<p>ಮಾರ್ಚ್ 22ರಂದು ನಾವು 'ವಿಶ್ವ ಜಲ ದಿನ'ವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಸಮಸ್ತ ನಾಗರಿಕರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀರು ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಭವಿಷ್ಯದ ಪೀಳಿಗೆಗಾಗಿ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂಗತಿಯನ್ನು ಈ ದಿನ ನಮಗೆ ನೆನಪಿಸುತ್ತದೆ.</p><p>ನಮ್ಮ ಜೀವ ಸಂಕುಲ, ಪರಿಸರ ಮತ್ತು ದೇಶದ ಆರ್ಥಿಕತೆಗೆ ನೀರೇ ಆಧಾರ. ಆದರೆ, ಇಂದು ಈ ಅಮೂಲ್ಯ ಸಂಪನ್ಮೂಲದ ಮೇಲೆ ಒತ್ತಡ ಹೆಚ್ಚುತ್ತಿದೆ. ಜಗತ್ತಿನ ಒಟ್ಟು ಜನಸಂಖ್ಯೆ ಮತ್ತು ಜಾನುವಾರುಗಳಲ್ಲಿ ಶೇ. 18ರಷ್ಟು ಭಾರತದಲ್ಲಿದ್ದರೂ, ನಮ್ಮಲ್ಲಿರುವ ಸಿಹಿನೀರಿನ ಪ್ರಮಾಣ ಕೇವಲ ಶೇ. 4ರಷ್ಟು ಮಾತ್ರ. ವೇಗವಾಗಿ ಬೆಳೆಯುತ್ತಿರುವ ನಗರಗಳು, ಹೆಚ್ಚುತ್ತಿರುವ ನೀರಿನ ಬೇಡಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ, ನೀರಿನ ಸಮರ್ಥ ನಿರ್ವಹಣೆ ಮಾಡುವುದು ನಮ್ಮ ರಾಷ್ಟ್ರೀಯ ಆದ್ಯತೆಯಾಗಿದೆ.</p><p>ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ನೀರಿಗಾಗಿ ಒಂದು ಸಮಗ್ರ ಆಡಳಿತ ನೀತಿಯನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿಯೇ 'ಜಲಶಕ್ತಿ ಸಚಿವಾಲಯ'ವನ್ನು ಸ್ಥಾಪಿಸಿ, ನೀರಿನ ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇದು ನೀರಿನ ಯೋಜನೆಗಳನ್ನು ರೂಪಿಸುವಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತಂದಿದ್ದು, ಸಮಗ್ರವಾದ ಯೋಜನೆಯತ್ತ ನಾವೀಗ ಸಾಗುತ್ತಿದ್ದೇವೆ.</p><p>ಈ ಹೊಸ ವಿಧಾನವು ನೀರಿನ ಸಂಪೂರ್ಣ ಚಕ್ರದ ಮೇಲೆ ಗಮನ ಹರಿಸುತ್ತದೆ. ಅಂದರೆ, ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಮಾಡುವುದು; ಅಣೆಕಟ್ಟು ಹಾಗೂ ಜಲಾಶಯಗಳ ಮೂಲಕ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು; ನದಿ ಜೋಡಣೆಯ ಮೂಲಕ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ನೀರನ್ನು ಹಂಚುವುದು; 'ಜಲ ಜೀವನ್ ಮಿಷನ್' ಮತ್ತು ಆಧುನಿಕ ನೀರಾವರಿ ಯೋಜನೆಗಳ ಮೂಲಕ ಎಲ್ಲರಿಗೂ ನೀರು ತಲುಪಿಸುವುದು; 'ನಮಾಮಿ ಗಂಗೆ'ಯಂತಹ ಕಾರ್ಯಕ್ರಮಗಳ ಮೂಲಕ ನೀರಿನ ಶುದ್ಧತೆಯನ್ನು ಕಾಪಾಡುವುದು; ಮತ್ತು ಸಂಶೋಧನೆ ಹಾಗೂ ಹೊಸ ಆಲೋಚನೆಗಳ ಮೂಲಕ ಜಲ ಭದ್ರತೆಯನ್ನು ಗಟ್ಟಿಗೊಳಿಸುವುದು - ಇವೆಲ್ಲವೂ ನಮ್ಮ ದೇಶದ ದೀರ್ಘಕಾಲದ ಜಲ ಭದ್ರತೆಯ ದೂರದೃಷ್ಟಿಯನ್ನು ಉಲ್ಲೇಖಿಸುತ್ತದೆ.</p><p>ಈ ಇಡೀ ಯೋಜನೆಯ ಕೇಂದ್ರಬಿಂದುವೇನೆಂದರೆ, ನೀರಿನ ನಿರ್ವಹಣೆಯು ಅದರ ಎಲ್ಲಾ ಹಂತಗಳಲ್ಲೂ ಒಂದು 'ಜನ ಚಳವಳಿ' ಅಥವಾ ಜನಾಂದೋಲನವಾಗಬೇಕು ಎನ್ನುವುದು. ಸರ್ಕಾರದ ಯೋಜನೆಗಳು ಕೇವಲ ದಾರಿ ತೋರಿಸಬಹುದು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬಹುದು. ಆದರೆ, ನಿಜವಾದ ಮತ್ತು ಶಾಶ್ವತವಾದ ಬದಲಾವಣೆ ಬರಲು ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು "ಇದು ನನ್ನ ಹೊಣೆ" ಎಂಬ ಮಾಲೀಕತ್ವದ ಭಾವನೆಯನ್ನು ಬೆಳೆಸಿಕೊಳ್ಳಬೇಕು.