ ಲಭ್ಯವಾಗುವ ನೀರನ್ನು ಸ್ಥಳೀಯರಿಗೆ ಹಂಚುವುದೇ ಸರಿಯಾದ ಮಾರ್ಗ’ ಎನ್ನುತ್ತಾರೆ.</p><p>‘ಪ್ರತಿ ಮನೆಗೂ ಕೊಳಾಯಿ ನೀರು ಎಂಬುದು ಬರೀ ಘೋಷಣೆಯಾಗಿಯೇ ಉಳಿದಿದೆ. ನಾನು ವಾಸಿಸುವ ಹಳ್ಳಿ ಬಿಕಾಂಪುರದಲ್ಲಿ ನೀರು ಶೇಖರಣೆಗೆ ದೊಡ್ಡ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಮನೆ ಮನೆಗೂ ನಲ್ಲಿ ಸಂಪರ್ಕ ನೀಡಲಾಗಿದೆ. ನೀರು ಮಾತ್ರ ಬಂದಿಲ್ಲ. ಇದು ಬರೀ ನನ್ನ ಹಳ್ಳಿಯ ಕಥೆಯಲ್ಲ. ಇಡೀ ದೇಶದ ಕಥೆ’ ಎಂದು ಜಲ ಜೀವನ್ ಮಿಷನ್ ಯೋಜನೆಯ ಕುರಿತು ಅಭಿಪ್ರಾಯ ಹಂಚಿಕೊಂಡವರು ‘ಭಾರತದ ಜಲಪುರುಷ’ ಎಂದು ಪ್ರಸಿದ್ಧರಾದ ರಾಜೇಂದ್ರ ಸಿಂಗ್.</p><p>ಸಾಗರ ನಗರಕ್ಕೆ ಕುಡಿಯುವ ನೀರಿನ ಮೂಲ ಶರಾವತಿ ನದಿ. ಈ ನಗರಕ್ಕೆ 30 ಕಿ.ಮೀ. ದೂರದಿಂದ ಗುರುತ್ವಾಕರ್ಷಣೆ ಶಕ್ತಿಗೆ ವಿರುದ್ಧವಾಗಿ ನೀರನ್ನು ಎತ್ತಿ ತರಲಾಗುತ್ತಿದೆ. 24 ಗಂಟೆಯೂ ಜನರಿಗೆ ನೀರು ದೊರೆಯಬೇಕು ಎಂಬುದು ಇಲ್ಲಿನ ಜನಪ್ರತಿನಿಧಿಗಳ ಬಯಕೆ. ಇದರಿಂದ ಆಗುತ್ತಿರುವ ಅನಾಹುತವನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ.<br>ಶೇ 50ರಷ್ಟು ಸಂಸ್ಕರಿಸಿದ ಶುದ್ಧ ನೀರು ನಿರ್ವಹಣೆ ಕೊರತೆಯ ಕಾರಣಕ್ಕೆ ಚರಂಡಿ ಸೇರುತ್ತಿದೆ. 3,000 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ಸಿದ್ದಾಪುರ ತಾಲ್ಲೂಕಿಗೂ ಶರಾವತಿ ನೀರನ್ನೇ ಒದಗಿಸುವ ಯೋಜನೆ ಭರದಿಂದ ಸಾಗಿದೆ. ಎತ್ತ ಸಾಗುತ್ತಿದೆ ಆಡಳಿತ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗ್ರಾಮೀಣ ಭಾರತದ ಪ್ರತಿ ಮನೆಗೂ ನೀರು ಒದಗಿಸುವ ‘ಜಲ ಜೀವನ್ ಮಿಷನ್’ ಯೋಜನೆ ಆಕರ್ಷಕವಾಗಿದೆ. ಆದರೆ, ಈ ಯೋಜನೆಯಿಂದಾಗಿ ಹಳ್ಳಿಗಳಿಗೆ ನೀರಿನ ಪೈಪುಗಳು ಬಂದಿವೆಯೇ ಹೊರತು, ನೀರಲ್ಲ! ಸ್ಥಳೀಯ ಜಲಮೂಲಗಳನ್ನು ನಿರ್ಲಕ್ಷಿಸುವ ಯೋಜನೆಗಳಿಂದ ಹಣ ಪೋಲಾಗುವುದರ ಹೊರತು ಹೆಚ್ಚಿನ ಉಪಯೋಗವಿಲ್ಲ.</p>.<p>ಸಾವಿರ ಜನಸಂಖ್ಯೆಯಿರುವ ಮಲೆನಾಡಿನ ಹಳ್ಳಿಯೊಂದರಲ್ಲಿ ಐದು ಪುರಾತನ ಕೆರೆಗಳಿವೆ. ಅಭಿವೃದ್ಧಿಪಡಿಸಿದಲ್ಲಿ ಊರಿನ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಇದನ್ನು ಮಾಡುವ ಬದಲಾಗಿ, ಗ್ರಾಮ ಪಂಚಾಯಿತಿ ಆಡಳಿತ ಕೊಳವೆಬಾವಿಗಳನ್ನು ಕೊರೆಸಿತು. ನೀರಿನ ತೊಟ್ಟಿಗಳನ್ನು ನಿರ್ಮಿಸಿತು. ಕೆಲವರಿಗೆ ನೀರು ಸಿಕ್ಕಿತು. ಹಲವರಿಗೆ ಸಿಗಲಿಲ್ಲ.</p><p>2019ರ ಆಗಸ್ಟ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ರಾಷ್ಟ್ರೀಯ ಜಲ ಜೀವನ್ ಮಿಷನ್’ ಯೋಜನೆಗೆ ಚಾಲನೆ ನೀಡಿದರು. ಪ್ರತಿ ಮನೆಗೂ ಕೊಳಾಯಿ ನೀರು ನೀಡುವುದು ಯೋಜನೆಯ ಉದ್ದೇಶ. 2024ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಅದಾಗಿತ್ತು. ಆ ಯೋಜನೆಯ ಮೂಲ ಅಂದಾಜು ವೆಚ್ಚ ₹3.6 ಲಕ್ಷ ಕೋಟಿ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮವನ್ನು ಪುನರ್ ರಚಿಸಿ ಆರಂಭಿಸಿದ ಈ ಯೋಜನೆ, ಜಗತ್ತಿನ ಅತಿದೊಡ್ಡ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, 2024ರಲ್ಲಿ ಶೇ 100ರಷ್ಟು ಗುರಿ ಸಾಧನೆ ಆಗದ ಕಾರಣ 2028ರವರೆಗೆ ಯೋಜನೆ ಮುಂದುವರಿಯಲಿದೆ. ಅಂದಾಜು ವೆಚ್ಚ ₹8.29 ಲಕ್ಷ ಕೋಟಿಗೇರಿದೆ.</p><p>2019ರಲ್ಲಿ ದೇಶದ 3.23 ಕೋಟಿ (ಶೇ 17) ಗ್ರಾಮೀಣ ಕುಟುಂಬಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು. 2025ರ ಫೆಬ್ರುವರಿ ವೇಳೆಗೆ 15.44 ಕೋಟಿ (ಶೇ 79.74) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆಯೆಂದು ಹೇಳಲಾಗುತ್ತಿದೆ. ವಾಸ್ತವ ಭಿನ್ನವಾಗಿದೆ. ನೆಲದಾಳದಲ್ಲಿ ಪೈಪಿದೆ, ಮನೆಯ ಮುಂದೆ ಮೀಟರ್ ಅಳವಡಿಸಿದ ನಲ್ಲಿಯೂ ಇದೆ. ಆದರೆ, ನೀರಿಲ್ಲ.