<p>ರಾಜಕಾರಣದಲ್ಲಿ ಕಾಲಕ್ರಮೇಣ ಹೊಸ ನಾಯಕರು ಹೊರಹೊಮ್ಮಬೇಕು; ಹೊಸ ನಾಯಕತ್ವದ ಬೆಳಕಿನಲ್ಲಿ ಜನಸಾಮಾನ್ಯರ ಬದುಕಿಗೆ ಭರವಸೆ ಮೂಡಬೇಕು ಎಂದು ಯಾವುದೇ ದೇಶದ ಯಾವುದೇ ಕಾಲದ ನಾಗರಿಕ ಸಮಾಜ ಕಾತರಿಸುವುದು ಸಹಜ. ಆದರೆ, ಸಾರ್ವಜನಿಕ ಬದುಕಿನ ವರ್ತಮಾನದ ಕಳಾಹೀನತೆ ಹಾಗೂ ಭವಿಷ್ಯದ ಬಗೆಗೆ ಕನಸುಗಳನ್ನು ಸ್ಫುರಿಸದ ಏಕತಾನತೆ ಯಿಂದ ಬೇಸರಗೊಂಡ ನಾಗರಿಕರ ಅಗತ್ಯ ಮತ್ತು ಅಪೇಕ್ಷೆಗೆ ಅನುಗುಣವಾಗಿ ಹೊಸ ನಾಯಕತ್ವ ತಕ್ಷಣಉದ್ಭವಿಸಲಾರದು. ರಾಜಕೀಯ ನಾಯಕತ್ವ ಯಾವಾಗ, ಏಕೆ ಮತ್ತು ಹೇಗೆ ಹುಟ್ಟುತ್ತದೆ ಎಂಬ ಪ್ರಶ್ನೆಗೆ ಐತಿಹಾಸಿಕ ನಿದರ್ಶನಗಳು ಹಾಗೂ ರಾಜ್ಯಶಾಸ್ತ್ರ<br>ಮತ್ತು ಸಮಾಜಶಾಸ್ತ್ರದ ವೈಜ್ಞಾನಿಕ ನಿರೂಪಣೆಗಳಲ್ಲಿ ಉತ್ತರ ಹುಡುಕಬೇಕಾಗುತ್ತದೆ.</p>.<p>ರಾಜಕೀಯ ನಾಯಕತ್ವವು ಹುಟ್ಟುವುದಿಲ್ಲ, ಸೃಷ್ಟಿ ಯಾಗುವುದಿಲ್ಲ, ಉದ್ಭವಿಸುವುದೂ ಇಲ್ಲ ಎಂಬ ಮೂಲಭೂತ ಸತ್ಯವನ್ನು ಎಲ್ಲಕ್ಕಿಂತ ಮೊದಲಿಗೆ ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಅದು ಆ ಕ್ಷಣದ ಅಥವಾ ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಯ ಫಲಶ್ರುತಿಆಗಿರಲೂ ಸಾಧ್ಯವಿಲ್ಲ. ನಾಯಕತ್ವ ಎಂಬುದು ಕಾಲಾನು<br>ಕ್ರಮೇಣ ರೂಪು ತಳೆಯುತ್ತಾ ವರ್ತಮಾನದಲ್ಲಿ ಹೊರ ಚಿಮ್ಮುವ ವಿದ್ಯಮಾನ; ಐತಿಹಾಸಿಕ ಸನ್ನಿವೇಶಗಳು, ಸಾಮಾಜಿಕ ಒತ್ತಡಗಳು, ಪ್ರಾದೇಶಿಕ ಸಮಸ್ಯೆಗಳು ಹಾಗೂ ವ್ಯಕ್ತಿಗತ ಮುಂದಾಳತ್ವದ ಗುಣಗಳು ಸಮನ್ವಯಗೊಳ್ಳುವ ಸಂಕೀರ್ಣ ಪ್ರಕ್ರಿಯೆ. ಕೇವಲ ವ್ಯಕ್ತಿಯ ಸಾಧನೆಯಾಗದೇ ಸಮಕಾಲೀನ ಸಂದರ್ಭಕ್ಕೆ ಜನಸಮುದಾಯವು ತೋರುವ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯಾಗಿ ಪ್ರಕಟವಾಗುವ ರಾಜಕೀಯ ನಾಯಕತ್ವ ಹುಟ್ಟುವ ಬಗೆ ಮತ್ತು ಸಂದರ್ಭ ಸೋಜಿಗದ ಸಂಗತಿ ಎಂಬುದನ್ನು ಒಪ್ಪಬೇಕಾಗುತ್ತದೆ.</p>.<p>ರಾಜಕೀಯ ನಾಯಕತ್ವವು ಹೆಚ್ಚಾಗಿ ಆರ್ಥಿಕ ಕುಸಿತ, ಸಾಮಾಜಿಕ ಅಶಾಂತಿ, ಯುದ್ಧ ಅಥವಾ ಸಾಂಸ್ಥಿಕ ಅವನತಿಯ ಕ್ಷಣಗಳಲ್ಲಿ ಹೊರಹೊಮ್ಮುತ್ತದೆ. ಮಹಾತ್ಮ ಗಾಂಧಿಯವರ ನಾಯಕತ್ವವು ವಸಾಹತು<br>ಶಾಹಿಯ ದಮನಕಾರಿ ಆಡಳಿತ ಮತ್ತು ಸಮುದಾಯ ದೊಳಗಿನ ಅತೃಪ್ತಿಯ ಸಮಯದಲ್ಲಿ ರೂಪು ತಳೆದಿದ್ದನ್ನು ಈ ಬೆಳಕಿನಲ್ಲಿಯೇ ಅವಲೋಕಿಸ ಬಹುದು. ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗುವುದಕ್ಕೆ ಮುಂಚೆಯೇ ದಕ್ಷಿಣ ಆಫ್ರಿಕಾದಲ್ಲಿನ ಲೌಕಿಕ ಅನುಭವಗಳ ಮೂಲಕ<br>ನಾಯಕತ್ವಕ್ಕೆ ಪೂರಕವಾದ ಸತ್ವ, ವ್ಯಕ್ತಿತ್ವ ಮತ್ತು ಮಾನಸಿಕ ಸಿದ್ಧತೆಯನ್ನು ಗಳಿಸಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ವ್ಯವಸ್ಥಿತ ಜನಾಂಗೀಯ ಅನ್ಯಾಯ ಮತ್ತು ಪ್ರತಿರೋಧದ ಸಂದರ್ಭದಲ್ಲಿ ಐತಿಹಾಸಿಕ ನಾಯಕರಾಗಿ ಹೊರಹೊಮ್ಮಿದ್ದನ್ನು ಗಮನಿಸಬೇಕು.