</p><p>ಜಲ ಜೀವನ್ ಮಿಷನ್ ಇಂದು ಪ್ರತಿಯೊಂದು ಗ್ರಾಮೀಣ ಮನೆಗೂ ಸುರಕ್ಷಿತ ಮತ್ತು ಸಮರ್ಪಕವಾದ ಕುಡಿಯುವ ನೀರನ್ನು ಒದಗಿಸುವ ವಿಶ್ವದ ಅತಿದೊಡ್ಡ ಕಾರ್ಯಕ್ರಮವಾಗಿ ಜಾರಿಯಾಗುತ್ತಿದೆ. ಈಗಾಗಲೇ 15.8 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಇದರಿಂದ ಜನರ ಜೀವನಮಟ್ಟ ಸುಧಾರಿಸಿದೆ. ಮುಖ್ಯವಾಗಿ, ಲಕ್ಷಾಂತರ ಮಹಿಳೆಯರಿಗೆ ಮೈಲುಗಟ್ಟಲೆ ನಡೆದು ನೀರು ಹೊರುವ ಸಂಕಷ್ಟ ತಪ್ಪಿದೆ. ಇದು ಅವರ ಆರೋಗ್ಯವನ್ನು ಸುಧಾರಿಸಿದ್ದಲ್ಲದೆ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹೊಸ ಅವಕಾಶಗಳನ್ನು ಮಾಡಿಕೊಟ್ಟಿದೆ. ಈ ಯೋಜನೆಯು ಕೇವಲ ಪೈಪ್ಲೈನ್ ಗಳನ್ನು ಅಳವಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ; ಬದಲಿಗೆ ಗ್ರಾಮ ಪಂಚಾಯತಿಗಳು ಮತ್ತು 'ಗ್ರಾಮ ನೀರು ಹಾಗೂ ನೈರ್ಮಲ್ಯ ಸಮಿತಿ'ಗಳ ಮೂಲಕ ಜನರನ್ನೇ ಈ ಯೋಜನೆಯ ಮಾಲೀಕರನ್ನಾಗಿ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ, ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಗಟ್ಟಿಗೊಳಿಸಲಾಗುತ್ತಿದೆ.</p><p>'ನಮಾಮಿ ಗಂಗೆ' ಯೋಜನೆಯು ಗಂಗಾ ನದಿ ಮತ್ತು ಅದರ ಉಪನದಿಗಳ ನೀರಿನ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ, ಅಲ್ಲಿನ ನೈಸರ್ಗಿಕ ಪರಿಸರವನ್ನು ಮರುಸ್ಥಾಪಿಸುವಲ್ಲಿ ದೊಡ್ಡ ಯಶಸ್ಸು ಕಂಡಿದೆ. ಇದರ ಪರಿಣಾಮವಾಗಿ, ಗಂಗಾ ನದಿಯ ಡಾಲ್ಫಿನ್ ಗಳಂತಹ ಪ್ರಮುಖ ಜಲಚರಗಳ ಆವಾಸಸ್ಥಾನಗಳು ಸುಧಾರಿಸಿವೆ ಮತ್ತು ಅವುಗಳ ಸಂಖ್ಯೆಯೂ ಹೆಚ್ಚಿದೆ. ಗಂಗೆಯನ್ನು 'ನಿರ್ಮಲ' (ಶುದ್ಧ) ಮತ್ತು 'ಅವಿರಲ' (ನಿರಂತರ ಹರಿವು) ಮಾಡುವುದರ ಜೊತೆಗೆ, ಈ ಯೋಜನೆಯು 'ಅರ್ಥ್ ಗಂಗೆ' ಮತ್ತು 'ಜನ ಗಂಗೆ' ಎಂಬ ಹೊಸ ಆಲೋಚನೆಗಳನ್ನು ಜಾರಿಗೆ ತಂದಿದೆ. ಇದು ನದಿಯನ್ನು ಕೇವಲ ಸ್ವಚ್ಛಗೊಳಿಸುವುದಷ್ಟೇ ಅಲ್ಲ, ಜನರ ಜೀವನೋಪಾಯ, ಜಾಗೃತಿ ಮತ್ತು ಸ್ಥಳೀಯರ ಸಕ್ರಿಯ ಸಹಭಾಗಿತ್ವವನ್ನು ನದಿ ಸಂರಕ್ಷಣೆಯೊಂದಿಗೆ ಜೋಡಿಸಿದೆ. ಈ ಮೂಲಕ ನದಿ ಪುನಶ್ಚೇತನದ ಕಾರ್ಯದಲ್ಲಿ ಸಮುದಾಯವನ್ನೇ ಕೇಂದ್ರಬಿಂದುವನ್ನಾಗಿ ಮಾಡಲಾಗಿದೆ.</p>.<p>ಜಲಶಕ್ತಿ ಅಭಿಯಾನ ಇಂದು ನೀರಿನ ಸಂರಕ್ಷಣೆಯನ್ನು ಒಂದು ದೊಡ್ಡ ಜನಾಂದೋಲನವನ್ನಾಗಿ ಮಾಡಿದೆ. ಪ್ರಧಾನಮಂತ್ರಿಯವರ "ಕ್ಯಾಚ್ ದಿ ರೈನ್" (ಮಳೆ ನೀರನ್ನು ಹಿಡಿದಿಡಿ - ಎಲ್ಲಿ ಬೀಳುತ್ತದೋ ಅಲ್ಲಿ, ಯಾವಾಗ ಬೀಳುತ್ತದೋ ಆಗ) ಎನ್ನುವ ಘೋಷಣೆ ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ.'