‘ಶುಭವಾಗುತೈತೆ, ಶುಭವಾಗುತೈತೆ... ಅಚ್ಛೇ ದಿನ್ ಬರುತೈತೆ...’ ಬುಡಬುಡಿಕೆಯವನ ಧ್ವನಿ ಕೇಳಿ ಖುಷಿಯಾದ ವಿಜಿ, ಹೊರಬಂದು ಅಕ್ಕಿ-ರಾಗಿ ಹಾಕಿ ಕೈ ಮುಗಿದ.
ಅದೇ ಖುಷಿಯಲ್ಲಿ ಟಿ.ವಿ. ಆನ್ ಮಾಡಿದ ವಿಜಿಗೆ ಅಚ್ಚರಿ ಕಾದಿತ್ತು. ಬ್ರೇಕಿಂಗ್ ನ್ಯೂಸ್! ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿರುವ ಭಾರತೀಯರ ಪಟ್ಟಿ ಬಿಡುಗಡೆ. ಬೆಂಗಳೂರಿನ ವಿಜಿ ಖಾತೆಯಲ್ಲಿ ಬಿಲಿಯನ್ ಡಾಲರ್ ದುಡ್ಡು!
ಹತ್ತಾರು ರಿಪೋರ್ಟರ್ಗಳು ಹಾಜರಾದರು.‘ಇಷ್ಟೊಂದ್ ಕಪ್ಪುಹಣ ನಿಮ್ಮ ಹತ್ರ ಹೇಗೆ ಬಂತು? ನಿಮ್ಮ ಹೆಂಡ್ತಿ, ಮಕ್ಕಳ ಹೆಸರಲ್ಲೂ ಖಾತೆ ತೆರೆದಿದ್ದೀರಾ? ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲವೇಕೆ’ ಪತ್ರಕರ್ತರು ಪ್ರಶ್ನೆಗಳ ಮಳೆಗರೆದರು.
‘ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡದೇ ಇರೋದಕ್ಕೆ ಎಸ್ಬಿಐನೋರು ನನ್ನ ಎಸ್ಬಿ ಅಕೌಂಟೇ ಬ್ಲಾಕ್ ಮಾಡಿದಾರೆ. ಇನ್ನು ಸ್ವಿಸ್ನಲ್ಲಿ ಅಷ್ಟೊಂದ್ ದುಡ್ಡು ಇಡೋಕೆ ಹೇಗೆ ಸಾಧ್ಯರೀ’ ಉಸುರಿದ ವಿಜಿ.
‘ನಿಮಗೆ ಯಾವುದೇ ಶಿಕ್ಷೆ ಕೊಡದೆ, ಅಷ್ಟೂ ದುಡ್ಡು ನಿಮಗೇ ವಾಪಸ್ ಕೊಟ್ಟರೆ ಏನ್ಮಾಡ್ತೀರ?’
‘ನಮ್ಮ ಏರಿಯಾಗೆಲ್ಲ ಬಂಗಾರದ ರೋಡು ಮಾಡಿಸ್ತೀನಿ’ ಸಿಟ್ಟಲ್ಲಿ ಹೇಳ್ದ ವಿಜಿ.
ಬ್ರೇಕಿಂಗ್ ನ್ಯೂಸ್! ಇನ್ನು ಬೆಂಗಳೂರು ರಸ್ತೆಯೆಲ್ಲ ಬಂಗಾರಮಯ!
ಹಣೆ ಬಡ್ಕೊಂಡ್ ಒಳಗೆ ಹೋದ ವಿಜಿ. ಮುದ್ದಣ್ಣನಿಂದ ಫೋನು ಬಂತು. ‘ಹೆಂಗಿತ್ತು ಸಾರ್ ಶಾಕು... ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿರೋ ವಿಜಿ ನೀವೇ ಅಂತಾ ಮೀಡಿಯಾದವರಿಗೆ ಹೇಳಿದ್ದು ನಾನೇ’.