<p>ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಟೆನ್ಕೆ’ ಮ್ಯಾರಥಾನ್ ಓಟದ ಸಂಭ್ರಮದಲ್ಲಿ ಗಣೇಶನ ವೇಷಧಾರಿ ಕೂಡ ಸೇರಿಕೊಂಡಿದ್ದರು. ಅವರ ಕೈಯಲ್ಲಿ ‘ಅಂಗಾಂಗ ದಾನ ಕೊಡಿ’ ಎಂಬ ಫಲಕವಿತ್ತು. ಆ ಚಿಕ್ಕ ಫಲಕದ ಹಿಂದೆ ಮಾನವೀಯ ಕಳಕಳಿ ಇತ್ತು. ನಮ್ಮ ದೇಶದ ತಳಕಚ್ಚಿದ ಮರ್ಯಾದೆ ಯನ್ನು ಮೇಲೆತ್ತುವ ಪ್ರಯತ್ನವಿತ್ತು.</p>.<p>ಅಂಗಾಂಗ ದಾನದ ವಿಷಯ ಬಂದಾಗ ನಮ್ಮ ದೇಶ ತೀರಾ ಕೆಳಸ್ತರದಲ್ಲಿದೆ. ಸುಧಾರಿತ ದೇಶಗಳಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 30–40–50 ಜನರು ಮರಣಾನಂತರ ಅಂಗದಾನ ಮಾಡುತ್ತಾರೆ. ನಮ್ಮಲ್ಲಿ ಆ ಸಂಖ್ಯೆ ಒಂದಂಕಿಯನ್ನೂ ಮುಟ್ಟಿಲ್ಲ. ದಿನ ಬೆಳಗಾದರೆ ಅಪಮೃತ್ಯುಗಳ ಸರಣಿ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆತ್ಮಹತ್ಯೆ, ಅಪಘಾತ, ಬೆಂಕಿ ಆಕಸ್ಮಿಕಗಳಂಥ ಅನೈಸರ್ಗಿಕ ಸಾವುಗಳಿಲ್ಲದ ದಿನವೇ ಇಲ್ಲ. ಏಪ್ರಿಲ್–ಮೇ ಬಂದರಂತೂ ಈಜಲು ಹೋದವರ ಸಾವು, ಪರೀಕ್ಷಾ ಫಲಿತಾಂಶದ ನಂತರದ ಆತ್ಮಹತ್ಯೆ, ಅತಿಸೆಕೆಯ ಮರಣ– ಅವುಗಳ ಸಾಲಿಗೆ ಈಗ ಹಠಾತ್ ಹೃದಯಾಘಾತದಿಂದ ಪ್ರಾಣ ಬಿಡುವವರ ಸಂಖ್ಯೆಯೂ ಹೆಚ್ಚುತ್ತಿದೆ.</p>.<p>ಮರಣ ವಾರ್ತೆ ಎಂಥದಿದ್ದರೂ ನೋವಿನ ಸಂಗತಿಯೇ. ಅದರಲ್ಲೂ ಹರಯದ, ಸದೃಢ ಜೀವ<br>ಗಳ ಅನಿರೀಕ್ಷಿತ, ಅಸ್ವಾಭಾವಿಕ ಸಾವು ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ. ಅಂಥ ಆರೋಗ್ಯ ವಂತ ಕಾಯಗಳು ಬೂದಿಯಾಗಿ ಅಥವಾ ಮಣ್ಣಾಗಿ ಹೋದರೆ ಅದು ನಿಜಕ್ಕೂ ‘ತುಂಬಲಾರದ ನಷ್ಟ’.</p>.<p>ಮರಣಾನಂತರ ಆ ಶರೀರದ ಭಾಗಗಳು ಬೇರೊಬ್ಬರ ದೇಹಕ್ಕೆ ಸೇರಿ ಸಮರ್ಥವಾಗಿ, ಸಾರ್ಥಕ<br>ಕೆಲಸ ಮಾಡಲು ಸಾಧ್ಯವಾಗುವಂತೆ ವೈದ್ಯಕೀಯ ಎಷ್ಟೊಂದು ಮುಂದುವರಿದಿದೆ. ಮೃತ ದೇಹದಿಂದ ಕೈಯನ್ನೂ ಬೇರ್ಪಡಿಸಿ ಬೇರೊಬ್ಬರಿಗೆ ಜೋಡಿಸಿದ ಉದಾಹರಣೆಗಳು ನಮ್ಮಲ್ಲಿವೆ. ಆದರೆ, ಬದುಕಿರು ವಾಗಲೇ ಅಂಗದಾನ ಮಾಡಬೇಕೆಂಬ ಪ್ರಜ್ಞೆ ನಮ್ಮಲ್ಲಿ ಬೆಳೆದಿಲ್ಲ. ರಕ್ತದಾನಕ್ಕೇ ಹಿಂಜರಿಯುವ ಎಷ್ಟೊಂದು ಜನ ನಮ್ಮಲ್ಲಿದ್ದಾರೆ. ಆದರೆ ನೇತ್ರದಾನದ ಸತ್ಕಾರ್ಯ ಕೆಲಮಟ್ಟಿಗೆ ನಡೆಯುತ್ತದೆ. ಇಡೀ ದೇಹವನ್ನು ಆಸ್ಪತ್ರೆಗೆ ದಾನ ಮಾಡಿಸಿಕೊಂಡ ಹಿರಿಯ ಜೀವಾತ್ಮಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ, ಅಂಥ ಕಳೇಬರಗಳಿಂದ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ವಿನಾ ಜೀವಂತ ವ್ಯಕ್ತಿಗಳ ಬದುಕನ್ನು ಹಸನುಗೊಳಿಸಲು ಸಾಧ್ಯವಿಲ್ಲ.</p>.