‘ಪಾಲು ಇಕ್ಕೆ ಅನ್ನೋದು ಲೋಪಸಂಧಿ ಯಾಗಿ ಪಾಲಿಕೆ ಅಂತಾಗದೆ ಬಡ್ಡೆತ್ತದೇ! ಇಲ್ಲಿ ಆದೇಶಸಂಧಿ ನಡೆಯದಿಲ್ಲ, ಗುಣಸಂಧಿ ಕೇಳಂಗೇ ಇಲ್ಲ. ಪಾಲುಗಾರರು ಮತ್ತೆ ಬಿಲ್ಲು ಗಾರರು ಬಹಳ ಇರೋದ್ರಿಂದ ಒಂದೇ ಬಾರಿಗೆ ಎರಡೆರಡು ಬಿಲ್ಲು ಆಗಮಸಂಧಿ, ಕಸದ ಸವರ್ಣ ದೀರ್ಘಸಂಧಿ, ರಾಜಕಾಲುವೆ ರಗಳೆ! ಅಕ್ರಮಗಳ ತತ್ಸಮ- ತದ್ಭವಗಳ ಸಂಧಿಕಾರ್ಯ ನೋಡಿದ ನ್ಯಾಯಮೂರ್ತಿಗಳ ಸಮಿತಿಯ ವರದಿ ಮೂರ್ಛೆ ಹೋಗಿ ಅಟ್ಟ ಸೇರಿಕ್ಯಂಡದೆ. ಅಧಿಕಾರಿಗಳ ವ್ಯಾಕರಣ ನೋಡಿದ ಕೋರ್ಟು ಉಗಿದು ಸಾಕಾಗಿ ಸುಮ್ಮಗಾಯ್ತು!’ ಅಂತ ಉಸುರು ಬುಟ್ಟರು. ‘ಸಾರ್ ನಮ್ಮ ಬೃಹತ್ ಪಾಲಿಕೆಗಳಿಗೆ ಎಸಿಬಿ, ಲೋಕಾಯುಕ್ತ ಏನೂ ಮಾಡಕ್ಕಾಗಲ್ಲವಾ’ ಅಂತ ಅರ್ಜುನನಂತೆ ಕೇಳಿದೆ.