</p><p>ಕರ್ನಾಟಕದಲ್ಲಿ ‘ಜಲ ಜೀವನ್ ಮಿಷನ್’ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷದ ವಿಷಯವಾಗಿ ಮಾರ್ಪಟ್ಟಿದೆ. ಕೇಂದ್ರದ ಪಾಲಿನ ಅನುದಾನ ಬಿಡುಗಡೆ, ಯೋಜನೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಖರ್ಚು ಮಾಡಿದ ಹಣಕಾಸಿನ ಅಂಕಿ ಅಂಶಗಳು ಏನೇ ಇರಲಿ, ಯೋಜನೆಯು ವೈಫಲ್ಯದತ್ತ ಸಾಗುತ್ತಿರುವುದು ನಿಚ್ಚಳವಾಗುತ್ತಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ಇತ್ತೀಚಿನ ವರದಿಯು, ರಾಜ್ಯದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿನ ಲೋಪಗಳನ್ನು ಎತ್ತಿ ಹಿಡಿದಿದೆ. ತನ್ನ ಪಾಲಿನ ₹24,819 ಕೋಟಿ ಅನುದಾನದಲ್ಲಿ ರಾಜ್ಯ ಬಳಸಿರುವುದು ಶೇ 45ರಷ್ಟು. ಅನುದಾನದ ಅಸಮರ್ಪಕ ಬಳಕೆ, ಪ್ರಮಾಣ ಪತ್ರ ನೀಡುವಲ್ಲಿನ ವಿಳಂಬ ಮತ್ತು ಆಮೆಗತಿಯ ಅನುಷ್ಠಾನದಿಂದ ಸಂಪೂರ್ಣ ಅನುದಾನ ಬಿಡುಗಡೆ ಆಗಿಲ್ಲ. ರಾಜ್ಯದ ಶೇ 34ರಷ್ಟು ಕುಟುಂಬಗಳು ನಲ್ಲಿ ಸಂಪರ್ಕದಿಂದ ವಂಚಿತವಾಗಿವೆ.</p><p>ಸಿಎಜಿ ವರದಿಯ ಪ್ರಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವಿನಿಂದ ಸಂಗ್ರಹಿಸಿದ ನೀರಿನ ಮಾದರಿ ಪರೀಕ್ಷೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಮಗಳು ಮಾತ್ರ ನಿಗದಿತ ಗುಣಮಟ್ಟದ ನೀರಿನ ಸಂಪರ್ಕ ಹೊಂದಿವೆ. ಆರ್ಸೆನಿಕ್ ಮತ್ತು ಇತರ ಭಾರಲೋಹಗಳ ಮಾಲಿನ್ಯ ಪರೀಕ್ಷೆ ನಡೆಸಲು ಪ್ರಯೋಗಾಲಯದಂತಹ ಮೂಲಸೌಕರ್ಯವೇ ಇಲ್ಲದಿರುವುದು ಕಳವಳಕಾರಿ. ಅಂತರ್ಜಲ ಮೂಲಗಳ ಅತಿಯಾದ ಅವಲಂಬನೆಯು ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.</p><p>ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ರಾಜ್ಯ ಸರ್ಕಾರ ಆರೋಪಿಸುತ್ತಿದ್ದರೆ, ಸಿಎಜಿ ವರದಿ ರಾಜ್ಯ ಸರ್ಕಾರದ ದೋಷಗಳತ್ತ ಬೊಟ್ಟು ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲೂ 2024–25ನೇ ಸಾಲಿನಲ್ಲಿ ₹70 ಸಾವಿರ ಕೋಟಿ ಅನುದಾನದಲ್ಲಿ ಬರೀ ಶೇ 30.79ರಷ್ಟು ಮಾತ್ರ ಬಳಕೆಯಾಗಿದೆ. 