<blockquote><strong>ವಿಶ್ವಮಾನವ ಸಂದೇಶ ಈಗ ಹೆಚ್ಚು ಅನ್ವಯ ಆಗಬೇಕಾಗಿರುವುದು ವಿಜ್ಞಾನಿಗಳಿಗೆ. ಅವರು, ವಿಶ್ವದ ಹಿತಚಿಂತನೆಯ ವಕ್ತಾರಿಕೆ ವಹಿಸಬೇಕಾದ ಅಗತ್ಯವನ್ನು ಪ್ರಸಕ್ತ ಘೋರ ಯುದ್ಧಗಳು ಸೃಷ್ಟಿಸಿವೆ. ವಿಜ್ಞಾನವನ್ನು ಜೀವಪರವನ್ನಾಗಿ ಉಳಿಸಿಕೊಳ್ಳುವ ನೈತಿಕ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ವಿಜ್ಞಾನಿಗಳೇ ಮೊದಲಿಗರಾಗಬೇಕು.</strong></blockquote>.<p>‘ವಿಜ್ಞಾನವು ಮನುಕುಲಕ್ಕೆ ಸಿಕ್ಕ ಸುಂದರ ಉಡುಗೊರೆ. ಅದನ್ನು ನಾವು ವಿಕೃತಗೊಳಿಸ ಬಾರದು’ ಎಂದಿದ್ದರು ಎ.ಪಿ.ಜೆ. ಅಬ್ದುಲ್ ಕಲಾಂ. ಆದರೆ, ವಿಜ್ಞಾನವನ್ನು ವಿಕೃತಗೊಳಿಸುವ ಪ್ರಯತ್ನ ಇರಾನ್ ಜೊತೆಗಿನ ಅಮೆರಿಕ–ಇಸ್ರೇಲ್ ಯುದ್ಧದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.</p>.<p>ಇದುವರೆಗೆ ಮನುಷ್ಯ ಮಾಡಿದ ಉತ್ತಮ ಕೆಲಸ ಗಳನ್ನು ಮಸುಕಾಗಿಸುವಂತೆ ಯುದ್ಧ ನಡೆಯುತ್ತಿದೆ. ವಿಜ್ಞಾನ–ತಂತ್ರಜ್ಞಾನದ ಫಲಗಳಾದ ಅತ್ಯಾಧುನಿಕ ವಿಮಾನ, ಕ್ಷಿಪಣಿ, ಡ್ರೋನ್ಗಳು ಕ್ಷಣಮಾತ್ರದಲ್ಲಿ ಶತ್ರು ನೆಲೆಗಳನ್ನು ಧ್ವಂಸಗೊಳಿಸುತ್ತಿವೆ. ಶಾಹೆದ್ 136, ಲುಕಾಸ್, ಎಂಕ್ಯು 9 ರೀಪರ್, ಫೈಬರ್ ಆಪ್ಟಿಕ್ ಡ್ರೋನ್ಗಳು ಮತ್ತು ಕಮಿಕಜ್, ಟೊಮಹಾಕ್, ಕೊರ್ರಮ್ಶರ್ ಕ್ಷಿಪಣಿಗಳು ಸದ್ದು ಮಾಡುತ್ತಿವೆ. ಅಪಾರ ಪ್ರಮಾಣದ ಆಸ್ತಿ–ಜೀವ ನಾಶವಾಗುತ್ತಿದೆ. ಇರಾನ್ನ ಶಾಲೆಯ ಮೇಲೆ ಬಾಂಬ್ ಕೆಡವಿ 168 ಕಂದಮ್ಮಗಳನ್ನು ಕೊಂದು ರಕ್ಕಸತನ ಮೆರೆದಿರುವ ಯುದ್ಧಪಡೆಗಳು ವಿಜ್ಞಾನ, ತಂತ್ರಜ್ಞಾನದ ನೆರವಿ ನಿಂದ ಯುದ್ಧವನ್ನು ಹಿಂದೆಂದಿಗಿಂತ ಘೋರಮಯ ಮಾಡಿವೆ. ಇರಾನ್ ಅನ್ನು ಮಣಿಸಲು ಅಮೆರಿಕ ಕಳೆದೆರಡು ದಶಕಗಳಲ್ಲಿ 8 ಟ್ರಿಲಿಯನ್ ಡಾಲರ್ (ಭಾರತದ ಆರ್ಥಿಕತೆಯ ಎರಡು ಪಟ್ಟು) ಹಣ ವ್ಯಯಿಸಿದೆ ಎನ್ನಲಾಗಿದೆ.</p>.<p>ನಾಗರಿಕತೆಯ ವಿಕಾಸದಲ್ಲಿ ವಿಜ್ಞಾನವು ನಮಗೆ ಪ್ರಬಲವಾದ ಶಕ್ತಿ ನೀಡಿದೆ. ಮನುಷ್ಯನ ಬದುಕನ್ನು ಸುಗಮಗೊಳಿಸಿದೆ, ಜ್ಞಾನದ ದಿಗಂತವನ್ನು ವಿಸ್ತರಿ ಸಿದೆ. ಆದರೂ, ಯುದ್ಧ ಸಂದರ್ಭಗಳಲ್ಲಿ ವಿನಾಶದ ಹರಿಕಾರನಾಗಿ ವಿಜ್ಞಾನ ಮಾರ್ಪಡುತ್ತದೆ ಎಂಬುದು ಇತಿಹಾಸದ ಕಟು ವಾಸ್ತವ. ಯುದ್ಧ ಮತ್ತು ವಿಜ್ಞಾನದ ನಡುವಿನ ಈ ಅಸಂಗತ ಸಂಬಂಧವು ಆಯುಧಗಳ ತಯಾರಿಕೆಗೆ ಸೀಮಿತವಾಗಿಲ್ಲ; ಇದು ಜಾಗತಿಕ ಆರ್ಥಿಕತೆ ಮತ್ತು ಪರಿಸರದ ಮೇಲೆ ಸರಿಪಡಿಸಲಾಗದಂತಹ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ವಿಜ್ಞಾನವು ಯುದ್ಧಕ್ಕೆ ನೀಡಿದ ವೇಗ ಮತ್ತು ನಿಖರತೆಯು ಇಂದು ಇಡೀ ಭೂಮಿಯ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ. ಎರಡನೇ ಮಹಾಯುದ್ಧ ಕಾಲದ ಅಣುಬಾಂಬ್ನಿಂದ ಹಿಡಿದು ಇಂದಿನ ಅತ್ಯಾಧುನಿಕ ಡ್ರೋನ್, ಕ್ಷಿಪಣಿ ತಂತ್ರಜ್ಞಾನಗಳು ವಿಜ್ಞಾನದ ಪ್ರತಿ ಹೆಜ್ಜೆಯನ್ನೂ ಯುದ್ಧಭೂಮಿಯಲ್ಲಿ ರಕ್ತಸಿಕ್ತವಾಗಿಸಿವೆ.