‘ಐ.ಟಿ ಹಬ್ ಬೆಂಗಳೂರನ್ನು ಹಿಂದುತ್ವದ ಹಬ್ ಮಾಡಾಕ ನೂರು ಕೋಟಿ ರೂ. ಅನುದಾನ. ಸಾವರ್ಕರ್ ಅಧ್ಯಯನಪೀಠ ಸ್ಥಾಪನೆ ಮತ್ತು ಪತಿತಪಾವನ ದೇವಸ್ಥಾನಗಳ ನಿರ್ಮಾಣಕ್ಕೆ ನೂರು ಕೋಟಿ ರೂ. ಅನುದಾನ. ಎಡಬಿಡಂಗಿ ಹಾವುಗಳಿಗೆ, ರಾಷ್ಟ್ರವಿರೋಧಿಗಳಿಗೆ ಗುರಿ ಇಡುವ ರಾಷ್ಟ್ರಪ್ರೇಮಿ ಗುರಿಕಾರರಿಗೆ ತರಬೇತಿ ಮತ್ತು ನಾಡಬಂದೂಕು ಪೂರೈಕೆಗೆ ನೂರು ಕೋಟಿ ಅನುದಾನ. ‘ನಿನ್ನ ದಾಖಲೆಗಳನ್ನು ಯಾವಾಗ ಕೊಡುತ್ತೀ’ ಅಂತೆಲ್ಲ ಮೋದಿಮಾಮಂಗ ಕೇಳಿ ಪದ್ಯ ಬರೀತಾರಲ್ಲ, ಅಂಥವ್ರನ್ನ ಮತ್ತು ಪೌರತ್ವ ದಾಖಲೆ ಸರಿಯಿಲ್ಲದವರನ್ನ ಹಿಡಿದಿಡೋ ಬಂಧನಕೇಂದ್ರ ನಿರ್ಮಾಣಕ್ಕೆ ನೂರು ಕೋಟಿ ಅನುದಾನ. ವಾಟ್ಸ್ಆ್ಯಪ್ ವಿ.ವಿ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋ ನಿರುದ್ಯೋಗಿ ಭಕ್ತರಿಗೆ ಯುಜಿಸಿ ಶ್ರೇಣಿ ವೇತನ’ ಓದಿ ಮುಗಿಸಿದ ಬೆಕ್ಕಣ್ಣ ‘ಇದ್ನೆಲ್ಲ ಯೆಡ್ಯೂರಜ್ಜ ನಮ್ಮಬಜೆಟ್ಟಿನಾಗ ಸೇರಿಸ್ತಾನ’ ಎಂದು ಕೊಂಕು ನಗೆ ಬೀರಿತು!