</p>.<p>ಹೊರನೋಟಕ್ಕೆ ಕೆ. ಚಂದ್ರಶೇಖರ ರಾವ್ ಅವರು ತೆಲಂಗಾಣ ಸ್ವಾಭಿಮಾನದ ಚಳವಳಿ ರೂಪಿಸುವ ಮೂಲಕ ನಾಯಕರಾಗಿ ಚಿಮ್ಮಿದರು ಎನ್ನಿಸಬಹುದು. ಆದರೆ, ವಾಸ್ತವದಲ್ಲಿ ಅವರು ಸುಪ್ತವಾಗಿದ್ದ ಪ್ರಜೆಗಳ ಅಸಮಾಧಾನದ ಪ್ರತೀಕವಾಗಿ, ದನಿಯಾಗಿ ಕಾಣಿಸಿಕೊಂಡರೇ ವಿನಾ ಅವರಿಂದಾಗಿ ತೆಲಂಗಾಣ ಹೋರಾಟ ಜೀವ ತಳೆಯಲಿಲ್ಲ. ಅದೇ ಪ್ರಕಾರ ಎಂಬತ್ತರ ದಶಕದಲ್ಲಿ ಕರ್ನಾಟಕ ಕಂಡ ಕನ್ನಡ ಜಾಗೃತಿ, ದಲಿತ ಚಳವಳಿ ಮತ್ತು ರೈತ ಹೋರಾಟಗಳ ಹುಟ್ಟು ಮತ್ತು ಆ ಜನಾಂದೋಲನಗಳು ಹುಟ್ಟಿಸಿದ ನಾಯಕತ್ವಗಳ ಗುಟ್ಟನ್ನು ಹುಡುಕಬಹುದು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಕರ್ನಾಟಕ ದಲ್ಲಿ ರೈತ ಚಳವಳಿಯನ್ನು ಹುಟ್ಟುಹಾಕಿದರು ಎಂದು ಹೇಳುವುದು ಕೇವಲ ಅಭಿಮಾನ ಮೂಲದ, ಅರ್ಧ ಸತ್ಯದ ಮಾತಾಗುತ್ತದೆ. ರೈತ ಚಳವಳಿ ಮೂಲಕ ಎಂಡಿಎನ್ ನಾಯಕರಾಗಿ ಹೊರಹೊಮ್ಮಿದರು ಎಂಬ ತರ್ಕದಲ್ಲಿ ಪೂರ್ಣ ಸತ್ಯವಿರುವುದನ್ನು ಗಮನಿಸಬೇಕು.</p>.<p>ಇತ್ತೀಚೆಗೆ ಸುಮ್ಮನೆ ಅಮ್ಮನ ಸೆರಗಿನಲ್ಲಿ, ಅಪ್ಪನ ದಪ್ಪನೆಯ ಹೆಗಲಿನಲ್ಲಿ, ಅಜ್ಜನ ಕೋಲಿನ ಆಸರೆಯಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸುವ, ಹಣ, ಅಧಿಕಾರ, ಜಾತಿ ಹೂಡಿಕೆಯಲ್ಲಿ ಚುನಾವಣೆಗಳನ್ನು ಗೆಲ್ಲುವ ಕೃತ್ರಿಮ ನಾಯಕರನ್ನು ಎಲ್ಲೆಡೆ ಕಾಣುತ್ತಿದ್ದೇವೆ.</p>.<p>ರಾಯಿಸ್ಟ್ ವಿಚಾರಧಾರೆ ಹೊಂದಿದ್ದ ಎಸ್.ಆರ್. ಬೊಮ್ಮಾಯಿ ಅವರ ಕುಟುಂಬದ ಮೂರನೇ ಪೀಳಿಗೆಯ ಕುಡಿ ಭರತ್ ಬೊಮ್ಮಾಯಿ, ಸರ್ವ ಪಕ್ಷಗಳ ಖಜಾಂಚಿ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಶಾಮನೂರು ಸಮರ್ಥ, ಜನತಾ ಪರಿವಾರ ಬ್ಯಾನರ್ ಹೊಂದಿರುವ ಎಚ್.ಡಿ. ದೇವೇಗೌಡರ ಇಡೀ ಹರದನಹಳ್ಳಿ ಪರಿವಾರ, ಜನಪರ ಹೋರಾಟದ ಹಿನ್ನೆಲೆಯ ಬಿ.ಎಸ್. ಯಡಿಯೂರಪ್ಪರ ಕುಟುಂಬದ ಕುಡಿಗಳು ಕನ್ನಡ ನಾಡಿಗೆ ಇಂಥ ಕೃತ್ರಿಮ ನಾಯಕತ್ವ ನೀಡುವಲ್ಲಿ ಸಫಲರಾಗಿದ್ದಾರೆ. ಬೀದರ್ ಭಾಗದ ಹೋರಾಟಗಾರ–ರಾಜಕಾರಣಿ ಭೀಮಣ್ಣ ಖಂಡ್ರೆ ಅವರ ಮಗ ಈಶ್ವರ ಖಂಡ್ರೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅರಣ್ಯ ಸಚಿವರು ಹಾಗೂ ಮುಮ್ಮಡಿ ಕುಡಿ ಸಾಗರ್ ಖಂಡ್ರೆ ಸಂಸತ್ ಸದಸ್ಯರು.</p>.