<p><em><strong>ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಸಂವಿಧಾನಾತ್ಮಕ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು, ಇಂಗ್ಲಿಷ್ ಮಾಧ್ಯಮದ ಹೆಸರಿನಲ್ಲಿನ ಭಾಷಾಕ್ರೌರ್ಯ ವಿರುದ್ಧದ ಹೋರಾಟಕ್ಕೆ ಬಲನೀಡುವಂತಿದೆ. ಮಾತೃಭಾಷೆಯಲ್ಲಿನ ಕಲಿಕೆ ಮಕ್ಕಳ ಮನೋವಿಕಾಸಕ್ಕೆ, ಸಂವೇದನಾಶೀಲತೆಗೆ ಪೂರಕ....</strong></em></p>.<p>ನಲವತ್ತು ವರ್ಷಗಳಿಂದಲೂ ಆದಿವಾಸಿ ಮಕ್ಕಳಿಗೆ, ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ಕೊಡುತ್ತ ಅವರೊಡನೆ ಬದುಕಿ ಬಾಳಿದ್ದೇನೆ. ಈ ಅನುಭವದಲ್ಲಿ, ಶಿಕ್ಷಣಕ್ಕೂ ಭಾಷೆಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಭಾಷಾಶಾಸ್ತ್ರಜ್ಞನೇ ಆಗಬೇಕೆಂದೇನೂ ಇಲ್ಲ ಎನ್ನುವ ನಂಬಿಕೆ ಬಲಗೊಂಡಿದೆ. ಆದರೆ, ಈ ಸಾಮಾನ್ಯ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಿದೆ.</p>.<p>ಪರಿಚಿತ ಭಾಷೆಯಲ್ಲಿ ಮಕ್ಕಳು ಕಲಿಯಲು ಬಯಸುತ್ತಾರೆ. ಅಂಥ ಕಲಿಕೆ ಸಂತೋಷದಾಯಕವೂ ಹೌದು. ಪರಿಚಯವೇ ಇಲ್ಲದ ಇಂಗ್ಲಿಷ್ ಭಾಷೆಯಲ್ಲಿ ನಮ್ಮ ಗ್ರಾಮೀಣ ಮಕ್ಕಳು ಕಲಿಯಲು ಇಷ್ಟಪಡುವುದಿಲ್ಲ. ಒತ್ತಾಯದಿಂದ ಹೇರಿದರೆ ಭಾಷೆಯನ್ನೇ ದ್ವೇಷಿಸುತ್ತ ಕೀಳರಿಮೆಯಲ್ಲಿ ಬಳಲಬಹುದು. ಇಂದಿನ ಜಾಗತೀಕರಣ ಸೃಷ್ಟಿಸಿರುವ ‘ಯಶಸ್ಸು’ ಎಂಬ ವ್ಯಸನಮಯ ಪ್ರಪಂಚದಲ್ಲಿ ಮಕ್ಕಳು ತಮ್ಮ ಇಷ್ಟ–ಅನಿಷ್ಟಗಳನ್ನು ಸಹಜವಾಗಿ ಹೇಳಿಕೊಳ್ಳಲಾರರು. ‘ಹೆಚ್ಚು–ಹೆಚ್ಚು’ಗಳ ಗೀಳಿನ ಭಾರದಲ್ಲಿ ಬಾಲ್ಯದ ಮುಗ್ಧ ಸಂತೋಷ, ಸ್ವಂತಿಕೆಗಳು ಕಳೆದುಹೋಗುತ್ತಿವೆ. ಅವರ ಪಾಲಿಗೆ ಅನುಕರಣೆಯೊಂದೇ ಜೀವಹಿಡಿದು ಬದುಕಿ ಬಾಳುವ ಸಾಧನವಾಗಿದೆ. ತೀಕ್ಷ್ಣ ಅಭಿಪ್ರಾಯಗಳು ಸಾಮಾನ್ಯ ಎನ್ನುವಂತಿರುವ ಸಮಕಾಲೀನ ಸಂದರ್ಭ, ಬದುಕು ನಮ್ಮದಲ್ಲವೇನೋ ಎಂಬಂತೆ ಮಾಡಿದೆ.</p>.<p>ಬದುಕು ಮತ್ತು ಭಾಷೆಯದು ಬಿಡಿಸಲಾರದ ಸಂಬಂಧ. ಅಂತರಂಗದ ನೋವು ನಲಿವುಗಳ ಅಭಿವ್ಯಕ್ತಿಗೆ ಭಾಷೆಯೇ ಆಧಾರ. ಹೊಟ್ಟೆ ತುಂಬಿಸಿ<br>ಕೊಳ್ಳುವುದು ಎಷ್ಟು ಮುಖ್ಯವೋ ಮತ್ತೊಬ್ಬರ ಹಸಿವಿಗೆ ಸ್ಪಂದಿಸುವುದೂ ಮುಖ್ಯ. ಸಂವಹನ ಸಾಧ್ಯವಾದ ಭಾಷೆ ಮಾತ್ರ ಸಂವೇದನಾಶೀಲತೆಯನ್ನೂ ಸಾಧ್ಯಮಾಡೀತು. ಅಪರಿಚಿತ ಭಾಷೆಯಲ್ಲಿ ಮನುಷ್ಯ ಸಂಬಂಧವನ್ನು ಕಟ್ಟಲಾಗುವುದೆ? ಮನುಷ್ಯನೊಳಗೇ ಮನೆ ಮಾಡಿರುವ ಹಿಂಸೆ, ಸ್ವಾರ್ಥ, ಅಸೂಯೆಗಳನ್ನು ಅರ್ಥಮಾಡಿಕೊಂಡು ಪ್ರೀತಿ–ಅನುಕಂಪಗಳ ಕಡೆ ವಿಕಾಸವಾಗಲು ಸಾಧ್ಯವಾಗುವುದು ನಗು–ಅಳು ಎರಡಕ್ಕೂ ಒದಗುವ ಮಾತೃಭಾಷೆಯಲ್ಲಿ ಸಾಧ್ಯ.</p>.