</p>.<p>ರಾಡಾರ್, ಜಿಪಿಎಸ್ ಮತ್ತು ಇಂಟರ್ನೆಟ್ನಂತಹ ಆಧುನಿಕ ಸೌಲಭ್ಯಗಳು ಮೂಲತಃ ಮಿಲಿಟರಿ ಅಗತ್ಯ ಗಳಿಗಾಗಿ ಸಂಶೋಧನೆ ಆದವುಗಳು. ಇವುಗಳ ಬಳಕೆಗೆ ವಿಜ್ಞಾನವು ಶಕ್ತಿಯನ್ನು ನೀಡುತ್ತದೆಯೇ ಹೊರತು, ಆ ಶಕ್ತಿಯನ್ನು ಬಳಸುವ ನೈತಿಕ ವಿವೇಕವನ್ನಲ್ಲ.</p>.<p>ಮಾನವಕುಲದ ಇತಿಹಾಸದಲ್ಲಿ ವಿಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣ ಹಾಗೂ ವಿರೋಧಾಭಾಸಗಳಿಂದ ಕೂಡಿದೆ. ವಿಜ್ಞಾನವು ಮೂಲಭೂತವಾಗಿ ಸತ್ಯದ ಅನ್ವೇಷಣೆ ಮತ್ತು ಮಾನವನ ಬದುಕನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದ್ದರೂ, ಅನೇಕ ವೈಜ್ಞಾನಿಕ ಮೈಲಿಗಲ್ಲುಗಳು ಯುದ್ಧದ ಭೀಕರತೆಯಿಂದಲೇ ಜನ್ಮತಾಳಿವೆ.</p>.<p>ಯುದ್ಧದ ಆರ್ಥಿಕ ಅಡ್ಡಪರಿಣಾಮಗಳು ದೇಶ ವೊಂದರ ದಶಕಗಳ ಪ್ರಗತಿಯನ್ನು ಕ್ಷಣಮಾತ್ರದಲ್ಲಿ ಶೂನ್ಯಕ್ಕೆ ತಳ್ಳುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಬೃಹತ್ ಮೂಲಸೌಕರ್ಯಗಳು, ಕಾರ್ಖಾನೆಗಳು ಮತ್ತು ಸಂಪರ್ಕ ಸೇವೆಗಳು ಯುದ್ಧದ ಕಿಚ್ಚಿಗೆ ಮೊದಲು ಬಲಿಯಾಗುತ್ತವೆ. ಯುದ್ಧದ ಸಮಯದಲ್ಲಿ ಒಂದು ರಾಷ್ಟ್ರದ ಬಹುಪಾಲು ಆರ್ಥಿಕ ಬಂಡವಾಳ (ಬಜೆಟ್) ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಳಕೆಯಾಗುವ ಬದಲು, ವಿನಾಶಕಾರಿ ಆಯುಧಗಳ ಖರೀದಿಗೆ ಮತ್ತು ಸೈನ್ಯದ ನಿರ್ವಹಣೆಗೆ ವ್ಯಯವಾಗುತ್ತದೆ. ಇದು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆ ಯಲ್ಲಿ ತೈಲ ಬೆಲೆ ಏರಿಕೆ, ಪೂರೈಕೆ ಸರಪಳಿಯ ಕಡಿತ ಮತ್ತು ಹಣದುಬ್ಬರವು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತದೆ. ವಿಜ್ಞಾನವು ಹೊಸ ಆವಿಷ್ಕಾರಗಳ ಮೂಲಕ ಆರ್ಥಿಕತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿ ಹೊಂದಿದ್ದರೂ, ಯುದ್ಧದ ನೆರಳಿನಲ್ಲಿ ಅದು ಆಯುಧ ವ್ಯಾಪಾರದ ಲಾಭಕೋರತನಕ್ಕೆ ಸೀಮಿತವಾಗುತ್ತದೆ. ಯುದ್ಧ ಮುಗಿದ ನಂತರದ ಪುನರ್ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚವು ಆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ, ಆರ್ಥಿಕ ಗುಲಾಮಗಿರಿಗೆ ತಳ್ಳುತ್ತದೆ.</p>.