<p>ಇನ್ನು, ಸಮಾಜವಾದಿ ಎಂಬ ಆರೋಪಕ್ಕೆ ಗುರಿಯಾಗಿರುವ ಸಿದ್ದರಾಮಯ್ಯ ಅವರು ಕೂಡ ಕುಡಿ ನಾಯಕರನ್ನು ಕೊಡುಗೆ ನೀಡುವಲ್ಲಿ ಹಿಂದೆಬಿದ್ದಿಲ್ಲ! ಅವರು ರಾಜಕೀಯದಲ್ಲಿ ಆಸಕ್ತಿಯಿದ್ದ ಒಬ್ಬ ಮಗ ತೀರಿಕೊಂಡ ನಂತರ ಸಾರ್ವಜನಿಕ ಜೀವನದ ಹತ್ತಿರವೂ ಸುಳಿಯದ ಇನ್ನೊಬ್ಬ ಮಗ, ವೈದ್ಯ ವೃತ್ತಿಯ ಯತೀಂದ್ರ ಅವರನ್ನು ‘ಶಾಡೋ ಸಿಎಂ’ ಎಂದು ಕರೆಯಲಾಗುವಷ್ಟು ರಾಜಕೀಯವಾಗಿ ಬೆಳೆಸಿದ್ದಾರೆ;<br>ಮೊಮ್ಮಗ ಧವನ್ ರಾಕೇಶ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ವರುಣಾ ಕ್ಷೇತ್ರದಲ್ಲಿ ಘೋಷಿಸಿದ್ದಾರೆ.</p>.<p>ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಂಡಿರುವುದು ಜನನಾಯಕನ ಜನನದ ವಿಷಯವೇ ಹೊರತು ಮಳೆ<br>ಗಾಲದಲ್ಲಿ ನಾಯಿಕೊಡೆಗಳಂತೆ ಎಲ್ಲೆಡೆ ಹುಟ್ಟಿಕೊಳ್ಳುವ ಕೃತಕ ನಾಯಕರ ಸಂತತಿಯ ಪ್ರವರ ಅಲ್ಲ. ಹಾಗಾಗಿ ಕೃತ್ರಿಮ ನಾಯಕರ ಕಥೆಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಬೇಕಾಯಿತು, ಬೆಳೆಸುವ ಅಗತ್ಯವಿಲ್ಲ.</p>.<p>ನಾಯಕತ್ವ ಎಂಬುದು ನಿರ್ವಾತದಲ್ಲಿ ನಿರ್ಮಾಣವಾಗುವ ಪದಾರ್ಥವಲ್ಲ. ಅದನ್ನು ರೂಪಿಸುವ ಕ್ರಿಯೆಯಲ್ಲಿ ಸಾಂಸ್ಥಿಕ ಪಾತ್ರ ಮತ್ತು ಹೊಣೆಗಾರಿಕೆಯೂ ಬಹಳ ಮುಖ್ಯವಾಗುತ್ತದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ತಾವು ಪ್ರತಿಪಾದಿಸುವ ಸೈದ್ಧಾಂತಿಕತೆಯ ತಿರುಳನ್ನು ತಮ್ಮ ಕಾರ್ಯಕರ್ತರಲ್ಲಿ ಬಿತ್ತುವ ಬೌದ್ಧಿಕ ಚಟುವಟಿಕೆಗಳನ್ನು ನಡೆಸದೇ ಅವರನ್ನು ಕಾಲಾಳುಗಳಂತೆ ಬಳಸುವ, ಬೆಳೆಸುವ ಕಾರ್ಯದಲ್ಲಿ ನಿರತವಾಗಿವೆ. ಹಾಗಾಗಿ ಸಂಘಟನೆ, ಹೋರಾಟ, ಪ್ರತಿಭಟನೆಗಳು ಬೇರೆಯದೇ ಆದ ಶುದ್ಧ ವ್ಯಾವಹಾರಿಕ ಆಯಾಮ ಪಡೆದುಕೊಳ್ಳುವಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಅಡ್ಡ ಮಾರ್ಗಗಳಲ್ಲಿ ದುಡ್ಡು ಮಾಡಿದ ಕುಳಗಳು, ಗಣಿ ವ್ಯಾಪಾರಿಗಳು ರಾಜಕಾರಣದಲ್ಲಿ ವಿಜೃಂಭಿಸಲು ಆರಂಭಿಸಿದ ನಂತರವಂತೂ ಫ್ಲೆಕ್ಸ್–ಬ್ಯಾನರ್ ನಾಯಕರ ನವಪೀಳಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿಯೇ ಉದ್ಭವಿಸಿದೆ. </p>.<p>ಎಡಪಂಥೀಯ ರಾಜಕೀಯ ಪಕ್ಷಗಳು, ಸಂಘಟನೆಗಳು ಕೂಡ ಕಾರ್ಯಕರ್ತರಿಗಾಗಿ ತರಬೇತಿ ಶಿಬಿರಗಳನ್ನು ಏರ್ಪಡಿಸುವ ಕಾರ್ಯಕ್ರಮಗಳನ್ನು ಕಡಿಮೆ ಮಾಡಿವೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಇತರ ಪಕ್ಷಗಳಿಗಿಂತ ಈ ವಿಷಯದಲ್ಲಿ ಹೆಚ್ಚೇನೂ ಭಿನ್ನವಾಗಿಲ್ಲ. ಆದರೆ ಸಂಘಟನೆಯ ತಾತ್ತ್ವಿಕತೆಯನ್ನು ವ್ಯವಸ್ಥಿತವಾಗಿ ಹರಡುವಲ್ಲಿ ನಿರತವಾಗಿರುವ ಆರ್ಎಸ್ಎಸ್ ಪರದೆಯ ಹಿಂದೆ ಸಕ್ರಿಯವಾಗಿರುವುದು ಬಿಜೆಪಿಗೆ ಬೌದ್ಧಿಕ–ಭೌತಿಕ ಬೆನ್ನೆಲುಬಾಗಿದೆ. ಇಂತಹ ವಾತಾವರಣದಲ್ಲಿ ಅಪವಾದವೆಂಬಂತೆ ‘ಎಸ್ಯುಸಿಐ’ ಸಂಘಟನೆಯು ತನ್ನ ವಿದ್ಯಾರ್ಥಿ–ಯುವಜನ ವಿಭಾಗವನ್ನು ಸೈದ್ಧಾಂತಿಕವಾಗಿ ಸಿದ್ಧಗೊಳಿಸುವಲ್ಲಿ ಮುತುವರ್ಜಿವಹಿಸುತ್ತಿರುವುದು ಹಾಗೂ ರವಿ ಕೃಷ್ಣಾರೆಡ್ಡಿ ನೇತೃತ್ವದ ‘ಕೆಆರ್ಎಸ್’ ಪಕ್ಷವು ಸಾಂಪ್ರದಾಯಿಕ ರಾಜಕೀಯ ನಾಯಕತ್ವಕ್ಕೆ ಹೊಸತೆನಿಸುವ ಖದರು ನೀಡುತ್ತಿರುವುದು ವಿಶೇಷ ಗಮನಕ್ಕೆ ಅರ್ಹವೆನಿಸುತ್ತವೆ.