ಸ್ವಲ್ಪ ಹೊತ್ತಿಗೆ, ‘ವಿದ್ಯಾಮಂತ್ರಿಗೆ ಧಿಕ್ಕಾರ...’ ಎಂದು ಕೂಗುತ್ತಾ ಮತ್ತೊಂದು ರೈತರ ಗುಂಪು ಬಂತು. ‘ನಾವು ಕೊಬ್ಬರಿ ಬೆಳೆಗಾರರು, ನೀವು ರೈತರ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದೀರಿ, ಸರ್ಕಾರ ಕೊಬ್ಬರಿಯನ್ನೂ ಖರೀದಿಸಿ ಮಕ್ಕಳಿಗೆ ಕಡ್ಲೆಕಾಯಿ ಮಿಠಾಯಿ ಜೊತೆ ಕೊಬ್ಬರಿ ಮಿಠಾಯಿಯನ್ನೂ ಕೊಟ್ಟು ನಮಗೆ ಬೆಂಬಲ ನೀಡಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ...’ ಎಂದು ಎಚ್ಚರಿಸಿ ಹೋದರು.