2019–20ರ ಮೂಲ ಯೋಜನೆಯ ಪ್ರಕಾರ, 19.3 ಕೋಟಿ ಗ್ರಾಮೀಣ ಮನೆಗಳು ಯೋಜನೆಯ ಫಲಾನುಭವಿಗಳು ಎಂದು ಗುರ್ತಿಸಲಾಗಿತ್ತು. ಪರಿಷ್ಕರಣೆಯ ನಂತರದಲ್ಲಿ ಮತ್ತೆ 4 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕದ ಅಗತ್ಯವಿದೆ ಎಂದು ಹೇಳಲಾಯಿತು. ಯೋಜನೆಯ ಅಧಿಕೃತ ದತ್ತಾಂಶ ಕಾಲಕಾಲಕ್ಕೆ ಪರಿಷ್ಕರಣೆಯಾಗದ ಕಾರಣಕ್ಕೆ ನಿಖರ ಮಾಹಿತಿ ಸರ್ಕಾರದಲ್ಲೂ ಲಭ್ಯವಿಲ್ಲ. </p><p>ಯೋಜನೆಯಲ್ಲಿ ಕಂಡುಬರುತ್ತಿರುವುದು ಬರೀ ಹಣ ಬಿಡುಗಡೆಯ ವಿವಾದ ಅಲ್ಲ. ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಟೆಂಡರ್ ದರ ಮತ್ತು ಅನುಮೋದಿತ ದರದ ನಡುವೆ ಶೇ 20ರಿಂದ 30ರಷ್ಟು ವ್ಯತ್ಯಾಸ ಕಂಡುಬಂದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಗುತ್ತಿಗೆದಾರರ ಕಾಮಗಾರಿ ಪರಿಶೀಲನೆ ಕಷ್ಟಕರವಾಗಿದೆ.</p><p>ಸ್ವಾತಂತ್ರ್ಯೋತ್ತರ ಭಾರತವು ಜಗತ್ತಿನ ಇತರ ದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿತು. ಅಣೆಕಟ್ಟುಗಳು, ಕೈಗಾರಿಕೆಗಳು ಮತ್ತವಕ್ಕೆ ಬೇಕಾಗುವ ಮೂಲಸೌಕರ್ಯಗಳ ಕಾರಣಕ್ಕೆ ನಗರೀಕರಣಕ್ಕೆ ಹೆಚ್ಚು ಒತ್ತು ನೀಡುವುದು ನಿರಂತರವಾಗಿ ನಡೆಯಿತು. ಗ್ರಾಮೀಣ ಭಾರತಕ್ಕೂ ಮತ್ತು ನಗರಪ್ರಣೀತ ಇಂಡಿಯಾಕ್ಕೂ ಅಂತರ ಹೆಚ್ಚುತ್ತಲೇ ಹೋಯಿತು.</p><p>ಮಲೆನಾಡಿನ ಜಲತಜ್ಞರ ಪ್ರಕಾರ, ಕೇಂದ್ರೀಕೃತ ವ್ಯವಸ್ಥೆಯಿಂದ ಮನೆ ಮನೆಗೆ ನಲ್ಲಿ ಸಂಪರ್ಕ ನೀಡುವುದು ಯಾವ ರೀತಿಯಿಂದಲೂ ಸಾಧುವಲ್ಲ. ರಾಜರ ಕಾಲದಲ್ಲಿ ನಿರ್ಮಿಸಿದ ಕೆರೆಗಳನ್ನು ಪುನಶ್ಚೇತನಗೊಳಿಸಿದರೆ, ಅಂತರ್ಜಲ ತಾನಾಗಿಯೇ ಹೆಚ್ಚುತ್ತದೆ. ಕೊಳವೆಬಾವಿಗಳಿಗಿಂತ ತೆರೆದ ಬಾವಿಗಳಿಂದ ನೀರು ಪಡೆಯುವುದು ಹೆಚ್ಚು ಸೂಕ್ತ. ಸರ್ಕಾರದ ನೀರು ಸರಬರಾಜು ಯೋಜನೆ ಜಾರಿಯಿಂದಾಗಿ ಮಲೆನಾಡಿನ ಸಾಕಷ್ಟು ಕೆರೆಗಳು ನಶಿಸಿವೆ. ಸಾರ್ವಜನಿಕ ಬಾವಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಕೆರೆ ಒತ್ತುವರಿ ನಿರಂತರವಾಗಿದೆ.