</p>.<p>ಕರ್ನಾಟಕದಲ್ಲಿ ನಾಯಕತ್ವದ ವಿಕಾಸಕ್ಕೆ ಆರಂಭಿಕ ಅನುಭವ, ತರಬೇತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದ ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆಗಳು ನಿಷೇಧಕ್ಕೆ ಒಳಗಾಗಿ ದಶಕಗಳೇ ಗತಿಸಿವೆ. ವಿದ್ಯಾರ್ಥಿ ದಿಸೆಯಲ್ಲಿ ಇಂತಹ ಸಂಘಟನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾದ ಯುವಪೀಳಿಗೆಯ ತಲೆಯಲ್ಲಿ ನಾಯಕತ್ವಕ್ಕೆ ಬುನಾದಿಯಾಗುವ ಪ್ರಜಾತಂತ್ರದ ಪ್ರಾಥಮಿಕ ಪಾಠಗಳು ನಾಟುವುದಾದರೂ ಹೇಗೆ?</p>.<p>ಸ್ವತಂತ್ರ ಭಾರತದಲ್ಲಿ ಆರಂಭಿಕ ಹಂತಕ್ಕೆ ಹೋಲಿಸಿದರೆ ಪ್ರಸ್ತುತ ಮತದಾನದ ಪ್ರಮಾಣ ತೀವ್ರವಾಗಿ ಏರಿಕೆಯಾಗಿರುವುದನ್ನು ಕಾಣಬಹುದು. ಹಾಗೆಂದು ಜಾರಿಯಲ್ಲಿರುವ ಪ್ರಜಾಪ್ರಭುತ್ವ ಪ್ರಬುದ್ಧತೆ<br>ಪಡೆದಿದೆಯೆಂದು ಭಾವಿಸಲು ಹಲವಾರು ಕಾರಣಗಳು ಅಡ್ಡ ಬರುತ್ತವೆ. ಅಧಿಕೃತ ಅಂಕಿಸಂಖ್ಯೆಗಳ ಮೇಲಿನ ಅಪನಂಬಿಕೆ ಮತ್ತು ಜಾರಿಯಾಗದ ಪುಸ್ತಕದ ನೀತಿಸಂಹಿತೆಗಳ ಪರಿಗಣನೆಯಲ್ಲಿ ಚುನಾವಣಾ<br>ವೈಫಲ್ಯ ಬರಿಗಣ್ಣಿಗೂ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಯಕತ್ವವನ್ನು ಉತ್ಪಾದಿಸುವ ಸಾಧನ<br>ವಾಗಿಯೂ ಚುನಾವಣೆಗಳು ಬಳಕೆಯಾಗುತ್ತಿವೆ. ಮಾಧ್ಯಮ ಖರೀದಿ, ಆರ್ಥಿಕ ಬಲ, ಜಾತಿಯ ಬೆಂಬಲ, ಕುಟುಂಬದ ವರ್ಚಸ್ಸು ಮತ್ತು ಡಿಜಿಟಲ್ ಪ್ರಭಾವ ಬಳಸಿ ಸಮುದಾಯದೊಳಗೆ ಬೇರುಗಳೇ ಇಲ್ಲದ ನಾಯಕತ್ವ ಉತ್ಪಾದನೆಯಾಗುವುದನ್ನು ಏನೆಂದು ಪರಿಭಾವಿಸಬೇಕು?</p>.<p>ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ನಾಯಕರು ಮತದಾರರ ಪ್ರತಿನಿಧಿಗಳೇ ಆಗಿರುತ್ತಾರೆ ಎನ್ನುವುದು ತಾಂತ್ರಿಕವಾಗಿ ಸರಿ. ನಾಯಕತ್ವದ ಅಯೋಗ್ಯತೆಯು ಮತದಾರರ ಅಯೋಗ್ಯತೆಗೆ ತಕ್ಕಂತೆ ಇರುತ್ತದೆ ಎಂದೂ ವಾದಿಸ ಬಹುದು. ಆದರೆ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಫಲಿತಾಂಶ ಘೋಷಣೆ ತನಕ ನಡೆಯುವ ಅಕ್ರಮಗಳನ್ನು ಗಮನಿಸಿದರೆ ಪ್ರಜಾತಂತ್ರದ ಅಸಲಿಯತ್ತು ಅರಿವಿಗೆ ಬರುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಮತದಾರರನ್ನು ದೂರುವುದರಲ್ಲಿ ಆರ್ಥವಿದೆ ಎಂದು ಅನ್ನಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜಕಾರಣದಲ್ಲಿ ಕಾಲಕ್ರಮೇಣ ಹೊಸ ನಾಯಕರು ಹೊರಹೊಮ್ಮಬೇಕು; ಹೊಸ ನಾಯಕತ್ವದ ಬೆಳಕಿನಲ್ಲಿ ಜನಸಾಮಾನ್ಯರ ಬದುಕಿಗೆ ಭರವಸೆ ಮೂಡಬೇಕು ಎಂದು ಯಾವುದೇ ದೇಶದ ಯಾವುದೇ ಕಾಲದ ನಾಗರಿಕ ಸಮಾಜ ಕಾತರಿಸುವುದು ಸಹಜ. ಆದರೆ, ಸಾರ್ವಜನಿಕ ಬದುಕಿನ ವರ್ತಮಾನದ ಕಳಾಹೀನತೆ ಹಾಗೂ ಭವಿಷ್ಯದ ಬಗೆಗೆ ಕನಸುಗಳನ್ನು ಸ್ಫುರಿಸದ ಏಕತಾನತೆ ಯಿಂದ ಬೇಸರಗೊಂಡ ನಾಗರಿಕರ ಅಗತ್ಯ ಮತ್ತು ಅಪೇಕ್ಷೆಗೆ ಅನುಗುಣವಾಗಿ ಹೊಸ ನಾಯಕತ್ವ ತಕ್ಷಣಉದ್ಭವಿಸಲಾರದು. ರಾಜಕೀಯ ನಾಯಕತ್ವ ಯಾವಾಗ, ಏಕೆ ಮತ್ತು ಹೇಗೆ ಹುಟ್ಟುತ್ತದೆ ಎಂಬ ಪ್ರಶ್ನೆಗೆ ಐತಿಹಾಸಿಕ ನಿದರ್ಶನಗಳು ಹಾಗೂ ರಾಜ್ಯಶಾಸ್ತ್ರ<br>ಮತ್ತು ಸಮಾಜಶಾಸ್ತ್ರದ ವೈಜ್ಞಾನಿಕ ನಿರೂಪಣೆಗಳಲ್ಲಿ ಉತ್ತರ ಹುಡುಕಬೇಕಾಗುತ್ತದೆ.</p>.<p>ರಾಜಕೀಯ ನಾಯಕತ್ವವು ಹುಟ್ಟುವುದಿಲ್ಲ, ಸೃಷ್ಟಿ ಯಾಗುವುದಿಲ್ಲ, ಉದ್ಭವಿಸುವುದೂ ಇಲ್ಲ ಎಂಬ ಮೂಲಭೂತ ಸತ್ಯವನ್ನು ಎಲ್ಲಕ್ಕಿಂತ ಮೊದಲಿಗೆ ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಅದು ಆ ಕ್ಷಣದ ಅಥವಾ ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಯ ಫಲಶ್ರುತಿಆಗಿರಲೂ ಸಾಧ್ಯವಿಲ್ಲ. ನಾಯಕತ್ವ ಎಂಬುದು ಕಾಲಾನು<br>ಕ್ರಮೇಣ ರೂಪು ತಳೆಯುತ್ತಾ ವರ್ತಮಾನದಲ್ಲಿ ಹೊರ ಚಿಮ್ಮುವ ವಿದ್ಯಮಾನ; ಐತಿಹಾಸಿಕ ಸನ್ನಿವೇಶಗಳು, ಸಾಮಾಜಿಕ ಒತ್ತಡಗಳು, ಪ್ರಾದೇಶಿಕ ಸಮಸ್ಯೆಗಳು ಹಾಗೂ ವ್ಯಕ್ತಿಗತ ಮುಂದಾಳತ್ವದ ಗುಣಗಳು ಸಮನ್ವಯಗೊಳ್ಳುವ ಸಂಕೀರ್ಣ ಪ್ರಕ್ರಿಯೆ. ಕೇವಲ ವ್ಯಕ್ತಿಯ ಸಾಧನೆಯಾಗದೇ ಸಮಕಾಲೀನ ಸಂದರ್ಭಕ್ಕೆ ಜನಸಮುದಾಯವು ತೋರುವ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯಾಗಿ ಪ್ರಕಟವಾಗುವ ರಾಜಕೀಯ ನಾಯಕತ್ವ ಹುಟ್ಟುವ ಬಗೆ ಮತ್ತು ಸಂದರ್ಭ ಸೋಜಿಗದ ಸಂಗತಿ ಎಂಬುದನ್ನು ಒಪ್ಪಬೇಕಾಗುತ್ತದೆ.</p>.<p>ರಾಜಕೀಯ ನಾಯಕತ್ವವು ಹೆಚ್ಚಾಗಿ ಆರ್ಥಿಕ ಕುಸಿತ, ಸಾಮಾಜಿಕ ಅಶಾಂತಿ, ಯುದ್ಧ ಅಥವಾ ಸಾಂಸ್ಥಿಕ ಅವನತಿಯ ಕ್ಷಣಗಳಲ್ಲಿ ಹೊರಹೊಮ್ಮುತ್ತದೆ. ಮಹಾತ್ಮ ಗಾಂಧಿಯವರ ನಾಯಕತ್ವವು ವಸಾಹತು<br>ಶಾಹಿಯ ದಮನಕಾರಿ ಆಡಳಿತ ಮತ್ತು ಸಮುದಾಯ ದೊಳಗಿನ ಅತೃಪ್ತಿಯ ಸಮಯದಲ್ಲಿ ರೂಪು ತಳೆದಿದ್ದನ್ನು ಈ ಬೆಳಕಿನಲ್ಲಿಯೇ ಅವಲೋಕಿಸ ಬಹುದು. ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗುವುದಕ್ಕೆ ಮುಂಚೆಯೇ ದಕ್ಷಿಣ ಆಫ್ರಿಕಾದಲ್ಲಿನ ಲೌಕಿಕ ಅನುಭವಗಳ ಮೂಲಕ<br>ನಾಯಕತ್ವಕ್ಕೆ ಪೂರಕವಾದ ಸತ್ವ, ವ್ಯಕ್ತಿತ್ವ ಮತ್ತು ಮಾನಸಿಕ ಸಿದ್ಧತೆಯನ್ನು ಗಳಿಸಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ವ್ಯವಸ್ಥಿತ ಜನಾಂಗೀಯ ಅನ್ಯಾಯ ಮತ್ತು ಪ್ರತಿರೋಧದ ಸಂದರ್ಭದಲ್ಲಿ ಐತಿಹಾಸಿಕ ನಾಯಕರಾಗಿ ಹೊರಹೊಮ್ಮಿದ್ದನ್ನು ಗಮನಿಸಬೇಕು.