ಜಲ ಸಂಚಯ ಜನ ಭಾಗೀದಾರಿ' ಉಪಕ್ರಮದ ಅಡಿಯಲ್ಲಿ ಜನರು ಮತ್ತು ಸಮುದಾಯಗಳು ಒಟ್ಟಾಗಿ ಮಳೆನೀರು ಕೊಯ್ಲು, ಹಳೆಯ ಕೆರೆ-ಕುಂಟೆಗಳ ಪುನಶ್ಚೇತನ, ಜಲಾನಯನ ಅಭಿವೃದ್ಧಿ ಮತ್ತು ಗಿಡಗಳನ್ನು ನೆಡುವ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. </p><p>ಸೆಪ್ಟೆಂಬರ್ 2024 ರಿಂದೀಚೆಗೆ, ಇಂತಹ ಸಂಘಟಿತ ಪ್ರಯತ್ನಗಳಿಂದಾಗಿ ದೇಶಾದ್ಯಂತ 45 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ರಚನೆಗಳು ನಿರ್ಮಾಣವಾಗಿವೆ. ಸರ್ಕಾರದ ಬೆಂಬಲದೊಂದಿಗೆ ಜನಸಾಮಾನ್ಯರು ಮನಸ್ಸು ಮಾಡಿದರೆ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.</p><p>ಇಂತಹ ಸಕ್ರಿಯ ಜನಭಾಗೀದಾರಿಕೆಯ ಉದಾಹರಣೆಗಳು ಇಂದು ಭಾರತದ ಉದ್ದಗಲಕ್ಕೂ ಕಾಣಸಿಗುತ್ತವೆ. ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ, ಹೈನುಗಾರಿಕೆ ಸಹಕಾರ ಸಂಘಗಳು ಮತ್ತು ರೈತರು ಕೈಜೋಡಿಸಿ ಕಡಿಮೆ ವೆಚ್ಚದಲ್ಲಿ ಅಂತರ್ಜಲ ಮರುಪೂರಣ ಘಟಕಗಳನ್ನು ನಿರ್ಮಿಸಿದ್ದಾರೆ. ಇತ್ತ ಛತ್ತೀಸಗಢದ ಕೊರೆಯಾ ಜಿಲ್ಲೆಯಲ್ಲಿ, ರೈತರು ತಮ್ಮ ಜಮೀನಿನ ಒಂದು ಭಾಗವನ್ನೇ ಅಂತರ್ಜಲ ಹೆಚ್ಚಿಸುವ ಕೆಲಸಕ್ಕಾಗಿ ಮೀಸಲಿಟ್ಟಿದ್ದಾರೆ. ನಗರ ಪ್ರದೇಶಗಳಲ್ಲೂ ಬದಲಾವಣೆ ಗಾಳಿ ಬೀಸುತ್ತಿದ್ದು, ಅನೇಕ ವಸತಿ ಸಂಘಗಳು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿವೆ. 'ಕರ್ಮಭೂಮಿಯಿಂದ ಮಾತೃಭೂಮಿಗೆ' ಎಂಬಂತಹ ಅಭಿಯಾನಗಳು ಜನರ ಹೊಣೆಗಾರಿಕೆಯನ್ನು ಹೆಚ್ಚಿಸಿವೆ. ತಾವು ಕೆಲಸ ಮಾಡುವ ಊರಿನಲ್ಲಿದ್ದುಕೊಂಡೇ, ತಮ್ಮ ಹುಟ್ಟಿದ ಊರಿನ ಜಲಮೂಲಗಳನ್ನು ರಕ್ಷಿಸಲು ಜನರು ಸ್ವಯಂಪ್ರೇರಿತರಾಗಿ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.</p><p>ದೇಶದ ಜಲ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕೈಗಾರಿಕೆ ಮತ್ತು ಕೃಷಿ ವಲಯಗಳ ಪಾತ್ರ ಬಹಳ ದೊಡ್ಡದಿದೆ. ಇಂದು ಅನೇಕ ಕೈಗಾರಿಕೆಗಳು ಸ್ವಯಂಪ್ರೇರಿತವಾಗಿ ನೀರಿನ ಉಳಿತಾಯದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿವೆ. ನೀರಿನ ಲೆಕ್ಕಪರಿಶೋಧನೆ, ಬಳಸಿದ ನೀರಿನ ಮರುಬಳಕೆ, 'ಜೀರೋ ಲಿಕ್ವಿಡ್ ಡಿಸ್ಚಾರ್ಜ್' (ತ್ಯಾಜ್ಯ ನೀರನ್ನು ಹೊರಬಿಡದ ತಂತ್ರಜ್ಞಾನ) ಮತ್ತು ಮಳೆನೀರು ಕೊಯ್ಲಿನಂತಹ ಕ್ರಮಗಳನ್ನು ಅವು ಜಾರಿಗೆ ತರುತ್ತಿವೆ. ಇವುಗಳಿಗೆ ನೀರಿನ ತಂತ್ರಜ್ಞಾನದಲ್ಲಿನ ಹೊಸ ಹೊಸ ಆವಿಷ್ಕಾರಗಳು ಗಣನೀಯವಾಗಿ ಬೆಂಬಲ ನೀಡುತ್ತಿವೆ.</p><p>ಕೃಷಿ ಕ್ಷೇತ್ರದಲ್ಲಿ ಇಂದು ಹನಿ ನೀರಾವರಿ ಮತ್ತು ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ಪದ್ಧತಿಗಳು ಜನಪ್ರಿಯವಾಗುತ್ತಿವೆ. ಜಮೀನಿನಲ್ಲಿ ಲಭ್ಯವಿರುವ ನೀರನ್ನು ಪೋಲು ಮಾಡದೆ ಸಮರ್ಪಕವಾಗಿ ನಿರ್ವಹಿಸುವ ಮತ್ತು ಮಿತವಾಗಿ ಬಳಸುವ ವಿಧಾನಗಳನ್ನು ದೇಶಾದ್ಯಂತ ಅಳವಡಿಸಿಕೊಳ್ಳಲಾಗುತ್ತಿದೆ. 'ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಯ ಆಧುನೀಕರಣ'ದಂತಹ ಸರ್ಕಾರಿ ಯೋಜನೆಗಳು ಇದಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡುತ್ತಿವೆ. ಈ ಪ್ರಯತ್ನಗಳು ಕೇವಲ ನೀರಿನ ಉಳಿತಾಯಕ್ಕೆ ಮಾತ್ರವಲ್ಲದೆ, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯನ್ನು ಲಾಭದಾಯಕ ಹಾಗೂ ಸುಸ್ಥಿರವಾಗಿಸಲು ಸಹಾಯ ಮಾಡುತ್ತಿವೆ.