</p><p>ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಎತ್ತಿನಹೊಳೆ ಯೋಜನೆಯ ಮೂಲ ಯೋಜನಾ ವೆಚ್ಚ ₹12,912 ಕೋಟಿ. ಮರು ಪರಿಷ್ಕರಣೆ ಮಾಡಿದ ಯೋಜನಾ ವೆಚ್ಚ ₹23,251 ಕೋಟಿ. ನೇತ್ರಾವತಿ ಉಪನದಿಗಳಿಂದ ಹೆಚ್ಚುವರಿಯಾಗಿ 24 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ ಎಂದು ಮೊದಲು ಅಂದಾಜಿಸಲಾಗಿತ್ತು. ಹಾಲಿ ಈ ಪ್ರಮಾಣ ಬರೀ 4 ಟಿಎಂಸಿ ಅಡಿ ಎಂದು ಹೇಳಲಾಗಿದೆ. ಲಭ್ಯವಾಗುವ ನೀರಿನ ಪ್ರಮಾಣ ಆರು ಪಟ್ಟು ಕಡಿಮೆ ಮತ್ತು ಯೋಜನಾ ವೆಚ್ಚ ದ್ವಿಗುಣವಾಗಿ, ಒಟ್ಟಾರೆ ಇಡೀ ಯೋಜನೆಯೇ ಸಂಪೂರ್ಣ ವ್ಯರ್ಥವಾಗಲಿದೆ ಎಂದು ಆ ಭಾಗದ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳುತ್ತಾರೆ. ವ್ಯರ್ಥ ಯೋಜನೆಗೆ ಇದುವರೆಗೂ ಖರ್ಚು ಮಾಡಲಾದ ಮೊತ್ತ ₹17,147 ಕೋಟಿ. ಇದಕ್ಕೂ ಕಡಿಮೆ ಖರ್ಚಿನಲ್ಲಿ ನಾಲ್ಕು ಜಿಲ್ಲೆಗಳ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದರೆ, ಅದು ಶಾಶ್ವತ ಪರಿಹಾರವಾಗುತ್ತಿತ್ತು ಎಂದೂ ಅವರು ಹೇಳುತ್ತಾರೆ.</p><p>‘ನಲ್ಲಿ ನೀರು ಬ್ರಹ್ಮರಾಕ್ಷಸ ಇದ್ದ ಹಾಗೆ. ನೀರಿನ ಎಲ್ಲ ನೈಸರ್ಗಿಕ ಮೂಲಗಳನ್ನೂ ನಾಶ ಮಾಡುವ ಪ್ರಕ್ರಿಯೆ ಯಿದು’ ಎಂದು ಕಾದಂಬರಿಕಾರ ನಾ. ಡಿಸೋಜ ಹೇಳುತ್ತಿದ್ದರು. ತೆರೆದ ಬಾವಿಗಳು, ಕೆರೆ–ಕುಂಟೆಗಳು, ಸದಾ ಹರಿಯುವ ನದಿಗಳು ನಮಗೆ ನೀರಿನ ಮೂಲಗಳಾಗಬೇಕು. ನದಿಗೆ ನಿರಂತರವಾಗಿ ನೀರು ಲಭ್ಯವಾಗುವ ಹಾಗೆ ಮಾಡುವ ಅರಣ್ಯ ಸಂಪತ್ತನ್ನು, ಜೀವಿವೈವಿಧ್ಯ ನೆಲೆಗಳನ್ನು ರಕ್ಷಿಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳುತ್ತಿದ್ದರು.