<p>ಪ್ರಜ್ಞಾವಂತ ನಾಗರಿಕರು ಅಂಗಾಂಗ ದಾನದ ಪ್ರತಿಜ್ಞೆಯನ್ನು ಕೈಗೊಳ್ಳುವಂತೆ ಮಾಡಲು ನಮ್ಮ ದೇಶ<br>ದಲ್ಲಿ ಎಷ್ಟೊಂದು ಅನುಕೂಲಗಳನ್ನು ಕಲ್ಪಿಸಲಾಗಿದೆ. ನಿಮ್ಮ ಆಧಾರ್ ಸಂಖ್ಯೆ ಗೊತ್ತಿದ್ದರೆ, ಈ ಬರಹ ದೊಂದಿಗೆ ಇರುವ ಕ್ಯೂಆರ್ ಕೋಡ್ ಬಳಸಿ, ಓಟಿಪಿ ಪಡೆದು ಕೇವಲ ಐದೇ ನಿಮಿಷಗಳಲ್ಲಿ ಅಂಗಾಂಗ ದಾನಿ ಆಗಲು ಸಾಧ್ಯವಿದೆ. ಮರುಕ್ಷಣವೇ ಅಧಿಕೃತ ಸರ್ಟಿಫಿಕೇಟ್ ನಿಮ್ಮ ಮೊಬೈಲ್ಗೆ ಬಂದಿರುತ್ತದೆ. ನಮ್ಮ ದೇಶದಲ್ಲಿ ಇದುವರೆಗೆ ಇಂಥ ಪ್ರತಿಜ್ಞೆಯನ್ನು<br>ದಾಖಲಿಸಿದವರ ಸಂಖ್ಯೆ ಐದು ಲಕ್ಷವನ್ನೂ ದಾಟಿಲ್ಲ.<br>140 ಕೋಟಿ ಜನರಿರುವ ನಮ್ಮ ದೇಶದಲ್ಲಿ ಕೋಟಿ ಗಟ್ಟಲೆ ಜನರು ಅಂಗದಾನಕ್ಕಾಗಿ ಕಾಯುತ್ತಿರುತ್ತಾರೆ. ಕೊಡುವವರ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ.</p>.<p>ದಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ನಾನಾ ದಾರಿಗಳಿವೆ: ಡ್ರೈವಿಂಗ್ ಲೈಸೆನ್ಸ್ ಜೊತೆ ಅದನ್ನು ಸೇರಿಸ<br>ಬಹುದು. ಈಗಿನ ವ್ಯವಸ್ಥೆಯಲ್ಲಿ ವಾಹನ ಚಾಲನೆಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಬ್ಲಡ್ ಗ್ರೂಪ್ ಮತ್ತು ಕಾಟಾಚಾರದ ಮೆಡಿಕಲ್ ಸರ್ಟಿಫಿಕೇಟ್ ಒದಗಿಸಿದರೆ ಸಾಕು ತಾನೆ? ಜೊತೆಗೆ ಅಂಗದಾನ ಪ್ರತಿಜ್ಞೆಯ ಸರ್ಟಿಫಿಕೇಟನ್ನೂ ಲಗತ್ತಿಸು ವಂತೆ ಮಾಡಿದರೆ ಸಾಕು; ಜಗತ್ತಿನಲ್ಲೇ ಅತಿ ಹೆಚ್ಚು ಅಂಗದಾನಿ ಗಳಿರುವ ದೇಶ ನಮ್ಮದಾಗುವ ಸಾಧ್ಯತೆ ಇದೆ. ಅಂಥವ್ಯವಸ್ಥೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಧೈರ್ಯ ಮಾಡುತ್ತಿಲ್ಲ. ಅಮೆರಿಕದಲ್ಲಿ ಈ ವ್ಯವಸ್ಥೆ ಇದೆ.<br>ಆದ್ದರಿಂದಲೇ ಅದು ಅತಿ ಹೆಚ್ಚು ಅಂಗದಾನ ಸ್ವೀಕರಿಸುವ ಮೊದಲ ಮೂರು ದೇಶಗಳ ಸಾಲಿನಲ್ಲಿದೆ.</p>.<p>ಅಂಗದಾನವನ್ನು ಕಡ್ಡಾಯ ಮಾಡಿದರೆ ಹೇಗೆ? ಇಟಲಿ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿತು. ತನ್ನ ಎಲ್ಲ ಪ್ರಜೆಗಳೂ ಹುಟ್ಟುತ್ತಲೇ ಅಂಗಾಂಗ ದಾನಿಗಳೂ ಆಗಿರುತ್ತಾರೆಂಬ ಕಾನೂನನ್ನು ಅದು 1990ರಲ್ಲಿ ರೂಪಿಸಿತು. ಆದರೆ, ಧಾರ್ಮಿಕ ಆಕ್ಷೇಪಗಳು ಎದುರಾದ ಕಾರಣ ಕಾನೂನನ್ನು ಜಾರಿಗೆ ತರಲು ಹಿಂಜರಿಯಿತು. ಅದೆಷ್ಟೊ ಸುತ್ತಿನ ಮಾತುಕತೆಗಳ ನಂತರ ‘ಇಷ್ಟವಿಲ್ಲದವರು ಹೊರಗುಳಿಯಬಹುದು’ ಎಂಬ ಆಯ್ಕೆ ಮುಂದೊಡ್ಡಿ ಕಾನೂನನ್ನು ಜಾರಿಗೊಳಿ ಸಿತು. ಅಂಗದಾನಿಗಳ ಸಂಖ್ಯೆ ಸರ್ರನೇ ಮೇಲೇರಿತು. ಪ್ರತಿ ದಶಲಕ್ಷ ಜನಸಂಖ್ಯೆಯಲ್ಲಿ 35 ಜನರಿಂದ ಅಂಗಾಂಗ ದಾನ ಪಡೆಯಲು ಸಾಧ್ಯವಾಯಿತು.</p>.<p>ಅಂಗಾಂಗಗಳೆಂದರೆ ಹೃದಯ, ಕಿಡ್ನಿ, ಯಕೃತ್ತು, ಶ್ವಾಸಕೋಶ, ಕೈ, ಮೇದೋಜೀರಕ ಗ್ರಂಥಿ ಮತ್ತು ಸಣ್ಣ ಕರುಳಿನಂಥ ಗಟ್ಟಿ ಭಾಗಗಳು ಸೇರುತ್ತವೆ. ಅಷ್ಟೇ ಅಲ್ಲ, ಕಣ್ಣಿನ ಕಾರ್ನಿಯಾ, ತ್ವಚೆ, ಮೂಳೆ, ಮಜ್ಜೆ, ಹೃದಯ ಕವಾಟ, ಗರ್ಭಕೋಶದ ಒಳಪೊರೆ, ಇವೆಲ್ಲವೂ ದಾನಯೋಗ್ಯ, ಕಸಿಯೋಗ್ಯ ಅಂಗಾಂಶಗಳೇ ಆಗಿರುತ್ತವೆ.