‘ಒಳ್ಳೇದೇ ಆಯ್ತು, ಪಟಾಕಿ ಹೊಡೆಯೋ ಸಂಭ್ರಮದಲ್ಲಿ ಎಷ್ಟು ಜಾಗ್ರತೆಯಿದ್ದರೂ ಅನಾಹುತ ಮಾಡ್ಕೊಳ್ತಾವೆ ಮಕ್ಕಳು. ಈಗಿನ ಕಷ್ಟಕಾಲದಲ್ಲಿ ಪಟಾಕಿ ಖರೀದಿ ನೆಪದಲ್ಲಿ ದುಡ್ಡು ಯಾಕೆ ದಂಡ ಮಾಡಬೇಕು? ನಾಳೆ ನಮಗೇ ಯಾವುದಕ್ಕಾದರೂ ಉಪಯೋಗಕ್ಕೆ ಉಳಿಸಿಕೊಳ್ಳೋದು ಜಾಣತನ... ಅದೂ ಅಲ್ದೆ, ಇನ್ನೆಷ್ಟು ದಿನ ಕೊರೊನಾ ಕಾಡುತ್ತೆ? ನಮ್ಮ ಗೊರವಯ್ಯನ ಶುಭವಾಣೀನೂ ಅದೇ ಅಲ್ವೆ? ವ್ಯಾಧಿ ಬೂದಿ ಆಗುತ್ತೆ, ಸೃಷ್ಟಿ ಸಿರಿ ಆಗುತ್ತೆ, ಎಲ್ಲದಕ್ಕೂ ತಾಳ್ಮೆಯಿಂದ, ಜಾಗರೂಕತೆಯಿಂದ ಕಾಯಬೇಕು, ಲಸಿಕೇನೂ ರೆಡಿ ಆಗ್ತಿದೆ, ಮುಖಕ್ಕೆ ಮಾಸ್ಕ್, ಅಂತರ ಮರೀಬಾರ್ದು ಅಷ್ಟೇ’ ಅತ್ತೆ ಕಿವಿ ಹಿಂಡಿದರು.