</p><p>ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ನೀರಿನ ಯೋಜನೆಗಳ ಪೈಪುಗಳು ಮತ್ತು ಜಲ ಜೀವನ್ ಮಿಷನ್ ಯೋಜನೆಯ ನೀರೇ ಹರಿಯದ ಪೈಪುಗಳು ಸೇರಿದಂತೆ ಅಗೆದಲ್ಲೆಲ್ಲಾ ಪ್ಲಾಸ್ಟಿಕ್ ಪೈಪುಗಳೇ ಸಿಗುತ್ತವೆ ಎನ್ನುತ್ತಾರೆ ಶಿವಾನಂದ ಕಳವೆ. ಸರ್ಕಾರದ ಸಹಾಯವಿಲ್ಲದೆ ಕೆರೆಗಳ ಪುನಶ್ಚೇತನ ಆಂದೋಲನದಲ್ಲಿ ತೊಡಗಿಕೊಂಡಿರುವ ಅವರು, ‘ಸ್ಥಳೀಯ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಅದರಿಂದ ಲಭ್ಯವಾಗುವ ನೀರನ್ನು ಸ್ಥಳೀಯರಿಗೆ ಹಂಚುವುದೇ ಸರಿಯಾದ ಮಾರ್ಗ’ ಎನ್ನುತ್ತಾರೆ.</p><p>‘ಪ್ರತಿ ಮನೆಗೂ ಕೊಳಾಯಿ ನೀರು ಎಂಬುದು ಬರೀ ಘೋಷಣೆಯಾಗಿಯೇ ಉಳಿದಿದೆ. ನಾನು ವಾಸಿಸುವ ಹಳ್ಳಿ ಬಿಕಾಂಪುರದಲ್ಲಿ ನೀರು ಶೇಖರಣೆಗೆ ದೊಡ್ಡ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಮನೆ ಮನೆಗೂ ನಲ್ಲಿ ಸಂಪರ್ಕ ನೀಡಲಾಗಿದೆ. ನೀರು ಮಾತ್ರ ಬಂದಿಲ್ಲ. ಇದು ಬರೀ ನನ್ನ ಹಳ್ಳಿಯ ಕಥೆಯಲ್ಲ. ಇಡೀ ದೇಶದ ಕಥೆ’ ಎಂದು ಜಲ ಜೀವನ್ ಮಿಷನ್ ಯೋಜನೆಯ ಕುರಿತು ಅಭಿಪ್ರಾಯ ಹಂಚಿಕೊಂಡವರು ‘ಭಾರತದ ಜಲಪುರುಷ’ ಎಂದು ಪ್ರಸಿದ್ಧರಾದ ರಾಜೇಂದ್ರ ಸಿಂಗ್.</p><p>ಸಾಗರ ನಗರಕ್ಕೆ ಕುಡಿಯುವ ನೀರಿನ ಮೂಲ ಶರಾವತಿ ನದಿ. ಈ ನಗರಕ್ಕೆ 30 ಕಿ.ಮೀ. ದೂರದಿಂದ ಗುರುತ್ವಾಕರ್ಷಣೆ ಶಕ್ತಿಗೆ ವಿರುದ್ಧವಾಗಿ ನೀರನ್ನು ಎತ್ತಿ ತರಲಾಗುತ್ತಿದೆ. 24 ಗಂಟೆಯೂ ಜನರಿಗೆ ನೀರು ದೊರೆಯಬೇಕು ಎಂಬುದು ಇಲ್ಲಿನ ಜನಪ್ರತಿನಿಧಿಗಳ ಬಯಕೆ. ಇದರಿಂದ ಆಗುತ್ತಿರುವ ಅನಾಹುತವನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ.<br>ಶೇ 50ರಷ್ಟು ಸಂಸ್ಕರಿಸಿದ ಶುದ್ಧ ನೀರು ನಿರ್ವಹಣೆ ಕೊರತೆಯ ಕಾರಣಕ್ಕೆ ಚರಂಡಿ ಸೇರುತ್ತಿದೆ. 3,000 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ಸಿದ್ದಾಪುರ ತಾಲ್ಲೂಕಿಗೂ ಶರಾವತಿ ನೀರನ್ನೇ ಒದಗಿಸುವ ಯೋಜನೆ ಭರದಿಂದ ಸಾಗಿದೆ. ಎತ್ತ ಸಾಗುತ್ತಿದೆ ಆಡಳಿತ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>