ಆರೋಗ್ಯವಂತ ವ್ಯಕ್ತಿ ಜೀವಿಸಿದ್ದಾಗಲೇ ತನ್ನ ತೀರ ಹತ್ತಿರದ ಸಂಬಂಧಿಗೆ ಒಂದು ಕಿಡ್ನಿಯನ್ನು ಅಥವಾ ಶ್ವಾಸಕೋಶ, ಯಕೃತ್ತು ಮತ್ತು ಸಣ್ಣ ಕರುಳಿನ<br>ಒಂದು ಭಾಗವನ್ನು ಕೊಡಬಹುದಾಗಿದೆ, ಕೊಡುತ್ತಿ ದ್ದಾರೆ. ಹೃದ್ರೋಗದಂಥ ಹಠಾತ್ ಮರಣ ಸಂಭವಿಸಿ ದರೆ ಹೃದಯ ಒಂದನ್ನು ಬಿಟ್ಟು ಇತರೆಲ್ಲ ಭಾಗ ಗಳನ್ನೂ ದಾನ ಕೊಡಬಹುದು. ಮಿದುಳು ನಿಷ್ಕ್ರಿಯವಾಗಿ ಉಳಿದೆಲ್ಲ ಭಾಗಗಳೂ ಸುಸ್ಥಿತಿಯಲ್ಲಿ ದ್ದರೆ ಕುತ್ತಿಗೆಯ ಕೆಳಗಿನ ಬಹುತೇಕ ಎಲ್ಲ ಅಂಗ ಗಳನ್ನೂ ಮಿದುಭಾಗಗಳನ್ನೂ ಬೇರೊಬ್ಬರಿಗೆ ಕಸಿ ಮಾಡಬಹುದು. ಕೇರಳದ ಆಲಿನ್ ಅಬ್ರಹಾಮ್ ಹೆಸರಿನ ಹತ್ತು ತಿಂಗಳ ಮಗು ಅಪಘಾತಕ್ಕೀಡಾಗಿ ಮತ್ತೆಂದೂ ಪ್ರಜ್ಞೆ ಬಾರದಂಥ ಸ್ಥಿತಿಯಲ್ಲಿದ್ದಾಗ ಅವಳ ತಾಯಿ–ತಂದೆಯ ಅನುಮತಿ ಪಡೆದು ತಕ್ಷಣ ‘ಗ್ರೀನ್ ಕಾರಿಡಾರ್’ ಮೂಲಕ ಅವಳ ಐದು ಒಳಾಂಗಗಳನ್ನು ಬೇರೆ ಬೇರೆ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕಸಿ ಮಾಡಿದ ಘಟನೆ 3 ತಿಂಗಳ ಹಿಂದಷ್ಟೇ ಸುದ್ದಿಯಾಗಿತ್ತು.</p>.<p>ಅಂಥದ್ದು ನಮ್ಮಲ್ಲಿ ತೀರ ಅಪರೂಪ. ಏಕೆಂದರೆ ಮರಣ ಸಂಭವಿಸಿದ ಮೊದಲ ಮೂರು–ನಾಲ್ಕು ಗಂಟೆಗಳ ‘ಗೋಲ್ಡನ್ ಗಳಿಗೆ’ಯ ಸಂಕಟ, ಸಂಕಷ್ಟಗಳು ಒಂದೆರಡಲ್ಲ. ಆ್ಯಂಬುಲೆನ್ಸ್ ಬರಬೇಕು; ಸುಸಜ್ಜಿತ ಆಸ್ಪತ್ರೆ, ವೈದ್ಯತಂಡ ಇರಬೇಕು; ಮರಣೋತ್ತರ ವರದಿ ಬರಬೇಕು. ಅಪಘಾತದಿಂದ ಸಾವು ಸಂಭವಿಸಿದ್ದರಂತೂ ಪೊಲೀಸರು, ವಕೀಲರು ಮತ್ತು ಮೃತರ ಸಂಬಂಧಿಗಳು ಬರಬೇಕು. ಮೃತವ್ಯಕ್ತಿ ಈ ಮೊದಲೇ ಅಂಗದಾನ ಪ್ರತಿಜ್ಞೆ ಮಾಡಿದ್ದರೂ ಆ ದುರ್ಭರ ಸಮಯದಲ್ಲಿ ಅಂಗದಾನ ಪಡೆಯಲು ಸಂಬಂಧಿಗಳ ಮನವೊಲಿಸಬೇಕು. ಅದು ಎಲ್ಲ ಸಮಾಜದಲ್ಲೂ ತುಂಬ ಸೂಕ್ಷ್ಮ ವಿಷಯ. ಸ್ಪೇನ್ ದೇಶದಲ್ಲಿ ಅದಕ್ಕೆಂದೇ ವಿಶೇಷ ತರಬೇತಿ ಪಡೆದ ‘ದುಃಖಭಂಜನ’ ಸಿಬ್ಬಂದಿ ಇರುವುದರಿಂದಲೇ ಅಂಗದಾನ ಸ್ವೀಕೃತಿಯ ಶ್ರೇಯಾಂಕದಲ್ಲಿ ಅದು ಅತ್ಯುನ್ನತ ಸ್ಥಾನದಲ್ಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ದೇಶಗಳಲ್ಲಿ ಅಂಗಾಂಗಗಳ ಕಾಳಸಂತೆಕೋರರು ಈ ಕ್ಷಣಕ್ಕೆಂದೇ ಕಾದು ಕೂತಿದ್ದು ಮಿಂಚಿನ ಕಾರ್ಯಾಚರಣೆ ನಡೆಸುತ್ತಾರೆ. ಈ ಅನೈತಿಕ ಜಾಲದಲ್ಲಿ ಪೋಸ್ಟ್ ಮಾರ್ಟಮ್ ಸಿಬ್ಬಂದಿಯಷ್ಟೇ ಅಲ್ಲ, ವೈದ್ಯರೂ ನರ್ಸ್ಗಳೂ ಸೇರಿರುತ್ತಾರೆ. ಅಂಗಾಂಗಗಳ ‘ಕೊಯ್ಲು’ ಮಾಡುವ ಧಾವಂತದಲ್ಲಿ ತುಂಬ ಅಕ್ರಮಗಳು ನಡೆಯುತ್ತಿವೆ ಎಂದು ಕೇರಳದ ಡಾಕ್ಟರೊಬ್ಬರು ಸುಪ್ರೀಂ ಕೋರ್ಟ್ಗೂ ಹೋಗಿದ್ದಿದೆ.ಅಂತೂ ಕೋಮಾ/ಮರಣದ ನಂತರದ ನಾಲ್ಕೈದು ಗಂಟೆಗಳ ಅವಧಿಯ ‘ಗೋಲ್ಡನ್ ಗಳಿಗೆ’ ಎಂದರೆ ಆಸ್ಪತ್ರೆಯಲ್ಲಿ ಮಾನವೀಯತೆಯ ಪರಮೋಚ್ಚ ಸಮಯ ಆಗಿರುವಂತೆಯೇ, ಅನೈತಿಕ ಚಟುವಟಿಕೆಗಳ ಪಾಪಕೂಪದ ಕ್ಷಣವೂ ಆಗಿರುವ ಸಾಧ್ಯತೆ ಇರುತ್ತದೆ.</p>.