<p>ಪರಿಸರದ ಮೇಲೆ ಯುದ್ಧವು ಬೀರುವ ಕೆಟ್ಟ ಪರಿಣಾಮಗಳು ಮನುಷ್ಯನ ಕಲ್ಪನೆಗೂ ನಿಲುಕ ದಂತವು. ಆಧುನಿಕ ಯುದ್ಧಗಳು ಬರೀ ಭೂಮಿಯ ಮೇಲಿನ ದಾಳಿಯಲ್ಲ, ಅವು ಪ್ರಕೃತಿಯ ವಿರುದ್ಧದ ದಾಳಿಗಳಾಗಿವೆ. ಸ್ಫೋಟಕಗಳ ಬಳಕೆ, ರಾಸಾಯನಿಕ ಅಸ್ತ್ರಗಳು ಮತ್ತು ಅಣ್ವಸ್ತ್ರ ಪರೀಕ್ಷೆಗಳು ಮಣ್ಣು, ನೀರು ಮತ್ತು ಗಾಳಿಯನ್ನು ದೀರ್ಘಕಾಲದವರೆಗೆ ವಿಷಪೂರಿತಗೊಳಿಸುತ್ತವೆ. ಯುದ್ಧ ವಿಮಾನಗಳು ಮತ್ತು ಟ್ಯಾಂಕರ್ಗಳು ಹೊರಹಾಕುವ ಬೃಹತ್ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಜಾಗತಿಕ ತಾಪಮಾನ ಏರಿಕೆಗೆ ನೇರ ಕಾರಣವಾಗುತ್ತದೆ. ಅರಣ್ಯಗಳ ನಾಶ, ವನ್ಯಜೀವಿಗಳ ಸಾವು ಮತ್ತು ಜೀವವೈವಿಧ್ಯದ ಹಾನಿಯು ಪರಿಸರ ಸಮತೋಲನ ವನ್ನು ಏರುಪೇರು ಮಾಡುತ್ತದೆ. ಕಾಡು ಮತ್ತು ಬೆಳೆನಾಶ ಮಾಡಲು ವಿಯೆಟ್ನಾಂ ಯುದ್ಧದಲ್ಲಿ ಬಳಸ ಲಾದ ‘ಏಜೆಂಟ್ ಆರೆಂಜ್’ ರೀತಿಯ ರಾಸಾಯನಿಕ ವಿಷ ನಲವತ್ತು ಲಕ್ಷ ಜನರ ಆರೋಗ್ಯ ಕೆಡಿಸಿತ್ತು. ಹತ್ತು ಲಕ್ಷ ಜನ ಶಾಶ್ವತ ಅನಾರೋಗ್ಯಕ್ಕೀಡಾದರು. ವಿಷದ ಪ್ರಭಾವ ಇಂದಿಗೂ ಅಲ್ಲಿನ ಮಣ್ಣಿನಲ್ಲಿ ಜೀವಂತವಾಗಿದೆ ಎಂದರೆ, ಯುದ್ಧದಿಂದ ಆದ ಪರಿಸರ ಹಾನಿಯ ತೀವ್ರತೆಯನ್ನು ಅರಿಯಬಹುದು.</p>.<p>ವಿಜ್ಞಾನವು ಪರಿಸರ ಸಂರಕ್ಷಣೆಗೆ ದಾರಿ ತೋರಿಸ ಬೇಕಾದ ಈ ಕಾಲದಲ್ಲಿ, ಯುದ್ಧದ ಮೂಲಕ ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದು ವಿಜ್ಞಾನದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಪ್ರಯೋಗಾಲಯದ ಉತ್ಸವಮೂರ್ತಿಗಳಾಗದೆ, ನೈತಿಕ ದಿಕ್ಸೂಚಿಗಳಾಗಿ ಕಾರ್ಯ ನಿರ್ವಹಿಸಬೇಕು. ಐನ್ಸ್ಟೈನ್, ಜೆ. ರಾಬರ್ಟ್<br>ಓಪನ್ ಹೈಮರ್ ಮತ್ತು ಸ್ಟೀಫನ್ ಹಾಕಿಂಗ್ ಅವರಂತಹ ಮಹಾನ್ ವಿಜ್ಞಾನಿಗಳು ಯುದ್ಧದ ಅಪಾಯಗಳ ಬಗ್ಗೆ ಜಗತ್ತನ್ನು ಪದೇ ಪದೇ ಎಚ್ಚರಿಸಿದ್ದರು. ಗಾಂಧೀಜಿ ದೃಷ್ಟಿಯಲ್ಲಿ ಎಲ್ಲ ಯುದ್ಧಗಳು ಮಾನವೀಯತೆಯ ವಿರುದ್ಧದ ಕೆಲಸಗಳೇ. ವಿಜ್ಞಾನವು ಆತ್ಮಸಾಕ್ಷಿಯ ಅಡಿಯಲ್ಲಿ ಕೆಲಸ ಮಾಡಬೇಕು ಮತ್ತು ಅದು ಅಹಿಂಸೆಯ ಹಾದಿಯಲ್ಲಿ ಸಾಗಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. </p>.<p>ವಿಜ್ಞಾನಕ್ಕೆ ಭೌಗೋಳಿಕ ಗಡಿಗಳಿಲ್ಲ. ವಿಜ್ಞಾನಿಯೊಬ್ಬನ ನಿಷ್ಠೆ ತನ್ನ ದೇಶದ ಸರ್ಕಾರಕ್ಕೆ ಮಾತ್ರವಾಗಿರದೆ, ಇಡೀ ‘ಮಾನವೀಯತೆ’ಗೆ ಇರಬೇಕು. ವಿಜ್ಞಾನವು ಮನುಷ್ಯನ ಬುದ್ಧಿಶಕ್ತಿಯ ಸಂಕೇತ ವಾದರೆ, ನೈತಿಕ ಸಂಹಿತೆಯು ಅವನ ವಿವೇಕದ ಸಂಕೇತವಾಗಿದೆ. ಯುದ್ಧಗಳಾದಾಗ ವಿಜ್ಞಾನಿಗಳು ಬರೀ ಸಂಶೋಧಕರಾಗಿ ಉಳಿಯದೆ, ಸಮಾಜದ ಜಾಗೃತ ಮನಸ್ಸುಗಳಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಸಂಶೋಧನೆಯು ಮನುಕುಲದ ಉಳಿವಿಗಾಗಿ ಇರಬೇಕೇ ಹೊರತು ಅಳಿವಿನ ಪಾಲಾಗಬಾರದು ಎಂಬ ನೈತಿಕ ಹೊಣೆಗಾರಿಕೆ ಅವರ ಮೇಲಿದೆ. ಸಂಶೋಧನೆಯು ದುರುಪಯೋಗ ಆಗದಂತೆ ನೋಡಿಕೊಳ್ಳುವ ‘ನೈತಿಕ ಸಂಹಿತೆ’ಗೆ ಅವರು