‘ಅವುಕ್ಕೇನ್ಲಾ ಲಂಗುಲಗಾಮಿಲ್ದೆ ಬತ್ತವೆ! ಸೇತುವೆ, ಫ್ಲೈ ಓವರುಗಳೆಲ್ಲಾ ಕಿಸ್ಕಂಡು ಬಿದ್ದೋಯ್ತಿದ್ರೆ ಬಿಬಿಎಂಪಿಗೆ ಖುಷಿಯಾಗ್ಯದಂತೆ. ಈಜಿಪುರದ ಮೇಲ್ಸೇತುವೆ ಈಜಿಯಾಗಿ ಮುಗೀತಿಲ್ಲ. ಬೆಂಗಳೂರು ರಸ್ತೆಗುಂಡಿ, ಟ್ರಾಫಿಕ್ ನಡಂತರದೇಲಿ ಮದುವೆ ಫೋಟೋ ಶೂಟ್- ಒಂದು ಲವ್ ಸ್ಟೋರಿ! ಕಾವೇರಿ ನದಿಗೆ ರಾಜಕಾಲುವೆ ಸಂಪರ್ಕ. ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋಣ ಬನ್ರಿ. ದಮ್ಮಿದೆಯಾ? ತಾಕತ್ತಿದೆಯಾ? ಭ್ರಷ್ಟಾಚಾರ ಮಾಡದೆ ಬದುಕೋದು ಸುಲಭಲ್ಲ. ವಿದ್ಯುತ್ ದರ ಮತ್ತೆ ಏರಿಕೆ. ಕಾಲುವೆ-ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರ. ಪ್ರಭಾವಿಗಳನ್ನೂ ಬಿಡುವುದಿಲ್ಲ. ಕೇಂದ್ರದಿಂದ 14,000 ಕೋಟಿ ಜಿಎಸ್ಟಿ ಬಾಕಿ. ಅದಾನಿ ಸಂಪತ್ತು ವರ್ಷಕ್ಕೆ 5.88 ಲಕ್ಷ ಕೋಟಿಯಂಗೆ ಏರಿ ಐದು ವರ್ಷದೇಲಿ ಹದಿನೈದು ಪಟ್ಟಾಗ್ಯದೆ’ ಅಂದ್ರು ತುರೇಮಣೆ.