<p>ಈ ವಿಪರ್ಯಾಸ ನೋಡಿ: ಅತ್ಯಾಧುನಿಕ ವೈದ್ಯ ಕೀಯ ಸೌಲಭ್ಯ ಮತ್ತು ಮಿಂಚಿನ ಕಾರ್ಯಾಚರಣೆಯ ವ್ಯವಸ್ಥೆ ಇರುವ ಜಪಾನ್ ದೇಶ ಅಂಗದಾನದ ವಿಷಯದಲ್ಲಿ ತೀರಾ ಹಿಂದಿದೆ (ನಮ್ಮಷ್ಟು ಅಲ್ಲ). ಅಲ್ಲಿನ ಶಿಂಟೊ ಧಾರ್ಮಿಕ ನಂಬಿಕೆಯ ಪ್ರಕಾರ ದೇಹ ಮತ್ತು ಆತ್ಮ ಒಂದೇ ಆಗಿರುತ್ತದೆ. ಅಪಘಾತಕ್ಕೆ ತುತ್ತಾದ ವ್ಯಕ್ತಿ ಮತ್ತೆಂದೂ ಪ್ರಜ್ಞೆ ಬಾರದಂಥ (ಕೋಮಾ) ಸ್ಥಿತಿಯಲ್ಲಿದ್ದರೂ, ಹೃದಯ ಬಡಿತ ತಾನಾಗಿ ನಿಲ್ಲುವವರೆಗೆ ಆ ಕುಡಿಜೀವದ ಪೋಷಣೆ ಆಗುತ್ತಲೇ ಇರಬೇಕು. 1968ರಲ್ಲಿ ಮೊದಲ ಹೃದಯಕಸಿ ಮಾಡಲು ಹೋದ ಸರ್ಜನ್ ಮೇಲೆ ಕೊಲೆ ಮೊಕದ್ದಮೆ ಹಾಕಿದ ಲಾಗಾಯ್ತೂ ಕೋಮಾ ಸ್ಥಿತಿಯಲ್ಲಿರುವ ಕಾಯದಿಂದ ಕಸಿಯೋಗ್ಯ ಅಂಗ ಗಳನ್ನು ಬೇರ್ಪಡಿಸುವ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟಾದ ಕಾನೂನುಗಳನ್ನು ರೂಪಿಸಲಾಗಿದೆ. ಕೋಮಾಕ್ಕೆ ತಲುಪಿದ ವ್ಯಕ್ತಿ ಅಂಗದಾನದ ಪ್ರತಿಜ್ಞೆ ಮೊದಲೇ ಮಾಡಿದ್ದರೂ ಮೃತ ಕಾಯ ಇಡಿಯಾಗಿ ಸಂಸ್ಕಾರವಾಗಬೇಕು ಎಂಬ ನಂಬಿಕೆ ಕುಟುಂಬಸ್ಥರಲ್ಲಿ ಆಳವಾಗಿ ಬೇರೂರಿದೆ. ಅದೇನೊ ತುಸು ಸಡಿಲ ಆಗುತ್ತಿದೆಯಾದರೂ, ಎರಡನೆಯ ಕಾರಣ ಇನ್ನೂ ಬಿಗಿಯಾಗಿಯೇ ಇದೆ: ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯ ರಕ್ತ ಪರಿಚಲನ ವ್ಯವಸ್ಥೆಯನ್ನು ನಿಲ್ಲಿಸಲು ಅಲ್ಲಿ ಕಾನೂನಿನ ಕ್ಲಿಷ್ಟ ಅಡಚಣೆಗಳಿವೆ. ನಮ್ಮಲ್ಲಿ ಅದನ್ನು ಸರಳಗೊಳಿಸಲಾಗುತ್ತಿದೆ. ಕೋಮಾ ಸ್ಥಿತಿಯಲ್ಲಿರುವ ವರಿಗೆ ‘ಸಾವಿನ ಹಕ್ಕು’ ಮತ್ತು ‘ಗೌರವಯುತ’ ಸಾವಿನ ಹಕ್ಕನ್ನು ಎತ್ತಿ ಹಿಡಿಯುವ ತೀರ್ಪನ್ನು ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ ಸುಪ್ರೀಂ ಕೋರ್ಟ್ ನೀಡಿದೆ.</p>.<p>ಜೀವರಕ್ಷಕ ಔಷಧಗಳ ಉತ್ಪಾದನೆಯಲ್ಲಿ ಭಾರತಕ್ಕೆ ‘ಗ್ಲೋಬಲ್ ಫಾರ್ಮಸಿ’ ಎಂಬ ಕೀರ್ತಿಯಿದೆ.<br>ನಮ್ಮ ದೇಶದಲ್ಲಿ ಡಿಜಿಟಲ್ ಕ್ರಾಂತಿ, ವೈದ್ಯಕೀಯ ವ್ಯವಸ್ಥೆಗಳ ನೆರವಿನಲ್ಲಿ ಅಂಗದಾನವನ್ನು ಸರಳ ಗೊಳಿಸುವ ಅದೆಷ್ಟೇ ಸಾಲುಸಾಲು ಯತ್ನಗಳು ನಡೆದರೂ ದಾನಿಗಳೇ ಸಿಗದಿದ್ದರೆ? ಸದೃಢ ವ್ಯಕ್ತಿಗಳೆಲ್ಲ ಅಂಗದಾನದ ಪ್ರತಿಜ್ಞೆ ಮಾಡಿದರೆ ದೇಶದ ಪ್ರತಿಷ್ಠೆಯನ್ನು ಕೊಂಚ ಮೇಲಕ್ಕೆ ಎತ್ತರಿಸಬಹುದು. ಪ್ರತಿಜ್ಞೆಯ ಜೊತೆಗೇ ರಾತ್ರಿ ಊಟದ ವೇಳೆಯಲ್ಲಿ ಕುಟುಂಬದ ಸದಸ್ಯರಿಗೆ ತಿಳಿಸಿ ಹೇಳಬೇಕು. ಏಕೆಂದರೆ, ಈ ಪುಣ್ಯಕಾರ್ಯಕ್ಕೆ ಕುಟುಂಬದ ಸದಸ್ಯ ರಿಂದಲೇ ದೊಡ್ಡ ವಿಘ್ನ ಬರುತ್ತದೆ. ಟೆನ್ಕೆ ಓಟದ ಸಂದರ್ಭದಲ್ಲಿ ಅಂಗದಾನದ ಫಲಕ ಹಿಡಿದವರು ಗಣೇಶನ (ಅಂದರೆ ವಿಘ್ನೇಶನ) ವೇಷದಲ್ಲೇ ಬಂದಿದ್ದೇಕೆ ಎಂಬುದನ್ನು ಹೀಗೂ ಅರ್ಥೈಸಬಹುದು. </p>.