ಬದ್ಧರಾಗಿರಬೇಕು. ಶಾಂತಿನಿಷ್ಠೆ ಮತ್ತು ಮಾನವ ಹಕ್ಕುಗಳ ಗೌರವವು ವಿಜ್ಞಾನಿಯೊಬ್ಬನ ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಬೇಕು. ಈ ಹಿನ್ನೆಲೆಯಲ್ಲೇ 1957ರಲ್ಲಿ ‘ಪಗ್ವಾಶ್ ಕಾನ್ಫರೆನ್ಸ್’ ರೀತಿಯ ಅಂತರರಾಷ್ಟ್ರೀಯ ವೇದಿಕೆಗಳು ಉಗಮಿಸಿದವು. ಐನ್ಸ್ಟೈನ್ ಮತ್ತು ಬರ್ಟ್ರಂಡ್ ರಸೆಲ್ ಅವರ ಪ್ರಣಾಳಿಕೆಯಿಂದ ಪ್ರೇರಿತವಾದ ಈ ಸಂಸ್ಥೆಯು ವಿಜ್ಞಾನಿಗಳು ರಾಜಕೀಯವನ್ನು ಬದಿಗಿಟ್ಟು ಶಾಂತಿ ಗಾಗಿ ಒಂದಾಗಬೇಕು ಎಂದು ಪ್ರತಿಪಾದಿಸಿತು.ತನ್ನ ಶಾಂತಿ ಹೋರಾಟಕ್ಕಾಗಿ 1995ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಈ ಸಂಸ್ಥೆ ವಿಜ್ಞಾನ ಮತ್ತು ಶಾಂತಿಯ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು.</p>.<p>ವಿಜ್ಞಾನಿಗಳು ರಾಜಕೀಯ ನಾಯಕರಿಗೆ ಮತ್ತೊಮ್ಮೆ ಬುದ್ಧಿ ಹೇಳಬೇಕಿದೆ. ಯುದ್ಧದ ಆರ್ಥಿಕ ಮತ್ತು ಪರಿಸರನಾಶದ ಅಂಕಿಅಂಶಗಳನ್ನು ನೀಡಿ, ಶಾಂತಿಯ ಮಹತ್ವವನ್ನು ಮನವರಿಕೆ ಮಾಡಿಕೊಡ ಬೇಕು. ಯುದ್ಧ ಸಾಮಗ್ರಿಗಳ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿ, ಹವಾಮಾನ ವೈಪರೀತ್ಯ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ವಿಜ್ಞಾನವನ್ನು ಬಳಸುವಂತೆ ಒತ್ತಾಯಿಸಬೇಕು. ಅವರ ಮಾತು ಮೀರಿ ಯುದ್ಧ ನಡೆದರೆ ಅದು ವಿಜ್ಞಾನದ ಸೋಲಲ್ಲ, ಬದಲಾಗಿ ಅದು ರಾಜತಾಂತ್ರಿಕತೆಯ ಮತ್ತು ಮಾನವೀಯತೆಯ ಸೋಲಾಗಿದೆ. ವಿಜ್ಞಾನವು ತೀಕ್ಷ್ಣ ಕತ್ತಿಯಿದ್ದಂತೆ; ಅದನ್ನು ಜೀವ ಉಳಿಸಲು ಅಥವಾ ತೆಗೆಯಲು ಬಳಸಬೇಕೇ ಎಂಬುದು ಮನುಷ್ಯನ ನೈತಿಕ ಆಯ್ಕೆಗೆ ಬಿಟ್ಟದ್ದು. ವಿಜ್ಞಾನಿಗಳು ವಿಶ್ವಪ್ರಜೆಗಳಾಗಿ ಜಾಗತಿಕ ಹಿತಾಸಕ್ತಿಯನ್ನು ಎತ್ತಿ ಹಿಡಿದಾಗ ಮಾತ್ರ ಈ ಭೂಮಿಯು ಮುಂದಿನ ಪೀಳಿಗೆ ಸುರಕ್ಷಿತವಾಗಿ ಉಳಿಯಲು ಸಾಧ್ಯ. ವಿಜ್ಞಾನದ ಯಶಸ್ಸು ಯುದ್ಧದ ಗೆಲುವಿನಲ್ಲಿಲ್ಲ, ಬದಲಾಗಿ ಜಾಗತಿಕ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿದೆ.</p>.<p>ಜನರ ತೆರಿಗೆ ಹಣದಿಂದ ಸವಲತ್ತು ಪಡೆಯುವ ವಿಜ್ಞಾನಿಗಳು ಯುದ್ಧದ ವಿರುದ್ಧ ಗಟ್ಟಿದನಿ ಎತ್ತಬೇಕು. ಬೀದಿಗಿಳಿದು ಪ್ರತಿಭಟಿಸಬೇಕು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ತರ್ಕ ಬದ್ಧ ಚಿಂತನೆಯನ್ನು ಉತ್ತೇಜಿಸಬೇಕು. ವಿಜ್ಞಾನವು ಮನುಕುಲದ ಕಣ್ಣೀರನ್ನು ಒರೆಸುವ ಮತ್ತು ಹಸುರು ಭೂಮಿಯನ್ನು ಉಳಿಸುವ ಸಂಜೀವಿನಿಯಾಗಬೇಕು. ವಿಜ್ಞಾನದ ಗುರಿ ವಿನಾಶವಲ್ಲ, ಬದಲಾಗಿ ವಿಶ್ವ ಕಲ್ಯಾಣ ಎಂಬ ಸತ್ಯವನ್ನು ಈಗ ವಿಜ್ಞಾನಿಗಳೇ ಎತ್ತಿಹಿಡಿಯಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><strong>ವಿಶ್ವಮಾನವ ಸಂದೇಶ ಈಗ ಹೆಚ್ಚು ಅನ್ವಯ ಆಗಬೇಕಾಗಿರುವುದು ವಿಜ್ಞಾನಿಗಳಿಗೆ. ಅವರು, ವಿಶ್ವದ ಹಿತಚಿಂತನೆಯ ವಕ್ತಾರಿಕೆ ವಹಿಸಬೇಕಾದ ಅಗತ್ಯವನ್ನು ಪ್ರಸಕ್ತ ಘೋರ ಯುದ್ಧಗಳು ಸೃಷ್ಟಿಸಿವೆ. ವಿಜ್ಞಾನವನ್ನು ಜೀವಪರವನ್ನಾಗಿ ಉಳಿಸಿಕೊಳ್ಳುವ ನೈತಿಕ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ವಿಜ್ಞಾನಿಗಳೇ ಮೊದಲಿಗರಾಗಬೇಕು.</strong></blockquote>.<p>‘ವಿಜ್ಞಾನವು ಮನುಕುಲಕ್ಕೆ ಸಿಕ್ಕ ಸುಂದರ ಉಡುಗೊರೆ. ಅದನ್ನು ನಾವು ವಿಕೃತಗೊಳಿಸ ಬಾರದು’ ಎಂದಿದ್ದರು ಎ.ಪಿ.ಜೆ. ಅಬ್ದುಲ್ ಕಲಾಂ. ಆದರೆ, ವಿಜ್ಞಾನವನ್ನು ವಿಕೃತಗೊಳಿಸುವ ಪ್ರಯತ್ನ ಇರಾನ್ ಜೊತೆಗಿನ ಅಮೆರಿಕ–ಇಸ್ರೇಲ್ ಯುದ್ಧದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.</p>.<p>ಇದುವರೆಗೆ ಮನುಷ್ಯ ಮಾಡಿದ ಉತ್ತಮ ಕೆಲಸ ಗಳನ್ನು ಮಸುಕಾಗಿಸುವಂತೆ ಯುದ್ಧ ನಡೆಯುತ್ತಿದೆ. ವಿಜ್ಞಾನ–ತಂತ್ರಜ್ಞಾನದ ಫಲಗಳಾದ ಅತ್ಯಾಧುನಿಕ ವಿಮಾನ, ಕ್ಷಿಪಣಿ, ಡ್ರೋನ್ಗಳು ಕ್ಷಣಮಾತ್ರದಲ್ಲಿ ಶತ್ರು ನೆಲೆಗಳನ್ನು ಧ್ವಂಸಗೊಳಿಸುತ್ತಿವೆ. ಶಾಹೆದ್ 136, ಲುಕಾಸ್, ಎಂಕ್ಯು 9 ರೀಪರ್, ಫೈಬರ್ ಆಪ್ಟಿಕ್ ಡ್ರೋನ್ಗಳು ಮತ್ತು ಕಮಿಕಜ್, ಟೊಮಹಾಕ್, ಕೊರ್ರಮ್ಶರ್ ಕ್ಷಿಪಣಿಗಳು ಸದ್ದು ಮಾಡುತ್ತಿವೆ. ಅಪಾರ ಪ್ರಮಾಣದ ಆಸ್ತಿ–ಜೀವ ನಾಶವಾಗುತ್ತಿದೆ. ಇರಾನ್ನ ಶಾಲೆಯ ಮೇಲೆ ಬಾಂಬ್ ಕೆಡವಿ 168 ಕಂದಮ್ಮಗಳನ್ನು ಕೊಂದು ರಕ್ಕಸತನ ಮೆರೆದಿರುವ ಯುದ್ಧಪಡೆಗಳು ವಿಜ್ಞಾನ, ತಂತ್ರಜ್ಞಾನದ ನೆರವಿ ನಿಂದ ಯುದ್ಧವನ್ನು ಹಿಂದೆಂದಿಗಿಂತ ಘೋರಮಯ ಮಾಡಿವೆ. ಇರಾನ್ ಅನ್ನು ಮಣಿಸಲು ಅಮೆರಿಕ ಕಳೆದೆರಡು ದಶಕಗಳಲ್ಲಿ 8 ಟ್ರಿಲಿಯನ್ ಡಾಲರ್ (ಭಾರತದ ಆರ್ಥಿಕತೆಯ ಎರಡು ಪಟ್ಟು) ಹಣ ವ್ಯಯಿಸಿದೆ ಎನ್ನಲಾಗಿದೆ.</p>.<p>ನಾಗರಿಕತೆಯ ವಿಕಾಸದಲ್ಲಿ ವಿಜ್ಞಾನವು ನಮಗೆ ಪ್ರಬಲವಾದ ಶಕ್ತಿ ನೀಡಿದೆ. ಮನುಷ್ಯನ ಬದುಕನ್ನು ಸುಗಮಗೊಳಿಸಿದೆ, ಜ್ಞಾನದ ದಿಗಂತವನ್ನು ವಿಸ್ತರಿ ಸಿದೆ. ಆದರೂ, ಯುದ್ಧ ಸಂದರ್ಭಗಳಲ್ಲಿ ವಿನಾಶದ ಹರಿಕಾರನಾಗಿ ವಿಜ್ಞಾನ ಮಾರ್ಪಡುತ್ತದೆ ಎಂಬುದು ಇತಿಹಾಸದ ಕಟು ವಾಸ್ತವ. ಯುದ್ಧ ಮತ್ತು ವಿಜ್ಞಾನದ ನಡುವಿನ ಈ ಅಸಂಗತ ಸಂಬಂಧವು ಆಯುಧಗಳ ತಯಾರಿಕೆಗೆ ಸೀಮಿತವಾಗಿಲ್ಲ; ಇದು ಜಾಗತಿಕ ಆರ್ಥಿಕತೆ ಮತ್ತು ಪರಿಸರದ ಮೇಲೆ ಸರಿಪಡಿಸಲಾಗದಂತಹ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ವಿಜ್ಞಾನವು ಯುದ್ಧಕ್ಕೆ ನೀಡಿದ ವೇಗ ಮತ್ತು ನಿಖರತೆಯು ಇಂದು ಇಡೀ ಭೂಮಿಯ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ. ಎರಡನೇ ಮಹಾಯುದ್ಧ ಕಾಲದ ಅಣುಬಾಂಬ್ನಿಂದ ಹಿಡಿದು ಇಂದಿನ ಅತ್ಯಾಧುನಿಕ ಡ್ರೋನ್, ಕ್ಷಿಪಣಿ ತಂತ್ರಜ್ಞಾನಗಳು ವಿಜ್ಞಾನದ ಪ್ರತಿ ಹೆಜ್ಜೆಯನ್ನೂ ಯುದ್ಧಭೂಮಿಯಲ್ಲಿ ರಕ್ತಸಿಕ್ತವಾಗಿಸಿವೆ.