‘ರಾಜನ್, ಕರ್ನಾಟಕ ರಾಜ್ಯದಲ್ಲಿ ಧವಳಪ್ಪನೆಂಬ ಹುಟ್ಟು ಹೋರಾಟಗಾರನು ಮಾಯಾವಿಗಳ ಸಹಕಾರದಿಂದ ಕ್ಷಿಪ್ರಕ್ರಾಂತಿ ಮಾಡಿ ಕಮಲರಾಜ್ಯ ತಂದಿದ್ದೇನೋ ಆಯ್ತು. ಆದರೆ ಕೊಟ್ಟ ಮಾತಿನಂತೆ ಮಾಯಾವಿಗಳನ್ನು ಮಂತ್ರಿ ಮಾಡಲು ಭಗವಂತನಾದ ನಮೋ, ಶಾ ದೇವನ ಕೃಪೆಯಾಗದ ಕಾರಣ, ಸಂಪುಟ ಸಂಕಟದಲ್ಲಿದ್ದನು. ಇವುಗಳ ಜೊತೆಗೆ ಅತೃಪ್ತರ ಬಾಲಗ್ರಹ, ನೆರೆ ಪರಿಹಾರ, ಜಿಎಸ್ಟಿ ಅನುದಾನ ಕಂಟಕ, ಮಠಾಧೀಶರ ಶಾಪಾರಾಧನೆ, ಡಿಸಿಎಂ ಪ್ರೇತಿಪದ್ಯಗಳಲ್ಲಿ ಧವಳಪ್ಪ ನೊಂದು ಸಿಂಹಾಸನ ತೊರೆಯುವ ಮಾತನ್ನಾಡತೊಡಗಿದ್ದನು. ಉಗ್ರತಪಸ್ಸಿಗೂ ಜಗ್ಗದ ಭಗವಂತರು, ನಾಡಿಗೆ ಬಂದರೂ ವರ ಕೊಡಲಿಲ್ಲ! ರಾಜನ್, ಹಿಂಸತೂಲಿಕಾತಲ್ಪದಲ್ಲೇ ಬದುಕುತ್ತಿರುವ ಧವಳಪ್ಪನ ವ್ಯಥೆ ಕೇಳಿದೆಯಷ್ಟೇ! ಈಗ ನನ್ನ ಪ್ರಶ್ನೆಗಳಿಗೆ ಉತ್ತರಿಸು’ ಎಂದಿತು. ವಿಕ್ರಮಾದಿತ್ಯನು ತಲೆಯಾಡಿಸಿದನು.