</p><p>ನಗರ ಪ್ರದೇಶಗಳಲ್ಲಿ ವಾಸಿಸುವವರು ಕೂಡ ಮಳೆನೀರು ಕೊಯ್ಲು, ಬಳಸಿದ ನೀರಿನ ಮರುಬಳಕೆ ಮತ್ತು ದೂರದೃಷ್ಟಿಯ ಸುಸ್ಥಿರ ಯೋಜನೆಗಳ ಮೂಲಕ ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ನೀರಿನ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರತಿಯೊಂದು ಮನೆ, ಶಾಲಾ-ಕಾಲೇಜುಗಳಂತಹ ಸಂಸ್ಥೆಗಳು ಮತ್ತು ಇಡೀ ಸಮುದಾಯವು ತನ್ನದೇ ಆದ ಪ್ರಮುಖ ಪಾತ್ರವನ್ನು ಹೊಂದಿದೆ.</p><p>ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ನಿರ್ಮಿಸುವ ಕನಸು ನನಸಾಗಬೇಕಾದರೆ, ಜಲ ಸುರಕ್ಷತೆಯನ್ನು ಸಾಧಿಸುವುದು ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಪ್ರಯತ್ನವಾಗಬೇಕು. ಜಲ ಭದ್ರತೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಟ್ಟಡಗಳು, ಪೈಪ್ಲೈನ್ ಗಳು ಅಥವಾ ಸರ್ಕಾರದ ನೀತಿಗಳಿಂದ ಮಾತ್ರ ಸಾಧ್ಯವಿಲ್ಲ; ಬದಲಿಗೆ ಅದು ನಮ್ಮೆಲ್ಲರ ದೈನಂದಿನ ನಡವಳಿಕೆಯಲ್ಲಿ ಬರುವ ಬದಲಾವಣೆಯ ಮೇಲೆ ಅಂತಿಮವಾಗಿ ಅವಲಂಬಿತವಾಗಿದೆ.</p><p>ಈ ವಿಶ್ವ ಜಲ ದಿನದಂದು, ನಾವು ಮಾತಿನಿಂದ ಕೃತಿಯತ್ತ ಸಾಗೋಣ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ದಿನಕ್ಕೆ ಕೇವಲ ಒಂದು ಲೀಟರ್ ನೀರನ್ನು ಉಳಿಸಿದರೆ, ಮರುಬಳಕೆ ಮಾಡಿದರೆ ಅಥವಾ ಭೂಮಿಗೆ ಮರುಪೂರಣ ಮಾಡಿದರೆ, ಇಡೀ ರಾಷ್ಟ್ರವಾಗಿ ನಾವು ದಿನವೊಂದಕ್ಕೆ 140 ಕೋಟಿ ಲೀಟರ್ ಗಳಿಗಿಂತ ಹೆಚ್ಚು ನೀರನ್ನು ಸಂರಕ್ಷಿಸಬಹುದು! ಇದೊಂದು ಸಣ್ಣ ಕೆಲಸ ಎಂದು ಅನಿಸಬಹುದು, ಆದರೆ ದೇಶದ ಮೇಲೆ ಇದು ಬೀರುವ ಪ್ರಭಾವ ಅಸಾಧಾರಣ. ನೀರನ್ನು ಉಳಿಸುವುದು ಕೇವಲ ಒಂದು ದಿನದ ಆಚರಣೆಯಾಗದೆ ನಮ್ಮ ದೈನಂದಿನ ಅಭ್ಯಾಸವಾಗಲಿ. ಜಲ-ಸುರಕ್ಷಿತ ಭಾರತವು ಕೇವಲ ಸರ್ಕಾರದ ನೀತಿಗಳಿಂದ ನಿರ್ಮಾಣವಾಗುವುದಿಲ್ಲ; ಬದಲಿಗೆ ಅದು ನಮ್ಮೆಲ್ಲರ ದೈನಂದಿನ ಆಯ್ಕೆಗಳಿಂದ ನಿರ್ಮಾಣವಾಗುತ್ತದೆ. ಎಲ್ಲಿ ಪ್ರತಿಯೊಂದು ಹನಿ ನೀರಿಗೂ ಮೌಲ್ಯವಿರುತ್ತದೆಯೋ, ಪ್ರತಿಯೊಂದು ಜಲಮೂಲವೂ ಸುಸ್ಥಿರವಾಗಿರುತ್ತದೆಯೋ ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಅಮೂಲ್ಯ ಸಂಪನ್ಮೂಲದ ರಕ್ಷಕನಾಗುತ್ತಾನೋ, ಅಂತಹ ಭಾರತವೇ ನಿಜವಾದ ಸುಭಿಕ್ಷ ಭಾರತ.</p><p>–––</p><p><strong>ಲೇಖನ</strong></p><p><strong>ಸಿ.ಆರ್.ಪಾಟೀಲ</strong></p><p><strong>(ಕೇಂದ್ರ ಜಲಶಕ್ತಿ ಸಚಿವರು)</strong></p>.ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?.