<p>ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳಲಾರದ ನಮ್ಮ ಮಕ್ಕಳು ಎಂತಹ ಸಮಾಜವನ್ನು ಕಟ್ಟಿಯಾರು? ತಾಂತ್ರಿಕವಾಗಿ ಪ್ರಗತಿಯನ್ನು ಸಾಧಿಸಿ ಎಲ್ಲರಿಗೂ ಸಾಲು<br>ವಷ್ಟು ಹಿಟ್ಟನ್ನು ಉತ್ಪಾದನೆ ಮಾಡಿದರೂ ಹಸಿದ ಹೊಟ್ಟೆಗಳ ಆಕ್ರಂದನಕ್ಕೆ ಕೊನೆಯಿಲ್ಲವೇಕೆ? ಇದು ಹಣದ ಕೊರತೆಯಲ್ಲ, ಅಂತಃಕರಣದ ಕೊರತೆ; ನ್ಯಾಯ, ನೀತಿಯ ಕೊರತೆ. ಇದನ್ನು ಸರಿದೂಗಿಸಲು ಬೇಕಾದದ್ದು ಮನಸ್ಸಿನ ಆಳವನ್ನು ಮುಟ್ಟಬಹುದಾದ ಸಂವಹನ. ಮನದಾಳದ ಎಳೆಗಳನ್ನು ಹಿಡಿದು ಮೀಟಲು ಸಾಧ್ಯವಾಗುವ ನಮ್ಮದೇ ಭಾಷೆಯ ಸಂವಹನ. ವಾಸ್ತವ ಹೀಗಿದ್ದರೂ, ಮಾತೃಭಾಷೆಯ ಪರವಾಗಿ ಸಾಕಷ್ಟು ವೈಜ್ಞಾನಿಕ ಪುರಾವೆಗಳಿದ್ದರೂ, ಸರ್ಕಾರ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ.</p>.<p>ಇಂಗ್ಲಿಷ್ ಅನ್ನದ ಭಾಷೆ, ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ಮಾತ್ರ ಶೈಕ್ಷಣಿಕ ಯಶಸ್ಸು ಸಾಧ್ಯ ಎಂಬುದು ವ್ಯಾಪಕವಾದ ಅವೈಜ್ಞಾನಿಕ ನಂಬಿಕೆ. ಅಂಕಿಅಂಶಗಳೂ ಈ ನಂಬಿಕೆಗೆ ಪೂರಕವಾಗಿಲ್ಲ. ‘ನಮ್ಮ ಭಾಷೆಯನ್ನು ಕೊಲ್ಲುತ್ತಿರುವವರು ಯಾರು?’ ಎಂದು ಬರಹವೊಂದರಲ್ಲಿ ಚರ್ಚಿಸುತ್ತಾ, ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಚೀನಾ, ಸಿಂಗಪುರ, ಮಲೇಷ್ಯಾ, ತೈವಾನ್, ಹಾಂಕಾಂಗ್ ಮುಂತಾದ ದೇಶಗಳನ್ನು ದೇವನೂರ ಮಹಾದೇವ ಅವರು ಉದಾಹರಿಸುತ್ತಾರೆ. ಮ್ಯಾಂಡರಿನ್ ಚೀನಾ ಮೂಲದ ಭಾಷೆ, ಇದು ಈ ಎಲ್ಲ ದೇಶಗಳ ಶಿಕ್ಷಣದ ಮಾಧ್ಯಮವೂ ಹೌದು. ಪ್ರಾಥಮಿಕ ಶಾಲೆಗಳಷ್ಟೇ ಅಲ್ಲದೆ ಉನ್ನತ ಶಿಕ್ಷಣವನ್ನೂ ಈ ಕೆಲವು ದೇಶಗಳು ಮ್ಯಾಂಡರಿನ್ ಭಾಷೆಯಲ್ಲೇ ನೀಡುತ್ತಿವೆ. ಜರ್ಮನಿ, ಫ್ರಾನ್ಸ್, ನೆದರ್ಲೆಂಡ್ ಮುಂತಾದ ದೇಶಗಳು ತಮ್ಮ ತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಈ ಎಲ್ಲ ದೇಶಗಳೂ ಇಂಗ್ಲಿಷ್ ವಿರೋಧಿ ಧೋರಣೆಯಿಂದ ಅಥವಾ ತಮ್ಮ ಭಾಷೆಯ ಅಂಧಾಭಿಮಾನದಿಂದ ಮಾತೃಭಾಷಾ ಶಿಕ್ಷಣವನ್ನು ಅಳವಡಿಸಿಕೊಂಡಿದ್ದಾರೆ ಎಂದೇನೂ ಅಲ್ಲ. ಈ ದೇಶಗಳಲ್ಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುತ್ತಾರೆ. ಆದರೆ, ವಿಷಯ ಗ್ರಹಿಕೆ ಸಾಧ್ಯವಾಗುವುದು ಪರಿಚಿತ ಭಾಷೆಯಲ್ಲಿ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಇವರು ಗೌರವಿಸುತ್ತಾರೆ. ‘ಜಗತ್ತಿನ ಯಾವುದೇ ಸ್ವತಂತ್ರ ರಾಷ್ಟ್ರವೂ ಹೀಗೆ ತನ್ನ ಮಾತೃಭಾಷೆಯನ್ನು ಕೊಂದಿಲ್ಲ’ ಎನ್ನುತ್ತಾರೆ ದೇವನೂರ ಮಹಾದೇವ. ಆದರೆ ನಾವೇಕೆ ನಮ್ಮ ಭಾಷೆಯನ್ನೇ ಕೊಲ್ಲುತ್ತಿದ್ದೇವೆ? ನಮ್ಮ ದೇಶದಲ್ಲಿ ಹಿಂದೆ ಬಳಕೆಯಲ್ಲಿದ್ದ ಅನೇಕ ಭಾಷೆಗಳು ಈಗ ಕಾಣೆಯಾಗಿವೆ. ಭಾರತ ‘ಮಾತುಗಳ ಮಸಣವಾಗುತ್ತಿದೆ’ ಎಂದು ವಿಷಾದಿಸುತ್ತಾರೆ ಭಾಷಾಶಾಸ್ತ್ರಜ್ಞ ಜಿ.ಎನ್. ದೇವಿ ಅವರು.</p>.