<p>‘ಸಾ, ಇಲ್ಲೀಗಂಟಾ ದೇಶದಲ್ಲಿ 7 ಕೋಟಿ ಜನ ಮಾತ್ರ ವ್ಯಾಕ್ಸಿನ್ ತಗಂಡವರಂತೆ. ಜನಕ್ಕೆ ಕಾಡಿ-ಬೇಡಿ ವ್ಯಾಕ್ಸಿನ್ ಕೊಡತುದವಿ. ಆದ್ರೂ ಜನ ಬತ್ತಿಲ್ಲ ಅಂತ ಸುದಾಕರಣ್ಣ ಬೇಜಾರು ಮಾಡಿಕ್ಯಂಡದೆ’ ಅಂದೆ.</p>.<p>‘ಒಬ್ಬೊಬ್ಬರಿಗೇ ಲಸಿಕೆ ಕೊಡತಾ ಕುತಗಂಡ್ರೆ ಹತ್ತೊರ್ಸಾಯ್ತದೆ! ಸರ್ಕಾರ ಬ್ಯಾರೇನೆ ಪ್ಲಾನ್ ಮಾಡಬೇಕು’ ಅಂದರು ತುರೇಮಣೆ.</p>.<p>‘ಉಗೀರ್ಲಾ ಮಕ್ಕೆ! 132 ಕೋಟಿ ಜನಕ್ಕೆ ವಾರೊಪ್ಪತ್ತಲ್ಲಿ ವ್ಯಾಕ್ಸಿನ್ ಹೆಂಗೆ ಕೊಟ್ಟಾರ್ಲಾ ಗೆಂಡೆಕಾಳ?’ ಯಂಟಪ್ಪಣ್ಣ ಕೇಳಿತು.</p>.<p>‘ಯಂಟಪ್ಪಣ್ಣ, ವ್ಯಾಕ್ಸಿನ್ನ ಜನಕ್ಕೆ ತಿಳೀದಂಗೆ ಕೈಮಸಗಿನ ಥರಾ ಕೊಡಬೇಕು. ಹ್ಯಂಗೆ ಅಂದ್ರೆ ವ್ಯಾಕ್ಸಿನನ್ನ ವಡಾ-ಪಾವ್, ಮಿಸಳ್ ಭಾಜಿ ಒಳಗೆ ಮಿಕ್ಸ್ ಮಾಡಿ ಕೊಟ್ಟರೆ ಇಡೀ ಮಹಾರಾಷ್ಟ್ರದ ಜನಕ್ಕೆ ಸಂದೇ ಒಳಗೇ ವ್ಯಾಕ್ಸಿನ್ ಆಗೋಯ್ತದೆ!’ ಅಂದ್ರು.</p>.<p>‘ಉತ್ತರ ಭಾರತದೋರಿಗೆ ಏನು ಮಾಡೀರಿ?’ ಅಂದೆ.</p>.<p>‘ಸುಲಭ ಕನೋ, ಪಾನ್ ಮಸಾಲದೊಳಿಕ್ಕೆ ವ್ಯಾಕ್ಸಿನ್ ಹಾಕಿಬುಟ್ಟರೆ ಅರ್ಧ ಭಾರತದ ಜನಕ್ಕೆ ವ್ಯಾಕ್ಸಿನ್ ಆಗೋಯ್ತದೆ. ಇನ್ನು ಬಂಗಾಳದೇಲಿ ರಸಗುಲ್ಲಾದೊಳಿಕ್ಕೆ ವ್ಯಾಕ್ಸಿನ್ ಸೇರಿಸಿದರೆ ಮದ್ಯಾನ್ನದೊತ್ತಿಗೆ ಕೆಲಸ ಮುಗೀತದೆ. ಹಿಂಗೀಯೆ ಗುಜರಾತಲ್ಲಿ ಚಿಕ್ಕಿ ಒಳಗೆ, ಹೈದರಾಬಾದಲ್ಲಿ ದಮ್ ಬಿರಿಯಾನಿ ಒಳಗೆ ಸೇರಿಸಿದರೆ ಮುಗೀತಪ್ಪಾ!’ ಅಂದ್ರು.</p>.<p>‘ಆಯ್ತು ಕನೇಳಿ ಸಾ, ನಮ್ಮ ಕರ್ನಾಟಕದೇಲಿ ಹ್ಯಂಗೆ ವ್ಯಾಕ್ಸಿನಾಕದು?’ ಅಂದ ಚಂದ್ರು.</p>.