ವಿಶ್ಲೇಷಣೆ | ಜಲ ಭದ್ರತೆಯ ಬಗೆ ಹೇಗೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾರ್ಚ್ 22ರಂದು ನಾವು 'ವಿಶ್ವ ಜಲ ದಿನ'ವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಸಮಸ್ತ ನಾಗರಿಕರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀರು ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಭವಿಷ್ಯದ ಪೀಳಿಗೆಗಾಗಿ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂಗತಿಯನ್ನು ಈ ದಿನ ನಮಗೆ ನೆನಪಿಸುತ್ತದೆ.</p><p>ನಮ್ಮ ಜೀವ ಸಂಕುಲ, ಪರಿಸರ ಮತ್ತು ದೇಶದ ಆರ್ಥಿಕತೆಗೆ ನೀರೇ ಆಧಾರ. ಆದರೆ, ಇಂದು ಈ ಅಮೂಲ್ಯ ಸಂಪನ್ಮೂಲದ ಮೇಲೆ ಒತ್ತಡ ಹೆಚ್ಚುತ್ತಿದೆ. ಜಗತ್ತಿನ ಒಟ್ಟು ಜನಸಂಖ್ಯೆ ಮತ್ತು ಜಾನುವಾರುಗಳಲ್ಲಿ ಶೇ. 18ರಷ್ಟು ಭಾರತದಲ್ಲಿದ್ದರೂ, ನಮ್ಮಲ್ಲಿರುವ ಸಿಹಿನೀರಿನ ಪ್ರಮಾಣ ಕೇವಲ ಶೇ. 4ರಷ್ಟು ಮಾತ್ರ. ವೇಗವಾಗಿ ಬೆಳೆಯುತ್ತಿರುವ ನಗರಗಳು, ಹೆಚ್ಚುತ್ತಿರುವ ನೀರಿನ ಬೇಡಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ, ನೀರಿನ ಸಮರ್ಥ ನಿರ್ವಹಣೆ ಮಾಡುವುದು ನಮ್ಮ ರಾಷ್ಟ್ರೀಯ ಆದ್ಯತೆಯಾಗಿದೆ.</p><p>ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ನೀರಿಗಾಗಿ ಒಂದು ಸಮಗ್ರ ಆಡಳಿತ ನೀತಿಯನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿಯೇ 'ಜಲಶಕ್ತಿ ಸಚಿವಾಲಯ'ವನ್ನು ಸ್ಥಾಪಿಸಿ, ನೀರಿನ ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇದು ನೀರಿನ ಯೋಜನೆಗಳನ್ನು ರೂಪಿಸುವಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತಂದಿದ್ದು, ಸಮಗ್ರವಾದ ಯೋಜನೆಯತ್ತ ನಾವೀಗ ಸಾಗುತ್ತಿದ್ದೇವೆ.</p><p>ಈ ಹೊಸ ವಿಧಾನವು ನೀರಿನ ಸಂಪೂರ್ಣ ಚಕ್ರದ ಮೇಲೆ ಗಮನ ಹರಿಸುತ್ತದೆ. ಅಂದರೆ, ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಮಾಡುವುದು; ಅಣೆಕಟ್ಟು ಹಾಗೂ ಜಲಾಶಯಗಳ ಮೂಲಕ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು; ನದಿ ಜೋಡಣೆಯ ಮೂಲಕ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ನೀರನ್ನು ಹಂಚುವುದು; 'ಜಲ ಜೀವನ್ ಮಿಷನ್' ಮತ್ತು ಆಧುನಿಕ ನೀರಾವರಿ ಯೋಜನೆಗಳ ಮೂಲಕ ಎಲ್ಲರಿಗೂ ನೀರು ತಲುಪಿಸುವುದು; 'ನಮಾಮಿ ಗಂಗೆ'ಯಂತಹ ಕಾರ್ಯಕ್ರಮಗಳ ಮೂಲಕ ನೀರಿನ ಶುದ್ಧತೆಯನ್ನು ಕಾಪಾಡುವುದು; ಮತ್ತು ಸಂಶೋಧನೆ ಹಾಗೂ ಹೊಸ ಆಲೋಚನೆಗಳ ಮೂಲಕ ಜಲ ಭದ್ರತೆಯನ್ನು ಗಟ್ಟಿಗೊಳಿಸುವುದು - ಇವೆಲ್ಲವೂ ನಮ್ಮ ದೇಶದ ದೀರ್ಘಕಾಲದ ಜಲ ಭದ್ರತೆಯ ದೂರದೃಷ್ಟಿಯನ್ನು ಉಲ್ಲೇಖಿಸುತ್ತದೆ.</p><p>ಈ ಇಡೀ ಯೋಜನೆಯ ಕೇಂದ್ರಬಿಂದುವೇನೆಂದರೆ, ನೀರಿನ ನಿರ್ವಹಣೆಯು ಅದರ ಎಲ್ಲಾ ಹಂತಗಳಲ್ಲೂ ಒಂದು 'ಜನ ಚಳವಳಿ' ಅಥವಾ ಜನಾಂದೋಲನವಾಗಬೇಕು ಎನ್ನುವುದು. ಸರ್ಕಾರದ ಯೋಜನೆಗಳು ಕೇವಲ ದಾರಿ ತೋರಿಸಬಹುದು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬಹುದು. ಆದರೆ, ನಿಜವಾದ ಮತ್ತು ಶಾಶ್ವತವಾದ ಬದಲಾವಣೆ ಬರಲು ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು "ಇದು ನನ್ನ ಹೊಣೆ" ಎಂಬ ಮಾಲೀಕತ್ವದ ಭಾವನೆಯನ್ನು ಬೆಳೆಸಿಕೊಳ್ಳಬೇಕು.