<p>ಕರ್ನಾಟಕದಲ್ಲಷ್ಟೇ ಏಕೆ, ನಮ್ಮ ಇಡೀ ದೇಶಕ್ಕೇ ವಿಚಿತ್ರವಾದ ಇಂಗ್ಲಿಷ್ ಮಾಧ್ಯಮದ ಸನ್ನಿ ಹಿಡಿದಿರುವುದು ದುರದೃಷ್ಟಕರ. ಗ್ರಾಮೀಣ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ನಮ್ಮ ಸರ್ಕಾರ ಪ್ರತಿವರ್ಷವೂ ಸಾವಿರಾರು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿದೆ. ಪೋಷಕರ ಬೇಡಿಕೆಗೆ ಅನುಗುಣವಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿಯೂ, ತಾನು ಈ ವಿಷಯದಲ್ಲಿ ನಿಸ್ಸಹಾಯಕ ಎನ್ನುವುದು ಸರ್ಕಾರದ ವಾದ.</p>.<p>ಕಲಿಕೆಯ ಮೊದಲ ಹಂತಗಳಲ್ಲಿ ಮಕ್ಕಳ ಮೇಲೆ ಅಪರಿಚಿತ ಭಾಷಾ ಮಾಧ್ಯಮ ಹೇರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂದುತ್ತದೆ, ಸೃಜನಶೀಲತೆ ಕಳೆದುಹೋಗುತ್ತದೆ, ಅತಿಯಾದ ಒತ್ತಡದಿಂದ ಮಕ್ಕಳು ಬಳಲುತ್ತಾರೆ. ಈ ಬಗ್ಗೆ ಪೋಷಕರಿಗೆ ತಿಳಿವಳಿಕೆಯ ಕೊರತೆ ಇರುವಂತಿದೆ. ಸಾಂಕ್ರಾಮಿಕ ರೋಗಗಳ ಕುರಿತು, ಹಾನಿಕಾರಕ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ಸರ್ಕಾರ, ಇಂಗ್ಲಿಷ್ ಮಾಧ್ಯಮದ ಅನಾರೋಗ್ಯಕರ ಶಿಕ್ಷಣಪದ್ಧತಿಯ ಕುರಿತಾಗಿಯೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಜಾಹೀರಾತುಗಳ ಮೂಲಕ ಮಾತೃಭಾಷಾ ಶಿಕ್ಷಣದ ಅನುಕೂಲಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬಹುದಾಗಿತ್ತು. ಶಿಕ್ಷಣ ಇಲಾಖೆ ಹೊರಡಿಸುವ ಸುತ್ತೋಲೆಗಳಲ್ಲಿ ‘ಮಾತೃಭಾಷಾ ಶಿಕ್ಷಣವೇ ಸರ್ವಶ್ರೇಷ್ಠ’ ಎಂಬ ಹೇಳಿಕೆಗಳನ್ನು ಘೋಷವಾಕ್ಯದಂತೆ ಬಳಸಿ ತನ್ನ ಇಲಾಖೆಯ ಸಿಬ್ಬಂದಿ<br>ಯಲ್ಲಿ ಈ ಕುರಿತು ನಂಬಿಕೆ ಮೂಡುವಂತೆ ಮಾಡಬಹುದಾಗಿತ್ತು. ಪೋಷಕರ ಸಭೆಗಳಲ್ಲಿ ಮಾತೃಭಾಷಾ ಶಿಕ್ಷಣದ ಅನುಕೂಲಗಳನ್ನು ತಿಳಿಸಬೇಕಾಗಿತ್ತು.</p>.<p>ಮಾತೃಭಾಷೆ ಅಥವಾ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡದಿರಲು ಕಾನೂನು ಮತ್ತು ಕೋರ್ಟುಗಳು ಸರ್ಕಾರಕ್ಕೆ ತೊಡಕಾಗಿರುವುದು ನಿಜ. ಕನ್ನಡ ಮಾಧ್ಯಮದ ಪರವಾಗಿ ಕರ್ನಾಟಕ ಸರ್ಕಾರವೇ ಹಿಂದೆ ಕೋರ್ಟಿನಲ್ಲಿ ವಾದ ಮಂಡಿಸಿತ್ತು. ಆಗ ಸುಪ್ರೀಂ ಕೋರ್ಟ್, ಪೋಷಕರ ಆಯ್ಕೆಯ ಹಕ್ಕನ್ನು ಎತ್ತಿಹಿಡಿದು ಮಾತೃಭಾಷಾ ಶಿಕ್ಷಣವನ್ನು ಕಡೆಗಣಿಸಿತು. ಒಬ್ಬ ನ್ಯಾಯಾಧೀಶರಂತೂ ‘ಭಾರತವನ್ನು ಒಂದುಗೂಡಿಸುವ ಭಾಷೆ ಇಂಗ್ಲಿಷ್’ ಎಂದರು. ಆದರೆ, ಜನಗಣತಿಯ ಅಂಕಿಅಂಶಗಳು ದೇಶದ ಶೇ 2ರಷ್ಟು ಜನರಿಗೆ ಮಾತ್ರ ಅಲ್ಪಸ್ವಲ್ಪ ಇಂಗ್ಲಿಷ್ ಸಂಭಾಷಣೆ ಸಾಧ್ಯ ಎಂಬುದನ್ನು ತಿಳಿಸುತ್ತದೆ.</p>.