<p>ಅಸಹಜ ಸಾವು ಯಾರಿಗೂ ಬರಲೇಬಾರದು ನಿಜ. ಬಂದರೂ ಅಂಥ ದೇಹ ಮಣ್ಣಾಗುವ ಮುಂಚೆ, ಅಥವಾ ಚಿತಾಗ್ನಿಯಲ್ಲಿ ಉರಿಯುವ ಮುಂಚೆ ಆ ಕಾಯದ ಕೊಂಚ ಪಾಲು ಇನ್ನೊಬ್ಬರ ಪಾಲಿಗೆ ಆಶಾಕಿರಣವಾಗಲು ಸಾಧ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಟೆನ್ಕೆ’ ಮ್ಯಾರಥಾನ್ ಓಟದ ಸಂಭ್ರಮದಲ್ಲಿ ಗಣೇಶನ ವೇಷಧಾರಿ ಕೂಡ ಸೇರಿಕೊಂಡಿದ್ದರು. ಅವರ ಕೈಯಲ್ಲಿ ‘ಅಂಗಾಂಗ ದಾನ ಕೊಡಿ’ ಎಂಬ ಫಲಕವಿತ್ತು. ಆ ಚಿಕ್ಕ ಫಲಕದ ಹಿಂದೆ ಮಾನವೀಯ ಕಳಕಳಿ ಇತ್ತು. ನಮ್ಮ ದೇಶದ ತಳಕಚ್ಚಿದ ಮರ್ಯಾದೆ ಯನ್ನು ಮೇಲೆತ್ತುವ ಪ್ರಯತ್ನವಿತ್ತು.</p>.<p>ಅಂಗಾಂಗ ದಾನದ ವಿಷಯ ಬಂದಾಗ ನಮ್ಮ ದೇಶ ತೀರಾ ಕೆಳಸ್ತರದಲ್ಲಿದೆ. ಸುಧಾರಿತ ದೇಶಗಳಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 30–40–50 ಜನರು ಮರಣಾನಂತರ ಅಂಗದಾನ ಮಾಡುತ್ತಾರೆ. ನಮ್ಮಲ್ಲಿ ಆ ಸಂಖ್ಯೆ ಒಂದಂಕಿಯನ್ನೂ ಮುಟ್ಟಿಲ್ಲ. ದಿನ ಬೆಳಗಾದರೆ ಅಪಮೃತ್ಯುಗಳ ಸರಣಿ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆತ್ಮಹತ್ಯೆ, ಅಪಘಾತ, ಬೆಂಕಿ ಆಕಸ್ಮಿಕಗಳಂಥ ಅನೈಸರ್ಗಿಕ ಸಾವುಗಳಿಲ್ಲದ ದಿನವೇ ಇಲ್ಲ. ಏಪ್ರಿಲ್–ಮೇ ಬಂದರಂತೂ ಈಜಲು ಹೋದವರ ಸಾವು, ಪರೀಕ್ಷಾ ಫಲಿತಾಂಶದ ನಂತರದ ಆತ್ಮಹತ್ಯೆ, ಅತಿಸೆಕೆಯ ಮರಣ– ಅವುಗಳ ಸಾಲಿಗೆ ಈಗ ಹಠಾತ್ ಹೃದಯಾಘಾತದಿಂದ ಪ್ರಾಣ ಬಿಡುವವರ ಸಂಖ್ಯೆಯೂ ಹೆಚ್ಚುತ್ತಿದೆ.</p>.<p>ಮರಣ ವಾರ್ತೆ ಎಂಥದಿದ್ದರೂ ನೋವಿನ ಸಂಗತಿಯೇ. ಅದರಲ್ಲೂ ಹರಯದ, ಸದೃಢ ಜೀವ<br>ಗಳ ಅನಿರೀಕ್ಷಿತ, ಅಸ್ವಾಭಾವಿಕ ಸಾವು ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ. ಅಂಥ ಆರೋಗ್ಯ ವಂತ ಕಾಯಗಳು ಬೂದಿಯಾಗಿ ಅಥವಾ ಮಣ್ಣಾಗಿ ಹೋದರೆ ಅದು ನಿಜಕ್ಕೂ ‘ತುಂಬಲಾರದ ನಷ್ಟ’.</p>.<p>ಮರಣಾನಂತರ ಆ ಶರೀರದ ಭಾಗಗಳು ಬೇರೊಬ್ಬರ ದೇಹಕ್ಕೆ ಸೇರಿ ಸಮರ್ಥವಾಗಿ, ಸಾರ್ಥಕ<br>ಕೆಲಸ ಮಾಡಲು ಸಾಧ್ಯವಾಗುವಂತೆ ವೈದ್ಯಕೀಯ ಎಷ್ಟೊಂದು ಮುಂದುವರಿದಿದೆ. ಮೃತ ದೇಹದಿಂದ ಕೈಯನ್ನೂ ಬೇರ್ಪಡಿಸಿ ಬೇರೊಬ್ಬರಿಗೆ ಜೋಡಿಸಿದ ಉದಾಹರಣೆಗಳು ನಮ್ಮಲ್ಲಿವೆ. ಆದರೆ, ಬದುಕಿರು ವಾಗಲೇ ಅಂಗದಾನ ಮಾಡಬೇಕೆಂಬ ಪ್ರಜ್ಞೆ ನಮ್ಮಲ್ಲಿ ಬೆಳೆದಿಲ್ಲ. ರಕ್ತದಾನಕ್ಕೇ ಹಿಂಜರಿಯುವ ಎಷ್ಟೊಂದು ಜನ ನಮ್ಮಲ್ಲಿದ್ದಾರೆ. ಆದರೆ ನೇತ್ರದಾನದ ಸತ್ಕಾರ್ಯ ಕೆಲಮಟ್ಟಿಗೆ ನಡೆಯುತ್ತದೆ. ಇಡೀ ದೇಹವನ್ನು ಆಸ್ಪತ್ರೆಗೆ ದಾನ ಮಾಡಿಸಿಕೊಂಡ ಹಿರಿಯ ಜೀವಾತ್ಮಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ, ಅಂಥ ಕಳೇಬರಗಳಿಂದ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ವಿನಾ ಜೀವಂತ ವ್ಯಕ್ತಿಗಳ ಬದುಕನ್ನು ಹಸನುಗೊಳಿಸಲು ಸಾಧ್ಯವಿಲ್ಲ.</p>.