‘ನಾವು ಬಹುಪಾಲು ಏಕಪತ್ನಿ ವ್ರತಸ್ಥರು. ಕೆಲವ್ರು ಸೊಗಸುಗಾರ ಪುಟ್ಟಸ್ವಾಮಿಗಳಿದ್ರೂ ಅವ್ರ ಕಾರ್ಯಕ್ಷೇತ್ರ ತಿರುಗಣಿ ಸಿಡಿಯಂತೆ ಒಂದು ಕಡೆಗೇ ಸೀಮಿತ. ಎರಡನೆಯದು ಬಂಡಿ ಸಿಡಿ, ನಮ್ಮ ನಾಯಕಮಣಿಗಳ ಥರ. ಅವರಿಗೆ ಒಂದು ದಾರಿ ಸಾಲದು. ಅನೇಕವು ಬೇಕು. ಎಲ್ಲದರಲ್ಲೂ ಬಲಿಷ್ಠರಾದ ಅವರು ಆಗಾಗ ದಾರಿ ಬದಲಿಸ್ತಿರ್ತಾರೆ. ಈಗ ರಾಜಧಾನೀಲಿ ನಡೀತಿರೋದು ಇಂಥ ಸಿಡಿಯಾಟವೇ ಅಲ್ವೇ? ಅದು ಯಾವಾಗ, ಎಲ್ಲೆಲ್ಗೆ ಯಾರ್ಯಾರನ್ನು ಹತ್ತಿಸ್ಕೊಂಡುಹೋಗಿ ಎಲ್ಲಿ ನಿಲ್ಸುತ್ತೋ ಆ ದೇವರಿಗೇ ಗೊತ್ತು. ನಮ್ಗಿಂತ ಶ್ಯಾಣೇ ಆದ ನಿಮ್ಮಂಥ ಪ್ಯಾಟೇ ಮಂದೀನೆ ಹೇಳ್ಬೇಕು’.