<p>ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಶಾದಾಯಕವಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಸಂವಿಧಾನಾತ್ಮಕ ಹಕ್ಕು ಎಂದು ಪ್ರತಿಪಾದಿಸಿರುವ ಕೋರ್ಟ್ನ ದ್ವಿಸದಸ್ಯ ಪೀಠ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವಂತೆ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶಿಸಿದೆ. ಸರ್ಕಾರಿ ಶಾಲೆಗಳಷ್ಟೇ ಅಲ್ಲದೆ, ಖಾಸಗಿ ಶಾಲೆಗಳೂ ಮಾತೃ ಭಾಷಾ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ, ಗುಣಮಟ್ಟದ ಶಿಕ್ಷಣ ಎಂದು ಪರಿಗಣಿಸಬಹುದಾದ ಶಿಕ್ಷಣ ಸಾಧ್ಯವಾಗುವುದು ಅರ್ಥವಾಗುವ ಭಾಷೆಯಲ್ಲಿ, ಹಾಗಾಗಿ ಸರ್ಕಾರ ಮಾತೃಭಾಷಾ ಶಿಕ್ಷಣ ನೀಡಬೇಕು ಎನ್ನುತ್ತದೆ ಕೋರ್ಟ್. ಮುಂದುವರಿದು, ‘ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವುದು ನಮ್ಮ ಭಾಷೆಯಲ್ಲಿ.<br>ಇದು ಅಸ್ತಿತ್ವದ ಹಕ್ಕಿಗೆ ಪೂರಕವಾದದ್ದು. ಹಾಗಾಗಿ ಸಂವಿಧಾನಾತ್ಮಕವಾಗಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕು ಇದೆ, ಇದನ್ನು ಗೌರವಿಸಿ’ ಎಂದು ಕೋರ್ಟ್ ಹೇಳಿದೆ; ‘ಮೊದಲ ಹಂತದ ಕಲಿಕೆಯಲ್ಲಿ ಭಾಷೆಯ ತೊಡಕು ಮಕ್ಕಳ ಮೇಲೆ ಕ್ರೂರವಾದ ಒತ್ತಡವನ್ನು ಹೇರುತ್ತದೆ, ಮಕ್ಕಳು ಯಾಂತ್ರಿಕ ಕಲಿಕೆಗೆ ಶರಣಾಗುತ್ತಾರೆ’ ಎಂದೂ ಅಭಿಪ್ರಾಯಪಟ್ಟಿದೆ.</p>.<p>ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಪ್ರಖ್ಯಾತರಾದ ಅನೇಕ ಸಾಧಕರು ನಮ್ಮ ನಡುವೆ ಇದ್ದಾರೆ. ನಾವು ಕಳೆದ ಇಪ್ಪತ್ತೆಂಟು ವರ್ಷಗಳಿಂದಲೂ ನಡೆಸುತ್ತಿರುವ ‘ದೀನಬಂಧು ಕನ್ನಡ ಮಾಧ್ಯಮ ಶಾಲೆ’ಯಲ್ಲಿ 430 ಮಕ್ಕಳಿದ್ದಾರೆ. ಇವರೆಲ್ಲ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ನಂತರ ಕಾಲೇಜು ಶಿಕ್ಷಣ ಪಡೆದಿದ್ದಾರೆ. ಕೆಲವರು ಅದ್ಭುತ ಕಲಾವಿದರಾಗಿದ್ದಾರೆ, ಎಂಜಿನಿಯರ್ಗಳಾಗಿದ್ದಾರೆ. ಕನ್ನಡ ಮಾಧ್ಯಮದಿಂದಾಗಿ ನಮ್ಮ ಯಾವ ಮಕ್ಕಳಿಗೂ ಹಿನ್ನಡೆಯಾಗಿಲ್ಲ.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ಚಾಮರಾಜನಗರದ ಸ್ವಯಂಸೇವಾ ಒಕ್ಕೂಟದಿಂದ ಏಳು ವರ್ಷಗಳ ಹಿಂದೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯ ಗುಣಮಟ್ಟವನ್ನು ಅಧ್ಯಯನ ಮಾಡಲಾಯಿತು. ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಮಾತುಗಳನ್ನು ಆಲಿಸುವ ಅವಕಾಶಗಳೇ ಇಲ್ಲದ ಕಾರಣ ಕನಿಷ್ಠ ಮಟ್ಟದ ಇಂಗ್ಲಿಷ್ ಪರಿಣತಿಯಾಗಲಿ, ಸಂವಹನ ಶಕ್ತಿಯಾಗಲಿ ಬೆಳೆದಿಲ್ಲ. ಈ ಹಿನ್ನಡೆಗೆ ಅಧ್ಯಾಪಕರನ್ನು ಹೊಣೆ ಮಾಡುವುದು ಸರಿಯಲ್ಲ. ಒಂದು ಭಾಷೆಯಾಗಿ ನಾವು ಇಂಗ್ಲಿಷ್ ಅನ್ನು ಮಕ್ಕಳಿಗೆ ಕಲಿಸಲೇಬೇಕು. ಇದಕ್ಕೆ ಇಂಗ್ಲಿಷ್ ಮಾಧ್ಯಮ ತರಗತಿಗಳೇ ಬೇಕು ಎಂದೇನಿಲ್ಲ. ಇಂದಿನ ಘೋರ ಶೈಕ್ಷಣಿಕ ವೈಫಲ್ಯಕ್ಕೆ ದೋಷಪೂರ್ಣ ನೀತಿಯೇ ಕಾರಣ. ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಜಾಡುಹಿಡಿದು ಮುಂದುವರಿದರೆ, ನಮ್ಮ ಮಕ್ಕಳು ಅಪರಿಚಿತ ಭಾಷೆಯಲ್ಲಿ ಕಲಿಯಬೇಕಾದ ಕ್ರೌರ್ಯದಿಂದ ಪಾರಾಗಬಹುದೇನೋ ಎಂಬ ಆಶಾಭಾವ ಮೂಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಸಂವಿಧಾನಾತ್ಮಕ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು, ಇಂಗ್ಲಿಷ್ ಮಾಧ್ಯಮದ ಹೆಸರಿನಲ್ಲಿನ ಭಾಷಾಕ್ರೌರ್ಯ ವಿರುದ್ಧದ ಹೋರಾಟಕ್ಕೆ ಬಲನೀಡುವಂತಿದೆ. ಮಾತೃಭಾಷೆಯಲ್ಲಿನ ಕಲಿಕೆ ಮಕ್ಕಳ ಮನೋವಿಕಾಸಕ್ಕೆ, ಸಂವೇದನಾಶೀಲತೆಗೆ ಪೂರಕ....</strong></em></p>.<p>ನಲವತ್ತು ವರ್ಷಗಳಿಂದಲೂ ಆದಿವಾಸಿ ಮಕ್ಕಳಿಗೆ, ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ಕೊಡುತ್ತ ಅವರೊಡನೆ ಬದುಕಿ ಬಾಳಿದ್ದೇನೆ. ಈ ಅನುಭವದಲ್ಲಿ, ಶಿಕ್ಷಣಕ್ಕೂ ಭಾಷೆಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಭಾಷಾಶಾಸ್ತ್ರಜ್ಞನೇ ಆಗಬೇಕೆಂದೇನೂ ಇಲ್ಲ ಎನ್ನುವ ನಂಬಿಕೆ ಬಲಗೊಂಡಿದೆ. ಆದರೆ, ಈ ಸಾಮಾನ್ಯ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಿದೆ.</p>.<p>ಪರಿಚಿತ ಭಾಷೆಯಲ್ಲಿ ಮಕ್ಕಳು ಕಲಿಯಲು ಬಯಸುತ್ತಾರೆ. ಅಂಥ ಕಲಿಕೆ ಸಂತೋಷದಾಯಕವೂ ಹೌದು. ಪರಿಚಯವೇ ಇಲ್ಲದ ಇಂಗ್ಲಿಷ್ ಭಾಷೆಯಲ್ಲಿ ನಮ್ಮ ಗ್ರಾಮೀಣ ಮಕ್ಕಳು ಕಲಿಯಲು ಇಷ್ಟಪಡುವುದಿಲ್ಲ. ಒತ್ತಾಯದಿಂದ ಹೇರಿದರೆ ಭಾಷೆಯನ್ನೇ ದ್ವೇಷಿಸುತ್ತ ಕೀಳರಿಮೆಯಲ್ಲಿ ಬಳಲಬಹುದು. ಇಂದಿನ ಜಾಗತೀಕರಣ ಸೃಷ್ಟಿಸಿರುವ ‘ಯಶಸ್ಸು’ ಎಂಬ ವ್ಯಸನಮಯ ಪ್ರಪಂಚದಲ್ಲಿ ಮಕ್ಕಳು ತಮ್ಮ ಇಷ್ಟ–ಅನಿಷ್ಟಗಳನ್ನು ಸಹಜವಾಗಿ ಹೇಳಿಕೊಳ್ಳಲಾರರು. ‘ಹೆಚ್ಚು–ಹೆಚ್ಚು’ಗಳ ಗೀಳಿನ ಭಾರದಲ್ಲಿ ಬಾಲ್ಯದ ಮುಗ್ಧ ಸಂತೋಷ, ಸ್ವಂತಿಕೆಗಳು ಕಳೆದುಹೋಗುತ್ತಿವೆ. ಅವರ ಪಾಲಿಗೆ ಅನುಕರಣೆಯೊಂದೇ ಜೀವಹಿಡಿದು ಬದುಕಿ ಬಾಳುವ ಸಾಧನವಾಗಿದೆ. ತೀಕ್ಷ್ಣ ಅಭಿಪ್ರಾಯಗಳು ಸಾಮಾನ್ಯ ಎನ್ನುವಂತಿರುವ ಸಮಕಾಲೀನ ಸಂದರ್ಭ, ಬದುಕು ನಮ್ಮದಲ್ಲವೇನೋ ಎಂಬಂತೆ ಮಾಡಿದೆ.</p>.<p>ಬದುಕು ಮತ್ತು ಭಾಷೆಯದು ಬಿಡಿಸಲಾರದ ಸಂಬಂಧ. ಅಂತರಂಗದ ನೋವು ನಲಿವುಗಳ ಅಭಿವ್ಯಕ್ತಿಗೆ ಭಾಷೆಯೇ ಆಧಾರ. ಹೊಟ್ಟೆ ತುಂಬಿಸಿ<br>ಕೊಳ್ಳುವುದು ಎಷ್ಟು ಮುಖ್ಯವೋ ಮತ್ತೊಬ್ಬರ ಹಸಿವಿಗೆ ಸ್ಪಂದಿಸುವುದೂ ಮುಖ್ಯ. ಸಂವಹನ ಸಾಧ್ಯವಾದ ಭಾಷೆ ಮಾತ್ರ ಸಂವೇದನಾಶೀಲತೆಯನ್ನೂ ಸಾಧ್ಯಮಾಡೀತು. ಅಪರಿಚಿತ ಭಾಷೆಯಲ್ಲಿ ಮನುಷ್ಯ ಸಂಬಂಧವನ್ನು ಕಟ್ಟಲಾಗುವುದೆ? ಮನುಷ್ಯನೊಳಗೇ ಮನೆ ಮಾಡಿರುವ ಹಿಂಸೆ, ಸ್ವಾರ್ಥ, ಅಸೂಯೆಗಳನ್ನು ಅರ್ಥಮಾಡಿಕೊಂಡು ಪ್ರೀತಿ–ಅನುಕಂಪಗಳ ಕಡೆ ವಿಕಾಸವಾಗಲು ಸಾಧ್ಯವಾಗುವುದು ನಗು–ಅಳು ಎರಡಕ್ಕೂ ಒದಗುವ ಮಾತೃಭಾಷೆಯಲ್ಲಿ ಸಾಧ್ಯ.</p>.