<p>‘ಮಂಗಳೂರಲ್ಲಿ ಬಂಗುಡೆ, ಬನ್ಸೊಳಗೆ, ಉತ್ತರ ಕರ್ನಾಟಕದೇಲಿ ಗಿರ್ಮಿಟ್ಟೊಳಗೆ, ಬೆಂಗಳೂರೇಲಿ ಪಾನಿಪೂರಿ, ಮಸಾಲೆದೋಸೆಗೆ ಮಿಕ್ಸ್ ಮಾಡಬೇಕು ಕನ್ರೋ. ಮುದ್ದೆ-ತಲೆ ಮಾಂಸದ ಒಳಕ್ಕಿಟ್ರೆ ಸಾಕು ಮಂಡ್ಯಾದಿಂದ ಹಾಸನದ ಗಂಟಾ ವ್ಯಾಕ್ಸಿನ್ ಆಯ್ತದೆ’ ಅಂದ್ರು.</p>.<p>‘ರಾಜಕಾರಣಿಗಳಿಗೆ ಹ್ಯಂಗೆ ಕೊಡದು?’ ಅಂತ ಕೇಳಿದೆ. ‘ಅವರಿಗೇನೂ ಬ್ಯಾಡ. ಈಗಲೇ ಆ್ಯಂಟಿ ಬಾಡಿ ಜಾಸ್ತಿ ಆಗ್ಯದೆ ಬುಡ್ಲಾ!’ ಅನ್ನದಾ ಈವಯ್ಯ.</p>.<p>‘ಈ ಮಾನಗೆಟ್ಟೋನು ಯಾವ್ಯಾವುದ ಎಲ್ಲೆಲ್ಲಿಗೋ ತಾರಾಕ್ತನೆ. ಇವನ ಮಾತು ಕೇಳದೇ ಆಸ್ಪತ್ರಿಗೋಗಿ ವ್ಯಾಕ್ಸಿನ್ ತಗಾ’ ಅಂತು ಯಂಟಪ್ಪಣ್ಣ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಸಾ, ಇಲ್ಲೀಗಂಟಾ ದೇಶದಲ್ಲಿ 7 ಕೋಟಿ ಜನ ಮಾತ್ರ ವ್ಯಾಕ್ಸಿನ್ ತಗಂಡವರಂತೆ. ಜನಕ್ಕೆ ಕಾಡಿ-ಬೇಡಿ ವ್ಯಾಕ್ಸಿನ್ ಕೊಡತುದವಿ. ಆದ್ರೂ ಜನ ಬತ್ತಿಲ್ಲ ಅಂತ ಸುದಾಕರಣ್ಣ ಬೇಜಾರು ಮಾಡಿಕ್ಯಂಡದೆ’ ಅಂದೆ.</p>.<p>‘ಒಬ್ಬೊಬ್ಬರಿಗೇ ಲಸಿಕೆ ಕೊಡತಾ ಕುತಗಂಡ್ರೆ ಹತ್ತೊರ್ಸಾಯ್ತದೆ! ಸರ್ಕಾರ ಬ್ಯಾರೇನೆ ಪ್ಲಾನ್ ಮಾಡಬೇಕು’ ಅಂದರು ತುರೇಮಣೆ.</p>.<p>‘ಉಗೀರ್ಲಾ ಮಕ್ಕೆ! 132 ಕೋಟಿ ಜನಕ್ಕೆ ವಾರೊಪ್ಪತ್ತಲ್ಲಿ ವ್ಯಾಕ್ಸಿನ್ ಹೆಂಗೆ ಕೊಟ್ಟಾರ್ಲಾ ಗೆಂಡೆಕಾಳ?’ ಯಂಟಪ್ಪಣ್ಣ ಕೇಳಿತು.</p>.<p>‘ಯಂಟಪ್ಪಣ್ಣ, ವ್ಯಾಕ್ಸಿನ್ನ ಜನಕ್ಕೆ ತಿಳೀದಂಗೆ ಕೈಮಸಗಿನ ಥರಾ ಕೊಡಬೇಕು. ಹ್ಯಂಗೆ ಅಂದ್ರೆ ವ್ಯಾಕ್ಸಿನನ್ನ ವಡಾ-ಪಾವ್, ಮಿಸಳ್ ಭಾಜಿ ಒಳಗೆ ಮಿಕ್ಸ್ ಮಾಡಿ ಕೊಟ್ಟರೆ ಇಡೀ ಮಹಾರಾಷ್ಟ್ರದ ಜನಕ್ಕೆ ಸಂದೇ ಒಳಗೇ ವ್ಯಾಕ್ಸಿನ್ ಆಗೋಯ್ತದೆ!’ ಅಂದ್ರು.</p>.<p>‘ಉತ್ತರ ಭಾರತದೋರಿಗೆ ಏನು ಮಾಡೀರಿ?’ ಅಂದೆ.</p>.<p>‘ಸುಲಭ ಕನೋ, ಪಾನ್ ಮಸಾಲದೊಳಿಕ್ಕೆ ವ್ಯಾಕ್ಸಿನ್ ಹಾಕಿಬುಟ್ಟರೆ ಅರ್ಧ ಭಾರತದ ಜನಕ್ಕೆ ವ್ಯಾಕ್ಸಿನ್ ಆಗೋಯ್ತದೆ. ಇನ್ನು ಬಂಗಾಳದೇಲಿ ರಸಗುಲ್ಲಾದೊಳಿಕ್ಕೆ ವ್ಯಾಕ್ಸಿನ್ ಸೇರಿಸಿದರೆ ಮದ್ಯಾನ್ನದೊತ್ತಿಗೆ ಕೆಲಸ ಮುಗೀತದೆ. ಹಿಂಗೀಯೆ ಗುಜರಾತಲ್ಲಿ ಚಿಕ್ಕಿ ಒಳಗೆ, ಹೈದರಾಬಾದಲ್ಲಿ ದಮ್ ಬಿರಿಯಾನಿ ಒಳಗೆ ಸೇರಿಸಿದರೆ ಮುಗೀತಪ್ಪಾ!’ ಅಂದ್ರು.</p>.<p>‘ಆಯ್ತು ಕನೇಳಿ ಸಾ, ನಮ್ಮ ಕರ್ನಾಟಕದೇಲಿ ಹ್ಯಂಗೆ ವ್ಯಾಕ್ಸಿನಾಕದು?’ ಅಂದ ಚಂದ್ರು.</p>.<p>‘ಮಂಗಳೂರಲ್ಲಿ ಬಂಗುಡೆ, ಬನ್ಸೊಳಗೆ, ಉತ್ತರ ಕರ್ನಾಟಕದೇಲಿ ಗಿರ್ಮಿಟ್ಟೊಳಗೆ, ಬೆಂಗಳೂರೇಲಿ ಪಾನಿಪೂರಿ, ಮಸಾಲೆದೋಸೆಗೆ ಮಿಕ್ಸ್ ಮಾಡಬೇಕು ಕನ್ರೋ. ಮುದ್ದೆ-ತಲೆ ಮಾಂಸದ ಒಳಕ್ಕಿಟ್ರೆ ಸಾಕು ಮಂಡ್ಯಾದಿಂದ ಹಾಸನದ ಗಂಟಾ ವ್ಯಾಕ್ಸಿನ್ ಆಯ್ತದೆ’ ಅಂದ್ರು.</p>.<p>‘ರಾಜಕಾರಣಿಗಳಿಗೆ ಹ್ಯಂಗೆ ಕೊಡದು?’ ಅಂತ ಕೇಳಿದೆ. ‘ಅವರಿಗೇನೂ ಬ್ಯಾಡ. ಈಗಲೇ ಆ್ಯಂಟಿ ಬಾಡಿ ಜಾಸ್ತಿ ಆಗ್ಯದೆ ಬುಡ್ಲಾ!’ ಅನ್ನದಾ ಈವಯ್ಯ.</p>.<p>‘ಈ ಮಾನಗೆಟ್ಟೋನು ಯಾವ್ಯಾವುದ ಎಲ್ಲೆಲ್ಲಿಗೋ ತಾರಾಕ್ತನೆ. ಇವನ ಮಾತು ಕೇಳದೇ ಆಸ್ಪತ್ರಿಗೋಗಿ ವ್ಯಾಕ್ಸಿನ್ ತಗಾ’ ಅಂತು ಯಂಟಪ್ಪಣ್ಣ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>