‘ಹಂತಾವೆಲ್ಲ ಚೀಪ್ ಪದ ಬಳಸಬ್ಯಾಡ. ಆಕಿ ಪೊಲಿಟಿಕಲಿ ಕರೆಕ್ಟ್ ಅದಾಳ, ಗಾಳಿ ಬೀಸಿದ ಕಡಿಗಿ ತೂರುವ ಶಾಣೇತನ ತೋರತಾಳ ಅನ್ನಬೇಕು’ ಎಂದು ನನ್ನ ಭಾಷೆಯನ್ನು ತಿದ್ದುತ್ತಿದ್ದ ಬೆಕ್ಕಣ್ಣ, ಬಂಗಾಳದ ಉಪಚುನಾವಣೆಯಲ್ಲಿ ದೀದಿ ಗೆದ್ದ ಸುದ್ದಿ ನೋಡಿದ್ದೇ ‘ಖೇಲಾ ಹೋಬೆ ಅಂದವ್ರಿಗೆ ಮತದಾರರು ಸರಿಯಾದ ಉತ್ತರ ಕೊಟ್ಟಾರ, ಖರೇ ಅಂದ್ರ ಈಗ ಮಮತಕ್ಕನೇ ತಲೈವಿ’ ಎಂದು ಕೇಕೆ ಹಾಕಿತು!