‘ನೀನು ಸ್ವಾತಂತ್ರ್ಯಾನಂತರ ಹುಟ್ಟಿರುವುದರಿಂದ ಇತಿಹಾಸದ ಅರಿವಿಲ್ಲ. ಹಿಂದೆ ನಮ್ಮಲ್ಲೂ ರಾಜಮಹಾರಾಜರು ದಂಡೆತ್ತಿ ಬಂದು, ಯುದ್ಧ ಮಾಡಿ ಹಳೆ ರಾಜನನ್ನು ಒದ್ದೋಡಿಸಿ, ತಮ್ಮ ರಾಜ್ಯ ವಿಸ್ತರಿಸಿ ಸಾಮ್ರಾಜ್ಯ ಸ್ಥಾಪನೆ ಮಾಡ್ತಿದ್ದರು. ಆಗ ಯುದ್ಧಕ್ಕೆ ಗದೆ, ಬಿಲ್ಲು-ಬಾಣ, ಕತ್ತಿ-ಗುರಾಣಿ ಬಳಸುತ್ತಿದ್ದರು, ಈಗ ಬಂದೂಕು ಬಳಕೆ ಅಷ್ಟೇ...’ ಅಂದ ಶಂಕ್ರಿ.