‘ಭಾರತ- ಚೀನಾದ ಗಾಳೀಗಂಟಲ ರಾಜಕೀಯಕ್ಕೆ ಅನ್ವಯಿಸಿ ನೋಡೋ! ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗಡಿ ಕ್ರಾಸ್ ಮಾಡಿ ಆಚಿಗೋಗರು, ಅಕ್ರಮವಾಗಿ ಒಳಿಕ್ಕೆ ಬರರು ಇದ್ದೇ ಇರತರೆ. ಬಂದೋರು ನಿಗರಾಡಬಾರದು ಅಂತ ಒಳಗಿರೋರು ಇಡ ಮಾಡಕ್ಕೆ ರೆಡಿಯಾತಾ ಇರತರೆ! ರಾಜಕೀಯ ಯುದ್ಧದಲ್ಲಿ ಯಾರೂ ಸತ್ರು-ಮಿತ್ರರಿಲ್ಲ ಕಲಾ! ಈಗ ನೀನೆ ನೋಡಪ್ಪ, ಡಿಕೆಶಿ ಮನೆ ಮಗ್ಗುಲಿಗೆ ಬಂದಿರೋ ಕುಂದಾ ಸಾವುಕಾರ್ರು ಏನು ಬೀಜಗಣಿತ ತಂದವ್ರೋ ನಾನು ಕಾಣೆ’ ಅಂತ ವಿಶ್ಲೇಷಣೆ ಮಾಡಿದರು.