<p>ಪ್ರಜ್ಞಾವಂತ ನಾಗರಿಕರು ಅಂಗಾಂಗ ದಾನದ ಪ್ರತಿಜ್ಞೆಯನ್ನು ಕೈಗೊಳ್ಳುವಂತೆ ಮಾಡಲು ನಮ್ಮ ದೇಶ<br>ದಲ್ಲಿ ಎಷ್ಟೊಂದು ಅನುಕೂಲಗಳನ್ನು ಕಲ್ಪಿಸಲಾಗಿದೆ. ನಿಮ್ಮ ಆಧಾರ್ ಸಂಖ್ಯೆ ಗೊತ್ತಿದ್ದರೆ, ಈ ಬರಹ ದೊಂದಿಗೆ ಇರುವ ಕ್ಯೂಆರ್ ಕೋಡ್ ಬಳಸಿ, ಓಟಿಪಿ ಪಡೆದು ಕೇವಲ ಐದೇ ನಿಮಿಷಗಳಲ್ಲಿ ಅಂಗಾಂಗ ದಾನಿ ಆಗಲು ಸಾಧ್ಯವಿದೆ. ಮರುಕ್ಷಣವೇ ಅಧಿಕೃತ ಸರ್ಟಿಫಿಕೇಟ್ ನಿಮ್ಮ ಮೊಬೈಲ್ಗೆ ಬಂದಿರುತ್ತದೆ. ನಮ್ಮ ದೇಶದಲ್ಲಿ ಇದುವರೆಗೆ ಇಂಥ ಪ್ರತಿಜ್ಞೆಯನ್ನು<br>ದಾಖಲಿಸಿದವರ ಸಂಖ್ಯೆ ಐದು ಲಕ್ಷವನ್ನೂ ದಾಟಿಲ್ಲ.<br>140 ಕೋಟಿ ಜನರಿರುವ ನಮ್ಮ ದೇಶದಲ್ಲಿ ಕೋಟಿ ಗಟ್ಟಲೆ ಜನರು ಅಂಗದಾನಕ್ಕಾಗಿ ಕಾಯುತ್ತಿರುತ್ತಾರೆ. ಕೊಡುವವರ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ.</p>.<p>ದಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ನಾನಾ ದಾರಿಗಳಿವೆ: ಡ್ರೈವಿಂಗ್ ಲೈಸೆನ್ಸ್ ಜೊತೆ ಅದನ್ನು ಸೇರಿಸ<br>ಬಹುದು. ಈಗಿನ ವ್ಯವಸ್ಥೆಯಲ್ಲಿ ವಾಹನ ಚಾಲನೆಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಬ್ಲಡ್ ಗ್ರೂಪ್ ಮತ್ತು ಕಾಟಾಚಾರದ ಮೆಡಿಕಲ್ ಸರ್ಟಿಫಿಕೇಟ್ ಒದಗಿಸಿದರೆ ಸಾಕು ತಾನೆ? ಜೊತೆಗೆ ಅಂಗದಾನ ಪ್ರತಿಜ್ಞೆಯ ಸರ್ಟಿಫಿಕೇಟನ್ನೂ ಲಗತ್ತಿಸು ವಂತೆ ಮಾಡಿದರೆ ಸಾಕು; ಜಗತ್ತಿನಲ್ಲೇ ಅತಿ ಹೆಚ್ಚು ಅಂಗದಾನಿ ಗಳಿರುವ ದೇಶ ನಮ್ಮದಾಗುವ ಸಾಧ್ಯತೆ ಇದೆ. ಅಂಥವ್ಯವಸ್ಥೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಧೈರ್ಯ ಮಾಡುತ್ತಿಲ್ಲ. ಅಮೆರಿಕದಲ್ಲಿ ಈ ವ್ಯವಸ್ಥೆ ಇದೆ.<br>ಆದ್ದರಿಂದಲೇ ಅದು ಅತಿ ಹೆಚ್ಚು ಅಂಗದಾನ ಸ್ವೀಕರಿಸುವ ಮೊದಲ ಮೂರು ದೇಶಗಳ ಸಾಲಿನಲ್ಲಿದೆ.</p>.<p>ಅಂಗದಾನವನ್ನು ಕಡ್ಡಾಯ ಮಾಡಿದರೆ ಹೇಗೆ? ಇಟಲಿ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿತು. ತನ್ನ ಎಲ್ಲ ಪ್ರಜೆಗಳೂ ಹುಟ್ಟುತ್ತಲೇ ಅಂಗಾಂಗ ದಾನಿಗಳೂ ಆಗಿರುತ್ತಾರೆಂಬ ಕಾನೂನನ್ನು ಅದು 1990ರಲ್ಲಿ ರೂಪಿಸಿತು. ಆದರೆ, ಧಾರ್ಮಿಕ ಆಕ್ಷೇಪಗಳು ಎದುರಾದ ಕಾರಣ ಕಾನೂನನ್ನು ಜಾರಿಗೆ ತರಲು ಹಿಂಜರಿಯಿತು. ಅದೆಷ್ಟೊ ಸುತ್ತಿನ ಮಾತುಕತೆಗಳ ನಂತರ ‘ಇಷ್ಟವಿಲ್ಲದವರು ಹೊರಗುಳಿಯಬಹುದು’ ಎಂಬ ಆಯ್ಕೆ ಮುಂದೊಡ್ಡಿ ಕಾನೂನನ್ನು ಜಾರಿಗೊಳಿ ಸಿತು. ಅಂಗದಾನಿಗಳ ಸಂಖ್ಯೆ ಸರ್ರನೇ ಮೇಲೇರಿತು. ಪ್ರತಿ ದಶಲಕ್ಷ ಜನಸಂಖ್ಯೆಯಲ್ಲಿ 35 ಜನರಿಂದ ಅಂಗಾಂಗ ದಾನ ಪಡೆಯಲು ಸಾಧ್ಯವಾಯಿತು.</p>.<p>ಅಂಗಾಂಗಗಳೆಂದರೆ ಹೃದಯ, ಕಿಡ್ನಿ, ಯಕೃತ್ತು, ಶ್ವಾಸಕೋಶ, ಕೈ, ಮೇದೋಜೀರಕ ಗ್ರಂಥಿ ಮತ್ತು ಸಣ್ಣ ಕರುಳಿನಂಥ ಗಟ್ಟಿ ಭಾಗಗಳು ಸೇರುತ್ತವೆ. ಅಷ್ಟೇ ಅಲ್ಲ, ಕಣ್ಣಿನ ಕಾರ್ನಿಯಾ, ತ್ವಚೆ, ಮೂಳೆ, ಮಜ್ಜೆ, ಹೃದಯ ಕವಾಟ, ಗರ್ಭಕೋಶದ ಒಳಪೊರೆ, ಇವೆಲ್ಲವೂ ದಾನಯೋಗ್ಯ, ಕಸಿಯೋಗ್ಯ ಅಂಗಾಂಶಗಳೇ ಆಗಿರುತ್ತವೆ.