‘ಯೆಲಕ್ಷನ್ನಾಗ ಹೆಂಗಾರ ಮಾಡಿ ಗೆಲ್ಬೇಕು ಅಂತ ಮಾರಮ್ಮನ ಗುಡಿಯಿಂದ ಹಿಡ್ದು ದೊಡ್ ದೊಡ್ ದೇವಸ್ಥಾನದ್ಗಂಟ ಹರಕೆ ಹೊತ್ತವ್ರೆ. ಯಜ್ಞ ಯಾಗ ಮಾಡ್ತಾವ್ರೆ. ಪೂಜಾರಪ್ಪ, ಸ್ವಾಮೀಜಿಗಳು ಕೊಡೋ ನಿಂಬೇಹಣ್ಣುಗಳ ಅಂಗೀ ಜೇಬಲ್ಲಿ, ಪ್ಯಾಂಟ್ ಜೇಬಲ್ಲಿ, ಎರಡೂ ಕೈಗಳಲ್ಲಿ ಹಿಡ್ಕೊಂಡು ಓಡಾಡ್ತಾವ್ರೆ. ಸ್ಟೇಜ್ ಮ್ಯಾಲ್ ಕೂತಿರೋರ್ ಕೈಗೆಲ್ಲ ಕೊಡ್ತಾವ್ರೆ.ಇದುನ್ನೆಲ್ಲ ಟೀವೀಲಿ ನೋಡಿಲ್ವ ಚಂದ್ರಣ್ಣ’ ಅಂತ ಟಾಂಗ್ ಕೊಟ್ಟ ಸಣ್ಣಣ್ಣ.