ನಾನೂ ತುರೇಮಣೆ ಇದಾನಸೌದದ ಸುತ್ತಾ ಅಲೀತಿದ್ದೊ. ಕೆಂಗಲ್ ಪ್ರತಿಮೆ ತಾವು ಡಜನ್ಗಟ್ಟಲೇ ಸಾಸಕರು ಸೇರಿಕ್ಯಂಡು ‘ನಾನು ಸಂವಿಧಾನದ ವಿಧಿದ್ವಾರಾ ಸ್ಥಾಪಿತವಾದ ಕರ್ನಾಟಕ ರಾಜ್ಯದ ಸಚಿವನಾಗಿ’ ಅಂತ ಒಂದೇ ಸಮನೆ ಉರುವಡೀತಿದ್ರು. ಇನ್ನೊಬ್ರು ‘ನಾನು ಮಂತ್ರಿ ಆಯ್ತಿನಾ, ಇಲ್ಲವಾ’ ಅಂತ ಒಂದೊಂದೇ ತಲೆಕೂದಲು ಕಿತ್ತು ಎಡಕೆ-ಬಲಕೆ ಹಾಕತಿದ್ರು. ‘ಸಾ, ರಾಜಾವುಲಿ ಸಂಪುಟದ ಆಕಾಂಕ್ಷಿಗಳೆಲ್ಲಾ ಇಲ್ಲೇನೋ ತರದೂದು ಮಾಡ್ತಾವ್ರೆ?’ ಅಂದೆ.