‘ಹ್ಞೂಂ ಕಣೋ, ಈಗ ಗುದ್ದೋಡದೇ ಸುದ್ದಿ. ಚೀನಾದಗೆ ಕೋವಿಡ್ ವೈರಸ್ ಗುದ್ದಿ ಸಾವಿರಾರು ಜನ ಹೊಗೆ ಹಾಕಿಸ್ಕಂಡವರೆ, ಡೆಲ್ಲೀಲಿ ಆಪು ಬಿಜೆಪಿಗೆ ಗುದ್ದಿ ಡ್ಯಾಮೇಜು ಮಾಡ್ಯದೆ. ಯಡುರಪ್ಪಾರ ಮಂತ್ರಿಮಂಡಲಕ್ಕೆ 11 ಜನ ಗುದ್ದಿ ಮೂಗೇಟಾಗೈತಂತೆ, ಈವತ್ತು ವಿಧಾನಮಂಡಲದಲ್ಲಿ ಯಾರು ಯಾರಿಗೆ ಗುಮ್ಮತರೋ ಗೊತ್ತಿಲ್ಲ, ಬೆಂಗಳೂರು ಪಾಲಿಕೆ ಆಪ್ ಕೈಗೆ ಬಂದು ಪರಕೇಲಿ ಬಾರಿಸ್ತದೆ ಅಂತ ಕಸ(ಬು)ದಾರರು, ಬಿಲ್ಲುಗಾರರು ಕಾಟನ್ಪೇಟೇಲಿ ಅಂತ್ರ ತರಕ್ಕೋಗವರಂತೆ!’ ಅಂದ್ರು ತುರೇಮಣೆ. ಅಷ್ಟರಲ್ಲಿ ಬಂದ ಫೋನ್ ಕರೆಯಲ್ಲಿ ಹತ್ತು ನಿಮಿಷ ಮಾತಾಡಿದ ತುರೇಮಣೆಗೆ ಟೆನ್ಶನ್ ಬಂದಿತ್ತು.