ಜಾತಿಪದ್ಧತಿಗೆ ಪ್ರತಿರೋಧ ಒಡ್ಡಿದ ಕನ್ನಡದ ಮೊದಲ ಕವಿ ಪಂಪ. ಆದರೆ, ಜಾತಿ ಕಾರಣದಿಂದಲೇ ಪಂಪ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವಂತಿದೆ. ಕನ್ನಡದ ಆದಿಕವಿಯ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಅಥವಾ ಪ್ರಾಧಿಕಾರ ಇಲ್ಲದಿರುವುದಕ್ಕೂ, ಪಂಪನಿಗೆ ಜಾತಿ–ಧರ್ಮದ ಬೆಂಬಲ ಇಲ್ಲದಿರುವುದಕ್ಕೂ ಸಂಬಂಧ ಇಲ್ಲದಿಲ್ಲ.