‘ಅಷ್ಟೇ ಅಲ್ಲ... ಈಗ ಕಾಲೇಜೊಳಗೆ ಕಲಿಯಾಕೆ ಹತ್ಯಾರಲ್ಲ, ಆ ಗಂಡುಹುಡುಗ್ರಲ್ಲಿ ಮುಂದ ಯಾರಿಗಾದರೂ ನೌಕರಿ ಸಿಗಲಿಲ್ಲ ಅಂದ್ರ, ಉತ್ತರಪ್ರದೇಶದಾಗೆ ಶಾಲು ಫ್ಯಾಕ್ಟರಿ ಶುರು ಮಾಡೀವಿ, ಅಲ್ಲಿ ನೌಕರಿ ಕೊಡಸ್ತೀವಿ ಅಂತ ನಮ್ಮ ಈಶ್ವರಪ್ಪ ಅಂಕಲ್ ಅಂದಾರ. ಇನ್ಮ್ಯಾಗೆ ರಾಹುಕಾಲನೂ ಇಲ್ಲ, ರಾಹುಲನ ಕಾಲವಂತೂ ಎಂದಿಗೂ ಬರಂಗಿಲ್ಲ. ಇನ್ನೇನಿದ್ರೂ ಅಮೃತಕಾಲ... ಕರ್ನಾಟಕವೇ ಅದರ ಪ್ರಯೋಗ ಶಾಲೆ’ ಬೆಕ್ಕಣ್ಣ ಹೆಮ್ಮೆಯಿಂದ ಬಡಬಡಿಸುತ್ತಿದ್ದರೆ ನಾನು ಪೆಂಗಳಂತೆ ನಿಂತೆ!