<p>ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳಲಾರದ ನಮ್ಮ ಮಕ್ಕಳು ಎಂತಹ ಸಮಾಜವನ್ನು ಕಟ್ಟಿಯಾರು? ತಾಂತ್ರಿಕವಾಗಿ ಪ್ರಗತಿಯನ್ನು ಸಾಧಿಸಿ ಎಲ್ಲರಿಗೂ ಸಾಲು<br>ವಷ್ಟು ಹಿಟ್ಟನ್ನು ಉತ್ಪಾದನೆ ಮಾಡಿದರೂ ಹಸಿದ ಹೊಟ್ಟೆಗಳ ಆಕ್ರಂದನಕ್ಕೆ ಕೊನೆಯಿಲ್ಲವೇಕೆ? ಇದು ಹಣದ ಕೊರತೆಯಲ್ಲ, ಅಂತಃಕರಣದ ಕೊರತೆ; ನ್ಯಾಯ, ನೀತಿಯ ಕೊರತೆ. ಇದನ್ನು ಸರಿದೂಗಿಸಲು ಬೇಕಾದದ್ದು ಮನಸ್ಸಿನ ಆಳವನ್ನು ಮುಟ್ಟಬಹುದಾದ ಸಂವಹನ. ಮನದಾಳದ ಎಳೆಗಳನ್ನು ಹಿಡಿದು ಮೀಟಲು ಸಾಧ್ಯವಾಗುವ ನಮ್ಮದೇ ಭಾಷೆಯ ಸಂವಹನ. ವಾಸ್ತವ ಹೀಗಿದ್ದರೂ, ಮಾತೃಭಾಷೆಯ ಪರವಾಗಿ ಸಾಕಷ್ಟು ವೈಜ್ಞಾನಿಕ ಪುರಾವೆಗಳಿದ್ದರೂ, ಸರ್ಕಾರ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ.</p>.<p>ಇಂಗ್ಲಿಷ್ ಅನ್ನದ ಭಾಷೆ, ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ಮಾತ್ರ ಶೈಕ್ಷಣಿಕ ಯಶಸ್ಸು ಸಾಧ್ಯ ಎಂಬುದು ವ್ಯಾಪಕವಾದ ಅವೈಜ್ಞಾನಿಕ ನಂಬಿಕೆ. ಅಂಕಿಅಂಶಗಳೂ ಈ ನಂಬಿಕೆಗೆ ಪೂರಕವಾಗಿಲ್ಲ. ‘ನಮ್ಮ ಭಾಷೆಯನ್ನು ಕೊಲ್ಲುತ್ತಿರುವವರು ಯಾರು?’ ಎಂದು ಬರಹವೊಂದರಲ್ಲಿ ಚರ್ಚಿಸುತ್ತಾ, ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಚೀನಾ, ಸಿಂಗಪುರ, ಮಲೇಷ್ಯಾ, ತೈವಾನ್, ಹಾಂಕಾಂಗ್ ಮುಂತಾದ ದೇಶಗಳನ್ನು ದೇವನೂರ ಮಹಾದೇವ ಅವರು ಉದಾಹರಿಸುತ್ತಾರೆ. ಮ್ಯಾಂಡರಿನ್ ಚೀನಾ ಮೂಲದ ಭಾಷೆ, ಇದು ಈ ಎಲ್ಲ ದೇಶಗಳ ಶಿಕ್ಷಣದ ಮಾಧ್ಯಮವೂ ಹೌದು. ಪ್ರಾಥಮಿಕ ಶಾಲೆಗಳಷ್ಟೇ ಅಲ್ಲದೆ ಉನ್ನತ ಶಿಕ್ಷಣವನ್ನೂ ಈ ಕೆಲವು ದೇಶಗಳು ಮ್ಯಾಂಡರಿನ್ ಭಾಷೆಯಲ್ಲೇ ನೀಡುತ್ತಿವೆ. ಜರ್ಮನಿ, ಫ್ರಾನ್ಸ್, ನೆದರ್ಲೆಂಡ್ ಮುಂತಾದ ದೇಶಗಳು ತಮ್ಮ ತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಈ ಎಲ್ಲ ದೇಶಗಳೂ ಇಂಗ್ಲಿಷ್ ವಿರೋಧಿ ಧೋರಣೆಯಿಂದ ಅಥವಾ ತಮ್ಮ ಭಾಷೆಯ ಅಂಧಾಭಿಮಾನದಿಂದ ಮಾತೃಭಾಷಾ ಶಿಕ್ಷಣವನ್ನು ಅಳವಡಿಸಿಕೊಂಡಿದ್ದಾರೆ ಎಂದೇನೂ ಅಲ್ಲ. ಈ ದೇಶಗಳಲ್ಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುತ್ತಾರೆ. ಆದರೆ, ವಿಷಯ ಗ್ರಹಿಕೆ ಸಾಧ್ಯವಾಗುವುದು ಪರಿಚಿತ ಭಾಷೆಯಲ್ಲಿ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಇವರು ಗೌರವಿಸುತ್ತಾರೆ. ‘ಜಗತ್ತಿನ ಯಾವುದೇ ಸ್ವತಂತ್ರ ರಾಷ್ಟ್ರವೂ ಹೀಗೆ ತನ್ನ ಮಾತೃಭಾಷೆಯನ್ನು ಕೊಂದಿಲ್ಲ’ ಎನ್ನುತ್ತಾರೆ ದೇವನೂರ ಮಹಾದೇವ. ಆದರೆ ನಾವೇಕೆ ನಮ್ಮ ಭಾಷೆಯನ್ನೇ ಕೊಲ್ಲುತ್ತಿದ್ದೇವೆ? ನಮ್ಮ ದೇಶದಲ್ಲಿ ಹಿಂದೆ ಬಳಕೆಯಲ್ಲಿದ್ದ ಅನೇಕ ಭಾಷೆಗಳು ಈಗ ಕಾಣೆಯಾಗಿವೆ. ಭಾರತ ‘ಮಾತುಗಳ ಮಸಣವಾಗುತ್ತಿದೆ’ ಎಂದು ವಿಷಾದಿಸುತ್ತಾರೆ ಭಾಷಾಶಾಸ್ತ್ರಜ್ಞ ಜಿ.ಎನ್. ದೇವಿ ಅವರು.</p>.