</p><p>ಜಲ ಜೀವನ್ ಮಿಷನ್ ಇಂದು ಪ್ರತಿಯೊಂದು ಗ್ರಾಮೀಣ ಮನೆಗೂ ಸುರಕ್ಷಿತ ಮತ್ತು ಸಮರ್ಪಕವಾದ ಕುಡಿಯುವ ನೀರನ್ನು ಒದಗಿಸುವ ವಿಶ್ವದ ಅತಿದೊಡ್ಡ ಕಾರ್ಯಕ್ರಮವಾಗಿ ಜಾರಿಯಾಗುತ್ತಿದೆ. ಈಗಾಗಲೇ 15.8 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಇದರಿಂದ ಜನರ ಜೀವನಮಟ್ಟ ಸುಧಾರಿಸಿದೆ. ಮುಖ್ಯವಾಗಿ, ಲಕ್ಷಾಂತರ ಮಹಿಳೆಯರಿಗೆ ಮೈಲುಗಟ್ಟಲೆ ನಡೆದು ನೀರು ಹೊರುವ ಸಂಕಷ್ಟ ತಪ್ಪಿದೆ. ಇದು ಅವರ ಆರೋಗ್ಯವನ್ನು ಸುಧಾರಿಸಿದ್ದಲ್ಲದೆ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹೊಸ ಅವಕಾಶಗಳನ್ನು ಮಾಡಿಕೊಟ್ಟಿದೆ. ಈ ಯೋಜನೆಯು ಕೇವಲ ಪೈಪ್ಲೈನ್ ಗಳನ್ನು ಅಳವಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ; ಬದಲಿಗೆ ಗ್ರಾಮ ಪಂಚಾಯತಿಗಳು ಮತ್ತು 'ಗ್ರಾಮ ನೀರು ಹಾಗೂ ನೈರ್ಮಲ್ಯ ಸಮಿತಿ'ಗಳ ಮೂಲಕ ಜನರನ್ನೇ ಈ ಯೋಜನೆಯ ಮಾಲೀಕರನ್ನಾಗಿ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ, ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಗಟ್ಟಿಗೊಳಿಸಲಾಗುತ್ತಿದೆ.</p><p>'ನಮಾಮಿ ಗಂಗೆ' ಯೋಜನೆಯು ಗಂಗಾ ನದಿ ಮತ್ತು ಅದರ ಉಪನದಿಗಳ ನೀರಿನ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ, ಅಲ್ಲಿನ ನೈಸರ್ಗಿಕ ಪರಿಸರವನ್ನು ಮರುಸ್ಥಾಪಿಸುವಲ್ಲಿ ದೊಡ್ಡ ಯಶಸ್ಸು ಕಂಡಿದೆ. ಇದರ ಪರಿಣಾಮವಾಗಿ, ಗಂಗಾ ನದಿಯ ಡಾಲ್ಫಿನ್ ಗಳಂತಹ ಪ್ರಮುಖ ಜಲಚರಗಳ ಆವಾಸಸ್ಥಾನಗಳು ಸುಧಾರಿಸಿವೆ ಮತ್ತು ಅವುಗಳ ಸಂಖ್ಯೆಯೂ ಹೆಚ್ಚಿದೆ. ಗಂಗೆಯನ್ನು 'ನಿರ್ಮಲ' (ಶುದ್ಧ) ಮತ್ತು 'ಅವಿರಲ' (ನಿರಂತರ ಹರಿವು) ಮಾಡುವುದರ ಜೊತೆಗೆ, ಈ ಯೋಜನೆಯು 'ಅರ್ಥ್ ಗಂಗೆ' ಮತ್ತು 'ಜನ ಗಂಗೆ' ಎಂಬ ಹೊಸ ಆಲೋಚನೆಗಳನ್ನು ಜಾರಿಗೆ ತಂದಿದೆ. ಇದು ನದಿಯನ್ನು ಕೇವಲ ಸ್ವಚ್ಛಗೊಳಿಸುವುದಷ್ಟೇ ಅಲ್ಲ, ಜನರ ಜೀವನೋಪಾಯ, ಜಾಗೃತಿ ಮತ್ತು ಸ್ಥಳೀಯರ ಸಕ್ರಿಯ ಸಹಭಾಗಿತ್ವವನ್ನು ನದಿ ಸಂರಕ್ಷಣೆಯೊಂದಿಗೆ ಜೋಡಿಸಿದೆ. ಈ ಮೂಲಕ ನದಿ ಪುನಶ್ಚೇತನದ ಕಾರ್ಯದಲ್ಲಿ ಸಮುದಾಯವನ್ನೇ ಕೇಂದ್ರಬಿಂದುವನ್ನಾಗಿ ಮಾಡಲಾಗಿದೆ.</p>.<p>ಜಲಶಕ್ತಿ ಅಭಿಯಾನ ಇಂದು ನೀರಿನ ಸಂರಕ್ಷಣೆಯನ್ನು ಒಂದು ದೊಡ್ಡ ಜನಾಂದೋಲನವನ್ನಾಗಿ ಮಾಡಿದೆ. ಪ್ರಧಾನಮಂತ್ರಿಯವರ "ಕ್ಯಾಚ್ ದಿ ರೈನ್" (ಮಳೆ ನೀರನ್ನು ಹಿಡಿದಿಡಿ - ಎಲ್ಲಿ ಬೀಳುತ್ತದೋ ಅಲ್ಲಿ, ಯಾವಾಗ ಬೀಳುತ್ತದೋ ಆಗ) ಎನ್ನುವ ಘೋಷಣೆ ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ.'