‘ಗುರುಬಲ ಇಲ್ಲ’ ಎಂದು ಜಾತಕ ಮುಂದೆಸೆದರು. ಎರಡು ತಿಂಗಳ ಹಿಂದೆ ಟೀವಿ ಷೋನಲ್ಲಿ ಇದೇ ಗುರೂಜಿ, ನಮ್ಮ ಎಂಎಲ್ಲೆ ಸಾಹೇಬರ ಜಾತಕ ನೋಡಿ, ಅವರಿಗೆ ‘ರಾಜಯೋಗ’ ಕಾದಿದೆಯೆಂದಿದ್ದರು. ಅದನ್ನ ನಂಬ್ಕೊಂಡು, ರಾಜೀನಾಮೆಯಿಂದ ಖಾಲಿಯಾಗಿರೋ ಮಿನಿಸ್ಟ್ರ ಚೇರಿಗೆ ಅವರೇ ಬರ್ತಾರೆ ಅಂತ ಮೊನ್ನೆ ಬೆಟ್ಟಿಂಗ್ ಕಟ್ಟಿದ್ದೆ. ಈಗ ನೋಡಿದ್ರೆ ಅವರ ಜಾತಕಕ್ಕೆ ಗುರುಬಲ ಇಲ್ಲವಂತೆ.