</p>.<p>ಹೊರನೋಟಕ್ಕೆ ಕೆ. ಚಂದ್ರಶೇಖರ ರಾವ್ ಅವರು ತೆಲಂಗಾಣ ಸ್ವಾಭಿಮಾನದ ಚಳವಳಿ ರೂಪಿಸುವ ಮೂಲಕ ನಾಯಕರಾಗಿ ಚಿಮ್ಮಿದರು ಎನ್ನಿಸಬಹುದು. ಆದರೆ, ವಾಸ್ತವದಲ್ಲಿ ಅವರು ಸುಪ್ತವಾಗಿದ್ದ ಪ್ರಜೆಗಳ ಅಸಮಾಧಾನದ ಪ್ರತೀಕವಾಗಿ, ದನಿಯಾಗಿ ಕಾಣಿಸಿಕೊಂಡರೇ ವಿನಾ ಅವರಿಂದಾಗಿ ತೆಲಂಗಾಣ ಹೋರಾಟ ಜೀವ ತಳೆಯಲಿಲ್ಲ. ಅದೇ ಪ್ರಕಾರ ಎಂಬತ್ತರ ದಶಕದಲ್ಲಿ ಕರ್ನಾಟಕ ಕಂಡ ಕನ್ನಡ ಜಾಗೃತಿ, ದಲಿತ ಚಳವಳಿ ಮತ್ತು ರೈತ ಹೋರಾಟಗಳ ಹುಟ್ಟು ಮತ್ತು ಆ ಜನಾಂದೋಲನಗಳು ಹುಟ್ಟಿಸಿದ ನಾಯಕತ್ವಗಳ ಗುಟ್ಟನ್ನು ಹುಡುಕಬಹುದು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಕರ್ನಾಟಕ ದಲ್ಲಿ ರೈತ ಚಳವಳಿಯನ್ನು ಹುಟ್ಟುಹಾಕಿದರು ಎಂದು ಹೇಳುವುದು ಕೇವಲ ಅಭಿಮಾನ ಮೂಲದ, ಅರ್ಧ ಸತ್ಯದ ಮಾತಾಗುತ್ತದೆ. ರೈತ ಚಳವಳಿ ಮೂಲಕ ಎಂಡಿಎನ್ ನಾಯಕರಾಗಿ ಹೊರಹೊಮ್ಮಿದರು ಎಂಬ ತರ್ಕದಲ್ಲಿ ಪೂರ್ಣ ಸತ್ಯವಿರುವುದನ್ನು ಗಮನಿಸಬೇಕು.</p>.<p>ಇತ್ತೀಚೆಗೆ ಸುಮ್ಮನೆ ಅಮ್ಮನ ಸೆರಗಿನಲ್ಲಿ, ಅಪ್ಪನ ದಪ್ಪನೆಯ ಹೆಗಲಿನಲ್ಲಿ, ಅಜ್ಜನ ಕೋಲಿನ ಆಸರೆಯಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸುವ, ಹಣ, ಅಧಿಕಾರ, ಜಾತಿ ಹೂಡಿಕೆಯಲ್ಲಿ ಚುನಾವಣೆಗಳನ್ನು ಗೆಲ್ಲುವ ಕೃತ್ರಿಮ ನಾಯಕರನ್ನು ಎಲ್ಲೆಡೆ ಕಾಣುತ್ತಿದ್ದೇವೆ.</p>.<p>ರಾಯಿಸ್ಟ್ ವಿಚಾರಧಾರೆ ಹೊಂದಿದ್ದ ಎಸ್.ಆರ್. ಬೊಮ್ಮಾಯಿ ಅವರ ಕುಟುಂಬದ ಮೂರನೇ ಪೀಳಿಗೆಯ ಕುಡಿ ಭರತ್ ಬೊಮ್ಮಾಯಿ, ಸರ್ವ ಪಕ್ಷಗಳ ಖಜಾಂಚಿ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಶಾಮನೂರು ಸಮರ್ಥ, ಜನತಾ ಪರಿವಾರ ಬ್ಯಾನರ್ ಹೊಂದಿರುವ ಎಚ್.ಡಿ. ದೇವೇಗೌಡರ ಇಡೀ ಹರದನಹಳ್ಳಿ ಪರಿವಾರ, ಜನಪರ ಹೋರಾಟದ ಹಿನ್ನೆಲೆಯ ಬಿ.ಎಸ್. ಯಡಿಯೂರಪ್ಪರ ಕುಟುಂಬದ ಕುಡಿಗಳು ಕನ್ನಡ ನಾಡಿಗೆ ಇಂಥ ಕೃತ್ರಿಮ ನಾಯಕತ್ವ ನೀಡುವಲ್ಲಿ ಸಫಲರಾಗಿದ್ದಾರೆ. ಬೀದರ್ ಭಾಗದ ಹೋರಾಟಗಾರ–ರಾಜಕಾರಣಿ ಭೀಮಣ್ಣ ಖಂಡ್ರೆ ಅವರ ಮಗ ಈಶ್ವರ ಖಂಡ್ರೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅರಣ್ಯ ಸಚಿವರು ಹಾಗೂ ಮುಮ್ಮಡಿ ಕುಡಿ ಸಾಗರ್ ಖಂಡ್ರೆ ಸಂಸತ್ ಸದಸ್ಯರು.</p>.