ಜಲ ಸಂಚಯ ಜನ ಭಾಗೀದಾರಿ' ಉಪಕ್ರಮದ ಅಡಿಯಲ್ಲಿ ಜನರು ಮತ್ತು ಸಮುದಾಯಗಳು ಒಟ್ಟಾಗಿ ಮಳೆನೀರು ಕೊಯ್ಲು, ಹಳೆಯ ಕೆರೆ-ಕುಂಟೆಗಳ ಪುನಶ್ಚೇತನ, ಜಲಾನಯನ ಅಭಿವೃದ್ಧಿ ಮತ್ತು ಗಿಡಗಳನ್ನು ನೆಡುವ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. </p><p>ಸೆಪ್ಟೆಂಬರ್ 2024 ರಿಂದೀಚೆಗೆ, ಇಂತಹ ಸಂಘಟಿತ ಪ್ರಯತ್ನಗಳಿಂದಾಗಿ ದೇಶಾದ್ಯಂತ 45 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ರಚನೆಗಳು ನಿರ್ಮಾಣವಾಗಿವೆ. ಸರ್ಕಾರದ ಬೆಂಬಲದೊಂದಿಗೆ ಜನಸಾಮಾನ್ಯರು ಮನಸ್ಸು ಮಾಡಿದರೆ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.</p><p>ಇಂತಹ ಸಕ್ರಿಯ ಜನಭಾಗೀದಾರಿಕೆಯ ಉದಾಹರಣೆಗಳು ಇಂದು ಭಾರತದ ಉದ್ದಗಲಕ್ಕೂ ಕಾಣಸಿಗುತ್ತವೆ. ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ, ಹೈನುಗಾರಿಕೆ ಸಹಕಾರ ಸಂಘಗಳು ಮತ್ತು ರೈತರು ಕೈಜೋಡಿಸಿ ಕಡಿಮೆ ವೆಚ್ಚದಲ್ಲಿ ಅಂತರ್ಜಲ ಮರುಪೂರಣ ಘಟಕಗಳನ್ನು ನಿರ್ಮಿಸಿದ್ದಾರೆ. ಇತ್ತ ಛತ್ತೀಸಗಢದ ಕೊರೆಯಾ ಜಿಲ್ಲೆಯಲ್ಲಿ, ರೈತರು ತಮ್ಮ ಜಮೀನಿನ ಒಂದು ಭಾಗವನ್ನೇ ಅಂತರ್ಜಲ ಹೆಚ್ಚಿಸುವ ಕೆಲಸಕ್ಕಾಗಿ ಮೀಸಲಿಟ್ಟಿದ್ದಾರೆ. ನಗರ ಪ್ರದೇಶಗಳಲ್ಲೂ ಬದಲಾವಣೆ ಗಾಳಿ ಬೀಸುತ್ತಿದ್ದು, ಅನೇಕ ವಸತಿ ಸಂಘಗಳು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿವೆ. 'ಕರ್ಮಭೂಮಿಯಿಂದ ಮಾತೃಭೂಮಿಗೆ' ಎಂಬಂತಹ ಅಭಿಯಾನಗಳು ಜನರ ಹೊಣೆಗಾರಿಕೆಯನ್ನು ಹೆಚ್ಚಿಸಿವೆ. ತಾವು ಕೆಲಸ ಮಾಡುವ ಊರಿನಲ್ಲಿದ್ದುಕೊಂಡೇ, ತಮ್ಮ ಹುಟ್ಟಿದ ಊರಿನ ಜಲಮೂಲಗಳನ್ನು ರಕ್ಷಿಸಲು ಜನರು ಸ್ವಯಂಪ್ರೇರಿತರಾಗಿ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.</p><p>ದೇಶದ ಜಲ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕೈಗಾರಿಕೆ ಮತ್ತು ಕೃಷಿ ವಲಯಗಳ ಪಾತ್ರ ಬಹಳ ದೊಡ್ಡದಿದೆ. ಇಂದು ಅನೇಕ ಕೈಗಾರಿಕೆಗಳು ಸ್ವಯಂಪ್ರೇರಿತವಾಗಿ ನೀರಿನ ಉಳಿತಾಯದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿವೆ. ನೀರಿನ ಲೆಕ್ಕಪರಿಶೋಧನೆ, ಬಳಸಿದ ನೀರಿನ ಮರುಬಳಕೆ, 'ಜೀರೋ ಲಿಕ್ವಿಡ್ ಡಿಸ್ಚಾರ್ಜ್' (ತ್ಯಾಜ್ಯ ನೀರನ್ನು ಹೊರಬಿಡದ ತಂತ್ರಜ್ಞಾನ) ಮತ್ತು ಮಳೆನೀರು ಕೊಯ್ಲಿನಂತಹ ಕ್ರಮಗಳನ್ನು ಅವು ಜಾರಿಗೆ ತರುತ್ತಿವೆ. ಇವುಗಳಿಗೆ ನೀರಿನ ತಂತ್ರಜ್ಞಾನದಲ್ಲಿನ ಹೊಸ ಹೊಸ ಆವಿಷ್ಕಾರಗಳು ಗಣನೀಯವಾಗಿ ಬೆಂಬಲ ನೀಡುತ್ತಿವೆ.</p><p>ಕೃಷಿ ಕ್ಷೇತ್ರದಲ್ಲಿ ಇಂದು ಹನಿ ನೀರಾವರಿ ಮತ್ತು ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ಪದ್ಧತಿಗಳು ಜನಪ್ರಿಯವಾಗುತ್ತಿವೆ. ಜಮೀನಿನಲ್ಲಿ ಲಭ್ಯವಿರುವ ನೀರನ್ನು ಪೋಲು ಮಾಡದೆ ಸಮರ್ಪಕವಾಗಿ ನಿರ್ವಹಿಸುವ ಮತ್ತು ಮಿತವಾಗಿ ಬಳಸುವ ವಿಧಾನಗಳನ್ನು ದೇಶಾದ್ಯಂತ ಅಳವಡಿಸಿಕೊಳ್ಳಲಾಗುತ್ತಿದೆ. 'ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಯ ಆಧುನೀಕರಣ'ದಂತಹ ಸರ್ಕಾರಿ ಯೋಜನೆಗಳು ಇದಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡುತ್ತಿವೆ. ಈ ಪ್ರಯತ್ನಗಳು ಕೇವಲ ನೀರಿನ ಉಳಿತಾಯಕ್ಕೆ ಮಾತ್ರವಲ್ಲದೆ, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯನ್ನು ಲಾಭದಾಯಕ ಹಾಗೂ ಸುಸ್ಥಿರವಾಗಿಸಲು ಸಹಾಯ ಮಾಡುತ್ತಿವೆ.