‘ಅವ ಪಾಳಿಯಂತೆ ಒಮ್ಮೊಮ್ಮೆ ಹತ್ತಿಪ್ಪತ್ತು ದೀಡ್ ಪಂಡಿತರ ತಂಡವನ್ನು ಈ ಟೈಂಗೆ ರೆಡಿ ಮಾಡ್ತಾನೆ. ಕೇಂದ್ರದ ಅಧಿಕಾರಿ ಮುಂದ ಇವ್ರು ಗಿಳಿಪಾಠ ಒಪ್ಪಿಸ್ತಾರೆ. ಅವ ಸಹ ಕಾಟಾಚಾರಕ್ಕೆ ನಡೆಸಬೇಕಾದ ಎಲ್ಲ ಶಾಸ್ತ್ರ ಮುಗಿಸಿ, ಬುರ್ರೆಂದು ಕಾರಲ್ಲಿ ಹೋಗ್ತಾನೆ. ಮೂರ್ನಾಲ್ಕ್ ತಿಂಗ್ಳ ಬಳಿಕ ನಾವ್ ಖರ್ಚ್ ಮಾಡಿದ್ದ ಬಾರಾಣೆಗೆ, ಚಾರಾಣೆನೂ ಸಿಗದಂತಹ ಪರಿಹಾರ ಬ್ಯಾಂಕ್ ಖಾತೆಗೆ ಜಮಾ ಆಗ್ತದ. ಅದಕ್ಕೂ ನೂರೆಂಟ್ ಕಿರಿಕಿರಿ’ ಎಂದು ಬಾಬ್ಯಾ ಹೇಳೋದಕ್ಕೂ ಅಧಿಕಾರಿಗಳ ತಂಡ ಹಾದಿ ಬದಿಯ ಹೊಲಕ್ಕಿಳಿಯುವುದಕ್ಕೂ ಸರಿಹೋಯ್ತು!