<p>ಇನ್ನು, ಸಮಾಜವಾದಿ ಎಂಬ ಆರೋಪಕ್ಕೆ ಗುರಿಯಾಗಿರುವ ಸಿದ್ದರಾಮಯ್ಯ ಅವರು ಕೂಡ ಕುಡಿ ನಾಯಕರನ್ನು ಕೊಡುಗೆ ನೀಡುವಲ್ಲಿ ಹಿಂದೆಬಿದ್ದಿಲ್ಲ! ಅವರು ರಾಜಕೀಯದಲ್ಲಿ ಆಸಕ್ತಿಯಿದ್ದ ಒಬ್ಬ ಮಗ ತೀರಿಕೊಂಡ ನಂತರ ಸಾರ್ವಜನಿಕ ಜೀವನದ ಹತ್ತಿರವೂ ಸುಳಿಯದ ಇನ್ನೊಬ್ಬ ಮಗ, ವೈದ್ಯ ವೃತ್ತಿಯ ಯತೀಂದ್ರ ಅವರನ್ನು ‘ಶಾಡೋ ಸಿಎಂ’ ಎಂದು ಕರೆಯಲಾಗುವಷ್ಟು ರಾಜಕೀಯವಾಗಿ ಬೆಳೆಸಿದ್ದಾರೆ;<br>ಮೊಮ್ಮಗ ಧವನ್ ರಾಕೇಶ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ವರುಣಾ ಕ್ಷೇತ್ರದಲ್ಲಿ ಘೋಷಿಸಿದ್ದಾರೆ.</p>.<p>ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಂಡಿರುವುದು ಜನನಾಯಕನ ಜನನದ ವಿಷಯವೇ ಹೊರತು ಮಳೆ<br>ಗಾಲದಲ್ಲಿ ನಾಯಿಕೊಡೆಗಳಂತೆ ಎಲ್ಲೆಡೆ ಹುಟ್ಟಿಕೊಳ್ಳುವ ಕೃತಕ ನಾಯಕರ ಸಂತತಿಯ ಪ್ರವರ ಅಲ್ಲ. ಹಾಗಾಗಿ ಕೃತ್ರಿಮ ನಾಯಕರ ಕಥೆಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಬೇಕಾಯಿತು, ಬೆಳೆಸುವ ಅಗತ್ಯವಿಲ್ಲ.</p>.<p>ನಾಯಕತ್ವ ಎಂಬುದು ನಿರ್ವಾತದಲ್ಲಿ ನಿರ್ಮಾಣವಾಗುವ ಪದಾರ್ಥವಲ್ಲ. ಅದನ್ನು ರೂಪಿಸುವ ಕ್ರಿಯೆಯಲ್ಲಿ ಸಾಂಸ್ಥಿಕ ಪಾತ್ರ ಮತ್ತು ಹೊಣೆಗಾರಿಕೆಯೂ ಬಹಳ ಮುಖ್ಯವಾಗುತ್ತದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ತಾವು ಪ್ರತಿಪಾದಿಸುವ ಸೈದ್ಧಾಂತಿಕತೆಯ ತಿರುಳನ್ನು ತಮ್ಮ ಕಾರ್ಯಕರ್ತರಲ್ಲಿ ಬಿತ್ತುವ ಬೌದ್ಧಿಕ ಚಟುವಟಿಕೆಗಳನ್ನು ನಡೆಸದೇ ಅವರನ್ನು ಕಾಲಾಳುಗಳಂತೆ ಬಳಸುವ, ಬೆಳೆಸುವ ಕಾರ್ಯದಲ್ಲಿ ನಿರತವಾಗಿವೆ. ಹಾಗಾಗಿ ಸಂಘಟನೆ, ಹೋರಾಟ, ಪ್ರತಿಭಟನೆಗಳು ಬೇರೆಯದೇ ಆದ ಶುದ್ಧ ವ್ಯಾವಹಾರಿಕ ಆಯಾಮ ಪಡೆದುಕೊಳ್ಳುವಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಅಡ್ಡ ಮಾರ್ಗಗಳಲ್ಲಿ ದುಡ್ಡು ಮಾಡಿದ ಕುಳಗಳು, ಗಣಿ ವ್ಯಾಪಾರಿಗಳು ರಾಜಕಾರಣದಲ್ಲಿ ವಿಜೃಂಭಿಸಲು ಆರಂಭಿಸಿದ ನಂತರವಂತೂ ಫ್ಲೆಕ್ಸ್–ಬ್ಯಾನರ್ ನಾಯಕರ ನವಪೀಳಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿಯೇ ಉದ್ಭವಿಸಿದೆ. </p>.<p>ಎಡಪಂಥೀಯ ರಾಜಕೀಯ ಪಕ್ಷಗಳು, ಸಂಘಟನೆಗಳು ಕೂಡ ಕಾರ್ಯಕರ್ತರಿಗಾಗಿ ತರಬೇತಿ ಶಿಬಿರಗಳನ್ನು ಏರ್ಪಡಿಸುವ ಕಾರ್ಯಕ್ರಮಗಳನ್ನು ಕಡಿಮೆ ಮಾಡಿವೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಇತರ ಪಕ್ಷಗಳಿಗಿಂತ ಈ ವಿಷಯದಲ್ಲಿ ಹೆಚ್ಚೇನೂ ಭಿನ್ನವಾಗಿಲ್ಲ. ಆದರೆ ಸಂಘಟನೆಯ ತಾತ್ತ್ವಿಕತೆಯನ್ನು ವ್ಯವಸ್ಥಿತವಾಗಿ ಹರಡುವಲ್ಲಿ ನಿರತವಾಗಿರುವ ಆರ್ಎಸ್ಎಸ್ ಪರದೆಯ ಹಿಂದೆ ಸಕ್ರಿಯವಾಗಿರುವುದು ಬಿಜೆಪಿಗೆ ಬೌದ್ಧಿಕ–ಭೌತಿಕ ಬೆನ್ನೆಲುಬಾಗಿದೆ. ಇಂತಹ ವಾತಾವರಣದಲ್ಲಿ ಅಪವಾದವೆಂಬಂತೆ ‘ಎಸ್ಯುಸಿಐ’ ಸಂಘಟನೆಯು ತನ್ನ ವಿದ್ಯಾರ್ಥಿ–ಯುವಜನ ವಿಭಾಗವನ್ನು ಸೈದ್ಧಾಂತಿಕವಾಗಿ ಸಿದ್ಧಗೊಳಿಸುವಲ್ಲಿ ಮುತುವರ್ಜಿವಹಿಸುತ್ತಿರುವುದು ಹಾಗೂ ರವಿ ಕೃಷ್ಣಾರೆಡ್ಡಿ ನೇತೃತ್ವದ ‘ಕೆಆರ್ಎಸ್’ ಪಕ್ಷವು ಸಾಂಪ್ರದಾಯಿಕ ರಾಜಕೀಯ ನಾಯಕತ್ವಕ್ಕೆ ಹೊಸತೆನಿಸುವ ಖದರು ನೀಡುತ್ತಿರುವುದು ವಿಶೇಷ ಗಮನಕ್ಕೆ ಅರ್ಹವೆನಿಸುತ್ತವೆ.