</p>.<p>ರಾಡಾರ್, ಜಿಪಿಎಸ್ ಮತ್ತು ಇಂಟರ್ನೆಟ್ನಂತಹ ಆಧುನಿಕ ಸೌಲಭ್ಯಗಳು ಮೂಲತಃ ಮಿಲಿಟರಿ ಅಗತ್ಯ ಗಳಿಗಾಗಿ ಸಂಶೋಧನೆ ಆದವುಗಳು. ಇವುಗಳ ಬಳಕೆಗೆ ವಿಜ್ಞಾನವು ಶಕ್ತಿಯನ್ನು ನೀಡುತ್ತದೆಯೇ ಹೊರತು, ಆ ಶಕ್ತಿಯನ್ನು ಬಳಸುವ ನೈತಿಕ ವಿವೇಕವನ್ನಲ್ಲ.</p>.<p>ಮಾನವಕುಲದ ಇತಿಹಾಸದಲ್ಲಿ ವಿಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣ ಹಾಗೂ ವಿರೋಧಾಭಾಸಗಳಿಂದ ಕೂಡಿದೆ. ವಿಜ್ಞಾನವು ಮೂಲಭೂತವಾಗಿ ಸತ್ಯದ ಅನ್ವೇಷಣೆ ಮತ್ತು ಮಾನವನ ಬದುಕನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದ್ದರೂ, ಅನೇಕ ವೈಜ್ಞಾನಿಕ ಮೈಲಿಗಲ್ಲುಗಳು ಯುದ್ಧದ ಭೀಕರತೆಯಿಂದಲೇ ಜನ್ಮತಾಳಿವೆ.</p>.<p>ಯುದ್ಧದ ಆರ್ಥಿಕ ಅಡ್ಡಪರಿಣಾಮಗಳು ದೇಶ ವೊಂದರ ದಶಕಗಳ ಪ್ರಗತಿಯನ್ನು ಕ್ಷಣಮಾತ್ರದಲ್ಲಿ ಶೂನ್ಯಕ್ಕೆ ತಳ್ಳುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಬೃಹತ್ ಮೂಲಸೌಕರ್ಯಗಳು, ಕಾರ್ಖಾನೆಗಳು ಮತ್ತು ಸಂಪರ್ಕ ಸೇವೆಗಳು ಯುದ್ಧದ ಕಿಚ್ಚಿಗೆ ಮೊದಲು ಬಲಿಯಾಗುತ್ತವೆ. ಯುದ್ಧದ ಸಮಯದಲ್ಲಿ ಒಂದು ರಾಷ್ಟ್ರದ ಬಹುಪಾಲು ಆರ್ಥಿಕ ಬಂಡವಾಳ (ಬಜೆಟ್) ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಳಕೆಯಾಗುವ ಬದಲು, ವಿನಾಶಕಾರಿ ಆಯುಧಗಳ ಖರೀದಿಗೆ ಮತ್ತು ಸೈನ್ಯದ ನಿರ್ವಹಣೆಗೆ ವ್ಯಯವಾಗುತ್ತದೆ. ಇದು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆ ಯಲ್ಲಿ ತೈಲ ಬೆಲೆ ಏರಿಕೆ, ಪೂರೈಕೆ ಸರಪಳಿಯ ಕಡಿತ ಮತ್ತು ಹಣದುಬ್ಬರವು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತದೆ. ವಿಜ್ಞಾನವು ಹೊಸ ಆವಿಷ್ಕಾರಗಳ ಮೂಲಕ ಆರ್ಥಿಕತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿ ಹೊಂದಿದ್ದರೂ, ಯುದ್ಧದ ನೆರಳಿನಲ್ಲಿ ಅದು ಆಯುಧ ವ್ಯಾಪಾರದ ಲಾಭಕೋರತನಕ್ಕೆ ಸೀಮಿತವಾಗುತ್ತದೆ. ಯುದ್ಧ ಮುಗಿದ ನಂತರದ ಪುನರ್ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚವು ಆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ, ಆರ್ಥಿಕ ಗುಲಾಮಗಿರಿಗೆ ತಳ್ಳುತ್ತದೆ.</p>.