<p>ಕರ್ನಾಟಕದಲ್ಲಷ್ಟೇ ಏಕೆ, ನಮ್ಮ ಇಡೀ ದೇಶಕ್ಕೇ ವಿಚಿತ್ರವಾದ ಇಂಗ್ಲಿಷ್ ಮಾಧ್ಯಮದ ಸನ್ನಿ ಹಿಡಿದಿರುವುದು ದುರದೃಷ್ಟಕರ. ಗ್ರಾಮೀಣ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ನಮ್ಮ ಸರ್ಕಾರ ಪ್ರತಿವರ್ಷವೂ ಸಾವಿರಾರು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿದೆ. ಪೋಷಕರ ಬೇಡಿಕೆಗೆ ಅನುಗುಣವಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿಯೂ, ತಾನು ಈ ವಿಷಯದಲ್ಲಿ ನಿಸ್ಸಹಾಯಕ ಎನ್ನುವುದು ಸರ್ಕಾರದ ವಾದ.</p>.<p>ಕಲಿಕೆಯ ಮೊದಲ ಹಂತಗಳಲ್ಲಿ ಮಕ್ಕಳ ಮೇಲೆ ಅಪರಿಚಿತ ಭಾಷಾ ಮಾಧ್ಯಮ ಹೇರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂದುತ್ತದೆ, ಸೃಜನಶೀಲತೆ ಕಳೆದುಹೋಗುತ್ತದೆ, ಅತಿಯಾದ ಒತ್ತಡದಿಂದ ಮಕ್ಕಳು ಬಳಲುತ್ತಾರೆ. ಈ ಬಗ್ಗೆ ಪೋಷಕರಿಗೆ ತಿಳಿವಳಿಕೆಯ ಕೊರತೆ ಇರುವಂತಿದೆ. ಸಾಂಕ್ರಾಮಿಕ ರೋಗಗಳ ಕುರಿತು, ಹಾನಿಕಾರಕ ಮೂಢನಂಬಿಕೆಗಳ ಕುರಿತು ಅರಿವು ಮೂಡಿಸುವ ಸರ್ಕಾರ, ಇಂಗ್ಲಿಷ್ ಮಾಧ್ಯಮದ ಅನಾರೋಗ್ಯಕರ ಶಿಕ್ಷಣಪದ್ಧತಿಯ ಕುರಿತಾಗಿಯೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಜಾಹೀರಾತುಗಳ ಮೂಲಕ ಮಾತೃಭಾಷಾ ಶಿಕ್ಷಣದ ಅನುಕೂಲಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬಹುದಾಗಿತ್ತು. ಶಿಕ್ಷಣ ಇಲಾಖೆ ಹೊರಡಿಸುವ ಸುತ್ತೋಲೆಗಳಲ್ಲಿ ‘ಮಾತೃಭಾಷಾ ಶಿಕ್ಷಣವೇ ಸರ್ವಶ್ರೇಷ್ಠ’ ಎಂಬ ಹೇಳಿಕೆಗಳನ್ನು ಘೋಷವಾಕ್ಯದಂತೆ ಬಳಸಿ ತನ್ನ ಇಲಾಖೆಯ ಸಿಬ್ಬಂದಿ<br>ಯಲ್ಲಿ ಈ ಕುರಿತು ನಂಬಿಕೆ ಮೂಡುವಂತೆ ಮಾಡಬಹುದಾಗಿತ್ತು. ಪೋಷಕರ ಸಭೆಗಳಲ್ಲಿ ಮಾತೃಭಾಷಾ ಶಿಕ್ಷಣದ ಅನುಕೂಲಗಳನ್ನು ತಿಳಿಸಬೇಕಾಗಿತ್ತು.</p>.<p>ಮಾತೃಭಾಷೆ ಅಥವಾ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡದಿರಲು ಕಾನೂನು ಮತ್ತು ಕೋರ್ಟುಗಳು ಸರ್ಕಾರಕ್ಕೆ ತೊಡಕಾಗಿರುವುದು ನಿಜ. ಕನ್ನಡ ಮಾಧ್ಯಮದ ಪರವಾಗಿ ಕರ್ನಾಟಕ ಸರ್ಕಾರವೇ ಹಿಂದೆ ಕೋರ್ಟಿನಲ್ಲಿ ವಾದ ಮಂಡಿಸಿತ್ತು. ಆಗ ಸುಪ್ರೀಂ ಕೋರ್ಟ್, ಪೋಷಕರ ಆಯ್ಕೆಯ ಹಕ್ಕನ್ನು ಎತ್ತಿಹಿಡಿದು ಮಾತೃಭಾಷಾ ಶಿಕ್ಷಣವನ್ನು ಕಡೆಗಣಿಸಿತು. ಒಬ್ಬ ನ್ಯಾಯಾಧೀಶರಂತೂ ‘ಭಾರತವನ್ನು ಒಂದುಗೂಡಿಸುವ ಭಾಷೆ ಇಂಗ್ಲಿಷ್’ ಎಂದರು. ಆದರೆ, ಜನಗಣತಿಯ ಅಂಕಿಅಂಶಗಳು ದೇಶದ ಶೇ 2ರಷ್ಟು ಜನರಿಗೆ ಮಾತ್ರ ಅಲ್ಪಸ್ವಲ್ಪ ಇಂಗ್ಲಿಷ್ ಸಂಭಾಷಣೆ ಸಾಧ್ಯ ಎಂಬುದನ್ನು ತಿಳಿಸುತ್ತದೆ.</p>.<p>ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಶಾದಾಯಕವಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಸಂವಿಧಾನಾತ್ಮಕ ಹಕ್ಕು ಎಂದು ಪ್ರತಿಪಾದಿಸಿರುವ ಕೋರ್ಟ್ನ ದ್ವಿಸದಸ್ಯ ಪೀಠ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವಂತೆ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶಿಸಿದೆ. ಸರ್ಕಾರಿ ಶಾಲೆಗಳಷ್ಟೇ ಅಲ್ಲದೆ, ಖಾಸಗಿ ಶಾಲೆಗಳೂ ಮಾತೃ ಭಾಷಾ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ, ಗುಣಮಟ್ಟದ ಶಿಕ್ಷಣ ಎಂದು ಪರಿಗಣಿಸಬಹುದಾದ ಶಿಕ್ಷಣ ಸಾಧ್ಯವಾಗುವುದು ಅರ್ಥವಾಗುವ ಭಾಷೆಯಲ್ಲಿ, ಹಾಗಾಗಿ ಸರ್ಕಾರ ಮಾತೃಭಾಷಾ ಶಿಕ್ಷಣ ನೀಡಬೇಕು ಎನ್ನುತ್ತದೆ ಕೋರ್ಟ್. ಮುಂದುವರಿದು, ‘ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವುದು ನಮ್ಮ ಭಾಷೆಯಲ್ಲಿ.<br>ಇದು ಅಸ್ತಿತ್ವದ ಹಕ್ಕಿಗೆ ಪೂರಕವಾದದ್ದು. ಹಾಗಾಗಿ ಸಂವಿಧಾನಾತ್ಮಕವಾಗಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕು ಇದೆ, ಇದನ್ನು ಗೌರವಿಸಿ’ ಎಂದು ಕೋರ್ಟ್ ಹೇಳಿದೆ; ‘ಮೊದಲ ಹಂತದ ಕಲಿಕೆಯಲ್ಲಿ ಭಾಷೆಯ ತೊಡಕು ಮಕ್ಕಳ ಮೇಲೆ ಕ್ರೂರವಾದ ಒತ್ತಡವನ್ನು ಹೇರುತ್ತದೆ, ಮಕ್ಕಳು ಯಾಂತ್ರಿಕ ಕಲಿಕೆಗೆ ಶರಣಾಗುತ್ತಾರೆ’ ಎಂದೂ ಅಭಿಪ್ರಾಯಪಟ್ಟಿದೆ.</p>.<p>ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಪ್ರಖ್ಯಾತರಾದ ಅನೇಕ ಸಾಧಕರು ನಮ್ಮ ನಡುವೆ ಇದ್ದಾರೆ. ನಾವು ಕಳೆದ ಇಪ್ಪತ್ತೆಂಟು ವರ್ಷಗಳಿಂದಲೂ ನಡೆಸುತ್ತಿರುವ ‘ದೀನಬಂಧು ಕನ್ನಡ ಮಾಧ್ಯಮ ಶಾಲೆ’ಯಲ್ಲಿ 430 ಮಕ್ಕಳಿದ್ದಾರೆ. ಇವರೆಲ್ಲ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ನಂತರ ಕಾಲೇಜು ಶಿಕ್ಷಣ ಪಡೆದಿದ್ದಾರೆ. ಕೆಲವರು ಅದ್ಭುತ ಕಲಾವಿದರಾಗಿದ್ದಾರೆ, ಎಂಜಿನಿಯರ್ಗಳಾಗಿದ್ದಾರೆ. ಕನ್ನಡ ಮಾಧ್ಯಮದಿಂದಾಗಿ ನಮ್ಮ ಯಾವ ಮಕ್ಕಳಿಗೂ ಹಿನ್ನಡೆಯಾಗಿಲ್ಲ.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ಚಾಮರಾಜನಗರದ ಸ್ವಯಂಸೇವಾ ಒಕ್ಕೂಟದಿಂದ ಏಳು ವರ್ಷಗಳ ಹಿಂದೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯ ಗುಣಮಟ್ಟವನ್ನು ಅಧ್ಯಯನ ಮಾಡಲಾಯಿತು. ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಮಾತುಗಳನ್ನು ಆಲಿಸುವ ಅವಕಾಶಗಳೇ ಇಲ್ಲದ ಕಾರಣ ಕನಿಷ್ಠ ಮಟ್ಟದ ಇಂಗ್ಲಿಷ್ ಪರಿಣತಿಯಾಗಲಿ, ಸಂವಹನ ಶಕ್ತಿಯಾಗಲಿ ಬೆಳೆದಿಲ್ಲ. ಈ ಹಿನ್ನಡೆಗೆ ಅಧ್ಯಾಪಕರನ್ನು ಹೊಣೆ ಮಾಡುವುದು ಸರಿಯಲ್ಲ. ಒಂದು ಭಾಷೆಯಾಗಿ ನಾವು ಇಂಗ್ಲಿಷ್ ಅನ್ನು ಮಕ್ಕಳಿಗೆ ಕಲಿಸಲೇಬೇಕು. ಇದಕ್ಕೆ ಇಂಗ್ಲಿಷ್ ಮಾಧ್ಯಮ ತರಗತಿಗಳೇ ಬೇಕು ಎಂದೇನಿಲ್ಲ. ಇಂದಿನ ಘೋರ ಶೈಕ್ಷಣಿಕ ವೈಫಲ್ಯಕ್ಕೆ ದೋಷಪೂರ್ಣ ನೀತಿಯೇ ಕಾರಣ. ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಜಾಡುಹಿಡಿದು ಮುಂದುವರಿದರೆ, ನಮ್ಮ ಮಕ್ಕಳು ಅಪರಿಚಿತ ಭಾಷೆಯಲ್ಲಿ ಕಲಿಯಬೇಕಾದ ಕ್ರೌರ್ಯದಿಂದ ಪಾರಾಗಬಹುದೇನೋ ಎಂಬ ಆಶಾಭಾವ ಮೂಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>