</p>.<p>ಕರ್ನಾಟಕದಲ್ಲಿ ನಾಯಕತ್ವದ ವಿಕಾಸಕ್ಕೆ ಆರಂಭಿಕ ಅನುಭವ, ತರಬೇತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದ ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆಗಳು ನಿಷೇಧಕ್ಕೆ ಒಳಗಾಗಿ ದಶಕಗಳೇ ಗತಿಸಿವೆ. ವಿದ್ಯಾರ್ಥಿ ದಿಸೆಯಲ್ಲಿ ಇಂತಹ ಸಂಘಟನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾದ ಯುವಪೀಳಿಗೆಯ ತಲೆಯಲ್ಲಿ ನಾಯಕತ್ವಕ್ಕೆ ಬುನಾದಿಯಾಗುವ ಪ್ರಜಾತಂತ್ರದ ಪ್ರಾಥಮಿಕ ಪಾಠಗಳು ನಾಟುವುದಾದರೂ ಹೇಗೆ?</p>.<p>ಸ್ವತಂತ್ರ ಭಾರತದಲ್ಲಿ ಆರಂಭಿಕ ಹಂತಕ್ಕೆ ಹೋಲಿಸಿದರೆ ಪ್ರಸ್ತುತ ಮತದಾನದ ಪ್ರಮಾಣ ತೀವ್ರವಾಗಿ ಏರಿಕೆಯಾಗಿರುವುದನ್ನು ಕಾಣಬಹುದು. ಹಾಗೆಂದು ಜಾರಿಯಲ್ಲಿರುವ ಪ್ರಜಾಪ್ರಭುತ್ವ ಪ್ರಬುದ್ಧತೆ<br>ಪಡೆದಿದೆಯೆಂದು ಭಾವಿಸಲು ಹಲವಾರು ಕಾರಣಗಳು ಅಡ್ಡ ಬರುತ್ತವೆ. ಅಧಿಕೃತ ಅಂಕಿಸಂಖ್ಯೆಗಳ ಮೇಲಿನ ಅಪನಂಬಿಕೆ ಮತ್ತು ಜಾರಿಯಾಗದ ಪುಸ್ತಕದ ನೀತಿಸಂಹಿತೆಗಳ ಪರಿಗಣನೆಯಲ್ಲಿ ಚುನಾವಣಾ<br>ವೈಫಲ್ಯ ಬರಿಗಣ್ಣಿಗೂ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಯಕತ್ವವನ್ನು ಉತ್ಪಾದಿಸುವ ಸಾಧನ<br>ವಾಗಿಯೂ ಚುನಾವಣೆಗಳು ಬಳಕೆಯಾಗುತ್ತಿವೆ. ಮಾಧ್ಯಮ ಖರೀದಿ, ಆರ್ಥಿಕ ಬಲ, ಜಾತಿಯ ಬೆಂಬಲ, ಕುಟುಂಬದ ವರ್ಚಸ್ಸು ಮತ್ತು ಡಿಜಿಟಲ್ ಪ್ರಭಾವ ಬಳಸಿ ಸಮುದಾಯದೊಳಗೆ ಬೇರುಗಳೇ ಇಲ್ಲದ ನಾಯಕತ್ವ ಉತ್ಪಾದನೆಯಾಗುವುದನ್ನು ಏನೆಂದು ಪರಿಭಾವಿಸಬೇಕು?</p>.<p>ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ನಾಯಕರು ಮತದಾರರ ಪ್ರತಿನಿಧಿಗಳೇ ಆಗಿರುತ್ತಾರೆ ಎನ್ನುವುದು ತಾಂತ್ರಿಕವಾಗಿ ಸರಿ. ನಾಯಕತ್ವದ ಅಯೋಗ್ಯತೆಯು ಮತದಾರರ ಅಯೋಗ್ಯತೆಗೆ ತಕ್ಕಂತೆ ಇರುತ್ತದೆ ಎಂದೂ ವಾದಿಸ ಬಹುದು. ಆದರೆ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಫಲಿತಾಂಶ ಘೋಷಣೆ ತನಕ ನಡೆಯುವ ಅಕ್ರಮಗಳನ್ನು ಗಮನಿಸಿದರೆ ಪ್ರಜಾತಂತ್ರದ ಅಸಲಿಯತ್ತು ಅರಿವಿಗೆ ಬರುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಮತದಾರರನ್ನು ದೂರುವುದರಲ್ಲಿ ಆರ್ಥವಿದೆ ಎಂದು ಅನ್ನಿಸುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>