<p>ಪರಿಸರದ ಮೇಲೆ ಯುದ್ಧವು ಬೀರುವ ಕೆಟ್ಟ ಪರಿಣಾಮಗಳು ಮನುಷ್ಯನ ಕಲ್ಪನೆಗೂ ನಿಲುಕ ದಂತವು. ಆಧುನಿಕ ಯುದ್ಧಗಳು ಬರೀ ಭೂಮಿಯ ಮೇಲಿನ ದಾಳಿಯಲ್ಲ, ಅವು ಪ್ರಕೃತಿಯ ವಿರುದ್ಧದ ದಾಳಿಗಳಾಗಿವೆ. ಸ್ಫೋಟಕಗಳ ಬಳಕೆ, ರಾಸಾಯನಿಕ ಅಸ್ತ್ರಗಳು ಮತ್ತು ಅಣ್ವಸ್ತ್ರ ಪರೀಕ್ಷೆಗಳು ಮಣ್ಣು, ನೀರು ಮತ್ತು ಗಾಳಿಯನ್ನು ದೀರ್ಘಕಾಲದವರೆಗೆ ವಿಷಪೂರಿತಗೊಳಿಸುತ್ತವೆ. ಯುದ್ಧ ವಿಮಾನಗಳು ಮತ್ತು ಟ್ಯಾಂಕರ್ಗಳು ಹೊರಹಾಕುವ ಬೃಹತ್ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಜಾಗತಿಕ ತಾಪಮಾನ ಏರಿಕೆಗೆ ನೇರ ಕಾರಣವಾಗುತ್ತದೆ. ಅರಣ್ಯಗಳ ನಾಶ, ವನ್ಯಜೀವಿಗಳ ಸಾವು ಮತ್ತು ಜೀವವೈವಿಧ್ಯದ ಹಾನಿಯು ಪರಿಸರ ಸಮತೋಲನ ವನ್ನು ಏರುಪೇರು ಮಾಡುತ್ತದೆ. ಕಾಡು ಮತ್ತು ಬೆಳೆನಾಶ ಮಾಡಲು ವಿಯೆಟ್ನಾಂ ಯುದ್ಧದಲ್ಲಿ ಬಳಸ ಲಾದ ‘ಏಜೆಂಟ್ ಆರೆಂಜ್’ ರೀತಿಯ ರಾಸಾಯನಿಕ ವಿಷ ನಲವತ್ತು ಲಕ್ಷ ಜನರ ಆರೋಗ್ಯ ಕೆಡಿಸಿತ್ತು. ಹತ್ತು ಲಕ್ಷ ಜನ ಶಾಶ್ವತ ಅನಾರೋಗ್ಯಕ್ಕೀಡಾದರು. ವಿಷದ ಪ್ರಭಾವ ಇಂದಿಗೂ ಅಲ್ಲಿನ ಮಣ್ಣಿನಲ್ಲಿ ಜೀವಂತವಾಗಿದೆ ಎಂದರೆ, ಯುದ್ಧದಿಂದ ಆದ ಪರಿಸರ ಹಾನಿಯ ತೀವ್ರತೆಯನ್ನು ಅರಿಯಬಹುದು.</p>.<p>ವಿಜ್ಞಾನವು ಪರಿಸರ ಸಂರಕ್ಷಣೆಗೆ ದಾರಿ ತೋರಿಸ ಬೇಕಾದ ಈ ಕಾಲದಲ್ಲಿ, ಯುದ್ಧದ ಮೂಲಕ ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದು ವಿಜ್ಞಾನದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಪ್ರಯೋಗಾಲಯದ ಉತ್ಸವಮೂರ್ತಿಗಳಾಗದೆ, ನೈತಿಕ ದಿಕ್ಸೂಚಿಗಳಾಗಿ ಕಾರ್ಯ ನಿರ್ವಹಿಸಬೇಕು. ಐನ್ಸ್ಟೈನ್, ಜೆ. ರಾಬರ್ಟ್<br>ಓಪನ್ ಹೈಮರ್ ಮತ್ತು ಸ್ಟೀಫನ್ ಹಾಕಿಂಗ್ ಅವರಂತಹ ಮಹಾನ್ ವಿಜ್ಞಾನಿಗಳು ಯುದ್ಧದ ಅಪಾಯಗಳ ಬಗ್ಗೆ ಜಗತ್ತನ್ನು ಪದೇ ಪದೇ ಎಚ್ಚರಿಸಿದ್ದರು. ಗಾಂಧೀಜಿ ದೃಷ್ಟಿಯಲ್ಲಿ ಎಲ್ಲ ಯುದ್ಧಗಳು ಮಾನವೀಯತೆಯ ವಿರುದ್ಧದ ಕೆಲಸಗಳೇ. ವಿಜ್ಞಾನವು ಆತ್ಮಸಾಕ್ಷಿಯ ಅಡಿಯಲ್ಲಿ ಕೆಲಸ ಮಾಡಬೇಕು ಮತ್ತು ಅದು ಅಹಿಂಸೆಯ ಹಾದಿಯಲ್ಲಿ ಸಾಗಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. </p>.<p>ವಿಜ್ಞಾನಕ್ಕೆ ಭೌಗೋಳಿಕ ಗಡಿಗಳಿಲ್ಲ. ವಿಜ್ಞಾನಿಯೊಬ್ಬನ ನಿಷ್ಠೆ ತನ್ನ ದೇಶದ ಸರ್ಕಾರಕ್ಕೆ ಮಾತ್ರವಾಗಿರದೆ, ಇಡೀ ‘ಮಾನವೀಯತೆ’ಗೆ ಇರಬೇಕು. ವಿಜ್ಞಾನವು ಮನುಷ್ಯನ ಬುದ್ಧಿಶಕ್ತಿಯ ಸಂಕೇತ ವಾದರೆ, ನೈತಿಕ ಸಂಹಿತೆಯು ಅವನ ವಿವೇಕದ ಸಂಕೇತವಾಗಿದೆ. ಯುದ್ಧಗಳಾದಾಗ ವಿಜ್ಞಾನಿಗಳು ಬರೀ ಸಂಶೋಧಕರಾಗಿ ಉಳಿಯದೆ, ಸಮಾಜದ ಜಾಗೃತ ಮನಸ್ಸುಗಳಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಸಂಶೋಧನೆಯು ಮನುಕುಲದ ಉಳಿವಿಗಾಗಿ ಇರಬೇಕೇ ಹೊರತು ಅಳಿವಿನ ಪಾಲಾಗಬಾರದು ಎಂಬ ನೈತಿಕ ಹೊಣೆಗಾರಿಕೆ ಅವರ ಮೇಲಿದೆ. ಸಂಶೋಧನೆಯು ದುರುಪಯೋಗ ಆಗದಂತೆ ನೋಡಿಕೊಳ್ಳುವ ‘ನೈತಿಕ ಸಂಹಿತೆ’ಗೆ ಅವರು