‘ಇದಪ್ಪಾ ವರಸೆ, ಯ್ಯೋ ದೇವರು... ನಮಗಿಲ್ಲಿ ಹೊಟ್ಟೆಗೇ ಹಿಟ್ಟಿಲ್ಲ, ನಿನಗೆ ಜುಟ್ಟಿಗೆ ಮಲ್ಲಿಗೆ ಬೇಕಾ? ಇಷ್ಟ್ ದಿನ ಪೂಜೆ-ಪುನಸ್ಕಾರ,
ಅಭಿಷೇಕ, ಒಡವೆ-ವಸ್ತ್ರ ಅಂತ ಮಜಾ ಉಡಾಯಿಸ್ಲಿಲ್ವ? ಕೋಟಿಗಟ್ಲೆ ಕಾಣಿಕೆ ಎಣಿಸ್ಲಿಲ್ವ? ಅದೇನೋ ಕೊರೊನಾ ಅಂತ ಅಟಕಾಯಿಸ್ಕಂಡು ನಾವೆಲ್ಲ ಚಪಾಟೆದ್ದು ಹೋಗಿದೀವಿ. ಈ ಟೈಮಲ್ಲೂ ನಿಂಗೆ ಹೂವು ಹಾಕಿ ಊದುಬತ್ತಿ ಬೆಳಗಬೇಕಾ?’ ತೆಪರೇಸಿಗೆ ಕೋಪ ಬಂತು.