ಆರೋಗ್ಯವಂತ ವ್ಯಕ್ತಿ ಜೀವಿಸಿದ್ದಾಗಲೇ ತನ್ನ ತೀರ ಹತ್ತಿರದ ಸಂಬಂಧಿಗೆ ಒಂದು ಕಿಡ್ನಿಯನ್ನು ಅಥವಾ ಶ್ವಾಸಕೋಶ, ಯಕೃತ್ತು ಮತ್ತು ಸಣ್ಣ ಕರುಳಿನ<br>ಒಂದು ಭಾಗವನ್ನು ಕೊಡಬಹುದಾಗಿದೆ, ಕೊಡುತ್ತಿ ದ್ದಾರೆ. ಹೃದ್ರೋಗದಂಥ ಹಠಾತ್ ಮರಣ ಸಂಭವಿಸಿ ದರೆ ಹೃದಯ ಒಂದನ್ನು ಬಿಟ್ಟು ಇತರೆಲ್ಲ ಭಾಗ ಗಳನ್ನೂ ದಾನ ಕೊಡಬಹುದು. ಮಿದುಳು ನಿಷ್ಕ್ರಿಯವಾಗಿ ಉಳಿದೆಲ್ಲ ಭಾಗಗಳೂ ಸುಸ್ಥಿತಿಯಲ್ಲಿ ದ್ದರೆ ಕುತ್ತಿಗೆಯ ಕೆಳಗಿನ ಬಹುತೇಕ ಎಲ್ಲ ಅಂಗ ಗಳನ್ನೂ ಮಿದುಭಾಗಗಳನ್ನೂ ಬೇರೊಬ್ಬರಿಗೆ ಕಸಿ ಮಾಡಬಹುದು. ಕೇರಳದ ಆಲಿನ್ ಅಬ್ರಹಾಮ್ ಹೆಸರಿನ ಹತ್ತು ತಿಂಗಳ ಮಗು ಅಪಘಾತಕ್ಕೀಡಾಗಿ ಮತ್ತೆಂದೂ ಪ್ರಜ್ಞೆ ಬಾರದಂಥ ಸ್ಥಿತಿಯಲ್ಲಿದ್ದಾಗ ಅವಳ ತಾಯಿ–ತಂದೆಯ ಅನುಮತಿ ಪಡೆದು ತಕ್ಷಣ ‘ಗ್ರೀನ್ ಕಾರಿಡಾರ್’ ಮೂಲಕ ಅವಳ ಐದು ಒಳಾಂಗಗಳನ್ನು ಬೇರೆ ಬೇರೆ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕಸಿ ಮಾಡಿದ ಘಟನೆ 3 ತಿಂಗಳ ಹಿಂದಷ್ಟೇ ಸುದ್ದಿಯಾಗಿತ್ತು.</p>.<p>ಅಂಥದ್ದು ನಮ್ಮಲ್ಲಿ ತೀರ ಅಪರೂಪ. ಏಕೆಂದರೆ ಮರಣ ಸಂಭವಿಸಿದ ಮೊದಲ ಮೂರು–ನಾಲ್ಕು ಗಂಟೆಗಳ ‘ಗೋಲ್ಡನ್ ಗಳಿಗೆ’ಯ ಸಂಕಟ, ಸಂಕಷ್ಟಗಳು ಒಂದೆರಡಲ್ಲ. ಆ್ಯಂಬುಲೆನ್ಸ್ ಬರಬೇಕು; ಸುಸಜ್ಜಿತ ಆಸ್ಪತ್ರೆ, ವೈದ್ಯತಂಡ ಇರಬೇಕು; ಮರಣೋತ್ತರ ವರದಿ ಬರಬೇಕು. ಅಪಘಾತದಿಂದ ಸಾವು ಸಂಭವಿಸಿದ್ದರಂತೂ ಪೊಲೀಸರು, ವಕೀಲರು ಮತ್ತು ಮೃತರ ಸಂಬಂಧಿಗಳು ಬರಬೇಕು. ಮೃತವ್ಯಕ್ತಿ ಈ ಮೊದಲೇ ಅಂಗದಾನ ಪ್ರತಿಜ್ಞೆ ಮಾಡಿದ್ದರೂ ಆ ದುರ್ಭರ ಸಮಯದಲ್ಲಿ ಅಂಗದಾನ ಪಡೆಯಲು ಸಂಬಂಧಿಗಳ ಮನವೊಲಿಸಬೇಕು. ಅದು ಎಲ್ಲ ಸಮಾಜದಲ್ಲೂ ತುಂಬ ಸೂಕ್ಷ್ಮ ವಿಷಯ. ಸ್ಪೇನ್ ದೇಶದಲ್ಲಿ ಅದಕ್ಕೆಂದೇ ವಿಶೇಷ ತರಬೇತಿ ಪಡೆದ ‘ದುಃಖಭಂಜನ’ ಸಿಬ್ಬಂದಿ ಇರುವುದರಿಂದಲೇ ಅಂಗದಾನ ಸ್ವೀಕೃತಿಯ ಶ್ರೇಯಾಂಕದಲ್ಲಿ ಅದು ಅತ್ಯುನ್ನತ ಸ್ಥಾನದಲ್ಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ದೇಶಗಳಲ್ಲಿ ಅಂಗಾಂಗಗಳ ಕಾಳಸಂತೆಕೋರರು ಈ ಕ್ಷಣಕ್ಕೆಂದೇ ಕಾದು ಕೂತಿದ್ದು ಮಿಂಚಿನ ಕಾರ್ಯಾಚರಣೆ ನಡೆಸುತ್ತಾರೆ. ಈ ಅನೈತಿಕ ಜಾಲದಲ್ಲಿ ಪೋಸ್ಟ್ ಮಾರ್ಟಮ್ ಸಿಬ್ಬಂದಿಯಷ್ಟೇ ಅಲ್ಲ, ವೈದ್ಯರೂ ನರ್ಸ್ಗಳೂ ಸೇರಿರುತ್ತಾರೆ. ಅಂಗಾಂಗಗಳ ‘ಕೊಯ್ಲು’ ಮಾಡುವ ಧಾವಂತದಲ್ಲಿ ತುಂಬ ಅಕ್ರಮಗಳು ನಡೆಯುತ್ತಿವೆ ಎಂದು ಕೇರಳದ ಡಾಕ್ಟರೊಬ್ಬರು ಸುಪ್ರೀಂ ಕೋರ್ಟ್ಗೂ ಹೋಗಿದ್ದಿದೆ.ಅಂತೂ ಕೋಮಾ/ಮರಣದ ನಂತರದ ನಾಲ್ಕೈದು ಗಂಟೆಗಳ ಅವಧಿಯ ‘ಗೋಲ್ಡನ್ ಗಳಿಗೆ’ ಎಂದರೆ ಆಸ್ಪತ್ರೆಯಲ್ಲಿ ಮಾನವೀಯತೆಯ ಪರಮೋಚ್ಚ ಸಮಯ ಆಗಿರುವಂತೆಯೇ, ಅನೈತಿಕ ಚಟುವಟಿಕೆಗಳ ಪಾಪಕೂಪದ ಕ್ಷಣವೂ ಆಗಿರುವ ಸಾಧ್ಯತೆ ಇರುತ್ತದೆ.</p>.