ಬದ್ಧರಾಗಿರಬೇಕು. ಶಾಂತಿನಿಷ್ಠೆ ಮತ್ತು ಮಾನವ ಹಕ್ಕುಗಳ ಗೌರವವು ವಿಜ್ಞಾನಿಯೊಬ್ಬನ ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಬೇಕು. ಈ ಹಿನ್ನೆಲೆಯಲ್ಲೇ 1957ರಲ್ಲಿ ‘ಪಗ್ವಾಶ್ ಕಾನ್ಫರೆನ್ಸ್’ ರೀತಿಯ ಅಂತರರಾಷ್ಟ್ರೀಯ ವೇದಿಕೆಗಳು ಉಗಮಿಸಿದವು. ಐನ್ಸ್ಟೈನ್ ಮತ್ತು ಬರ್ಟ್ರಂಡ್ ರಸೆಲ್ ಅವರ ಪ್ರಣಾಳಿಕೆಯಿಂದ ಪ್ರೇರಿತವಾದ ಈ ಸಂಸ್ಥೆಯು ವಿಜ್ಞಾನಿಗಳು ರಾಜಕೀಯವನ್ನು ಬದಿಗಿಟ್ಟು ಶಾಂತಿ ಗಾಗಿ ಒಂದಾಗಬೇಕು ಎಂದು ಪ್ರತಿಪಾದಿಸಿತು.ತನ್ನ ಶಾಂತಿ ಹೋರಾಟಕ್ಕಾಗಿ 1995ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಈ ಸಂಸ್ಥೆ ವಿಜ್ಞಾನ ಮತ್ತು ಶಾಂತಿಯ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು.</p>.<p>ವಿಜ್ಞಾನಿಗಳು ರಾಜಕೀಯ ನಾಯಕರಿಗೆ ಮತ್ತೊಮ್ಮೆ ಬುದ್ಧಿ ಹೇಳಬೇಕಿದೆ. ಯುದ್ಧದ ಆರ್ಥಿಕ ಮತ್ತು ಪರಿಸರನಾಶದ ಅಂಕಿಅಂಶಗಳನ್ನು ನೀಡಿ, ಶಾಂತಿಯ ಮಹತ್ವವನ್ನು ಮನವರಿಕೆ ಮಾಡಿಕೊಡ ಬೇಕು. ಯುದ್ಧ ಸಾಮಗ್ರಿಗಳ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿ, ಹವಾಮಾನ ವೈಪರೀತ್ಯ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ವಿಜ್ಞಾನವನ್ನು ಬಳಸುವಂತೆ ಒತ್ತಾಯಿಸಬೇಕು. ಅವರ ಮಾತು ಮೀರಿ ಯುದ್ಧ ನಡೆದರೆ ಅದು ವಿಜ್ಞಾನದ ಸೋಲಲ್ಲ, ಬದಲಾಗಿ ಅದು ರಾಜತಾಂತ್ರಿಕತೆಯ ಮತ್ತು ಮಾನವೀಯತೆಯ ಸೋಲಾಗಿದೆ. ವಿಜ್ಞಾನವು ತೀಕ್ಷ್ಣ ಕತ್ತಿಯಿದ್ದಂತೆ; ಅದನ್ನು ಜೀವ ಉಳಿಸಲು ಅಥವಾ ತೆಗೆಯಲು ಬಳಸಬೇಕೇ ಎಂಬುದು ಮನುಷ್ಯನ ನೈತಿಕ ಆಯ್ಕೆಗೆ ಬಿಟ್ಟದ್ದು. ವಿಜ್ಞಾನಿಗಳು ವಿಶ್ವಪ್ರಜೆಗಳಾಗಿ ಜಾಗತಿಕ ಹಿತಾಸಕ್ತಿಯನ್ನು ಎತ್ತಿ ಹಿಡಿದಾಗ ಮಾತ್ರ ಈ ಭೂಮಿಯು ಮುಂದಿನ ಪೀಳಿಗೆ ಸುರಕ್ಷಿತವಾಗಿ ಉಳಿಯಲು ಸಾಧ್ಯ. ವಿಜ್ಞಾನದ ಯಶಸ್ಸು ಯುದ್ಧದ ಗೆಲುವಿನಲ್ಲಿಲ್ಲ, ಬದಲಾಗಿ ಜಾಗತಿಕ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿದೆ.</p>.<p>ಜನರ ತೆರಿಗೆ ಹಣದಿಂದ ಸವಲತ್ತು ಪಡೆಯುವ ವಿಜ್ಞಾನಿಗಳು ಯುದ್ಧದ ವಿರುದ್ಧ ಗಟ್ಟಿದನಿ ಎತ್ತಬೇಕು. ಬೀದಿಗಿಳಿದು ಪ್ರತಿಭಟಿಸಬೇಕು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ತರ್ಕ ಬದ್ಧ ಚಿಂತನೆಯನ್ನು ಉತ್ತೇಜಿಸಬೇಕು. ವಿಜ್ಞಾನವು ಮನುಕುಲದ ಕಣ್ಣೀರನ್ನು ಒರೆಸುವ ಮತ್ತು ಹಸುರು ಭೂಮಿಯನ್ನು ಉಳಿಸುವ ಸಂಜೀವಿನಿಯಾಗಬೇಕು. ವಿಜ್ಞಾನದ ಗುರಿ ವಿನಾಶವಲ್ಲ, ಬದಲಾಗಿ ವಿಶ್ವ ಕಲ್ಯಾಣ ಎಂಬ ಸತ್ಯವನ್ನು ಈಗ ವಿಜ್ಞಾನಿಗಳೇ ಎತ್ತಿಹಿಡಿಯಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>