</p><p>ನಗರ ಪ್ರದೇಶಗಳಲ್ಲಿ ವಾಸಿಸುವವರು ಕೂಡ ಮಳೆನೀರು ಕೊಯ್ಲು, ಬಳಸಿದ ನೀರಿನ ಮರುಬಳಕೆ ಮತ್ತು ದೂರದೃಷ್ಟಿಯ ಸುಸ್ಥಿರ ಯೋಜನೆಗಳ ಮೂಲಕ ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ನೀರಿನ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರತಿಯೊಂದು ಮನೆ, ಶಾಲಾ-ಕಾಲೇಜುಗಳಂತಹ ಸಂಸ್ಥೆಗಳು ಮತ್ತು ಇಡೀ ಸಮುದಾಯವು ತನ್ನದೇ ಆದ ಪ್ರಮುಖ ಪಾತ್ರವನ್ನು ಹೊಂದಿದೆ.</p><p>ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ನಿರ್ಮಿಸುವ ಕನಸು ನನಸಾಗಬೇಕಾದರೆ, ಜಲ ಸುರಕ್ಷತೆಯನ್ನು ಸಾಧಿಸುವುದು ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಪ್ರಯತ್ನವಾಗಬೇಕು. ಜಲ ಭದ್ರತೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಟ್ಟಡಗಳು, ಪೈಪ್ಲೈನ್ ಗಳು ಅಥವಾ ಸರ್ಕಾರದ ನೀತಿಗಳಿಂದ ಮಾತ್ರ ಸಾಧ್ಯವಿಲ್ಲ; ಬದಲಿಗೆ ಅದು ನಮ್ಮೆಲ್ಲರ ದೈನಂದಿನ ನಡವಳಿಕೆಯಲ್ಲಿ ಬರುವ ಬದಲಾವಣೆಯ ಮೇಲೆ ಅಂತಿಮವಾಗಿ ಅವಲಂಬಿತವಾಗಿದೆ.</p><p>ಈ ವಿಶ್ವ ಜಲ ದಿನದಂದು, ನಾವು ಮಾತಿನಿಂದ ಕೃತಿಯತ್ತ ಸಾಗೋಣ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ದಿನಕ್ಕೆ ಕೇವಲ ಒಂದು ಲೀಟರ್ ನೀರನ್ನು ಉಳಿಸಿದರೆ, ಮರುಬಳಕೆ ಮಾಡಿದರೆ ಅಥವಾ ಭೂಮಿಗೆ ಮರುಪೂರಣ ಮಾಡಿದರೆ, ಇಡೀ ರಾಷ್ಟ್ರವಾಗಿ ನಾವು ದಿನವೊಂದಕ್ಕೆ 140 ಕೋಟಿ ಲೀಟರ್ ಗಳಿಗಿಂತ ಹೆಚ್ಚು ನೀರನ್ನು ಸಂರಕ್ಷಿಸಬಹುದು! ಇದೊಂದು ಸಣ್ಣ ಕೆಲಸ ಎಂದು ಅನಿಸಬಹುದು, ಆದರೆ ದೇಶದ ಮೇಲೆ ಇದು ಬೀರುವ ಪ್ರಭಾವ ಅಸಾಧಾರಣ. ನೀರನ್ನು ಉಳಿಸುವುದು ಕೇವಲ ಒಂದು ದಿನದ ಆಚರಣೆಯಾಗದೆ ನಮ್ಮ ದೈನಂದಿನ ಅಭ್ಯಾಸವಾಗಲಿ. ಜಲ-ಸುರಕ್ಷಿತ ಭಾರತವು ಕೇವಲ ಸರ್ಕಾರದ ನೀತಿಗಳಿಂದ ನಿರ್ಮಾಣವಾಗುವುದಿಲ್ಲ; ಬದಲಿಗೆ ಅದು ನಮ್ಮೆಲ್ಲರ ದೈನಂದಿನ ಆಯ್ಕೆಗಳಿಂದ ನಿರ್ಮಾಣವಾಗುತ್ತದೆ. ಎಲ್ಲಿ ಪ್ರತಿಯೊಂದು ಹನಿ ನೀರಿಗೂ ಮೌಲ್ಯವಿರುತ್ತದೆಯೋ, ಪ್ರತಿಯೊಂದು ಜಲಮೂಲವೂ ಸುಸ್ಥಿರವಾಗಿರುತ್ತದೆಯೋ ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಅಮೂಲ್ಯ ಸಂಪನ್ಮೂಲದ ರಕ್ಷಕನಾಗುತ್ತಾನೋ, ಅಂತಹ ಭಾರತವೇ ನಿಜವಾದ ಸುಭಿಕ್ಷ ಭಾರತ.</p><p>–––</p><p><strong>ಲೇಖನ</strong></p><p><strong>ಸಿ.ಆರ್.ಪಾಟೀಲ</strong></p><p><strong>(ಕೇಂದ್ರ ಜಲಶಕ್ತಿ ಸಚಿವರು)</strong></p>.ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?.ವಿಶ್ಲೇಷಣೆ | ಜಲ ಭದ್ರತೆಯ ಬಗೆ ಹೇಗೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>