‘ಏನ್ರೋ ಸ್ಕೂಲು ಬಾಯ್ಕಾಟ್ ಮಾಡ್ತಿದೀರ?’ ಅಂದೆ ಇವರ ಚರ್ಚೆ ಕೇಳಿ.
‘ನಿಮ್ಮನ್ನ ನಂಬಿಕ್ಯಂಡರೆ ಕಡಲೇಪುರಿ ತಿನ್ನಬೇಕಾಯ್ತದೆ. ಒಂದನೇ ಕ್ಲಾಸ್ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾಡಕೆ ಹೊಂಟಿದೀರ! ಆನ್ಲೈನ್ ಬ್ಯಾಡಾ, ಮಕ್ಕಳನ್ನ ಮಕ್ಕಳಾಗಿರಕೆ ಬುಡಿ ಅಂತ ಜನಪರ ಧ್ವನಿ ಎತ್ತುತ್ತಿದ್ದೇವೆ’ ಅಂದ ಅವ.
‘ಏನು ಪುತ್ರಾ ನಿಮ್ಮ ರೋದನೆ?’ ಅಂತ ತುರೇಮಣೆ ಆಚೆ ಬಂದರು.
‘ಅಲ್ಲಾ ಸ್ಕೂಲಿನೋರಿಗೆ ಫೀಸು ತಗಳೋ ಆತುರ, ಅಂಗಡಿಯೋರಿಗೆ ಯೂನಿಫಾರಮ್ಮು ಮಾರೋ ಯೋಚನೆ, ಬುಕ್ ಕಂಪನಿಗೆ ಪುಸ್ತಕ ಮಾರೋ ಅರ್ಜೆಂಟು! ನಮ್ಮುನ್ನೇನು ಕಮಾಡಿಟಿ ಅಂತ ತಿಳಕಂಡಿದೀರಾ ತಾತಾಶ್ರೀ!’ ಅಂದ ಬಾಲಕ.
‘ಅದಕ್ಕೇನು ಮಾಡಬೇಕು ಮಗನೆ?’ ಅಂದೆ ನಾನು.
‘ಮಾಮಾಶ್ರೀ, 1ರಿಂದ 9ನೇ ಕ್ಲಾಸ್ವರೆಗೂ ಸಿಲಬಸ್ಸು ಕಟ್ ಮಾಡಿ ಡಿಸೆಂಬರಿಂದ ಮೂರು ತಿಂಗಳು ಸ್ಕೂಲು ಮಾಡಿದ್ರೆ ನಿಮ್ಮದೇನು ಹೋದತ್ತು? ಹೈಸ್ಕೂಲು ಓದಿ ನಾವೇನು ದೇಶ ಆಳಕ್ಕೆ ಹೋಯ್ತಿವಾ! ಇದುಕ್ಕೆ ಇಷ್ಟೆಲ್ಲಾ ಚರ್ಚೆ, ಮಹಾಭಾರತ ಬೇಕಾ?’ ಅಂದ ಈ ಪ್ರಚಂಡ.