ಬೆರಳು ಎಣಿಸಿ ಮುಗಿಸಿದ ಬೆಕ್ಕಣ್ಣ ‘ನಮೋಯುಗ ಶುರುವಾಗಿ ಎಂಟು ವರ್ಸಾತಲ್ಲ, ಆವಾಗಿನಿಂದ ಶುಭಕೃತು ಸಂವತ್ಸರನೇ ಐತಿ. ಸಬ್ಕಾ ವಿಕಾಸ್ ಜೊತಿಗಿ ಸಬ್ಕಾ ಪ್ರಯಾಸ್ ಸೇರಿ ದೇಶ ಎಷ್ಟ್ ಪ್ರಗತಿಯಾಗೈತಿ. ಈಗಂತೂ ಪೆಟ್ರೋಲು, ಡೀಸೆಲು, ಎಲ್ಪಿಜಿ, ಎಣ್ಣೆ, ಹಿಂಗ ಎಷ್ಟ್ ಸಾಮಗ್ರಿ ಬೆಲೆ ಗಗನಮುಖಿಯಾಗೈತಿ... ಅಂದ್ರ ಪ್ರಗತಿ ಗ್ರಾಫ್ ಮ್ಯಾಲೆ ಹೋಗಾಕಹತ್ತೈತಿ. ಇದೇ ಎಂಟು ವರ್ಸದಾಗೆ ‘ಅ’ದಿಂದ ‘ಅಂ’ ಅಂತ ಹೊಸಾದೊಂದು ಶ್ರೀಮಂತರ ವರ್ಣಮಾಲೆ ಶುರುವಾಗೇದ. ನಮ್ಮ ಅದಾನಿ, ಅಂಬಾನಿಗಳು ಹಗಲೂರಾತ್ರಿ ದುಡಿದೂ ದುಡಿದೂ ಶತಕೋಟಿಗಟ್ಟಲೆ ರೊಕ್ಕ ಗಳಿಸ್ಯಾರ. ಅವರೆಲ್ಲರಿಗೂ ಶುಭಕೃತು ಬಂದೇ ಭಾಳ ವರ್ಸಾಗೈತಿ. ಶ್ರೀಸಾಮಾನ್ಯರಿಗೆ ಯಾವ ಸಂವತ್ಸರ ಬಂದ್ರೇನಾತು, ಗೋಳು ತಪ್ಪಿದ್ದಲ್ಲ’ ಎಂದು ಅಣಕಿಸಿ ಹೊರಗೋಡಿತು.