ಟೆಲಿಫೋನ್ ಕಳ್ಳಗಿವಿಗಳನ್ನು ಸಿಬಿಐ ಕಾಲಭೈರವನ ಕೈಗೆ ಕೊಟ್ಟ ಮಹರ್ಷಿ ಯಡಿಯೂರಪ್ಪರು ತಮ್ಮ ಸಂಪುಟ ಸಂಕಟದ ಪರಿಹಾರಕ್ಕಾಗಿ ಭಗವಂತನ ಸನ್ನಿಧಿಯಲ್ಲಿ ಕುಳಿತು ನಮೋ ಭೂತನಾಥ, ನಮೋ ದೇವದೇವಾ, ನಮೋ ದಿವ್ಯತೇಜಾ ಎಂದು ಪ್ರಾರ್ಥಿಸುತ್ತಾ ಘೋರ ತಪಸ್ಸನ್ನಾಚರಿಸುತ್ತಿರಲು, ವರ್ಚುವಲ್ ರೂಪದಲ್ಲಿ ದರ್ಶನ ನೀಡಿದ ಭಗವಂತನು ‘ಮಹರ್ಷಿಗಳೇ ತಮ್ಮ ಪ್ರಾರ್ಥನೆಗೆ ಕಾರಣವೇನು?’ ಎಂದು ಕೇಳಿದ.