<p>ಈ ವಿಪರ್ಯಾಸ ನೋಡಿ: ಅತ್ಯಾಧುನಿಕ ವೈದ್ಯ ಕೀಯ ಸೌಲಭ್ಯ ಮತ್ತು ಮಿಂಚಿನ ಕಾರ್ಯಾಚರಣೆಯ ವ್ಯವಸ್ಥೆ ಇರುವ ಜಪಾನ್ ದೇಶ ಅಂಗದಾನದ ವಿಷಯದಲ್ಲಿ ತೀರಾ ಹಿಂದಿದೆ (ನಮ್ಮಷ್ಟು ಅಲ್ಲ). ಅಲ್ಲಿನ ಶಿಂಟೊ ಧಾರ್ಮಿಕ ನಂಬಿಕೆಯ ಪ್ರಕಾರ ದೇಹ ಮತ್ತು ಆತ್ಮ ಒಂದೇ ಆಗಿರುತ್ತದೆ. ಅಪಘಾತಕ್ಕೆ ತುತ್ತಾದ ವ್ಯಕ್ತಿ ಮತ್ತೆಂದೂ ಪ್ರಜ್ಞೆ ಬಾರದಂಥ (ಕೋಮಾ) ಸ್ಥಿತಿಯಲ್ಲಿದ್ದರೂ, ಹೃದಯ ಬಡಿತ ತಾನಾಗಿ ನಿಲ್ಲುವವರೆಗೆ ಆ ಕುಡಿಜೀವದ ಪೋಷಣೆ ಆಗುತ್ತಲೇ ಇರಬೇಕು. 1968ರಲ್ಲಿ ಮೊದಲ ಹೃದಯಕಸಿ ಮಾಡಲು ಹೋದ ಸರ್ಜನ್ ಮೇಲೆ ಕೊಲೆ ಮೊಕದ್ದಮೆ ಹಾಕಿದ ಲಾಗಾಯ್ತೂ ಕೋಮಾ ಸ್ಥಿತಿಯಲ್ಲಿರುವ ಕಾಯದಿಂದ ಕಸಿಯೋಗ್ಯ ಅಂಗ ಗಳನ್ನು ಬೇರ್ಪಡಿಸುವ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟಾದ ಕಾನೂನುಗಳನ್ನು ರೂಪಿಸಲಾಗಿದೆ. ಕೋಮಾಕ್ಕೆ ತಲುಪಿದ ವ್ಯಕ್ತಿ ಅಂಗದಾನದ ಪ್ರತಿಜ್ಞೆ ಮೊದಲೇ ಮಾಡಿದ್ದರೂ ಮೃತ ಕಾಯ ಇಡಿಯಾಗಿ ಸಂಸ್ಕಾರವಾಗಬೇಕು ಎಂಬ ನಂಬಿಕೆ ಕುಟುಂಬಸ್ಥರಲ್ಲಿ ಆಳವಾಗಿ ಬೇರೂರಿದೆ. ಅದೇನೊ ತುಸು ಸಡಿಲ ಆಗುತ್ತಿದೆಯಾದರೂ, ಎರಡನೆಯ ಕಾರಣ ಇನ್ನೂ ಬಿಗಿಯಾಗಿಯೇ ಇದೆ: ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯ ರಕ್ತ ಪರಿಚಲನ ವ್ಯವಸ್ಥೆಯನ್ನು ನಿಲ್ಲಿಸಲು ಅಲ್ಲಿ ಕಾನೂನಿನ ಕ್ಲಿಷ್ಟ ಅಡಚಣೆಗಳಿವೆ. ನಮ್ಮಲ್ಲಿ ಅದನ್ನು ಸರಳಗೊಳಿಸಲಾಗುತ್ತಿದೆ. ಕೋಮಾ ಸ್ಥಿತಿಯಲ್ಲಿರುವ ವರಿಗೆ ‘ಸಾವಿನ ಹಕ್ಕು’ ಮತ್ತು ‘ಗೌರವಯುತ’ ಸಾವಿನ ಹಕ್ಕನ್ನು ಎತ್ತಿ ಹಿಡಿಯುವ ತೀರ್ಪನ್ನು ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ ಸುಪ್ರೀಂ ಕೋರ್ಟ್ ನೀಡಿದೆ.</p>.<p>ಜೀವರಕ್ಷಕ ಔಷಧಗಳ ಉತ್ಪಾದನೆಯಲ್ಲಿ ಭಾರತಕ್ಕೆ ‘ಗ್ಲೋಬಲ್ ಫಾರ್ಮಸಿ’ ಎಂಬ ಕೀರ್ತಿಯಿದೆ.<br>ನಮ್ಮ ದೇಶದಲ್ಲಿ ಡಿಜಿಟಲ್ ಕ್ರಾಂತಿ, ವೈದ್ಯಕೀಯ ವ್ಯವಸ್ಥೆಗಳ ನೆರವಿನಲ್ಲಿ ಅಂಗದಾನವನ್ನು ಸರಳ ಗೊಳಿಸುವ ಅದೆಷ್ಟೇ ಸಾಲುಸಾಲು ಯತ್ನಗಳು ನಡೆದರೂ ದಾನಿಗಳೇ ಸಿಗದಿದ್ದರೆ? ಸದೃಢ ವ್ಯಕ್ತಿಗಳೆಲ್ಲ ಅಂಗದಾನದ ಪ್ರತಿಜ್ಞೆ ಮಾಡಿದರೆ ದೇಶದ ಪ್ರತಿಷ್ಠೆಯನ್ನು ಕೊಂಚ ಮೇಲಕ್ಕೆ ಎತ್ತರಿಸಬಹುದು. ಪ್ರತಿಜ್ಞೆಯ ಜೊತೆಗೇ ರಾತ್ರಿ ಊಟದ ವೇಳೆಯಲ್ಲಿ ಕುಟುಂಬದ ಸದಸ್ಯರಿಗೆ ತಿಳಿಸಿ ಹೇಳಬೇಕು. ಏಕೆಂದರೆ, ಈ ಪುಣ್ಯಕಾರ್ಯಕ್ಕೆ ಕುಟುಂಬದ ಸದಸ್ಯ ರಿಂದಲೇ ದೊಡ್ಡ ವಿಘ್ನ ಬರುತ್ತದೆ. ಟೆನ್ಕೆ ಓಟದ ಸಂದರ್ಭದಲ್ಲಿ ಅಂಗದಾನದ ಫಲಕ ಹಿಡಿದವರು ಗಣೇಶನ (ಅಂದರೆ ವಿಘ್ನೇಶನ) ವೇಷದಲ್ಲೇ ಬಂದಿದ್ದೇಕೆ ಎಂಬುದನ್ನು ಹೀಗೂ ಅರ್ಥೈಸಬಹುದು. </p>.<p>ಅಸಹಜ ಸಾವು ಯಾರಿಗೂ ಬರಲೇಬಾರದು ನಿಜ. ಬಂದರೂ ಅಂಥ ದೇಹ ಮಣ್ಣಾಗುವ ಮುಂಚೆ, ಅಥವಾ ಚಿತಾಗ್ನಿಯಲ್ಲಿ ಉರಿಯುವ ಮುಂಚೆ ಆ ಕಾಯದ ಕೊಂಚ ಪಾಲು ಇನ್ನೊಬ್ಬರ ಪಾಲಿಗೆ ಆಶಾಕಿರಣವಾಗಲು ಸಾಧ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>